/newsfirstlive-kannada/media/post_attachments/wp-content/uploads/2023/08/Gold-Rate.jpg)
ಕಾಡಿನಲ್ಲಿ ಬಿಟ್ಟು ಹೋದ ಕಾರಿನಲ್ಲಿ ಸುಮಾರು 52 ಕೆಜಿ ಚಿನ್ನ ಹಾಗೂ 10 ಕೋಟಿ ರೂಪಾಯಿಯನ್ನು ಐಟಿ ಅಧಿಕಾರಿಗಳು ವಶಪಡಿಸಿಕೊಂಡ ಘಟನೆ, ಮಧ್ಯಪ್ರದೇಶದ ರಾಜಧಾನಿ ಭೋಪಾಲ್​ನಲ್ಲಿ ನಡೆದಿದೆ. ಈ ಬಗ್ಗೆ ಮಾತನಾಡಿದ ಪೊಲೀಸ್ ಕಮಿಷನರ್ ಇತ್ತೀಚೆಗೆ ಅನೇಕ ಕನ್​​ಸ್ಟ್ರಕ್ಷನ್ ಕಂಪನಿಗಳ ಮೇಲೆ ನಡೆಯುತ್ತಿರುವ ರೇಡ್​ಗಳ ಪರಿಣಾಮ ಇಂತಹದೊಂದು ಸೀಜ್​ಗೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಸದ್ಯ ನಡೆಯುತ್ತಿರುವ ದಾಳಿಯಿಂದಾಗಿ ಭೂಪಾಲ್ ಹಾಗೂ ಇಂದೋರ್​ನಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತಿವೆ. ಇಂದು ಕಾಡಿನಲ್ಲಿ ಒಂದು ಕಾರು ಅನಾಥವಾಗಿ ನಿಂತಿದೆ ಎಂಬ ಮಾಹಿತಿ ಸಿಕ್ಕ ಬಳಿಕ ಅಲ್ಲಿ ನೂರು ಜನ ಪೊಲೀಸ್ ಟೀಮ್​ ಜೊತೆ ಐಟಿ ಅಧಿಕಾರಿಗಳು ಮೆಂಡೋರಿ ಹಳ್ಳಿಯ ಬಳಿ ಇದ್ದ ಈ ಕಾರ್​ನ್ನು ಸೀಜ್ ಮಾಡಿದ್ದೇವೆ ಅದರಲ್ಲಿ 52 ಕೆಜಿ ಚಿನ್ನ ಹಾಗೂ 10 ಕೋಟಿ ರೂಪಾಯಿ ನಗದು ಸೀಜ್ ಮಾಡಲಾಗಿದೆ ಎಂದು ಹೇಳಲಾಗಿದೆ.
ಕಳೆದ ಒಂದು ವಾರದಲ್ಲಿ ಐಟಿ ಇಲಾಖೆ ಇಂದೋರ್ ಹಾಗೂ ಭೋಪಾಲ್​ನಲ್ಲಿ ನಿರಂತರ ದಾಳಿ ನಡೆಸುತ್ತಿದೆ. ಈಗಾಗಲೇ 2.85 ಕೋಟಿ ರೂಪಾಯಿಯನ್ನು ಆರ್​ಟಿಒ ಕಾನ್​ಸ್ಟೇಬಲ್ ಸುರಭ್ ಶರ್ಮಾ ಎಂಬುವವರ ಮನೆಯಲ್ಲಿ ವಶಕ್ಕೆ ಪಡೆಯಲಾಗಿದೆ. ಲೋಕಾಯುಕ್ತ ಡಿಎಸ್​ಪಿ ರವೀಂದ್ರ ಸಿಗ್​ ಹೇಳುವ ಪ್ರಕಾರ ಕಾನ್​ಸ್ಟೇಬಲ್ ಮನೆಯಲ್ಲಿ 60ಕೆಜಿ ಸಿಲ್ವರ್ ಬಾರ್​ಗಳನ್ನು ಕೂಡ ವಶಕ್ಕೆ ಪಡೆಯಲಾಗಿದೆಯಂತೆ.
ಇದರಾಚೆ ಚಿನ್ನ, ಬೆಳ್ಳಿ ಹಾಗೂ ವಜ್ರದ ಆಭರಣಗಳು ಸೇರಿದಂತೆ 50 ಲಕ್ಷ ರೂಪಾಯಿಯನ್ನು ದಾಳಿಯಲ್ಲಿ ವಶಕ್ಕೆ ಪಡೆಯಲಾಗಿದೆ. ಇನ್ನು ಸೌರಭ ಶರ್ಮಾ ಮನೆಯಲ್ಲಿ 4 ಲಕ್ಸೂರಿ ಕಾರ್​ಗಳು ಕೂಡ ಕಂಡು ಬಂದಿವೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us