ಮಹಾಕುಂಭಮೇಳದಲ್ಲಿ 93 ವರ್ಷದ ದಾಖಲೆಯನ್ನು ಮುರಿದ ಲಾರೆನ್​ ಪಾವೆಲ್​ ಅವರ ಫ್ಲೈಟ್; ಹೇಗೆ ಗೊತ್ತಾ?

author-image
Gopal Kulkarni
Updated On
ಮಹಾಕುಂಭಮೇಳದಲ್ಲಿ 93 ವರ್ಷದ ದಾಖಲೆಯನ್ನು ಮುರಿದ ಲಾರೆನ್​ ಪಾವೆಲ್​ ಅವರ ಫ್ಲೈಟ್; ಹೇಗೆ ಗೊತ್ತಾ?
Advertisment
  • ಪ್ರಯಾಗರಾಜ್​ ಏರ್​ಪೋರ್ಟ್​ನ 93 ವರ್ಷದ ದಾಖಲೆ ಮುರಿದ ಜಾಬ್ಸ್ ಪತ್ನಿ
  • ಪ್ರಯಾಗರಾಜ್​ನಲ್ಲಿ 93 ವರ್ಷ ಘಟಿಸದ ಆ ಘಟನೆಯಾದರೂ ಯಾವುದು..?
  • ಜಾಬ್ಸ್​ ಪತ್ನಿ ಕುಂಭಮೇಳದ ಭೇಟಿಯ ಹಿಂದಿತ್ತೂ ಸ್ಟೀವ್​ನ ಬಹುವರ್ಷದ ಕನಸು

ಆ್ಯಪಲ್ ಸಹ ಸಂಸ್ಥಾಪಕನ ಸ್ಟೀವ್ ಜಾಬ್ಸ್​ ಅವರ ಪತ್ನಿ ಲಾರೆನ್ ಪಾವೆಲ್ ಜಾಬ್ ಇತ್ತೀಚೆಗೆ ಮಹಾಕುಂಭಮೇಳದಲ್ಲಿ ಭಾಗವಹಿಸಲು ಪ್ರಯಾಗರಾಜ್​ಗೆ ಭೇಟಿ ಕೊಟ್ಟಿದ್ದರು. ಜಗತ್ತಿನ ಅತಿದೊಡ್ಡ ಆಧ್ಯಾತ್ಮಿಕ ಕೂಟದಲ್ಲಿ ಭಾಗವಹಿಸಿದ್ದ ಲಾರೆನ್ ಪಾವೆಲ್​ ಮೊದಲ ದಿನ ಆರೋಗ್ಯ ಸಮಸ್ಯೆಯಿಂದಾಗಿ ಗಂಗಾನದಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ವಂಚಿತರಾಗಿದ್ದರು. ಅವರ ಪ್ರಯಾಗರಾಜ್​ನ ಭೇಟಿಯೇ ಜಗತ್ತಿನ ದೃಷ್ಟಿಯನ್ನು ಭಾರತದತ್ತ ಸೆಳೆದಿತ್ತು. ಕುಂಭಮೇಳದ ಅವರ ಆಧ್ಯಾತ್ಮಿಕ ಅನುಭವ ಜಗತ್ತಿನ ಪತ್ರಿಕೆಗಳ ತಲೆಬರಹಗಳಾಗಿದ್ದವು. ಅವರ ಭೇಟಿ ಒಂದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿತ್ತು.

publive-image

ಲಾರೆನ್​ ಪಾವೆಲ್​ ಅವರ ಫ್ಲೈಟ್​ ಗಮನಾರ್ಹವಾಗಿದ್ದು ಹೇಗೆ ?
ಭೂತಾನ್ ಏರ್​ವೇಸ್​ ವಿಮಾನವೊಂದು ಇತ್ತೀಚೆಗೆ ಪ್ರಯಾಗರಾಜ್​ನಲ್ಲಿ ಲ್ಯಾಂಡ್ ಆಗಿತ್ತು. ಆ ಫ್ಲೈಟ್ ಮೂಲಕವೇ ಅಮೆರಿಕಾದ ಬಿಲೇನಿಯರ್​ ಲಾರೆನ್ ಪಾವೆಲ್ ಜಾಬ್ಸ್​ ಬಂದಿಳಿದಿದ್ದರು. ಕುಂಭಮೇಳದಲ್ಲಿ ಭಾಗವಹಿಸಿದ ಬಳಿಕ ಅವರು ವಾಪಸ್ ಭೂತಾನ್​ಗೆ ಅದೇ ಫ್ಲೈಟ್​ನಲ್ಲಿ ವಾಪ್ ಹೋದರು. ಈ ಒಂದು ಕ್ಷಣ ಭಾರತದಲ್ಲಿ ಐತಿಹಾಸಿಕ ಕ್ಷಣವಾಗಿ ಮೈಲಿಗಲನ್ನು ನೆಟ್ಟಿತು. ಪ್ರಯಾಗರಾಜ್​​ನಲ್ಲಿ 93 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ವಿಮಾನವೊಂದು ಮೊದಲ ಬಾರಿಗೆ ಲ್ಯಾಂಡ್ ಆದ ಐತಿಹಾಸಿಕ ಕ್ಷಣವನ್ನು ಬರೆಯಿತು.

ಇದನ್ನೂ ಓದಿ:ವಿವಾದಗಳ ಚೆಲುವೆ ಈಗ ಎಲ್ಲವನ್ನೂ ತ್ಯಜಿಸಿದ ಸಾಧ್ವಿ; ಮಮತಾ ಕುಲಕರ್ಣಿ ಸನ್ಯಾಸಿ ಆಗಿದ್ದು ಯಾಕೆ?

publive-image

1911ರಲ್ಲಿ ಮೊದಲ ಬಾರಿ ಹೆನ್ರಿ ಫ್ರಿಕ್ವೆಟ್​ ಸ್ಥಳೀಯ ಕಮರ್ಷಿಯಲ್ ವಿಮಾನಯಾನವನ್ನು ಭಾರತದಲ್ಲಿ ಕೈಗೊಂಡಿದ್ದರು. ಅಲಹಾಬಾದ್ ಅಂದ್ರೆ ಇಂದಿನ ಪ್ರಯಾಗರಾಜ್​ನಿಂದ ನೈನಿವರೆಗೆ ಸಂಚಾರ ಮಾಡಲಾಗಿತ್ತು. 1931ರಲ್ಲಿ ಅಲಹಾಬಾದ್​ನಲ್ಲಿ ಮೊದಲ ಬಾರಿ ಏರೋಡ್ರಮ್​ ಸ್ಥಾಪಿಸಲಾಯಿತು. ಆಗ ಅದು ಭಾರತದ ಮೊದಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಹೆಸರು ಪಡೆದುಕೊಂಡಿತು. ಇಲ್ಲಿಂದ 1932ರಲ್ಲಿ ಲಂಡನ್​ಗೆ ಫ್ಲೈಟ್ಸ್​ಗಳು ತೆರಳಿದ್ದವು. ಇದಾದ ಬಳಿಕ ಪ್ರಯಾಗರಾಜ್​ನಲ್ಲಿ ಅಂತಾರಾಷ್ಟ್ರೀಯ ವಿಮಾನವೊಂದು ಲ್ಯಾಂಡ್ ಆಗಿದ್ದು 2025ರಲ್ಲಿಯೇ ಅದು ಕೂಡ ಲಾರೆನ್ ಪಾವೆಲ್ ಜಾಬ್ಸ್​ರನ್ನು ಹೊತ್ತುಕೊಂಡು ಬಂದ ಭೂತಾನ್ ಏರ್​​ವೇಸ್ ಏರ್​ಕ್ರಾಫ್ಟ್. ಈ ಮೂಲಕ 93 ವರ್ಷದ ಪ್ರಯಾಗರಾಜ್​ನ ಏರ್​ಪೋರ್ಟ್​ನ ಒಂದು ದಾಖಲೆಯನ್ನು ಮುರಿದಿದ್ದಾರೆ ಸ್ಟೀವ್ ಜಾಬ್ಸ್ ಪತ್ನಿ

ಪತ್ನಿ ಕುಂಭಮೇಳಕ್ಕೆ ಭೇಟಿ ನೀಡುವುದರಲ್ಲಿ ಸ್ಟೀವ್ ಜಾಬ್ಸ್ ಆಸೆಯೂ ಅಡಗಿತ್ತು.
ಫೆಬ್ರುವರಿ 2,3 1974ರಲ್ಲಿ ಸ್ಟೀವ್ ಜಾಬ್ಸ್ ತನ್ನ ಬಾಲ್ಯ ಸ್ನೇಹಿತ ಟೀಮ್ ಬ್ರೌನ್​ಗೆ ಒಂದು ಪತ್ರ ಬರೆಯುತ್ತಾರೆ. ಆ ಪತ್ರದಲ್ಲಿ ನಾನು ಒಂದು ಬಾರಿಯಾದರೂ ಭಾರತದಲ್ಲಿ ನಡೆಯುವ ಕುಂಭಮೇಳವನ್ನು ನೋಡಬೇಕು. ಆ ಕೋಟ್ಯಾಂತರ ಜನ ಭಾಗಿಯಾಗುವ ಆ ಆಧ್ಯಾತ್ಮದ ಯಾತ್ರೆಯಲ್ಲಿ ಪಾಲ್ಗೊಳ್ಳಬೇಕು ಎಂಬ ಆಸೆಯನ್ನು ಅವರು ಹೊರ ಹಾಕಿರುತ್ತಾರೆ. ನಾನು ಭಾರತಕ್ಕೆ ಕುಂಭಮೇಳದ ಸಲುವಾಗಿ ಹೋಗಬೇಕು. ಅದು ಏಪ್ರಿಲ್​ನಲ್ಲಿ ಶುರುವಾಗುತ್ತದೆ. ನಾನು ಮಾರ್ಚ್​​ನಲ್ಲಿ ಇಲ್ಲಿಂದ ಬಿಡಬೇಕು. ಆದ್ರೆ ಸದ್ಯಕ್ಕಲ್ಲ ಎಂದು ಹೇಳಿ ಶಾಂತಿ ಎಂಬ ಶಬ್ದದ ಮೂಲಕ ತಮ್ಮ ಪತ್ರವನ್ನು ಮುಗಿಸಿರುತ್ತಾರೆ. ಈ ಒಂದು ಪತ್ರ ಅವರಿಗೆ ಹಿಂದೂ ತತ್ವಶಾಸ್ತ್ರ ಹಾಗೂ ಆಧ್ಯಾತ್ಮಿಕತೆಯೊಂದಿಗೆ ಎಷ್ಟು ಆಳವಾದ ನಂಟು ಇತ್ತು ಎಂಬುದು ಗೊತ್ತಾಗುತ್ತದೆ. ಈ  ಪತ್ರ ಇತ್ತೀಚೆಗೆ ಸುಮಾರು 4.32 ಕೋಟಿ ರೂಪಾಯಿಗೆ ಹರಾಜು ಆಯ್ತು.

publive-image

ಇನ್ನು ಯೋಗಿಯ ಆತ್ಮಕತೆ ಎಂಬ ಹಿಂದೂ ಸಾಧು ಪರಮಹಂಸ ಯೋಗಾನಂದ ಅವರ ಪುಸ್ತಕ ಸ್ಟೀವ್ ಜಾಬ್ಸ್ ಬಗ್ಗೆ ತುಂಬಾ ಆಳವಾದ ಗಮನಾರ್ಹವಾಗಿ ಸೆಳೆದಿತ್ತಂತೆ. ವಾಲ್ಟರ್ ಇಸಾಸ್ಕಾನ್ಸ್ ಅವರ ಆತ್ಮಕತೆಯಲ್ಲಿ ಬರೆದ ಪ್ರಕಾರ ಜಾಬ್ಸ್​ ತಮ್ಮ ಹದಿಹರೆಯದ ವಯಸ್ಸಿನಲ್ಲಿ ಈ ಪುಸ್ತಕ ಓದಿದ್ದರಂತೆ. ಅಂದಿನಿಂದಲು ಭಾರತಕ್ಕೆ ಹೋಗಬೇಕು ಎಂಬ ಬಯಕೆಯನ್ನು ಹೊಂದಿದ್ದರಂತೆ. ಪ್ರತಿ ವರ್ಷವೂ ಯೋಗಿಯ ಆತ್ಮಕತೆ ಪುಸ್ತಕವನ್ನು ಓದುವ ರೂಢಿಯಿಟ್ಟುಕೊಂಡಿದ್ದರಂತೆ. ಅದರಿಂದ ಪ್ರಭಾವಿತರಾದ ಅವರು ತಮ್ಮ ಸ್ನೇಹಿತನಿಗೆ ಕೊನೆಯ ಉಡುಗೊರೆಯಾಗಿ ಆ ಪುಸ್ತಕವನ್ನು ಕೊಟ್ಟಿದ್ದರಂತೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment