ಕೆ.ಎಸ್ ಈಶ್ವರಪ್ಪಗೂ ಡಿ.ಕೆ ಬ್ರದರ್ಸ್ಗೂ ಹಳೇ ದ್ವೇಷ ಇದೆಯಾ?
ಗುಂಡಿಕ್ಕಿ ಕೊಲ್ಲುವ ಹೇಳಿಕೆಗೆ ಸಂಸದ ಡಿ,ಕೆ ಸುರೇಶ್ ಖಡಕ್ ಉತ್ತರ
ರಾಜಕೀಯದಲ್ಲಿ ಫುಲ್ ಸೆಟಲ್ಮೆಟ್, ಹಾಫ್ ಸೆಟಲ್ಮೆಂಟ್ ಅಂದ್ರೆ ಏನು?
ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ ಅವರ ಹೇಳಿಕೆಗಳಿಗೆ ಸಂಸದ ಡಿ.ಕೆ ಸುರೇಶ್ ತಿರುಗೇಟು ನೀಡಿದ್ದಾರೆ. ಆದಷ್ಟು ಬೇಗನೇ ಈಶ್ವರಪ್ಪ ಅವರನ್ನು ನಾನು ಭೇಟಿಯಾಗುತ್ತೇನೆ. ಅವರು ಗುಂಡಿಕ್ಕಿ ಕೊಲ್ಲಲು ಬಂದರೆ ನಾನು ಎದೆ ಕೊಟ್ಟು ನಿಲ್ಲುತ್ತೇನೆ. ಹೆದರಿ ಓಡುವ ಹೇಡಿ ನಾನಲ್ಲ ಎಂದು ಡಿ.ಕೆ ಸುರೇಶ್ ಸವಾಲು ಹಾಕಿದ್ದಾರೆ.
ನ್ಯೂಸ್ ಫಸ್ಟ್ ಚಾನೆಲ್ಗೆ ನೀಡಿರುವ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಅವರು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಕೆ.ಎಸ್ ಈಶ್ವರಪ್ಪನವರು ಡಿ.ಕೆ ಸುರೇಶ್ ಅಂತವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕಾಗುತ್ತದೆ ಎಂದಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸುರೇಶ್ ಅವರು ನಾನೊಬ್ಬ ಸಂಸದ ಸದಸ್ಯ ಅನ್ನೋದಕ್ಕಿಂತ ಕನ್ನಡಿಗನಾಗಿ ಧ್ವನಿ ಎತ್ತಿದ್ದೇನೆ. ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲು ಹೇಡಿ ನಾನಲ್ಲ. ನಾನು ಓಡಿ ಹೋಗುವುದಿಲ್ಲ. ಈಶ್ವರಪ್ಪನವರು ಕೊಲ್ಲಲು ಬಂದರೆ ಆ ಗುಂಡಿಗೆ ಎದೆ ಕೊಡುವವನು ನಾನು ಎಂದಿದ್ದಾರೆ.
ಇದನ್ನೂ ಓದಿ: ನಮ್ಮ ಸುದ್ದಿಗೆ ಬಂದವರದ್ದೆಲ್ಲಾ ಸೆಟಲ್ಮೆಂಟ್ ಆಗ್ತಿದೆ -ಈಶ್ವರಪ್ಪಗೆ ಡಿ.ಕೆ.ಶಿವಕುಮಾರ್ ವಾರ್ನ್..!
ಇನ್ನು, ಈಶ್ವರಪ್ಪಗೂ ಡಿ.ಕೆ ಬ್ರದರ್ಸ್ಗೂ ಹಳೇ ದ್ವೇಷ ಇದೆಯಾ ಅನ್ನೋ ಪ್ರಶ್ನೆಗೆ ಡಿ.ಕೆ ಸುರೇಶ್ ಅವರು ಸ್ಪಷ್ಟನೆ ನೀಡಿದರು. ಖಂಡಿತವಾಗಿಯೂ ಹಳೇ ದ್ವೇಷ ಇಲ್ಲ. ಈಶ್ವರಪ್ಪನವರು ಈ ರಾಜ್ಯಕ್ಕೆ ಅನೇಕ ಕೊಡುಗೆಯನ್ನ ವಿವಿಧ ಹಂತಗಳಲ್ಲಿ ಕೊಟ್ಟಿದ್ದಾರೆ. ಫುಲ್ ಸೆಟಲ್ಮೆಟ್, ಹಾಫ್ ಸೆಟಲ್ಮೆಂಟ್ ಅಂದ್ರೆ ಏನು ಅಂತಾ ಈಶ್ವರಪ್ಪ ಅವರ ಬಳಿಯೇ ಕೇಳಬೇಕು. ಅವರೇ ಬಹಳ ಚೆನ್ನಾಗಿ ವ್ಯಾಖ್ಯಾನ ಮಾಡುತ್ತಾರೆ. ಆಗಾಗ ಅವರ ಬಾಯಲ್ಲಿ ನುಡಿಮುತ್ತುಗಳು ಬೀಳುತ್ತಾ ಇರುತ್ತೆ ಎಂದು ಕಿಡಿಕಾರಿದರು.
ಇದೇ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬಿಜೆಪಿ ನಾಯಕರಿಗೆ ಕೌಂಟರ್ ಕೊಡುತ್ತಿಲ್ಲ. ಕಳೆದ ಬಿಜೆಪಿ ಸರ್ಕಾರ ನಡೆದು ಬಂದ ದಾರಿಗೆ ತಕ್ಕ ಬೆಲೆಯನ್ನು ತಂದಿದ್ದಾರೆ. ಅವರ ಸ್ಥಾನಮಾನ ಏನು ಅಂತ ಇಡೀ ರಾಜ್ಯದ ಜನರಿಗೆ ಗೊತ್ತಾಗಿದೆ ಎಂದು ಡಿ.ಕೆ ಸುರೇಶ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕೆ.ಎಸ್ ಈಶ್ವರಪ್ಪಗೂ ಡಿ.ಕೆ ಬ್ರದರ್ಸ್ಗೂ ಹಳೇ ದ್ವೇಷ ಇದೆಯಾ?
ಗುಂಡಿಕ್ಕಿ ಕೊಲ್ಲುವ ಹೇಳಿಕೆಗೆ ಸಂಸದ ಡಿ,ಕೆ ಸುರೇಶ್ ಖಡಕ್ ಉತ್ತರ
ರಾಜಕೀಯದಲ್ಲಿ ಫುಲ್ ಸೆಟಲ್ಮೆಟ್, ಹಾಫ್ ಸೆಟಲ್ಮೆಂಟ್ ಅಂದ್ರೆ ಏನು?
ಬೆಂಗಳೂರು: ಬಿಜೆಪಿ ಹಿರಿಯ ನಾಯಕ ಕೆ.ಎಸ್ ಈಶ್ವರಪ್ಪ ಅವರ ಹೇಳಿಕೆಗಳಿಗೆ ಸಂಸದ ಡಿ.ಕೆ ಸುರೇಶ್ ತಿರುಗೇಟು ನೀಡಿದ್ದಾರೆ. ಆದಷ್ಟು ಬೇಗನೇ ಈಶ್ವರಪ್ಪ ಅವರನ್ನು ನಾನು ಭೇಟಿಯಾಗುತ್ತೇನೆ. ಅವರು ಗುಂಡಿಕ್ಕಿ ಕೊಲ್ಲಲು ಬಂದರೆ ನಾನು ಎದೆ ಕೊಟ್ಟು ನಿಲ್ಲುತ್ತೇನೆ. ಹೆದರಿ ಓಡುವ ಹೇಡಿ ನಾನಲ್ಲ ಎಂದು ಡಿ.ಕೆ ಸುರೇಶ್ ಸವಾಲು ಹಾಕಿದ್ದಾರೆ.
ನ್ಯೂಸ್ ಫಸ್ಟ್ ಚಾನೆಲ್ಗೆ ನೀಡಿರುವ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಅವರು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ಕೆ.ಎಸ್ ಈಶ್ವರಪ್ಪನವರು ಡಿ.ಕೆ ಸುರೇಶ್ ಅಂತವರನ್ನು ಗುಂಡಿಕ್ಕಿ ಕೊಲ್ಲುವ ಕಾನೂನು ತರಬೇಕಾಗುತ್ತದೆ ಎಂದಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸುರೇಶ್ ಅವರು ನಾನೊಬ್ಬ ಸಂಸದ ಸದಸ್ಯ ಅನ್ನೋದಕ್ಕಿಂತ ಕನ್ನಡಿಗನಾಗಿ ಧ್ವನಿ ಎತ್ತಿದ್ದೇನೆ. ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲು ಹೇಡಿ ನಾನಲ್ಲ. ನಾನು ಓಡಿ ಹೋಗುವುದಿಲ್ಲ. ಈಶ್ವರಪ್ಪನವರು ಕೊಲ್ಲಲು ಬಂದರೆ ಆ ಗುಂಡಿಗೆ ಎದೆ ಕೊಡುವವನು ನಾನು ಎಂದಿದ್ದಾರೆ.
ಇದನ್ನೂ ಓದಿ: ನಮ್ಮ ಸುದ್ದಿಗೆ ಬಂದವರದ್ದೆಲ್ಲಾ ಸೆಟಲ್ಮೆಂಟ್ ಆಗ್ತಿದೆ -ಈಶ್ವರಪ್ಪಗೆ ಡಿ.ಕೆ.ಶಿವಕುಮಾರ್ ವಾರ್ನ್..!
ಇನ್ನು, ಈಶ್ವರಪ್ಪಗೂ ಡಿ.ಕೆ ಬ್ರದರ್ಸ್ಗೂ ಹಳೇ ದ್ವೇಷ ಇದೆಯಾ ಅನ್ನೋ ಪ್ರಶ್ನೆಗೆ ಡಿ.ಕೆ ಸುರೇಶ್ ಅವರು ಸ್ಪಷ್ಟನೆ ನೀಡಿದರು. ಖಂಡಿತವಾಗಿಯೂ ಹಳೇ ದ್ವೇಷ ಇಲ್ಲ. ಈಶ್ವರಪ್ಪನವರು ಈ ರಾಜ್ಯಕ್ಕೆ ಅನೇಕ ಕೊಡುಗೆಯನ್ನ ವಿವಿಧ ಹಂತಗಳಲ್ಲಿ ಕೊಟ್ಟಿದ್ದಾರೆ. ಫುಲ್ ಸೆಟಲ್ಮೆಟ್, ಹಾಫ್ ಸೆಟಲ್ಮೆಂಟ್ ಅಂದ್ರೆ ಏನು ಅಂತಾ ಈಶ್ವರಪ್ಪ ಅವರ ಬಳಿಯೇ ಕೇಳಬೇಕು. ಅವರೇ ಬಹಳ ಚೆನ್ನಾಗಿ ವ್ಯಾಖ್ಯಾನ ಮಾಡುತ್ತಾರೆ. ಆಗಾಗ ಅವರ ಬಾಯಲ್ಲಿ ನುಡಿಮುತ್ತುಗಳು ಬೀಳುತ್ತಾ ಇರುತ್ತೆ ಎಂದು ಕಿಡಿಕಾರಿದರು.
ಇದೇ ವೇಳೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರು ಬಿಜೆಪಿ ನಾಯಕರಿಗೆ ಕೌಂಟರ್ ಕೊಡುತ್ತಿಲ್ಲ. ಕಳೆದ ಬಿಜೆಪಿ ಸರ್ಕಾರ ನಡೆದು ಬಂದ ದಾರಿಗೆ ತಕ್ಕ ಬೆಲೆಯನ್ನು ತಂದಿದ್ದಾರೆ. ಅವರ ಸ್ಥಾನಮಾನ ಏನು ಅಂತ ಇಡೀ ರಾಜ್ಯದ ಜನರಿಗೆ ಗೊತ್ತಾಗಿದೆ ಎಂದು ಡಿ.ಕೆ ಸುರೇಶ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ