ಬಸ್ ಹತ್ತುವಾಗ ಕಳ್ಳಿಯ ಕೈ ಚಳಕ, ಸಿಕ್ಕಿಬಿದ್ದಿರುವುದೇ ರೋಚಕ
ಸ್ವಲ್ಪ ಯಾಮರಿದ್ರೂ ಹೋಗುತ್ತಿತ್ತು ಲಕ್ಷ, ಲಕ್ಷ ಮೌಲ್ಯದ ಮಾಂಗಲ್ಯ ಸರ
ಮಾಂಗಲ್ಯ ಸರಕ್ಕೆ ಕೈ ಹಾಕಿದ್ದ ಮಹಿಳೆಗೆ ಏನು ಮಾಡಿದಳು ಗೊತ್ತಾ? ವಿಡಿಯೋ
ಚಿಕ್ಕಬಳ್ಳಾಪುರ: KSRTC ನಿಲ್ದಾಣದಲ್ಲಿ ಬಸ್ ಹತ್ತುವ ವೇಳೆ ಮಹಿಳಾ ಪ್ರಯಾಣಿಕರ ಕತ್ತಿನಲ್ಲಿದ್ದ ₹1.75 ಲಕ್ಷದ ಮೌಲ್ಯದ ಮಾಂಗಲ್ಯ ಸರ ಕದ್ದು ಮಹಿಳೆಯೊಬ್ಬರು ಪೊಲೀಸರ ಅತಿಥಿಯಾಗಿದ್ದಾಳೆ.
ಮಾಂಗಲ್ಯದ ಚೈನ್ ಕದ್ದ ಆರೋಪಿ ಮೈಸೂರು ಮೂಲದ ಮಂಜುಳಾ ಎಂದು ಹೇಳಲಾಗಿದೆ. ನಾಗಮ್ಮ ಎನ್ನುವ ಮಹಿಳೆ ತನ್ನ ಕತ್ತಿನಲ್ಲಿ ₹1.75 ಲಕ್ಷದ ಮೌಲ್ಯದ ಮಾಂಗಲ್ಯ ಸರ ಹಾಕಿಕೊಂಡು ಬಸ್ ಹತ್ತುತ್ತಿದ್ದರು. ಈ ವೇಳೆ ಬಸ್ ಹತ್ತುವಾಗ ರಶ್ ಆಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ ಮಂಜುಳಾ ಆಕೆಯ ಮಾಂಗಲ್ಯಕ್ಕೆ ಕೈ ಹಾಕಿ ಕಸಿದುಕೊಂಡಿದ್ದಾಳೆ.
ತಕ್ಷಣ ನಾಗಮ್ಮ ಸರ ಕಸಿದಿದ್ದನ್ನು ಗುರುತಿಸಿ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಜುಟ್ಟು ಹಿಡಿದುಕೊಂಡು ಆಕೆ ಕೈಯಲ್ಲಿದ್ದ ತನ್ನ ಮಾಂಗಲ್ಯ ಸರವನ್ನು ಕಸಿದುಕೊಂಡಿದ್ದಾಳೆ. ನಂತರ ಬಸ್ ನಿಲ್ದಾಣದಲ್ಲಿ ಆಕೆಗೆ ಹಿಗ್ಗಾಮುಗ್ಗಾ ಎಳೆದಾಡಿ ಥಳಿಸಿದ್ದಾಳೆ. ನಾಗಮ್ಮ ಅವರು ಮಾಲೂರಿನಿಂದ ಚಿಕ್ಕಬಳ್ಳಾಪುರದ ಸಂಬಂಧಿಕರ ಮನೆಗೆ ಬಂದಿದ್ದಳು. ನಂತರ ವಾಪಸ್ ಮಾಲೂರಿಗೆ ಹೋಗಲು ನಿಲ್ದಾಣದಲ್ಲಿ ಬಸ್ ಹತ್ತುವಾಗ ಈ ಘಟನೆ ನಡೆದಿದೆ. ನಾಗಮ್ಮ ಅವರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳ್ಳಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.
ಫ್ರೀ ಬಸ್.. ಫುಲ್ ರಶ್..! ಅದನ್ನೇ ಬಂಡವಾಳ ಮಾಡ್ಕೊಂಡು ಮಾಂಗಲ್ಯ ಸರಕ್ಕೆ ಕೈಹಾಕಿದ ಲೇಡಿ ಕಳ್ಳಿ..! Video https://t.co/ozRVHNP5y8 pic.twitter.com/BFTjhfcGqW
— NewsFirst Kannada (@NewsFirstKan) June 25, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಸ್ ಹತ್ತುವಾಗ ಕಳ್ಳಿಯ ಕೈ ಚಳಕ, ಸಿಕ್ಕಿಬಿದ್ದಿರುವುದೇ ರೋಚಕ
ಸ್ವಲ್ಪ ಯಾಮರಿದ್ರೂ ಹೋಗುತ್ತಿತ್ತು ಲಕ್ಷ, ಲಕ್ಷ ಮೌಲ್ಯದ ಮಾಂಗಲ್ಯ ಸರ
ಮಾಂಗಲ್ಯ ಸರಕ್ಕೆ ಕೈ ಹಾಕಿದ್ದ ಮಹಿಳೆಗೆ ಏನು ಮಾಡಿದಳು ಗೊತ್ತಾ? ವಿಡಿಯೋ
ಚಿಕ್ಕಬಳ್ಳಾಪುರ: KSRTC ನಿಲ್ದಾಣದಲ್ಲಿ ಬಸ್ ಹತ್ತುವ ವೇಳೆ ಮಹಿಳಾ ಪ್ರಯಾಣಿಕರ ಕತ್ತಿನಲ್ಲಿದ್ದ ₹1.75 ಲಕ್ಷದ ಮೌಲ್ಯದ ಮಾಂಗಲ್ಯ ಸರ ಕದ್ದು ಮಹಿಳೆಯೊಬ್ಬರು ಪೊಲೀಸರ ಅತಿಥಿಯಾಗಿದ್ದಾಳೆ.
ಮಾಂಗಲ್ಯದ ಚೈನ್ ಕದ್ದ ಆರೋಪಿ ಮೈಸೂರು ಮೂಲದ ಮಂಜುಳಾ ಎಂದು ಹೇಳಲಾಗಿದೆ. ನಾಗಮ್ಮ ಎನ್ನುವ ಮಹಿಳೆ ತನ್ನ ಕತ್ತಿನಲ್ಲಿ ₹1.75 ಲಕ್ಷದ ಮೌಲ್ಯದ ಮಾಂಗಲ್ಯ ಸರ ಹಾಕಿಕೊಂಡು ಬಸ್ ಹತ್ತುತ್ತಿದ್ದರು. ಈ ವೇಳೆ ಬಸ್ ಹತ್ತುವಾಗ ರಶ್ ಆಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿ ಮಂಜುಳಾ ಆಕೆಯ ಮಾಂಗಲ್ಯಕ್ಕೆ ಕೈ ಹಾಕಿ ಕಸಿದುಕೊಂಡಿದ್ದಾಳೆ.
ತಕ್ಷಣ ನಾಗಮ್ಮ ಸರ ಕಸಿದಿದ್ದನ್ನು ಗುರುತಿಸಿ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಜುಟ್ಟು ಹಿಡಿದುಕೊಂಡು ಆಕೆ ಕೈಯಲ್ಲಿದ್ದ ತನ್ನ ಮಾಂಗಲ್ಯ ಸರವನ್ನು ಕಸಿದುಕೊಂಡಿದ್ದಾಳೆ. ನಂತರ ಬಸ್ ನಿಲ್ದಾಣದಲ್ಲಿ ಆಕೆಗೆ ಹಿಗ್ಗಾಮುಗ್ಗಾ ಎಳೆದಾಡಿ ಥಳಿಸಿದ್ದಾಳೆ. ನಾಗಮ್ಮ ಅವರು ಮಾಲೂರಿನಿಂದ ಚಿಕ್ಕಬಳ್ಳಾಪುರದ ಸಂಬಂಧಿಕರ ಮನೆಗೆ ಬಂದಿದ್ದಳು. ನಂತರ ವಾಪಸ್ ಮಾಲೂರಿಗೆ ಹೋಗಲು ನಿಲ್ದಾಣದಲ್ಲಿ ಬಸ್ ಹತ್ತುವಾಗ ಈ ಘಟನೆ ನಡೆದಿದೆ. ನಾಗಮ್ಮ ಅವರು ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳ್ಳಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸ್ತಿದ್ದಾರೆ.
ಫ್ರೀ ಬಸ್.. ಫುಲ್ ರಶ್..! ಅದನ್ನೇ ಬಂಡವಾಳ ಮಾಡ್ಕೊಂಡು ಮಾಂಗಲ್ಯ ಸರಕ್ಕೆ ಕೈಹಾಕಿದ ಲೇಡಿ ಕಳ್ಳಿ..! Video https://t.co/ozRVHNP5y8 pic.twitter.com/BFTjhfcGqW
— NewsFirst Kannada (@NewsFirstKan) June 25, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ