‘ಕೃಷಿ ಭಾಗ್ಯ’ ಮರು ಜಾರಿ ಬಗ್ಗೆ ಘೋಷಣೆ ಮಾಡಿದ ಸಿದ್ದರಾಮಯ್ಯ
ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಜಪಾನ್ ತಂತ್ರಜ್ಞಾನ
‘ಗ್ಯಾರಂಟಿ’ ಸರ್ಕಾರದಿಂದ ಯಾರಿಗೆಲ್ಲಾ ಸಿಹಿ, ಯಾರಿಗೆ ಕಹಿ?
ಕೇಂದ್ರ ಮಧ್ಯಂತರ ಬಜೆಟ್ ಮಂಡನೆ ಬೆನ್ನಲ್ಲೇ ಇಂದು ರಾಜ್ಯದ ಆಯವ್ಯಯ ಲೆಕ್ಕವನ್ನ ಸಿಎಂ ಸಿದ್ದರಾಮಯ್ಯ ಮಂಡಿಸುತ್ತಿದ್ದಾರೆ. ಒಂದ್ಕಡೆ ಗ್ಯಾರಂಟಿ ಯೋಜನೆ, ಮತ್ತೊಂದೆಡೆ ಸಾಲದ ಹೊರೆ. ಈ ನಡುವೆ ಲೋಕ ಸಮರ ಹಿನ್ನೆಲೆ ಜನಪರ ಯೋಜನೆ ನೀಡಬೇಕಾದ ಸ್ಥಿತಿ ಇದ್ದು ಜನರಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿವೆ. ಸದ್ಯ ಸಿದ್ದರಾಮಯ್ಯ ಮಂಡಿಸುತ್ತಿರುವ ಬಜೆಟ್ನ ಹೈಲೈಟ್ಸ್ ಇಲ್ಲಿದೆ.
ಕರ್ನಾಟಕ ಬಜೆಟ್ ಹೈಲೈಟ್ಸ್
- 15 ಬಾರಿ ಬಜೆಟ್ ಮಂಡಿಸಿ ವಿಶೇಷ ದಾಖಲೆ ಬರೆದ ಸಿಎಂ ಸಿದ್ದರಾಮಯ್ಯ
- ಈ ಬಾರಿಯ ಬಜೆಟ್ ಗಾತ್ರ 3, 71, 383 ಕೋಟಿ ರೂಪಾಯಿ
ಕೌಶಲ್ಯಾಭಿವೃದ್ಧಿ ಇಲಾಖೆ
- ಕೌಶಲ್ಯ ತರಬೇತಿ ಪಡೆದವರಿಗೆ ವಿವಿಧ ಜಿಲ್ಲೆಗಳಲ್ಲಿ ಉದ್ಯೋಗ ಮೇಳ
- ಉದ್ಯಮಗಳ ಬೇಡಿಕೆಗೆ ಪೂರಕವಾದ Skill Connect Summit ಆಯೋಜನೆ
- IIM-B ಸಹಯೋಗದೊಂದಿಗೆ 10 ಜಿಲ್ಲೆಗಳಲ್ಲಿ Incubation ಕೇಂದ್ರಗಳು
- ಕೋಳಿ, ಕುರಿ, ಮೇಕೆ ಸಾಕಾಣೆ & ಮಾರುಕಟ್ಟೆಗೆ 100 ಕೋಟಿ ರೂಪಾಯಿ
- ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಆಹಾರ ನೀಡಲು ಕೆಫೆ ಸಂಜೀವಿನಿ
- ಮಹಿಳೆಯರೇ ನಡೆಸುವ 50 ಕೆಫೆ ಸಂಜೀವಿನಿ ಹೋಟೆಲ್ಗಳ ಸ್ಥಾಪನೆ
- ವಿದ್ಯಾರ್ಥಿನಿ ಮತ್ತು ಉದ್ಯೋಗಸ್ಥ ಮಹಿಳೆಯರಿಗೆ 5 ನಗರಗಳಲ್ಲಿ ಹಾಸ್ಟೆಲ್
ಆಹಾರ ಮತ್ತು ನಾಗರಿಕ ಸರಬರಾಜು
- ಹಿರಿಯ ನಾಗರಿಕರಿಗೆ ಆಹಾರ ಧಾನ್ಯ ಒದಗಿಸುವ ಅನ್ನ ಸುವಿಧಾ ಌಪ್
- 80 ವರ್ಷ ದಾಟಿದ ನಾಗರಿಕರಿಗೆ ಆಹಾರ ಧಾನ್ಯ ಒದಗಿಸುವುದಕ್ಕೆ ಌಪ್
ಅಲ್ಪಸಂಖ್ಯಾತ ಕಲ್ಯಾಣ
- ವಕ್ಫ್ ಆಸ್ತಿಗಳ ಸಂರಕ್ಷಣೆ, ಅಭಿವೃದ್ಧಿಗೆ 100 ಕೋಟಿ ರೂಪಾಯಿ ಘೋಷಣೆ
- ಕ್ರೈಸ್ತ ಸಮುದಾಯ ಅಭಿವೃದ್ಧಿಗಾಗಿ 200 ಕೋಟಿ ರೂಪಾಯಿ ಘೋಷಣೆ
- ಜೈನರ ಧಾರ್ಮಿಕ ಸ್ಥಳ ಅಭಿವೃದ್ಧಿಗಾಗಿ 50 ಕೋಟಿ ರೂಪಾಯಿ ಘೋಷಣೆ
ಸಮಾಜ ಕಲ್ಯಾಣ
- ಡಾ. ಸಿದ್ದಲಿಂಗಯ್ಯ ಸ್ಮರಣಾರ್ಥ ಬೆಂಗಳೂರು ವಿವಿಯಲ್ಲಿ ಅಧ್ಯಯನ ಪೀಠ
- AI & ಮೆಷಿನ್ ಲರ್ನಿಂಗ್ ಕಲಿಕೆ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ
- 200 ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ₹15 ಸಾವಿರ ಶಿಷ್ಯ ವೇತನ
- ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 5 ಸಾವಿರ ಯುವಕರಿಗೆ ಡ್ರೋಣ್ ತರಬೇತಿ
ಧಾರ್ಮಿಕ ದತ್ತಿಗೆ ಕೊಡುಗೆ ಏನು?
- ಗುಡ್ಡಾಪುರದಲ್ಲಿ 11 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ
- ತಿರುಮಲದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ
- ಮಂತ್ರಾಲಯಕ್ಕೆ ಸಂಪರ್ಕ ಕಲ್ಪಿಸಲು ಬ್ರಿಡ್ಜ್ ಕಂ ಬ್ಯಾರೇಜ್
- ರಾಯಚೂರಿನ ಚಿಕ್ಕಮಂಚಾಲಿ ಗ್ರಾಮದ ಬಳಿ ಕಾಮಗಾರಿ
- 158. ಕೋಟಿ ರೂ ವೆಚ್ಚದಲ್ಲಿ ಬ್ರಿಡ್ಜ್ ಕಂ ಬ್ಯಾರೇಜ್ ಕಾಮಗಾರಿ
- ಘಾಟಿ ಸುಬ್ರಮಣ್ಯಸ್ವಾಮಿ ದೇವಾಲಯಕ್ಕೆ ಪ್ರತ್ಯೇಕ ಪ್ರಾಧಿಕಾರ
- ಕೊಪ್ಪಳದ ಹುಲಿಗೆಮ್ಮ ದೇವಾಲಯಕ್ಕೆ ಪ್ರತ್ಯೇಕ ಪ್ರಾಧಿಕಾರ ರಚನೆ
- ಆದಾಯವಿಲ್ಲದ 34,165 ‘ಸಿ’ ವರ್ಗದ ದೇವಾಲಯಗಳ ಅಭಿವೃದ್ಧಿ
- ಸಂಬಂಧಪಟ್ಟ ಇಲಾಖೆಗಳನ್ನೊಳಗೊಂಡ Vision Grou ರಚನೆ
- 29,523 ‘ಸಿ’ ವರ್ಗದ ಅರ್ಚಕರುಗಳ ಬ್ಯಾಂಕ್ ಖಾತೆಗೆ ಹಣ ಜಮೆ
- ತಸ್ತಿಕ್ ಮೊತ್ತವನ್ನ ಅರ್ಚಕರ ಖಾತೆಗೆ ಜಮ ಮಾಡುವ ನಿರ್ಧಾರ
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
- ರಸ್ತೆ ಸಂಪರ್ಕ ಜಾಲ ಅಭಿವೃದ್ಧಿಪಡಿಸಲು ಪ್ರಗತಿಪಥ ಯೋಜನೆ
- ಈ ಯೋಜನೆಯಡಿ 189 ವಿಧಾನಸಭಾ ಕ್ಷೇತ್ರಗಳಲ್ಲಿ ರಸ್ತೆ ಸಂಪರ್ಕ
- ತಲಾ 50 ಕಿ.ಮೀ. ಉದ್ದದ ರಸ್ತೆಗಳಂತೆ 9,450 ಕಿ.ಮೀ ವಿಸ್ತರಣೆ
- 5,2000 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಸಂಪರ್ಕ ಜಾಲ ಅಭಿವೃದ್ಧಿ
- ಕಲ್ಯಾಣ ಪಥ ಯೋಜನೆಯಡಿ 1,150 ಕಿ.ಮೀ. ರಸ್ತೆ ಅಭಿವೃದ್ಧಿ
- 38 ವಿಧಾನಸಭಾ ಕ್ಷೇತ್ರಗಳಲ್ಲಿ 1,000 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ
- ಗ್ರಾಮ ಪಂಚಾಯ್ತಿಗಳನ್ನು ಸಮರ್ಥ ಗ್ರಾಮ ಸರ್ಕಾರಗಳಾಗಿ ರೂಪಿಸಲು ಕ್ರಮ
- ನರೇಗಾ ಯೋಜನೆಯಡಿ 30 ಲಕ್ಷ ಕುಟುಂಬಗಳಿಗೆ ಉದ್ಯೋಗದ ಗುರಿ
- ಪ್ರತಿ ತಾಲೂಕಿಗೆ ಎರಡು ಬೂದು ನೀರು ಸಂಸ್ಕರಣಾ ಘಟಕ ನಿರ್ಮಾಣ
- ಅರಿವು ಕೇಂದ್ರ ಬಲಪಡಿಸಲು ₹132 ಕೋಟಿಯಲ್ಲಿ ಸ್ವಂತ ಕಟ್ಟಡ ನಿರ್ಮಾಣ
- ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಇ-ಆಫೀಸ್ ಪ್ರಾರಂಭ
- ಗ್ರಾಮ ಪಂಚಾಯ್ತಿಗಳಲ್ಲಿ ಸ್ವತ್ತುಗಳ ಆಸೆಟ್ ಮಾನಿಟೈಸೇಷನ್ ನೀತಿ ಜಾರಿ
- ವ್ಯವಹಾರ ಪರವಾನಗಿ ಸ್ವಯಂಚಾಲಿತ ನವೀಕಣರಣ ಕಾಯ್ದೆಗೆ ತಿದ್ದುಪಡಿ
- ಪಂಚಾಯ್ತಿಗಳ ಸಭೆಗಳು, ಗ್ರಾಮ ಸಭೆಗಳ ಕಾರ್ಯಕಲಾಪ ನೇರಪ್ರಸಾರ
- ಗ್ರಾ.ಪಂಚಾಯ್ತಿಗಳಲ್ಲಿ ವಿದ್ಯುತ್ ಬಳಕೆ ವೆಚ್ಚ ತಗ್ಗಿಸಲು ಕ್ರಮ
- 50 ಗ್ರಾ.ಪಂ.ಗಳಲ್ಲಿ ಹೊಂಬೆಳಕು ಕಾರ್ಯಕ್ರಮದಡಿ ಸೋಲಾರ್ ದೀಪ ಅಳವಡಿಕೆ
- ಸೋಲಾರ್ ದೀಪ ಅಳವಡಿಕೆಗೆ 25 ಕೋಟಿ ರೂ. ಮೀಸಲು
- 200 ಗ್ರಾ.ಪಂಚಾಯ್ತಿಗಳಲ್ಲಿ ಬೀದಿ ದೀಪಗಳ ವ್ಯವಸ್ಥಿತ ಮೀಟರಿಂಗ್
- ಆಯ್ದ 100 ಗ್ರಾ.ಪಂ.ಗಳಲ್ಲಿ ಹಿರಿಯ ನಾಗರಿಕರ ಆರೈಕೆ ಚಿಕಿತ್ಸಾ ಕೇಂದ್ರ
- ಪ್ರೇರಣಾ ಕಾರ್ಯಕ್ರಮದಡಿ ಮಹಿಳೆಯರಿಗೆ ಮೆನ್ಸುಟ್ರುಯಲ್ ಕಪ್ ಬಳಕೆಗೆ ಪ್ರೋತ್ಸಾಹ
- ಎಲ್ಲಾ ಗ್ರಾ.ಪಂ.ಗಳಲ್ಲಿ ಎಣ್ಣೆ ಗಾಣ ಸ್ಥಾಪನೆಗೆ ನೆರವು
- ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟದಿಂದ ಘನ ತ್ಯಾಜ್ಯ ನಿರ್ವಹಣೆ
- ಪಂಚಾಯ್ತಿ ಮಟ್ಟದಲ್ಲಿ ಒಕ್ಕೂಟಗಳ ಸದಸ್ಯರಿಗೆ ತರಬೇತಿ
ಬೆಂಗಳೂರು ನಗರಾಭಿವೃದ್ಧಿ
- ಹೆಬ್ಬಾಳ ಜಂಕ್ಷನ್ನಲ್ಲಿ ಪ್ರಾಯೋಗಿಕ ಸುರಂಗ ಮಾರ್ಗ ನಿರ್ಮಾಣ
- ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಅಂತಾರಾಷ್ಟ್ರೀಯ ತಜ್ಞರ ಸಮಿತಿ
- 70 ಕಿ.ಮೀ. ಉದ್ದದ ಬೆಂಗಳೂರು ಬ್ಯುಸಿನೆಸ್ ಕಾರಿಡಾರ್ ನಿರ್ಮಾಣ
- ಕಾರಿಡಾರ್ ನಿರ್ಮಾಣಕ್ಕೆ ಅಂದಾಜು ವೆಚ್ಚ 27,000 ಕೋಟಿ
- 250 ಮೀ. ಉದ್ದದ ಸ್ಕೈ ಡೆಕ್ ನಿರ್ಮಾಣಕ್ಕೆ ಆರ್ಕಿಟೆಕ್ಟ್ಸ್ಗೆ ಆಹ್ವಾನ
- ಸರ್ಕಾರಿ ಇಲಾಖೆಗಳ ವಿದ್ಯುತ್ ಶುಲ್ಕ ಕಡಿತಕ್ಕೆ ಸೋಲಾರ್ ಪಾರ್ಕ್
- 2025ರ ಮಾರ್ಚ್ ವೇಳೆಗೆ ಮೆಟ್ರೋ ರೈಲು 44 ಕಿ.ಮೀ. ವಿಸ್ತರಣೆ
- 2026ರ ಜೂನ್ ವೇಳೆಗೆ ವಿಮಾನ ನಿಲ್ದಾಣಕ್ಕೂ ಮೆಟ್ರೋ ಮಾರ್ಗ
- ಬಿಎಂಟಿಸಿಗೆ 1,334 ಹೊಸ ಎಲೆಕ್ಟ್ರಿಕ್ ಬಸ್ಗಳ ಸೇರ್ಪಡೆ
- ಬಿಎಂಟಿಸಿ ಪ್ರಯಾಣಿಕರಿಗೆ ವೆಹಿಕಲ್ ಟ್ರ್ಯಾಕಿಂಗ್ ಌಪ್ ಸೌಲಭ್ಯ
- ಬೆಂಗಳೂರು ಟ್ರಾಫಿಕ್ ಸಮಸ್ಯೆ ಪರಿಹಾರಕ್ಕೆ ಜಪಾನ್ ತಂತ್ರಜ್ಞಾನ
- ಏರಿಯಾ ಟ್ರಾಫಿಕ್ ಸಿಗ್ನಲ್ ಕಂಟ್ರೋಲ್ ಸಿಸ್ಟಮ್ ಬಳಕೆ
- ಬೆಂಗಳೂರಿನಲ್ಲಿ ವ್ಯಾಪಾರ, ವಹಿವಾಟು ತಡರಾತ್ರಿ 1ರವರೆಗೆ ವಿಸ್ತರಣೆ
ಇಲಾಖೆವಾರು ಅನುದಾನ
- ಶಿಕ್ಷಣ ಇಲಾಖೆಗೆ 44,422 ಕೋಟಿ ರೂಪಾಯಿ ಅನುದಾನ
- ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 34,406 ಕೋಟಿ ಅನುದಾನ
- ಇಂಧನ ಇಲಾಖೆ 23,159 ಕೋಟಿ ರೂಪಾಯಿ ಅನುದಾನ ಘೋಷಣೆ
- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ 21,160 ಕೋಟಿ ಅನುದಾನ
- ನೀರಾವರಿ ಇಲಾಖೆಗೆ 19,179 ಕೋಟಿ ರೂಪಾಯಿ ಅನುದಾನ
- ನಗರಾಭಿವೃದ್ಧಿ ಮತ್ತಯ ವಸತಿ 18,155 ಕೋಟಿ ರೂಪಾಯಿ ಅನುದಾನ
- ಕಂದಾಯ ಇಲಾಖೆಗೆ 16,170 ಕೋಟಿ ರೂಪಾಯಿ ಅನುದಾನ
- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ 15,145 ಕೋಟಿ ರೂಪಾಯಿ ಅನುದಾನ
- ಸಮಾಜ ಕಲ್ಯಾಣ ಇಲಾಖೆಗೆ 13,334 ಕೋಟಿ ರೂಪಾಯಿ ಅನುದಾನ
- ಲೋಕೋಪಯೋಗಿ ಇಲಾಖೆಗೆ 10,424 ಕೋಟಿ ರೂಪಾಯಿ ಅನುದಾನ
- ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ 9,963 ಕೋಟಿ ಅನುದಾನ
- ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ 6,688 ಕೋಟಿ ರೂಪಾಯಿ ಅನುದಾನ
- ಪಶು ಸಂಗೋಪನೆ ಮತ್ತು ಮೀನುಗಾರಿಕೆ ಇಲಾಖೆಗೆ 3,307 ಕೋಟಿ ರೂಪಾಯಿ ಅನುದಾನ
- ಇತರೆ ಅಭಿವೃದ್ಧಿ ಕಾರ್ಯಗಳಿಗೆ 1,24,593 ಕೋಟಿ ರೂಪಾಯಿ ಅನುದಾನ ಘೋಷಣೆ
ಸರ್ಕಾರದ ಆದಾಯದ ಗುರಿ ಏನು..?
- ಮೋಟಾರು ವಾಹನ ತೆರಿಗೆ: 13,000 ಕೋಟಿ ರೂಪಾಯಿ ನಿರೀಕ್ಷೆ
- ನೋಂದಣಿ ಮತ್ತು ಮುದ್ರಾಂಕ: 26,000 ಕೋಟಿ ರೂಪಾಯಿ ನಿರೀಕ್ಷೆ
- ರಾಜ್ಯ ಅಬಕಾರಿ: 38,525 ಕೋಟಿ ರೂಪಾಯಿ ನಿರೀಕ್ಷೆ
- ವಾಣಿಜ್ಯ ತೆರಿಗೆ : 1,10,000 ಕೋಟಿ ರೂಪಾಯಿ ನಿರೀಕ್ಷೆ
- ಇತರೆ – 2,368 ಕೋಟಿ ರೂಪಾಯಿ ನಿರೀಕ್ಷೆ ಮಾಡಲಾಗಿದೆ
- 2,188 ಕೋಟಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಲಾಗಿದೆ
- ಬೆಂಗಳೂರು ನಗರದಲ್ಲಿ ವಿಶ್ವದರ್ಜೆ ಮೂಲ ಸೌಕರ್ಯ ನೀಡಲಾಗುತ್ತದೆ
- ಶಿಕ್ಷಣ, ಆರೋಗ್ಯ ಮತ್ತು ಕೌಶಲ್ಯ ಅಭಿವೃದ್ಧಿಗೆ ಒತ್ತುನೀಡಲಾಗುತ್ತದೆ
- ರಾಜಕೀಯ ಮತ್ತು ಆರ್ಥಿಕ ನ್ಯಾಯಕ್ಕಾಗಿ ಹೆಚ್ಚು ಒತ್ತು ನೀಡಲಾಗುವುದು
- ರಾಜ್ಯದ ಆರ್ಥಿಕ ವ್ಯವಸ್ಥೆಯು ಶೇ.66 ರಷ್ಟು ಬೆಳವಣಿಗೆಯಾಗಲಿದೆ
- ಪ್ರಸಕ್ತ ವರ್ಷದಲ್ಲಿ ಮುಂಗಾರು ವೈಫಲ್ಯದಿಂದ ರಾಜ್ಯ ಬರಗಾಲಕ್ಕೆ ತುತ್ತಾಗಿದೆ
- ಜೆಎಸ್ಟಿಯ ಅವೈಜ್ಞಾನಿಕ ತೆರಿಗೆಯಿಂದಾಗಿ ರಾಜ್ಯಕ್ಕೆ ನಷ್ಟವಾಗಿದೆ
- ಕೇಂದ್ರ ಮಾಡದ ಕೆಲಸವನ್ನ ರಾಜ್ಯ ಸರ್ಕಾರ ಕೈಗೆತ್ತಿಕೊಂಡಿದೆ
- ನಮ್ಮ ಗ್ಯಾರಂಟಿ ಯೋಜನೆಗಳು ಕೇವಲ ಚುನಾವಣಾ ಗಿಮಿಕ್ ಅಲ್ಲ
- 2024-25ರಲ್ಲಿ 57 ಸಾವಿರ ಕೋಟಿ 5 ಗ್ಯಾರಂಟಿಗಳಿಗೆ ಹಂಚಿಕೆ ಮಾಡಲಾಗ್ತಿದೆ
- ಭಾರತ ಗಣರಾಜ್ಯವಾಗಿ 75ನೇ ವರ್ಷಕ್ಕೆ ಕಾಲಿಟ್ಟಿದೆ
- 15ನೇ ಬಜೆಟ್ ಮಂಡನೆ ಮಾಡುತ್ತಿರೋದಕ್ಕೆ ತುಂಬಾ ಖುಷಿ ಇದೆ
- ‘ಕರ್ನಾಟಕ ಮಾದರಿ’ಗೆ ಹೊಸ ಹೆಜ್ಜೆಯನ್ನು ಇಟ್ಟಿದ್ದೇವೆ
- ಕರ್ನಾಟಕ ಮಾದರಿ ಅಭಿವೃದ್ಧಿ ಹೊಸ ದೃಷ್ಟಾಂತರ ರೂಪಿಸಲು ಮುನ್ನುಡಿ
- ಬಸವಾದಿ ಶರಣ ಕಾಯಕ, ದಾಸೋಹ ತತ್ವ ನಮಗೆ ಪ್ರೇರಣೆ
- ದುಡಿಮೆಯ ಪಾಲು ಹಂಚಬೇಕೆಂಬುದು ನಮಗೆ ಮಾರ್ಗದರ್ಶನ
- ವರನಟ ರಾಜ್ಕುಮಾರ್ರ ಆಗದು ಎಂದು ಕೈ ಕಟ್ಟಿ ಕುಳಿತರೆ ಪ್ರಸ್ತಾಪ
- ಗ್ಯಾರಂಟಿ ಯೋಜನೆಗಳನ್ನ ಅತ್ಯಂತ ಕಡಿಮೆ ಅವಧಿಯಲ್ಲಿ ಅನುಷ್ಠಾನ
- ಗ್ಯಾರಂಟಿಗಳು ಜನರ ಆಶೋತ್ತರಗಳನ್ನ ಆಧರಿಸಿವೆ
- ಜನರ ಆಹಾರ, ಆರೋಗ್ಯ, ಶಿಕ್ಷಣ, ಉದ್ಯೋಗ, ವಾಸದ ಭದ್ರತೆ ಯೋಜನೆ
- ಕೇಂದ್ರದಲ್ಲಿದ್ದ ಯುಪಿಎ ಸರ್ಕಾರ ಯೋಜನೆಗಳನ್ನ ಕೈಗೊಂಡಿತ್ತು
- 10 ವರ್ಷದಲ್ಲಿ ಕೇಂದ್ರದ ಜನ ವಿರೋಧಿ ನೀತಿಗಳಿಂದ ಅಸಮಾನತೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ