ಗಂಡನ ಎದುರಲ್ಲೇ ಕಣ್ಣು ಮುಚ್ಚಿದ ಗರ್ಭಿಣಿ ಹೆಂಡತಿ
ವಾಪಸ್ ಮನೆಗೆ ಬರುವಾಗ ಹಿಂದೆಯಿಂದ ಲಾರಿ ಡಿಕ್ಕಿ
ಸ್ಥಳದಲ್ಲಿ ರಸ್ತೆಯೆಲ್ಲ ಓಡಾಡಿ ಕಣ್ಣೀರು ಹಾಕುತ್ತಿರುವ ಗಂಡ
ಬೆಂಗಳೂರು: ಪೂಜೆ ಮುಗಿಸಿ ವಾಪಸ್ ಆಗುವಾಗ ಬೈಕ್ಗೆ ಲಾರಿ ಗುದ್ದಿದ ಪರಿಣಾಮ 7 ತಿಂಗಳ ಗರ್ಭಿಣಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ.
ಇದನ್ನೂ ಓದಿ: ಕಾಂತಾರಗೆ ತಮಿಳು ಸ್ಟಾರ್ ನಟ ಎಂಟ್ರಿ ಕೊಡ್ತಾರಾ? ವಿಕ್ರಮ್- ರಿಷಬ್ ಶೆಟ್ಟಿ ಭೇಟಿಯಾಗಿದ್ದೇಕೆ?
ನೆಲಮಂಗಲದ ತೋಟನಹಳ್ಳಿ ಗ್ರಾಮದ ನಿವಾಸಿ ಸಿಂಚನಾ ಮೃತಪಟ್ಟ ದುರ್ದೈವಿ. ಗಂಡ ಮಂಜುನಾಥ್ ಜೊತೆ ಮೃತ ಸಿಂಚನಾ, ಶಿವಗಂಗೆ ಗಣೇಶನ ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ತಮ್ಮ ಮನೆಗೆ ಬೈಕ್ನಲ್ಲಿ ವಾಪಸ್ ಆಗುತ್ತಿದ್ದರು. ದಾಬಸ್ಪೇಟೆ ಮೂಲಕ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಎಡೆಹಳ್ಳಿ ಮಾರ್ಗವಾಗಿ ತೋಟನಹಳ್ಳಿ ಗ್ರಾಮಕ್ಕೆ ಹೋಗುತ್ತಿದ್ದರು. ಈ ವೇಳೆ ಜಲ್ಲಿ ತುಂಬಿಕೊಂಡು ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಬೆಂಜ್ ಲಾರಿ, ಬೈಕ್ಗೆ ಭೀಕರವಾಗಿ ಡಿಕ್ಕಿಯಾಗಿದೆ. ಇದರಿಂದ ಕೆಳಗೆ ಬಿದ್ದ 7 ತಿಂಗಳು ಗರ್ಭಿಣಿ ಮೇಲೆ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ‘ನೀರಜ್ ಚಿನ್ನ ಗೆದ್ದರೆ..’ ಪಂತ್ ಕೊಡ್ತಾರೆ ಭರ್ಜರಿ ಗಿಫ್ಟ್; ಆ ಅದೃಷ್ಟಶಾಲಿ ನೀವೂ ಆಗಬಹುದು, Don’t Miss..!
ಲಾರಿ ಹರಿದ ಪರಿಣಾಮ ಗರ್ಭಿಣಿ ಹೊಟ್ಟೆಯಿಂದ ಮಗು ಹೊರಗೆ ಬಂದಿದ್ದು ಇದನ್ನು ನೋಡಲು ನನ್ನಿಂದ ಸಾಧ್ಯವಿಲ್ಲ ಎಂದು ಗೋಳಾಡಿದ್ದಾರೆ. ಪತ್ನಿಯ ಸಾವು ಕಣ್ಣಾರೆ ಕಂಡ ಗಂಡನ ಗೋಳು ಹೇಳತೀರದಾಗಿದೆ.
ಇನ್ನು ಬೈಕ್ಗೆ ಲಾರಿ ಗುದ್ದಿದ ಬಳಿಕ ಡ್ರೈವರ್ ಲಾರಿ ಅಲ್ಲೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಕಳೆದ 6 ತಿಂಗಳಲ್ಲಿ ನೆಲಮಂಗಲ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ 90ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, 125ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಗಂಡನ ಎದುರಲ್ಲೇ ಕಣ್ಣು ಮುಚ್ಚಿದ ಗರ್ಭಿಣಿ ಹೆಂಡತಿ
ವಾಪಸ್ ಮನೆಗೆ ಬರುವಾಗ ಹಿಂದೆಯಿಂದ ಲಾರಿ ಡಿಕ್ಕಿ
ಸ್ಥಳದಲ್ಲಿ ರಸ್ತೆಯೆಲ್ಲ ಓಡಾಡಿ ಕಣ್ಣೀರು ಹಾಕುತ್ತಿರುವ ಗಂಡ
ಬೆಂಗಳೂರು: ಪೂಜೆ ಮುಗಿಸಿ ವಾಪಸ್ ಆಗುವಾಗ ಬೈಕ್ಗೆ ಲಾರಿ ಗುದ್ದಿದ ಪರಿಣಾಮ 7 ತಿಂಗಳ ಗರ್ಭಿಣಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಗರದ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ.
ಇದನ್ನೂ ಓದಿ: ಕಾಂತಾರಗೆ ತಮಿಳು ಸ್ಟಾರ್ ನಟ ಎಂಟ್ರಿ ಕೊಡ್ತಾರಾ? ವಿಕ್ರಮ್- ರಿಷಬ್ ಶೆಟ್ಟಿ ಭೇಟಿಯಾಗಿದ್ದೇಕೆ?
ನೆಲಮಂಗಲದ ತೋಟನಹಳ್ಳಿ ಗ್ರಾಮದ ನಿವಾಸಿ ಸಿಂಚನಾ ಮೃತಪಟ್ಟ ದುರ್ದೈವಿ. ಗಂಡ ಮಂಜುನಾಥ್ ಜೊತೆ ಮೃತ ಸಿಂಚನಾ, ಶಿವಗಂಗೆ ಗಣೇಶನ ದೇವಸ್ಥಾನದಲ್ಲಿ ಪೂಜೆ ಮುಗಿಸಿಕೊಂಡು ತಮ್ಮ ಮನೆಗೆ ಬೈಕ್ನಲ್ಲಿ ವಾಪಸ್ ಆಗುತ್ತಿದ್ದರು. ದಾಬಸ್ಪೇಟೆ ಮೂಲಕ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಎಡೆಹಳ್ಳಿ ಮಾರ್ಗವಾಗಿ ತೋಟನಹಳ್ಳಿ ಗ್ರಾಮಕ್ಕೆ ಹೋಗುತ್ತಿದ್ದರು. ಈ ವೇಳೆ ಜಲ್ಲಿ ತುಂಬಿಕೊಂಡು ಹಿಂಬದಿಯಿಂದ ವೇಗವಾಗಿ ಬರುತ್ತಿದ್ದ ಬೆಂಜ್ ಲಾರಿ, ಬೈಕ್ಗೆ ಭೀಕರವಾಗಿ ಡಿಕ್ಕಿಯಾಗಿದೆ. ಇದರಿಂದ ಕೆಳಗೆ ಬಿದ್ದ 7 ತಿಂಗಳು ಗರ್ಭಿಣಿ ಮೇಲೆ ಲಾರಿ ಹರಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ‘ನೀರಜ್ ಚಿನ್ನ ಗೆದ್ದರೆ..’ ಪಂತ್ ಕೊಡ್ತಾರೆ ಭರ್ಜರಿ ಗಿಫ್ಟ್; ಆ ಅದೃಷ್ಟಶಾಲಿ ನೀವೂ ಆಗಬಹುದು, Don’t Miss..!
ಲಾರಿ ಹರಿದ ಪರಿಣಾಮ ಗರ್ಭಿಣಿ ಹೊಟ್ಟೆಯಿಂದ ಮಗು ಹೊರಗೆ ಬಂದಿದ್ದು ಇದನ್ನು ನೋಡಲು ನನ್ನಿಂದ ಸಾಧ್ಯವಿಲ್ಲ ಎಂದು ಗೋಳಾಡಿದ್ದಾರೆ. ಪತ್ನಿಯ ಸಾವು ಕಣ್ಣಾರೆ ಕಂಡ ಗಂಡನ ಗೋಳು ಹೇಳತೀರದಾಗಿದೆ.
ಇನ್ನು ಬೈಕ್ಗೆ ಲಾರಿ ಗುದ್ದಿದ ಬಳಿಕ ಡ್ರೈವರ್ ಲಾರಿ ಅಲ್ಲೇ ಬಿಟ್ಟು ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಕಳೆದ 6 ತಿಂಗಳಲ್ಲಿ ನೆಲಮಂಗಲ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ 90ಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, 125ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ