newsfirstkannada.com

×

ಆರು ಅಂತಸ್ತಿನ ಕಟ್ಟಡ ನೆಲಸಮ.. ಅವಶೇಷದಡಿ ಹಲವರು ಸಿಲುಕಿರುವ ಶಂಕೆ

Share :

Published July 6, 2024 at 8:05pm

    ಆರು ಅಂತಸ್ಥಿನ ಕಟ್ಟಡ ದಿಢೀರ್​ ಕುಸಿತ

    15 ಜನರು ಗಾಯಗೊಂಡಿದ್ದಾರೆ ಎಂಬುದು ಸದ್ಯದ ಮಾಹಿತಿ

    8 ವರ್ಷದ ಹಿಂದೆ ನಿರ್ಮಿಸಲಾದ ಕಟ್ಟಡ ಮಳೆಯಿಂದಾಗಿ ನೆಲಸಮ

ಗುಜರಾತ್​: ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಸೂರತ್​ನಲ್ಲಿ ಅವಘಡವೊಂದು ಸಂಭವಿಸಿದೆ. ಆರು ಅಂತಸ್ತಿನ ಕಟ್ಟಡವೊಂದು ನೆಲಸಮವಾಗಿದೆ. ಪರಿಣಾಮ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಘಟನೆಯಲ್ಲಿ 15 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: VIDEO: ಆ್ಯಸಿಡ್​ ದಾಳಿಗೆ ನರಳಾಡುತ್ತಿರೋ ವಿದ್ಯಾರ್ಥಿನಿ.. ಎಂಥಾ ಕಲ್ಲೆದೆಗೂ ಈ ದೃಶ್ಯ ಕಂಡಾಗ ಕರಗದೆ ಇರದು!

ಸೂರತ್​ನ ಸಚಿನ್​ ಪಾಲಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. 8 ವರ್ಷಗಳ ಹಿಂದೆ ನಿರ್ಮಿಸಲಾದ ಕಟ್ಟಡ ನೆಲಸಮವಾಗಿದೆ. ಸದ್ಯ ನೆಲಸಮವಾದ ರಭಸಕ್ಕೆ ಕಾಂಕ್ರೀಟ್​, ಕಲ್ಲು ಚಪ್ಪಡಿಗಳು ತುಂಡಾಗಿ ಬಿದ್ದಿರುವ ದೃಶ್ಯಗಳು ಕಣ್ಣುಕಟ್ಟುವಂತಿವೆ.

ಇದನ್ನೂ ಓದಿ: ಅಂಬಾನಿ ಮಗನ ಮದ್ವೆಗೆ ಟೀಂ ಇಂಡಿಯಾ ಆಟಗಾರರಿಗೆ ಆಹ್ವಾನ! ವಿಶ್ವಕಪ್​ ಗೆಲ್ಲಿಸಿಕೊಟ್ಟ ತ್ರಿಮೂರ್ತಿಗಳಿಗೆ ವಿಶೇಷ ಗೌರವ

ಇಂದು ಮಧ್ಯಾಹ್ನ ಈ ಕಟ್ಟಡ ನೆಲಸಮವಾಗಿದೆ. ಕಟ್ಟಡದ ಕೆಳಗೆ ಹಲವರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ದುರ್ಘಟನೆ ಬೆನ್ನಲ್ಲೇ ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸರು ಮತ್ತು ರಾಷ್ಟ್ರೀಯ ವಿಪತ್ತು ದಳ ದೌಡಾಯಿಸಿದೆ. ಕಟ್ಟಡದ ಕೆಳಗೆ ಸಿಲುಕಿದವರಿಗಾಗಿ ಶೋಧ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆರು ಅಂತಸ್ತಿನ ಕಟ್ಟಡ ನೆಲಸಮ.. ಅವಶೇಷದಡಿ ಹಲವರು ಸಿಲುಕಿರುವ ಶಂಕೆ

https://newsfirstlive.com/wp-content/uploads/2024/07/Building-Collapse.jpg

    ಆರು ಅಂತಸ್ಥಿನ ಕಟ್ಟಡ ದಿಢೀರ್​ ಕುಸಿತ

    15 ಜನರು ಗಾಯಗೊಂಡಿದ್ದಾರೆ ಎಂಬುದು ಸದ್ಯದ ಮಾಹಿತಿ

    8 ವರ್ಷದ ಹಿಂದೆ ನಿರ್ಮಿಸಲಾದ ಕಟ್ಟಡ ಮಳೆಯಿಂದಾಗಿ ನೆಲಸಮ

ಗುಜರಾತ್​: ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಸೂರತ್​ನಲ್ಲಿ ಅವಘಡವೊಂದು ಸಂಭವಿಸಿದೆ. ಆರು ಅಂತಸ್ತಿನ ಕಟ್ಟಡವೊಂದು ನೆಲಸಮವಾಗಿದೆ. ಪರಿಣಾಮ ಹಲವರು ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಘಟನೆಯಲ್ಲಿ 15 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: VIDEO: ಆ್ಯಸಿಡ್​ ದಾಳಿಗೆ ನರಳಾಡುತ್ತಿರೋ ವಿದ್ಯಾರ್ಥಿನಿ.. ಎಂಥಾ ಕಲ್ಲೆದೆಗೂ ಈ ದೃಶ್ಯ ಕಂಡಾಗ ಕರಗದೆ ಇರದು!

ಸೂರತ್​ನ ಸಚಿನ್​ ಪಾಲಿಯಲ್ಲಿ ಈ ದುರ್ಘಟನೆ ಸಂಭವಿಸಿದೆ. 8 ವರ್ಷಗಳ ಹಿಂದೆ ನಿರ್ಮಿಸಲಾದ ಕಟ್ಟಡ ನೆಲಸಮವಾಗಿದೆ. ಸದ್ಯ ನೆಲಸಮವಾದ ರಭಸಕ್ಕೆ ಕಾಂಕ್ರೀಟ್​, ಕಲ್ಲು ಚಪ್ಪಡಿಗಳು ತುಂಡಾಗಿ ಬಿದ್ದಿರುವ ದೃಶ್ಯಗಳು ಕಣ್ಣುಕಟ್ಟುವಂತಿವೆ.

ಇದನ್ನೂ ಓದಿ: ಅಂಬಾನಿ ಮಗನ ಮದ್ವೆಗೆ ಟೀಂ ಇಂಡಿಯಾ ಆಟಗಾರರಿಗೆ ಆಹ್ವಾನ! ವಿಶ್ವಕಪ್​ ಗೆಲ್ಲಿಸಿಕೊಟ್ಟ ತ್ರಿಮೂರ್ತಿಗಳಿಗೆ ವಿಶೇಷ ಗೌರವ

ಇಂದು ಮಧ್ಯಾಹ್ನ ಈ ಕಟ್ಟಡ ನೆಲಸಮವಾಗಿದೆ. ಕಟ್ಟಡದ ಕೆಳಗೆ ಹಲವರು ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ದುರ್ಘಟನೆ ಬೆನ್ನಲ್ಲೇ ಸ್ಥಳಕ್ಕೆ ಅಗ್ನಿಶಾಮಕ ದಳ, ಪೊಲೀಸರು ಮತ್ತು ರಾಷ್ಟ್ರೀಯ ವಿಪತ್ತು ದಳ ದೌಡಾಯಿಸಿದೆ. ಕಟ್ಟಡದ ಕೆಳಗೆ ಸಿಲುಕಿದವರಿಗಾಗಿ ಶೋಧ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More