ಡಿ.ಕೆ.ಸುರೇಶ್ರನ್ನು ಗುಂಡಿಕ್ಕಿ ಕೊಲ್ಲುವ ಹೇಳಿಕೆಗೆ ಆಕ್ರೋಶ
ಗುಂಡಿಕ್ಕಿ ಕೊಲ್ತೀನಿ ಅಂದ್ರೆ ಕೊಲ್ಲಲಿ ಬಿಡಿ- ಡಿ.ಕೆ.ಶಿವಕುಮಾರ್
ಡಿ.ಕೆ ಸುರೇಶ್ರದ್ದು ಗುಂಡಿಗೆ ಹೆದರುವ ಬ್ಲಡ್ ಅಲ್ಲ ಎಂದ ಡಿಕೆಶಿ
ಬೆಂಗಳೂರು: ನಮ್ಮ ಸುದ್ದಿಗೆ ಬಂದವರದ್ದೆಲ್ಲಾ ಸೆಟಲ್ಮೆಂಟ್ ಆಗಿದೆ. ಸಂಸದ ಡಿ.ಕೆ ಸುರೇಶ್ ಅವರದ್ದು ಹೆದರುವ ಬ್ಲಡ್ ಅಲ್ಲ ಎನ್ನುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪಗೆ ನೇರವಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಈಶ್ವರಪ್ಪ ಅವರ ‘ಗುಂಡಿಕ್ಕಿ’ ಹೇಳಿಕೆಯನ್ನು ಖಂಡಿಸಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್.. ನಮ್ಮ ತಂಟೆಗೆ ಬಂದವರೆಲ್ಲಾ ಏನೇನಾಗಿದ್ದಾರೆ ಹೇಳಿ? ನಮ್ಮ ತಂದೆ ಬಗ್ಗೆ ಮಾತನಾಡಿದ್ದ ಈಶ್ವರಪ್ಪ ಈಗ ಎಲ್ಲಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ‘ಡಿಕೆಸು, ವಿನಯ್ ಕುಲಕರ್ಣಿ ದೇಶದ್ರೋಹಿಗಳು.. ಮೋದಿ ಅವರು ದೇಶದ್ರೋಹಿಗಳನ್ನು ಗುಂಡಿಕ್ಕುವ ಕಾನೂನು ತರಬೇಕು’ ಈಶ್ವರಪ್ಪ
ಡಿ.ಕೆ.ಶಿವಕುಮಾರ್ ಹೇಳಿದ್ದೇನು?
ನೋಡಿ.. ಈಶ್ವರಪ್ಪ ಬಳಿ ಕ್ಷಮೆ ಕೇಳಿ ಎಂದು ನಾವು ಹೇಳುತ್ತಿಲ್ಲ. ಅವನದ್ದು ಒಂದು ರೌಂಡ್ ಸೆಟಲ್ಮೆಂಟ್ ಆಗಿದೆ. ಅಸೆಂಬ್ಲಿಯಲ್ಲಿ ಏನೋ ಮಾತನಾಡಿದ್ದರು. ನಮ್ಮ ತಂದೆಯನ್ನು ಅವರು ನೆನಪಿಸಿಕೊಂಡಿದ್ದರು. ಈಗ ಎಲ್ಲಿದ್ದಾರೆ ಈಶ್ವರಪ್ಪ? ಯಾಱರು ನಮ್ಮ ಸುದ್ದಿಗೆ ಬಂದಿದ್ದಾರೋ ಅವರದ್ದೆಲ್ಲ ಸೆಟಲ್ಮೆಂಟ್ ಆಗ್ತಿದೆ. ಗುಂಡಿಕ್ಕಿ ಕೊಲ್ತೀನಿ ಅಂದ್ರೆ ಕೊಲ್ಲಲಿ ಬಿಡಿ. ಡಿ.ಕೆ.ಸುರೇಶ್ ಈ ಗುಂಡಿಗೆ ಹೆದರುವ ಬ್ಲಡ್ ಅಲ್ಲ. ಕೆಂಪೇಗೌಡರ ಇತಿಹಾಸ ಗೊತ್ತಿದೆ ಅಲ್ವಾ? ನಮಗೆ ನಮ್ಮದೇ ಆಗಿರುವ ಇತಿಹಾಸ ಇದೆ ಎಂದಿದ್ದಾರೆ.
ಈಶ್ವರಪ್ಪ ಏನ್ ಹೇಳಿದ್ದರು..?
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಅಖಂಡ ಭಾರತ. ದಕ್ಷಿಣ ಭಾರತವನ್ನು ಬೇರೆ ರಾಷ್ಟ್ರವಾಗಿ ಮಾಡಬೇಕು ಎಂದು ಶಾಸಕ ವಿನಯ್ ಕುಲಕರ್ಣಿ ಮತ್ತು ಡಿ.ಕೆ.ಸುರೇಶ್ ಕೇಳಿದ್ದಾರೆ. ಈ ಇಬ್ಬರು ರಾಷ್ಟ್ರದ್ರೋಹಿಗಳನ್ನ ಪಕ್ಷದಿಂದ ಕಿತ್ತು ಬಿಸಾಕಿ. ಇದೇ ರೀತಿ ಮಾತನಾಡಿದರೆ ಇವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನನ್ನು ಮೋದಿ ಜಾರಿಗೆ ತರಬೇಕು ಎಂದು ಮನವಿ ಮಾಡುತ್ತೇನೆ ಅಂತಾ ಈಶ್ವರಪ್ಪ ಹೇಳಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಡಿ.ಕೆ.ಸುರೇಶ್ರನ್ನು ಗುಂಡಿಕ್ಕಿ ಕೊಲ್ಲುವ ಹೇಳಿಕೆಗೆ ಆಕ್ರೋಶ
ಗುಂಡಿಕ್ಕಿ ಕೊಲ್ತೀನಿ ಅಂದ್ರೆ ಕೊಲ್ಲಲಿ ಬಿಡಿ- ಡಿ.ಕೆ.ಶಿವಕುಮಾರ್
ಡಿ.ಕೆ ಸುರೇಶ್ರದ್ದು ಗುಂಡಿಗೆ ಹೆದರುವ ಬ್ಲಡ್ ಅಲ್ಲ ಎಂದ ಡಿಕೆಶಿ
ಬೆಂಗಳೂರು: ನಮ್ಮ ಸುದ್ದಿಗೆ ಬಂದವರದ್ದೆಲ್ಲಾ ಸೆಟಲ್ಮೆಂಟ್ ಆಗಿದೆ. ಸಂಸದ ಡಿ.ಕೆ ಸುರೇಶ್ ಅವರದ್ದು ಹೆದರುವ ಬ್ಲಡ್ ಅಲ್ಲ ಎನ್ನುವ ಮೂಲಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪಗೆ ನೇರವಾಗಿ ಎಚ್ಚರಿಕೆ ಕೊಟ್ಟಿದ್ದಾರೆ.
ಈಶ್ವರಪ್ಪ ಅವರ ‘ಗುಂಡಿಕ್ಕಿ’ ಹೇಳಿಕೆಯನ್ನು ಖಂಡಿಸಿ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್.. ನಮ್ಮ ತಂಟೆಗೆ ಬಂದವರೆಲ್ಲಾ ಏನೇನಾಗಿದ್ದಾರೆ ಹೇಳಿ? ನಮ್ಮ ತಂದೆ ಬಗ್ಗೆ ಮಾತನಾಡಿದ್ದ ಈಶ್ವರಪ್ಪ ಈಗ ಎಲ್ಲಿದ್ದಾರೆ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ‘ಡಿಕೆಸು, ವಿನಯ್ ಕುಲಕರ್ಣಿ ದೇಶದ್ರೋಹಿಗಳು.. ಮೋದಿ ಅವರು ದೇಶದ್ರೋಹಿಗಳನ್ನು ಗುಂಡಿಕ್ಕುವ ಕಾನೂನು ತರಬೇಕು’ ಈಶ್ವರಪ್ಪ
ಡಿ.ಕೆ.ಶಿವಕುಮಾರ್ ಹೇಳಿದ್ದೇನು?
ನೋಡಿ.. ಈಶ್ವರಪ್ಪ ಬಳಿ ಕ್ಷಮೆ ಕೇಳಿ ಎಂದು ನಾವು ಹೇಳುತ್ತಿಲ್ಲ. ಅವನದ್ದು ಒಂದು ರೌಂಡ್ ಸೆಟಲ್ಮೆಂಟ್ ಆಗಿದೆ. ಅಸೆಂಬ್ಲಿಯಲ್ಲಿ ಏನೋ ಮಾತನಾಡಿದ್ದರು. ನಮ್ಮ ತಂದೆಯನ್ನು ಅವರು ನೆನಪಿಸಿಕೊಂಡಿದ್ದರು. ಈಗ ಎಲ್ಲಿದ್ದಾರೆ ಈಶ್ವರಪ್ಪ? ಯಾಱರು ನಮ್ಮ ಸುದ್ದಿಗೆ ಬಂದಿದ್ದಾರೋ ಅವರದ್ದೆಲ್ಲ ಸೆಟಲ್ಮೆಂಟ್ ಆಗ್ತಿದೆ. ಗುಂಡಿಕ್ಕಿ ಕೊಲ್ತೀನಿ ಅಂದ್ರೆ ಕೊಲ್ಲಲಿ ಬಿಡಿ. ಡಿ.ಕೆ.ಸುರೇಶ್ ಈ ಗುಂಡಿಗೆ ಹೆದರುವ ಬ್ಲಡ್ ಅಲ್ಲ. ಕೆಂಪೇಗೌಡರ ಇತಿಹಾಸ ಗೊತ್ತಿದೆ ಅಲ್ವಾ? ನಮಗೆ ನಮ್ಮದೇ ಆಗಿರುವ ಇತಿಹಾಸ ಇದೆ ಎಂದಿದ್ದಾರೆ.
ಈಶ್ವರಪ್ಪ ಏನ್ ಹೇಳಿದ್ದರು..?
ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಅಖಂಡ ಭಾರತ. ದಕ್ಷಿಣ ಭಾರತವನ್ನು ಬೇರೆ ರಾಷ್ಟ್ರವಾಗಿ ಮಾಡಬೇಕು ಎಂದು ಶಾಸಕ ವಿನಯ್ ಕುಲಕರ್ಣಿ ಮತ್ತು ಡಿ.ಕೆ.ಸುರೇಶ್ ಕೇಳಿದ್ದಾರೆ. ಈ ಇಬ್ಬರು ರಾಷ್ಟ್ರದ್ರೋಹಿಗಳನ್ನ ಪಕ್ಷದಿಂದ ಕಿತ್ತು ಬಿಸಾಕಿ. ಇದೇ ರೀತಿ ಮಾತನಾಡಿದರೆ ಇವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನನ್ನು ಮೋದಿ ಜಾರಿಗೆ ತರಬೇಕು ಎಂದು ಮನವಿ ಮಾಡುತ್ತೇನೆ ಅಂತಾ ಈಶ್ವರಪ್ಪ ಹೇಳಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ