newsfirstkannada.com

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್​​ನಲ್ಲಿ ಊಟ ಮಾಡುವಾಗ ತಟ್ಟೆಯಲ್ಲಿ ಜಿರಳೆ.. ಠಾಣೆ ಮೆಟ್ಟಿಲೇರಿದ ಮಹಿಳೆ..!

Share :

Published January 6, 2024 at 3:06pm

    ಜಿರಳೆ ಕಾರಣಕ್ಕೆ ಗ್ರಾಹಕಿ ಮತ್ತು ಸಿಬ್ಬಂದಿ ಮಧ್ಯೆ ಗಲಾಟೆ

    ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲು

    ಹೋಟೆಲ್ ಸಿಬ್ಬಂದಿ ವಿರುದ್ಧ ಮಹಿಳೆಗೆ ನಿಂದಿಸಿದ ಆರೋಪ

ಬೆಂಗಳೂರು: ಊಟ ಮಾಡಬೇಕೆಂದು ಹೋಟೆಲ್​ಗೆ ಹೋಗಿದ್ದಾಗ ತಟ್ಟೆಯಲ್ಲಿ ಸತ್ತ ಜಿರಳೆ ಪತ್ತೆಯಾಗಿರೋ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ. ಇದೇ ಘಟನೆ ಈಗ ಪೊಲೀಸ್‌ ಸ್ಟೇಷನ್‌ ಮೆಟ್ಟಿಲೇರಿದೆ. ಊಟದ ತಟ್ಟೆಯಲ್ಲಿ ಸತ್ತ ಜಿರಳೆ ಕಂಡು ಬಂದಿದ್ದು ದಿ ಕ್ಯಾಪಿಟಲ್​​ ಹೋಟೆಲ್​ನಲ್ಲಿ.

ಹೌದು, ನಿನ್ನೆ ಸಂಜೆ ವಕೀಲೆ​​ ಶೀಲಾ ಎಂಬುವವರು ಊಟಕ್ಕೆಂದು ರಾಜಭವನ ರಸ್ತೆಯಲ್ಲಿರುವ ಪ್ರತಿಷ್ಠಿತ ದಿ ಕ್ಯಾಪಿಟಲ್​ ಹೋಟೆಲ್​ಗೆ ಹೋಗಿದ್ದರು. ಪನ್ನೀರ್ ಗ್ರೇವಿ, ರೋಟಿ ಆರ್ಡರ್ ಮಾಡಿದ ಹೈಕೋರ್ಟ್ ವಕೀಲೆ, ಇನ್ನೇನು ತಿನ್ನಬೇಕು ಅಂತ ರೋಟಿ ಕೈಯಲ್ಲಿ ಹಿಡಿದುಕೊಂಡು ಪನ್ನೀರ್​ ಗ್ರೇವಿಗೆ ಮಿಕ್ಸ್​ ಮಾಡಿ ಎರಡು ತುತ್ತು ತಿನ್ನುವಾಗ ಜಿರಳೆ ಪತ್ತೆಯಾಗಿದೆ. ಇದನ್ನು ನೋಡಿ ಬೆಚ್ಚಿಬಿದ್ದ ವಕೀಲೆ ಹೋಟೆಲ್​ ಸಿಬ್ಬಂದಿಯನ್ನ ಕರೆದು ವಿಚಾರಿಸಿದ್ದಾರೆ. ಆಗ ಹೋಟೆಲ್​ ಸಿಬ್ಬಂದಿ ಉಡಾಫೆ ಉತ್ತರ ನೀಡಿದ್ದಾರಂತೆ. ತಕ್ಷಣ ಕೋಪಗೊಂಡ ವಕೀಲೆ, ಹೋಟೆಲ್​​ನ ಕಿಚನ್​​ಗೆ​ ಹೋಗಿ ನೋಡಿದಾಗ ಭಯಾನಕ ದೃಶ್ಯಗಳು ಬೆಳಕಿಗೆ ಬಂದಿವೆ. ಈ ಗಲಾಟೆಯ ನಂತರ ವಕೀಲೆ ಶೀಲಾ ಕೂಡಲೇ ಫುಡ್ ಇನ್ಸ್ ಪೆಕ್ಟರ್​​ಗೆ ಕರೆ ಮಾಡಿ ಕಂಪ್ಲೇಂಟ್‌ ಮಾಡಿದ್ದಾರೆ. ಆದರೆ ಅವರಿಂದಲೂ ಉದಾಸೀನದ ಮಾತುಗಳು ಕೇಳಿಬಂದಿದೆಯಂತೆ.

ಇಷ್ಟೆಲ್ಲಾ ಆದ ಮೇಲೆ ಸ್ಥಳಕ್ಕೆ ಪೊಲೀಸರ ಎಂಟ್ರಿಯಾಗಿದೆ. ವಿಡಿಯೋ ಚಿತ್ರೀಕರಿಸ್ತಿರುವಾಗ ತನ್ನನ್ನ ತಳ್ಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ವಕೀಲೆ ಆರೋಪಿಸಿದ್ದಾರೆ. ಈ ಸಂಬಂಧ ಇಬ್ಬರು ಹೋಟೆಲ್​​ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ವಿಧಾನಸೌಧ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 352, 341, 504, 506 ಅಡಿ FIR ದಾಖಲು ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಪನ್ನೀರ್‌ನಲ್ಲಿ ಪತ್ತೆಯಾದ ಜಿರಳೆ ಬಲುದೊಡ್ಡ ತರಲೆಯನ್ನಂತೂ ಸೃಷ್ಟಿ ಮಾಡಿದೆ. ಹೋಟೆಲ್‌ನವರು ಹೈಜಿನ್‌ಗೆ ಒತ್ತು ಕೊಟ್ಟಿದ್ದರೆ ಈ ರೀತಿಯ ತರಲೆ ತಪ್ಪಿಸಬಹುದಿತ್ತೇನೋ ಅಲ್ವಾ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್​​ನಲ್ಲಿ ಊಟ ಮಾಡುವಾಗ ತಟ್ಟೆಯಲ್ಲಿ ಜಿರಳೆ.. ಠಾಣೆ ಮೆಟ್ಟಿಲೇರಿದ ಮಹಿಳೆ..!

https://newsfirstlive.com/wp-content/uploads/2024/01/Blattodea.jpg

    ಜಿರಳೆ ಕಾರಣಕ್ಕೆ ಗ್ರಾಹಕಿ ಮತ್ತು ಸಿಬ್ಬಂದಿ ಮಧ್ಯೆ ಗಲಾಟೆ

    ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲು

    ಹೋಟೆಲ್ ಸಿಬ್ಬಂದಿ ವಿರುದ್ಧ ಮಹಿಳೆಗೆ ನಿಂದಿಸಿದ ಆರೋಪ

ಬೆಂಗಳೂರು: ಊಟ ಮಾಡಬೇಕೆಂದು ಹೋಟೆಲ್​ಗೆ ಹೋಗಿದ್ದಾಗ ತಟ್ಟೆಯಲ್ಲಿ ಸತ್ತ ಜಿರಳೆ ಪತ್ತೆಯಾಗಿರೋ ಘಟನೆ ಸಿಲಿಕಾನ್​ ಸಿಟಿಯಲ್ಲಿ ನಡೆದಿದೆ. ಇದೇ ಘಟನೆ ಈಗ ಪೊಲೀಸ್‌ ಸ್ಟೇಷನ್‌ ಮೆಟ್ಟಿಲೇರಿದೆ. ಊಟದ ತಟ್ಟೆಯಲ್ಲಿ ಸತ್ತ ಜಿರಳೆ ಕಂಡು ಬಂದಿದ್ದು ದಿ ಕ್ಯಾಪಿಟಲ್​​ ಹೋಟೆಲ್​ನಲ್ಲಿ.

ಹೌದು, ನಿನ್ನೆ ಸಂಜೆ ವಕೀಲೆ​​ ಶೀಲಾ ಎಂಬುವವರು ಊಟಕ್ಕೆಂದು ರಾಜಭವನ ರಸ್ತೆಯಲ್ಲಿರುವ ಪ್ರತಿಷ್ಠಿತ ದಿ ಕ್ಯಾಪಿಟಲ್​ ಹೋಟೆಲ್​ಗೆ ಹೋಗಿದ್ದರು. ಪನ್ನೀರ್ ಗ್ರೇವಿ, ರೋಟಿ ಆರ್ಡರ್ ಮಾಡಿದ ಹೈಕೋರ್ಟ್ ವಕೀಲೆ, ಇನ್ನೇನು ತಿನ್ನಬೇಕು ಅಂತ ರೋಟಿ ಕೈಯಲ್ಲಿ ಹಿಡಿದುಕೊಂಡು ಪನ್ನೀರ್​ ಗ್ರೇವಿಗೆ ಮಿಕ್ಸ್​ ಮಾಡಿ ಎರಡು ತುತ್ತು ತಿನ್ನುವಾಗ ಜಿರಳೆ ಪತ್ತೆಯಾಗಿದೆ. ಇದನ್ನು ನೋಡಿ ಬೆಚ್ಚಿಬಿದ್ದ ವಕೀಲೆ ಹೋಟೆಲ್​ ಸಿಬ್ಬಂದಿಯನ್ನ ಕರೆದು ವಿಚಾರಿಸಿದ್ದಾರೆ. ಆಗ ಹೋಟೆಲ್​ ಸಿಬ್ಬಂದಿ ಉಡಾಫೆ ಉತ್ತರ ನೀಡಿದ್ದಾರಂತೆ. ತಕ್ಷಣ ಕೋಪಗೊಂಡ ವಕೀಲೆ, ಹೋಟೆಲ್​​ನ ಕಿಚನ್​​ಗೆ​ ಹೋಗಿ ನೋಡಿದಾಗ ಭಯಾನಕ ದೃಶ್ಯಗಳು ಬೆಳಕಿಗೆ ಬಂದಿವೆ. ಈ ಗಲಾಟೆಯ ನಂತರ ವಕೀಲೆ ಶೀಲಾ ಕೂಡಲೇ ಫುಡ್ ಇನ್ಸ್ ಪೆಕ್ಟರ್​​ಗೆ ಕರೆ ಮಾಡಿ ಕಂಪ್ಲೇಂಟ್‌ ಮಾಡಿದ್ದಾರೆ. ಆದರೆ ಅವರಿಂದಲೂ ಉದಾಸೀನದ ಮಾತುಗಳು ಕೇಳಿಬಂದಿದೆಯಂತೆ.

ಇಷ್ಟೆಲ್ಲಾ ಆದ ಮೇಲೆ ಸ್ಥಳಕ್ಕೆ ಪೊಲೀಸರ ಎಂಟ್ರಿಯಾಗಿದೆ. ವಿಡಿಯೋ ಚಿತ್ರೀಕರಿಸ್ತಿರುವಾಗ ತನ್ನನ್ನ ತಳ್ಳಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ವಕೀಲೆ ಆರೋಪಿಸಿದ್ದಾರೆ. ಈ ಸಂಬಂಧ ಇಬ್ಬರು ಹೋಟೆಲ್​​ ಸಿಬ್ಬಂದಿ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇಲೆ ವಿಧಾನಸೌಧ ಠಾಣೆ ಪೊಲೀಸರು ಐಪಿಸಿ ಸೆಕ್ಷನ್ 352, 341, 504, 506 ಅಡಿ FIR ದಾಖಲು ಮಾಡಿಕೊಂಡಿದ್ದಾರೆ. ಒಟ್ಟಿನಲ್ಲಿ ಪನ್ನೀರ್‌ನಲ್ಲಿ ಪತ್ತೆಯಾದ ಜಿರಳೆ ಬಲುದೊಡ್ಡ ತರಲೆಯನ್ನಂತೂ ಸೃಷ್ಟಿ ಮಾಡಿದೆ. ಹೋಟೆಲ್‌ನವರು ಹೈಜಿನ್‌ಗೆ ಒತ್ತು ಕೊಟ್ಟಿದ್ದರೆ ಈ ರೀತಿಯ ತರಲೆ ತಪ್ಪಿಸಬಹುದಿತ್ತೇನೋ ಅಲ್ವಾ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More