ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಟವೆರಾ ಭಯಾನಕ ಡಿಕ್ಕಿ
ಶನಿಮಹಾತ್ಮ ದೇವಾಲಯಕ್ಕೆ ಹೋಗಿ ಮನೆಗೆ ವಾಪಸ್ ಆಗ್ತಿದ್ದರು
ಚಿಕಿತ್ಸೆ ಪಡೆಯುತ್ತಿರುವ ನಾಲ್ವರು, ಚಾಲಕನ ಪರಿಸ್ಥಿತಿ ಗಂಭೀರ
ತುಮಕೂರು: ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಟವೆರಾ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದು ಡ್ರೈವರ್ ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯು ಜಿಲ್ಲೆಯ ಶಿರಾ- ಮಧುಗಿರಿ ರಸ್ತೆಯ ಉಲ್ಲಾಸ್ ತೋಪಿನ ಬಳಿ ನಡೆದಿದೆ.
ರೇಖಾ ಮೃತ ಮಹಿಳೆ. ಕಾರಿನ ಡ್ರೈವರ್ ಮನು ಹಾಗೂ ಪ್ರಯಾಣಿಕರಾದ ಕಮಲಮ್ಮ, ಸಾಗರ, ಸರಸ್ವತಮ್ಮಗೆ ಗಂಭೀರಗೊಂಡ ಗಾಯಗಳುಗಳಾಗಿದ್ದಾರೆ. ಇವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಡ್ರೈವರ್ ಸ್ಥಿತಿ ತೀವ್ರ ಗಂಭೀರವಾಗಿದೆ. ಮೃತ ರೇಖಾ 1 ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ಇವರೆಲ್ಲ ಶಿರಾ ತಾಲೂಕಿನ ಯಲಿಯೂರು ಮತ್ತು ಹೆಗ್ಗನಹಳ್ಳಿ ಮೂಲದವರು ಆಗಿದ್ದಾರೆ.
ಇದನ್ನೂ ಓದಿ: ತಂಗಿಯ ಎಂಗೇಜ್ಮೆಂಟ್ಗೆ ಬರಲಿಲ್ಲವೆಂದು ಪತ್ನಿಗೆ ಚೂರಿ ಇರಿತ; ಪತಿಯನ್ನು ಜೈಲಿಗೆ ಅಟ್ಟಿದ ಪೊಲೀಸರು
ಉಲ್ಲಾಸ್ ತೋಪಿನ ಬಳಿ ಸಿಮೆಂಟ್ ಇಟ್ಟಿಗೆ ತುಂಬಿಕೊಂಡು ರಸ್ತೆ ಬದಿ ಟ್ರ್ಯಾಕ್ಟರ್ನ ಟ್ರಾಲಿ ನಿಲ್ಲಿಸಿ ಹೋಗಿದ್ದರು. ಈ ವೇಳೆ ರಾತ್ರಿ ವೇಳೆ ವೇಗವಾಗಿ ಬಂದ ಕಾರು, ಟ್ರಾಲಿಗೆ ಭಯಾನಕವಾಗಿ ಡಿಕ್ಕಿ ಹೊಡೆದಿದೆ. ಇದರಿಂದ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ರೇಖಾಳ ಪತಿ ಶಬರಿಮಲೆಗೆ ತೆರಳಿದ ಬಳಿಕ ಕುನಳ್ಳಿಯಲ್ಲಿರುವ ಶನಿಮಹಾತ್ಮ ದೇವಾಲಯಕ್ಕೆ ತೆರಳಿ ಅಲ್ಲಿ ಪೂಜೆ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ. ಶಿರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಟವೆರಾ ಭಯಾನಕ ಡಿಕ್ಕಿ
ಶನಿಮಹಾತ್ಮ ದೇವಾಲಯಕ್ಕೆ ಹೋಗಿ ಮನೆಗೆ ವಾಪಸ್ ಆಗ್ತಿದ್ದರು
ಚಿಕಿತ್ಸೆ ಪಡೆಯುತ್ತಿರುವ ನಾಲ್ವರು, ಚಾಲಕನ ಪರಿಸ್ಥಿತಿ ಗಂಭೀರ
ತುಮಕೂರು: ರಸ್ತೆ ಬದಿ ನಿಂತಿದ್ದ ಟ್ರ್ಯಾಕ್ಟರ್ ಟ್ರಾಲಿಗೆ ಟವೆರಾ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮಹಿಳೆ ಸಾವನ್ನಪ್ಪಿದ್ದು ಡ್ರೈವರ್ ಸೇರಿ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆಯು ಜಿಲ್ಲೆಯ ಶಿರಾ- ಮಧುಗಿರಿ ರಸ್ತೆಯ ಉಲ್ಲಾಸ್ ತೋಪಿನ ಬಳಿ ನಡೆದಿದೆ.
ರೇಖಾ ಮೃತ ಮಹಿಳೆ. ಕಾರಿನ ಡ್ರೈವರ್ ಮನು ಹಾಗೂ ಪ್ರಯಾಣಿಕರಾದ ಕಮಲಮ್ಮ, ಸಾಗರ, ಸರಸ್ವತಮ್ಮಗೆ ಗಂಭೀರಗೊಂಡ ಗಾಯಗಳುಗಳಾಗಿದ್ದಾರೆ. ಇವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಡ್ರೈವರ್ ಸ್ಥಿತಿ ತೀವ್ರ ಗಂಭೀರವಾಗಿದೆ. ಮೃತ ರೇಖಾ 1 ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ಇವರೆಲ್ಲ ಶಿರಾ ತಾಲೂಕಿನ ಯಲಿಯೂರು ಮತ್ತು ಹೆಗ್ಗನಹಳ್ಳಿ ಮೂಲದವರು ಆಗಿದ್ದಾರೆ.
ಇದನ್ನೂ ಓದಿ: ತಂಗಿಯ ಎಂಗೇಜ್ಮೆಂಟ್ಗೆ ಬರಲಿಲ್ಲವೆಂದು ಪತ್ನಿಗೆ ಚೂರಿ ಇರಿತ; ಪತಿಯನ್ನು ಜೈಲಿಗೆ ಅಟ್ಟಿದ ಪೊಲೀಸರು
ಉಲ್ಲಾಸ್ ತೋಪಿನ ಬಳಿ ಸಿಮೆಂಟ್ ಇಟ್ಟಿಗೆ ತುಂಬಿಕೊಂಡು ರಸ್ತೆ ಬದಿ ಟ್ರ್ಯಾಕ್ಟರ್ನ ಟ್ರಾಲಿ ನಿಲ್ಲಿಸಿ ಹೋಗಿದ್ದರು. ಈ ವೇಳೆ ರಾತ್ರಿ ವೇಳೆ ವೇಗವಾಗಿ ಬಂದ ಕಾರು, ಟ್ರಾಲಿಗೆ ಭಯಾನಕವಾಗಿ ಡಿಕ್ಕಿ ಹೊಡೆದಿದೆ. ಇದರಿಂದ ಸ್ಥಳದಲ್ಲೇ ಮಹಿಳೆ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ರೇಖಾಳ ಪತಿ ಶಬರಿಮಲೆಗೆ ತೆರಳಿದ ಬಳಿಕ ಕುನಳ್ಳಿಯಲ್ಲಿರುವ ಶನಿಮಹಾತ್ಮ ದೇವಾಲಯಕ್ಕೆ ತೆರಳಿ ಅಲ್ಲಿ ಪೂಜೆ ಮುಗಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದರು. ಈ ವೇಳೆ ಈ ಭೀಕರ ಅಪಘಾತ ಸಂಭವಿಸಿದೆ. ಶಿರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ