newsfirstkannada.com

ಕಾವೇರಿ ದಡದ ಮೇಲೆ ಕುಡುಕರ ಅಟ್ಟಹಾಸ.. ಕಾಲೇಜು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿ, ಕೊಂದ ಗ್ಯಾಂಗ್

Share :

Published August 4, 2024 at 3:38pm

    ಚಿಕ್ಕಪ್ಪನ ಮನೆಗೆ ಬಂದು ವಾಕ್ ಮಾಡಲು ನದಿ ದಡಕ್ಕೆ ಹೋಗಿದ್ರು

    ಸೋದರಸಂಬಂಧಿ ಜೊತೆ ನಡೆದುಕೊಂಡು ಹೋಗುವಾಗ ಘಟನೆ

    ಇಬ್ಬರು ನಡೆದು ಹೋಗುವಾಗ ಕರೆದು ಜಗಳ ತೆಗೆದಿದ್ದ ಕುಡಕರು

ಚೆನ್ನೈ: 17 ವರ್ಷದ ಕಾಲೇಜು ವಿದ್ಯಾರ್ಥಿಯ ಮೇಲೆ ಮದ್ಯವ್ಯಸನಿಗಳು ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ತಿರುಚಿರಾಪಳ್ಳಿಯ ಕಾವೇರಿ ನದಿ ದಡದ ಬಳಿ ನಡೆದಿದೆ.

ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ದುರಂತ.. ರೈಲಿನ ಅಡಿಯಲ್ಲೇ ಸಿಲುಕಿದ ಯುವಕನ ಮೃತದೇಹ; ಪ್ರಯಾಣಿಕರ ಪರದಾಟ

ಶ್ರೀರಂಗಮ್ ಬಳಿಯ ತಂಥೈ ಪೆರಿಯಾರ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ರಂಜಿತ್​ ಕಣ್ಣನ್ ಹಲ್ಲೆಯಿಂದ ಸಾವನ್ನಪ್ಪಿದ ಯುವಕ. ಕಾಲೇಜು ಮುಗಿದ ನಂತರ ಕಣ್ಣನ್ ತನ್ನ ಚಿಕ್ಕಪ್ಪನ ಮನೆಗೆ ಹೋಗಿದ್ದನು. ಬಳಿಕ ಅಲ್ಲಿ ತನ್ನ ಸೋದರಸಂಬಂಧಿ ಹರಿ ಸಂತೋಷ್​ನನ್ನ ಭೇಟಿ ಮಾಡಿ, ಕಾವೇರಿ ನದಿ ದಡದ ಮೇಲೆ ವಾಕ್ ಮಾಡುತ್ತಾ ಇಬ್ಬರು ಹೋಗುತ್ತಿದ್ದರು. ಇದೇ ವೇಳೆ ದಡದ ಮೇಲೆ ಮದ್ಯಪಾನ ಮಾಡುತ್ತಿದ್ದ ಗುಂಪೊಂದು ಎದುರಾಗಿ ಇವರ ಜೊತೆ ಜಗಳ ಮಾಡಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:BREAKING: ನಮ್ಮ ಮೆಟ್ರೋದಲ್ಲಿ ಮತ್ತೊಂದು ದುರಂತ; ಟ್ರ್ಯಾಕ್​ಗೆ ಹಾರಿ ವ್ಯಕ್ತಿ ಆತ್ಮ*ತ್ಯೆ

ಜಗಳ ತಾರಕಕ್ಕೇರಿದ್ದು ಈ ಮಧ್ಯೆಯೇ ವಿದ್ಯಾರ್ಥಿ ಮೇಲೆ ಮರದ ದಿಮ್ಮಿಯಿಂದ ತಲೆಗೆ ಬಲವಾಗಿ ಹೊಡೆದು ಹೊಟ್ಟೆಗೆ ಮನಸೋಯಿಚ್ಛೆ ಗುದ್ದಿದ್ದಾರೆ. ಇದರ ಪರಿಣಾಮ ಯುವಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಜೊತೆಗಿದ್ದ ಸೋದರ ಸಂಬಂಧಿ ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಸದ್ಯ ಈ ಸಂಬಂಧ ನವೀನ್​ ಕುಮಾರ್​, ವಿಜಯ್​, ಸುಲುಕಿ ಸುರೇಶ್, ಮಥಾನ್ ಮತ್ತು ಪ್ರಗ್ದ್​​ ಈಶ್ವರನ್​​ ಎನ್ನುವ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶ್ರೀರಂಗಮ್​ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕಾವೇರಿ ದಡದ ಮೇಲೆ ಕುಡುಕರ ಅಟ್ಟಹಾಸ.. ಕಾಲೇಜು ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿ, ಕೊಂದ ಗ್ಯಾಂಗ್

https://newsfirstlive.com/wp-content/uploads/2024/08/TN_RIVER.jpg

    ಚಿಕ್ಕಪ್ಪನ ಮನೆಗೆ ಬಂದು ವಾಕ್ ಮಾಡಲು ನದಿ ದಡಕ್ಕೆ ಹೋಗಿದ್ರು

    ಸೋದರಸಂಬಂಧಿ ಜೊತೆ ನಡೆದುಕೊಂಡು ಹೋಗುವಾಗ ಘಟನೆ

    ಇಬ್ಬರು ನಡೆದು ಹೋಗುವಾಗ ಕರೆದು ಜಗಳ ತೆಗೆದಿದ್ದ ಕುಡಕರು

ಚೆನ್ನೈ: 17 ವರ್ಷದ ಕಾಲೇಜು ವಿದ್ಯಾರ್ಥಿಯ ಮೇಲೆ ಮದ್ಯವ್ಯಸನಿಗಳು ಹಲ್ಲೆ ಮಾಡಿ ಕೊಲೆ ಮಾಡಿರುವ ಘಟನೆ ತಮಿಳುನಾಡಿನ ತಿರುಚಿರಾಪಳ್ಳಿಯ ಕಾವೇರಿ ನದಿ ದಡದ ಬಳಿ ನಡೆದಿದೆ.

ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ದುರಂತ.. ರೈಲಿನ ಅಡಿಯಲ್ಲೇ ಸಿಲುಕಿದ ಯುವಕನ ಮೃತದೇಹ; ಪ್ರಯಾಣಿಕರ ಪರದಾಟ

ಶ್ರೀರಂಗಮ್ ಬಳಿಯ ತಂಥೈ ಪೆರಿಯಾರ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿ ರಂಜಿತ್​ ಕಣ್ಣನ್ ಹಲ್ಲೆಯಿಂದ ಸಾವನ್ನಪ್ಪಿದ ಯುವಕ. ಕಾಲೇಜು ಮುಗಿದ ನಂತರ ಕಣ್ಣನ್ ತನ್ನ ಚಿಕ್ಕಪ್ಪನ ಮನೆಗೆ ಹೋಗಿದ್ದನು. ಬಳಿಕ ಅಲ್ಲಿ ತನ್ನ ಸೋದರಸಂಬಂಧಿ ಹರಿ ಸಂತೋಷ್​ನನ್ನ ಭೇಟಿ ಮಾಡಿ, ಕಾವೇರಿ ನದಿ ದಡದ ಮೇಲೆ ವಾಕ್ ಮಾಡುತ್ತಾ ಇಬ್ಬರು ಹೋಗುತ್ತಿದ್ದರು. ಇದೇ ವೇಳೆ ದಡದ ಮೇಲೆ ಮದ್ಯಪಾನ ಮಾಡುತ್ತಿದ್ದ ಗುಂಪೊಂದು ಎದುರಾಗಿ ಇವರ ಜೊತೆ ಜಗಳ ಮಾಡಿದೆ ಎಂದು ಹೇಳಲಾಗಿದೆ.

ಇದನ್ನೂ ಓದಿ:BREAKING: ನಮ್ಮ ಮೆಟ್ರೋದಲ್ಲಿ ಮತ್ತೊಂದು ದುರಂತ; ಟ್ರ್ಯಾಕ್​ಗೆ ಹಾರಿ ವ್ಯಕ್ತಿ ಆತ್ಮ*ತ್ಯೆ

ಜಗಳ ತಾರಕಕ್ಕೇರಿದ್ದು ಈ ಮಧ್ಯೆಯೇ ವಿದ್ಯಾರ್ಥಿ ಮೇಲೆ ಮರದ ದಿಮ್ಮಿಯಿಂದ ತಲೆಗೆ ಬಲವಾಗಿ ಹೊಡೆದು ಹೊಟ್ಟೆಗೆ ಮನಸೋಯಿಚ್ಛೆ ಗುದ್ದಿದ್ದಾರೆ. ಇದರ ಪರಿಣಾಮ ಯುವಕ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಜೊತೆಗಿದ್ದ ಸೋದರ ಸಂಬಂಧಿ ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾನೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಸದ್ಯ ಈ ಸಂಬಂಧ ನವೀನ್​ ಕುಮಾರ್​, ವಿಜಯ್​, ಸುಲುಕಿ ಸುರೇಶ್, ಮಥಾನ್ ಮತ್ತು ಪ್ರಗ್ದ್​​ ಈಶ್ವರನ್​​ ಎನ್ನುವ ಆರೋಪಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶ್ರೀರಂಗಮ್​ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More