ಚಿಕ್ಕಪ್ಪನ ಮನೆಗೆ ಬಂದು ವಾಕ್ ಮಾಡಲು ನದಿ ದಡಕ್ಕೆ ಹೋಗಿದ್ರು
ಸೋದರಸಂಬಂಧಿ ಜೊತೆ ನಡೆದುಕೊಂಡು ಹೋಗುವಾಗ ಘಟನೆ
ಇಬ್ಬರು ನಡೆದು ಹೋಗುವಾಗ ಕರೆದು ಜಗಳ ತೆಗೆದಿದ್ದ ಕುಡಕರು
ಚೆನ್ನೈ: 17 ವರ್ಷದ ಕಾಲೇಜು ವಿದ್ಯಾರ್ಥಿಯ ಮೇಲೆ ಮದ್ಯವ್ಯಸನಿಗಳು ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ತಿರುಚಿರಾಪಳ್ಳಿಯ ಕಾವೇರಿ ನದಿ ದಡದ ಬಳಿ ನಡೆದಿದೆ.
ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ದುರಂತ.. ರೈಲಿನ ಅಡಿಯಲ್ಲೇ ಸಿಲುಕಿದ ಯುವಕನ ಮೃತದೇಹ; ಪ್ರಯಾಣಿಕರ ಪರದಾಟ
ಶ್ರೀರಂಗಮ್ ಬಳಿಯ ತಂಥೈ ಪೆರಿಯಾರ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ರಂಜಿತ್ ಕಣ್ಣನ್ ಹಲ್ಲೆಯಿಂದ ಸಾವನ್ನಪ್ಪಿದ ಯುವಕ. ಕಾಲೇಜು ಮುಗಿದ ನಂತರ ಕಣ್ಣನ್ ತನ್ನ ಚಿಕ್ಕಪ್ಪನ ಮನೆಗೆ ಹೋಗಿದ್ದನು. ಬಳಿಕ ಅಲ್ಲಿ ತನ್ನ ಸೋದರಸಂಬಂಧಿ ಹರಿ ಸಂತೋಷ್ನನ್ನ ಭೇಟಿ ಮಾಡಿ, ಕಾವೇರಿ ನದಿ ದಡದ ಮೇಲೆ ವಾಕ್ ಮಾಡುತ್ತಾ ಇಬ್ಬರು ಹೋಗುತ್ತಿದ್ದರು. ಇದೇ ವೇಳೆ ದಡದ ಮೇಲೆ ಮದ್ಯಪಾನ ಮಾಡುತ್ತಿದ್ದ ಗುಂಪೊಂದು ಎದುರಾಗಿ ಇವರ ಜೊತೆ ಜಗಳ ಮಾಡಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:BREAKING: ನಮ್ಮ ಮೆಟ್ರೋದಲ್ಲಿ ಮತ್ತೊಂದು ದುರಂತ; ಟ್ರ್ಯಾಕ್ಗೆ ಹಾರಿ ವ್ಯಕ್ತಿ ಆತ್ಮ*ತ್ಯೆ
ಜಗಳ ತಾರಕಕ್ಕೇರಿದ್ದು ಈ ಮಧ್ಯೆಯೇ ವಿದ್ಯಾರ್ಥಿ ಮೇಲೆ ಮರದ ದಿಮ್ಮಿಯಿಂದ ತಲೆಗೆ ಬಲವಾಗಿ ಹೊಡೆದು ಹೊಟ್ಟೆಗೆ ಮನಸೋಯಿಚ್ಛೆ ಗುದ್ದಿದ್ದಾರೆ. ಇದರ ಪರಿಣಾಮ ಯುವಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಜೊತೆಗಿದ್ದ ಸೋದರ ಸಂಬಂಧಿ ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಸದ್ಯ ಈ ಸಂಬಂಧ ನವೀನ್ ಕುಮಾರ್, ವಿಜಯ್, ಸುಲುಕಿ ಸುರೇಶ್, ಮಥಾನ್ ಮತ್ತು ಪ್ರಗ್ದ್ ಈಶ್ವರನ್ ಎನ್ನುವ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶ್ರೀರಂಗಮ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಚಿಕ್ಕಪ್ಪನ ಮನೆಗೆ ಬಂದು ವಾಕ್ ಮಾಡಲು ನದಿ ದಡಕ್ಕೆ ಹೋಗಿದ್ರು
ಸೋದರಸಂಬಂಧಿ ಜೊತೆ ನಡೆದುಕೊಂಡು ಹೋಗುವಾಗ ಘಟನೆ
ಇಬ್ಬರು ನಡೆದು ಹೋಗುವಾಗ ಕರೆದು ಜಗಳ ತೆಗೆದಿದ್ದ ಕುಡಕರು
ಚೆನ್ನೈ: 17 ವರ್ಷದ ಕಾಲೇಜು ವಿದ್ಯಾರ್ಥಿಯ ಮೇಲೆ ಮದ್ಯವ್ಯಸನಿಗಳು ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ತಿರುಚಿರಾಪಳ್ಳಿಯ ಕಾವೇರಿ ನದಿ ದಡದ ಬಳಿ ನಡೆದಿದೆ.
ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ದುರಂತ.. ರೈಲಿನ ಅಡಿಯಲ್ಲೇ ಸಿಲುಕಿದ ಯುವಕನ ಮೃತದೇಹ; ಪ್ರಯಾಣಿಕರ ಪರದಾಟ
ಶ್ರೀರಂಗಮ್ ಬಳಿಯ ತಂಥೈ ಪೆರಿಯಾರ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ರಂಜಿತ್ ಕಣ್ಣನ್ ಹಲ್ಲೆಯಿಂದ ಸಾವನ್ನಪ್ಪಿದ ಯುವಕ. ಕಾಲೇಜು ಮುಗಿದ ನಂತರ ಕಣ್ಣನ್ ತನ್ನ ಚಿಕ್ಕಪ್ಪನ ಮನೆಗೆ ಹೋಗಿದ್ದನು. ಬಳಿಕ ಅಲ್ಲಿ ತನ್ನ ಸೋದರಸಂಬಂಧಿ ಹರಿ ಸಂತೋಷ್ನನ್ನ ಭೇಟಿ ಮಾಡಿ, ಕಾವೇರಿ ನದಿ ದಡದ ಮೇಲೆ ವಾಕ್ ಮಾಡುತ್ತಾ ಇಬ್ಬರು ಹೋಗುತ್ತಿದ್ದರು. ಇದೇ ವೇಳೆ ದಡದ ಮೇಲೆ ಮದ್ಯಪಾನ ಮಾಡುತ್ತಿದ್ದ ಗುಂಪೊಂದು ಎದುರಾಗಿ ಇವರ ಜೊತೆ ಜಗಳ ಮಾಡಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ:BREAKING: ನಮ್ಮ ಮೆಟ್ರೋದಲ್ಲಿ ಮತ್ತೊಂದು ದುರಂತ; ಟ್ರ್ಯಾಕ್ಗೆ ಹಾರಿ ವ್ಯಕ್ತಿ ಆತ್ಮ*ತ್ಯೆ
ಜಗಳ ತಾರಕಕ್ಕೇರಿದ್ದು ಈ ಮಧ್ಯೆಯೇ ವಿದ್ಯಾರ್ಥಿ ಮೇಲೆ ಮರದ ದಿಮ್ಮಿಯಿಂದ ತಲೆಗೆ ಬಲವಾಗಿ ಹೊಡೆದು ಹೊಟ್ಟೆಗೆ ಮನಸೋಯಿಚ್ಛೆ ಗುದ್ದಿದ್ದಾರೆ. ಇದರ ಪರಿಣಾಮ ಯುವಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಜೊತೆಗಿದ್ದ ಸೋದರ ಸಂಬಂಧಿ ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಸದ್ಯ ಈ ಸಂಬಂಧ ನವೀನ್ ಕುಮಾರ್, ವಿಜಯ್, ಸುಲುಕಿ ಸುರೇಶ್, ಮಥಾನ್ ಮತ್ತು ಪ್ರಗ್ದ್ ಈಶ್ವರನ್ ಎನ್ನುವ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶ್ರೀರಂಗಮ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ