/newsfirstlive-kannada/media/post_attachments/wp-content/uploads/2024/07/Nepal.jpg)
ಭೂ ಕುಸಿತದಿಂದ ಎರಡು ಬಸ್​ಗಳು ನದಿಯಲ್ಲಿ ಕೊಚ್ಚಿ ಹೋದ ಘಟನೆ ನಡೆದಿದೆ. ಬಸ್​ನಲ್ಲಿದ್ದ ಸುಮಾರು 65 ಜನರು ನಾಪತ್ತೆಯಾಗಿದ್ದಾರೆಂದು ತಿಳಿದುಬಂದಿದೆ.
ನೇಪಾಳದ ಚಿತ್ವಾನ್​ ಜಿಲ್ಲೆಯ ನಾರಾಯಣ್​​-ಮುಗ್ಲಿಂಗ್​​ ರಸ್ತೆಯ ಸಿಮಲ್ವಾಲ್​ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ತ್ರಿಶೂಲಿ ನದಿಯಲ್ಲಿ ಎರಡು ಬಸ್​ಗಳು ಕೊಚ್ಚಿ ಹೋಗಿವೆ. ಪರಿಣಾಮ ಬಸ್​ನಲ್ಲಿದ್ದ ಸುಮಾರು 65 ಮಂದಿ ನಾಪತ್ತೆಯಾಗಿದ್ದಾರೆ.
ಇದನ್ನೂ ಓದಿ: ಕಾವೇರಿ ಜಲಾನಯನ ಪ್ರದೇಶದಲ್ಲಿ ತಗ್ಗಿದ ಮಳೆ.. ಇಳಿಕೆ ಕಂಡ ಒಳ ಹರಿವು! ಇಂದು KRS ಡ್ಯಾಂನ ನೀರಿನ ಮಟ್ಟ ಎಷ್ಟಿದೆ?
ಪ್ರಯಾಣಿಕರನ್ನು ಕಠ್ಮಂಡುವಿಗೆ ಕರೆದೊಯ್ಯುತ್ತಿದ್ದ ಏಂಜೆಲ್​​ ಮತ್ತು ಗಣಪತಿ ಡಿಲಕ್ಸ್​ ಬಸ್​​ ಮುಂಜಾನೆ ಭೂಕುಸಿತದಿಂದ ನದಿ ನೀರಿನಲ್ಲಿ ಕೊಚ್ಚಿ ಹೋಗಿದೆ. ಬೆಳಗ್ಗೆ 3:30ರ ಸುಮಾರಿಗೆ ಈ ಘಟನೆ ನಡೆದಿದೆ. ಒಂದು ಬಸ್​ನಲ್ಲಿ 24 ಜನರು ಮತ್ತೊಂದು ಬಸ್​ನಲ್ಲಿ 41 ಜನರು ಪ್ರಯಾಣಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಗಣಪತಿ ಬಸ್​ನಲ್ಲಿದ್ದ ಮೂವರು ಪ್ರಯಾಣಿಕರು ಬಸ್​​ನಿಂದ ಜಿಗಿದು ಪ್ರಾಣ ಉಳಿಸಿಕೊಂಡಿದ್ದಾರೆ. ಸದ್ಯ 65 ಜನರಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us