ಡೋಂಟ್ ವರಿ, ನೀನು ಆರೋಗ್ಯವಾಗಿದ್ದರೇ ಅಷ್ಟೇ ಸಾಕು
ಆರೋಗ್ಯದಲ್ಲಿ ಚೇತರಿಕೆ, ಬಿಗ್ ಮನೆಗೆ ಪ್ರತಾಪ್ ವಾಪಸ್
ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಕನ್ನಡದ ಬಿಗ್ ಬಾಸ್
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್- 10 ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ. ಬಿಗ್ಬಾಸ್ ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಇಂತಹ ಸಂದರ್ಭದಲ್ಲಿ ಡ್ರೋನ್ ಪ್ರತಾಪ್ ಫುಡ್ ಪಾಯಸನ್ನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಯಿಂದ ಸುಧಾರಿಸಿಕೊಂಡಿರುವ ಪ್ರತಾಪ್ ಬಿಗ್ ಬಾಸ್ ಮನೆಗೆ ಆಗಮಿಸಿದ್ದಾರೆ.
3 ವರ್ಷದಿಂದ ಅಪ್ಪ-ಅಮ್ಮನನ್ನ ನೋಡದೇ ಮರುಗುತ್ತಿದ್ದ ಪ್ರತಾಪ್ ಕಳೆದ ವಾರ ತಂದೆ-ತಾಯಿಯನ್ನು ಭೇಟಿಯಾಗಿ ಹೊಸ ಹುಮ್ಮಸ್ಸಿನಲ್ಲಿದ್ದರು. ಅದ್ಯಾಕೋ ಗೊತ್ತಿಲ್ಲ ಕಳೆದ ಕೆಲ ದಿನಗಳಿಂದ ಪ್ರತಾಪ್ ಬಹಳ ಡಲ್ ಆಗಿ ಕಾಣುತ್ತಿದ್ದರು. ಫುಡ್ ಪಾಯಿಸನ್ನಿಂದ ಡ್ರೋನ್ ಪ್ರತಾಪ್ರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡಿರುವ ಪ್ರತಾಪ್ ಮತ್ತೆ ಬಿಗ್ ಬಾಸ್ ಮನೆಗೆ ವಾಪಸ್ ಆಗಿದ್ದಾರೆ. ಇದರಿಂದ ಮನೆಯಲ್ಲಿನ ಸ್ಪರ್ಧಿಗಳೆಲ್ಲರೂ ಫುಲ್ ಖುಷ್ ಆಗಿದ್ದಾರೆ.
ಇನ್ನು ಬಿಗ್ ಬಾಸ್ ಮನೆಗೆ ಡ್ರೋನ್ ಪ್ರತಾಪ್ ಎಂಟ್ರಿಯಾಗುತ್ತಿದ್ದಂತೆ ಸ್ಪರ್ಧಿಗಳೆಲ್ಲ ಆತ್ಮೀಯದಿಂದ ಬರಮಾಡಿಕೊಂಡರು. ಪ್ರತಾಪ್ ಆಗಮಿಸುತ್ತಿದ್ದಂತೆ ನಮ್ರತಾ ಅವರು ಓಡೋಡಿ ಬಂದು ತಬ್ಬಿಕೊಂಡರು. ಬಳಿಕ ಸಂಗೀತಾ ಅವರು ತಬ್ಬಿಕೊಂಡು ಬಹಳ ಮಿಸ್ ಮಾಡಿಕೊಂಡೆ ಎಂದು ಹೇಳಿದರು. ಬಳಿಕ ಪ್ರತಾಪ್ ದೇವರಿಗೆ ಪೂಜೆ ಮಾಡಿದರು. ಡೋಂಟ್ ವರಿ, ನೀನು ಆರೋಗ್ಯವಾಗಿದ್ದರೇ ಅಷ್ಟೇ ಸಾಕು ಎಂದು ಸ್ಪರ್ಧಿಗಳು ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಡೋಂಟ್ ವರಿ, ನೀನು ಆರೋಗ್ಯವಾಗಿದ್ದರೇ ಅಷ್ಟೇ ಸಾಕು
ಆರೋಗ್ಯದಲ್ಲಿ ಚೇತರಿಕೆ, ಬಿಗ್ ಮನೆಗೆ ಪ್ರತಾಪ್ ವಾಪಸ್
ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ಕನ್ನಡದ ಬಿಗ್ ಬಾಸ್
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್- 10 ದಿನದಿಂದ ದಿನಕ್ಕೆ ತಿರುವು ಪಡೆದುಕೊಳ್ಳುತ್ತಿದೆ. ಬಿಗ್ಬಾಸ್ ಫಿನಾಲೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಇಂತಹ ಸಂದರ್ಭದಲ್ಲಿ ಡ್ರೋನ್ ಪ್ರತಾಪ್ ಫುಡ್ ಪಾಯಸನ್ನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆಯಿಂದ ಸುಧಾರಿಸಿಕೊಂಡಿರುವ ಪ್ರತಾಪ್ ಬಿಗ್ ಬಾಸ್ ಮನೆಗೆ ಆಗಮಿಸಿದ್ದಾರೆ.
3 ವರ್ಷದಿಂದ ಅಪ್ಪ-ಅಮ್ಮನನ್ನ ನೋಡದೇ ಮರುಗುತ್ತಿದ್ದ ಪ್ರತಾಪ್ ಕಳೆದ ವಾರ ತಂದೆ-ತಾಯಿಯನ್ನು ಭೇಟಿಯಾಗಿ ಹೊಸ ಹುಮ್ಮಸ್ಸಿನಲ್ಲಿದ್ದರು. ಅದ್ಯಾಕೋ ಗೊತ್ತಿಲ್ಲ ಕಳೆದ ಕೆಲ ದಿನಗಳಿಂದ ಪ್ರತಾಪ್ ಬಹಳ ಡಲ್ ಆಗಿ ಕಾಣುತ್ತಿದ್ದರು. ಫುಡ್ ಪಾಯಿಸನ್ನಿಂದ ಡ್ರೋನ್ ಪ್ರತಾಪ್ರನ್ನ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡಿರುವ ಪ್ರತಾಪ್ ಮತ್ತೆ ಬಿಗ್ ಬಾಸ್ ಮನೆಗೆ ವಾಪಸ್ ಆಗಿದ್ದಾರೆ. ಇದರಿಂದ ಮನೆಯಲ್ಲಿನ ಸ್ಪರ್ಧಿಗಳೆಲ್ಲರೂ ಫುಲ್ ಖುಷ್ ಆಗಿದ್ದಾರೆ.
ಇನ್ನು ಬಿಗ್ ಬಾಸ್ ಮನೆಗೆ ಡ್ರೋನ್ ಪ್ರತಾಪ್ ಎಂಟ್ರಿಯಾಗುತ್ತಿದ್ದಂತೆ ಸ್ಪರ್ಧಿಗಳೆಲ್ಲ ಆತ್ಮೀಯದಿಂದ ಬರಮಾಡಿಕೊಂಡರು. ಪ್ರತಾಪ್ ಆಗಮಿಸುತ್ತಿದ್ದಂತೆ ನಮ್ರತಾ ಅವರು ಓಡೋಡಿ ಬಂದು ತಬ್ಬಿಕೊಂಡರು. ಬಳಿಕ ಸಂಗೀತಾ ಅವರು ತಬ್ಬಿಕೊಂಡು ಬಹಳ ಮಿಸ್ ಮಾಡಿಕೊಂಡೆ ಎಂದು ಹೇಳಿದರು. ಬಳಿಕ ಪ್ರತಾಪ್ ದೇವರಿಗೆ ಪೂಜೆ ಮಾಡಿದರು. ಡೋಂಟ್ ವರಿ, ನೀನು ಆರೋಗ್ಯವಾಗಿದ್ದರೇ ಅಷ್ಟೇ ಸಾಕು ಎಂದು ಸ್ಪರ್ಧಿಗಳು ಹೇಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ