ಇಂಡಿಯನ್ ಪ್ರೀಮಿಯರ್ ಲೀಗ್ ಬೆನ್ನಲ್ಲೇ ಟಿ20 ವಿಶ್ವಕಪ್
ವೆಸ್ಟ್ ಇಂಡೀಸ್, ಯುಎಸ್ನಲ್ಲಿ ನಡೆಯಲಿದೆ ಮೆಗಾ ಟೂರ್ನಿ
ಕೋಚ್ ಡ್ರಾವಿಡ್, ರೋಹಿತ್ ಶರ್ಮಾಗೆ ದಿನೇಶ್ ವಾರ್ನಿಂಗ್!
ಸದ್ಯದಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಶುರುವಾಗಲಿದೆ. ಇದಾದ ಬೆನ್ನಲ್ಲೇ 2024ರ ಟಿ20 ವಿಶ್ವಕಪ್ ನಡೆಯಲಿದೆ. ಇದೇ ಜೂನ್ 5ನೇ ತಾರೀಕಿನಿಂದ ಶುರುವಾಗೋ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಟೀಂ ಇಂಡಿಯಾ ಸೇರಿದಂತೆ 20 ದೇಶಗಳು ಭಾಗಿಯಾಗಲಿವೆ. ಹೀಗಾಗಿ ಎಲ್ಲರ ಕಣ್ಣು ವಿಶ್ವ ಕ್ರಿಕೆಟ್ನತ್ತ ನೆಟ್ಟಿದೆ. ಹೀಗಿರುವಾಗಲೇ ಟೀಂ ಇಂಡಿಯಾದ ದಿಗ್ಗಜ ಆಟಗಾರ ದಿನೇಶ್ ಕಾರ್ತಿಕ್ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ಗೆ ಸಲಹೆಯೊಂದು ನೀಡಿದ್ದಾರೆ.
ಈ ಸಂಬಂಧ ಮಾತಾಡಿದ ದಿನೇಶ್ ಕಾರ್ತಿಕ್, ಟಿ20 ವಿಶ್ವಕಪ್ ಯುಎಸ್, ವೆಸ್ಟ್ ಇಂಡೀಸ್ನಲ್ಲಿ ನಡೆಯಲಿದೆ. ಇಲ್ಲಿರೋ ಮೈದಾನಗಳು ಸ್ಪಿನ್ನರ್ಸ್ಗೆ ಫೇವರ್ ಆಗಿವೆ. ಹೀಗಾಗಿ ರವೀಂದ್ರ ಜಡೇಜಾ ಮತ್ತು ಆರ್. ಅಶ್ವಿನ್ ಇಬ್ಬರನ್ನೂ ಕಣಕ್ಕಿಳಿಸುವುದು ಬೆಸ್ಟ್ ಎಂದಿದ್ದಾರೆ.
ಕ್ಯಾಪ್ಟನ್ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್ ಅಶ್ವಿನ್ ಮತ್ತು ಜಡೇಜಾ ಇಬ್ಬರಲ್ಲಿ ಒಬ್ಬರನ್ನು ಟೀಂ ಇಂಡಿಯಾ ಪರ ಆಡಿಸಬಹುದು. ಇದು ತಪ್ಪು ನಿರ್ಧಾರ. ಕಾರಣ ಎಲ್ಲಾ ಮೈದಾನಗಳು ಸ್ಪಿನ್ನರ್ಸ್ಗೆ ಫೇವರ್ ಆಗಿವೆ. ಹೀಗಾಗಿ ಜಡೇಜಾ, ಅಶ್ವಿನ್ ಇಬ್ಬರನ್ನು ಆಡಿಸಿ. ಜತೆಗೆ ಟೀಂ ಇಂಡಿಯಾದ ಫಾಸ್ಟ್ ಬೌಲರ್ ಶಾರ್ದೂಲ್ ಠಾಕೂರ್ ಕಣಕ್ಕಿಳಿದರೆ ಒಳ್ಳೆಯದು. ಇದು ನನ್ನ ಸಲಹೆ, ಉಳಿದದ್ದು ಟೀಂ ಇಂಡಿಯಾ ಸೆಲೆಕ್ಟರ್ಸ್ ನಿರ್ಧಾರ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇಂಡಿಯನ್ ಪ್ರೀಮಿಯರ್ ಲೀಗ್ ಬೆನ್ನಲ್ಲೇ ಟಿ20 ವಿಶ್ವಕಪ್
ವೆಸ್ಟ್ ಇಂಡೀಸ್, ಯುಎಸ್ನಲ್ಲಿ ನಡೆಯಲಿದೆ ಮೆಗಾ ಟೂರ್ನಿ
ಕೋಚ್ ಡ್ರಾವಿಡ್, ರೋಹಿತ್ ಶರ್ಮಾಗೆ ದಿನೇಶ್ ವಾರ್ನಿಂಗ್!
ಸದ್ಯದಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 17 ಶುರುವಾಗಲಿದೆ. ಇದಾದ ಬೆನ್ನಲ್ಲೇ 2024ರ ಟಿ20 ವಿಶ್ವಕಪ್ ನಡೆಯಲಿದೆ. ಇದೇ ಜೂನ್ 5ನೇ ತಾರೀಕಿನಿಂದ ಶುರುವಾಗೋ ಈ ಪ್ರತಿಷ್ಠಿತ ಟೂರ್ನಿಯಲ್ಲಿ ಟೀಂ ಇಂಡಿಯಾ ಸೇರಿದಂತೆ 20 ದೇಶಗಳು ಭಾಗಿಯಾಗಲಿವೆ. ಹೀಗಾಗಿ ಎಲ್ಲರ ಕಣ್ಣು ವಿಶ್ವ ಕ್ರಿಕೆಟ್ನತ್ತ ನೆಟ್ಟಿದೆ. ಹೀಗಿರುವಾಗಲೇ ಟೀಂ ಇಂಡಿಯಾದ ದಿಗ್ಗಜ ಆಟಗಾರ ದಿನೇಶ್ ಕಾರ್ತಿಕ್ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ಗೆ ಸಲಹೆಯೊಂದು ನೀಡಿದ್ದಾರೆ.
ಈ ಸಂಬಂಧ ಮಾತಾಡಿದ ದಿನೇಶ್ ಕಾರ್ತಿಕ್, ಟಿ20 ವಿಶ್ವಕಪ್ ಯುಎಸ್, ವೆಸ್ಟ್ ಇಂಡೀಸ್ನಲ್ಲಿ ನಡೆಯಲಿದೆ. ಇಲ್ಲಿರೋ ಮೈದಾನಗಳು ಸ್ಪಿನ್ನರ್ಸ್ಗೆ ಫೇವರ್ ಆಗಿವೆ. ಹೀಗಾಗಿ ರವೀಂದ್ರ ಜಡೇಜಾ ಮತ್ತು ಆರ್. ಅಶ್ವಿನ್ ಇಬ್ಬರನ್ನೂ ಕಣಕ್ಕಿಳಿಸುವುದು ಬೆಸ್ಟ್ ಎಂದಿದ್ದಾರೆ.
ಕ್ಯಾಪ್ಟನ್ ರೋಹಿತ್ ಶರ್ಮಾ, ಕೋಚ್ ರಾಹುಲ್ ದ್ರಾವಿಡ್ ಅಶ್ವಿನ್ ಮತ್ತು ಜಡೇಜಾ ಇಬ್ಬರಲ್ಲಿ ಒಬ್ಬರನ್ನು ಟೀಂ ಇಂಡಿಯಾ ಪರ ಆಡಿಸಬಹುದು. ಇದು ತಪ್ಪು ನಿರ್ಧಾರ. ಕಾರಣ ಎಲ್ಲಾ ಮೈದಾನಗಳು ಸ್ಪಿನ್ನರ್ಸ್ಗೆ ಫೇವರ್ ಆಗಿವೆ. ಹೀಗಾಗಿ ಜಡೇಜಾ, ಅಶ್ವಿನ್ ಇಬ್ಬರನ್ನು ಆಡಿಸಿ. ಜತೆಗೆ ಟೀಂ ಇಂಡಿಯಾದ ಫಾಸ್ಟ್ ಬೌಲರ್ ಶಾರ್ದೂಲ್ ಠಾಕೂರ್ ಕಣಕ್ಕಿಳಿದರೆ ಒಳ್ಳೆಯದು. ಇದು ನನ್ನ ಸಲಹೆ, ಉಳಿದದ್ದು ಟೀಂ ಇಂಡಿಯಾ ಸೆಲೆಕ್ಟರ್ಸ್ ನಿರ್ಧಾರ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ