ಡಿಕೆ ಬ್ರದರ್ಸ್ಗೆ BJP ಆಫರ್ ಕೊಟ್ಟಿತ್ತಾ ಅನ್ನೋದಕ್ಕೆ ಸುರೇಶ್ ಹೇಳಿದ್ದೇನು?
ಕಳೆದ 65 ವರ್ಷದಲ್ಲಿ ದೇಶ ಹೆಚ್ಚು ಅಭಿವೃದ್ಧಿ ಕಂಡಿದೆ- ಡಿ.ಕೆ ಸುರೇಶ್
ಆಗ ಒಂದು ಗುಂಡು ಸೂಜಿಯನ್ನು ತಯಾರು ಮಾಡಲಾಗುತ್ತಿರಲಿಲ್ಲ
ಬೆಂಗಳೂರು: ನ್ಯೂಸ್ ಫಸ್ಟ್ ಚಾನೆಲ್ಗೆ ನೀಡಿರುವ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಅವರು ಮಹತ್ವದ ರಾಜಕೀಯ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಡಿಕೆ ಬ್ರದರ್ಸ್ಗೆ ಬಿಜೆಪಿ ಆಫರ್ ಕೊಟ್ಟಿತ್ತಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸುರೇಶ್ ಅವರು, ಬಿಜೆಪಿಯವರು ಬೆದರಿಕೆ ಹಾಕುವುದು, ಆಮಿಷ ಕೊಡೋದು ಎಲ್ಲ ನಿರಂತರವಾಗಿ ನಡೆಯುತ್ತಿರುತ್ತದೆ ಎಂದರು.
ದೇಶದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಪುನರ್ ಸ್ಥಾಪನೆ ಹಾಗೂ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಬತ್ತಳಿಕೆಯಲ್ಲಿ ಏಕತೆಯ ಮಂತ್ರ, ಭಾರತದ ಅಭಿವೃದ್ಧಿ ಮಂತ್ರವಿದೆ. ಸರ್ವ ಜನಾಂಗವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವಂತ ಶಾಂತಿಯ ತೋಟವಿದ್ದು ಇದು ಭಾರತದಲ್ಲಿ ಆಗಬೇಕು ಎನ್ನುವ ನಂಬಿಕೆ ನಮ್ಮಲ್ಲಿದೆ. ತತ್ವ ಸಿದ್ಧಾತಂಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಹೋರಾಟ ಮಾಡುತ್ತಿದೆ ಎಂದು ಹೇಳಿದರು.
ಇವತ್ತು ಭಾರತ ಅಭಿವೃದ್ಧಿಯಾಗಿದೆ ಎಂದರೆ ಅದಕ್ಕೆ ಕಾರಣ ಕಾಂಗ್ರೆಸ್. ಈ 10 ವರ್ಷದಲ್ಲಿ ಆದಂತಹ ಬೆಳವಣಿಗೆಯಲ್ಲ. ಕಳೆದ 65 ವರ್ಷದಲ್ಲಿ ಆದಂತಹ ಸುದೀರ್ಘ ಆಡಳಿತದಲ್ಲಿ ದೇಶ ಹೆಚ್ಚು ಅಭಿವೃದ್ಧಿ ಕಂಡಿದೆ. ಒಂದು ಗುಂಡು ಸೂಜಿಯನ್ನು ತಯಾರು ಮಾಡಲು ಸಾಧ್ಯ ಇರುತ್ತಿರಲಿಲ್ಲ. ಇವತ್ತು ವಿಶ್ವದ ಅಗ್ರ ಸ್ಥಾನದಲ್ಲಿ ಇದ್ದೇವೆ ಅಂತ ಹೇಳಿದರೆ, ಅದಕ್ಕೆ ಕಾಂಗ್ರೆಸ್ ಪಕ್ಷ ಕಾರಣ ಎಂದು ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಡಿಕೆ ಬ್ರದರ್ಸ್ಗೆ BJP ಆಫರ್ ಕೊಟ್ಟಿತ್ತಾ ಅನ್ನೋದಕ್ಕೆ ಸುರೇಶ್ ಹೇಳಿದ್ದೇನು?
ಕಳೆದ 65 ವರ್ಷದಲ್ಲಿ ದೇಶ ಹೆಚ್ಚು ಅಭಿವೃದ್ಧಿ ಕಂಡಿದೆ- ಡಿ.ಕೆ ಸುರೇಶ್
ಆಗ ಒಂದು ಗುಂಡು ಸೂಜಿಯನ್ನು ತಯಾರು ಮಾಡಲಾಗುತ್ತಿರಲಿಲ್ಲ
ಬೆಂಗಳೂರು: ನ್ಯೂಸ್ ಫಸ್ಟ್ ಚಾನೆಲ್ಗೆ ನೀಡಿರುವ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಅವರು ಮಹತ್ವದ ರಾಜಕೀಯ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಡಿಕೆ ಬ್ರದರ್ಸ್ಗೆ ಬಿಜೆಪಿ ಆಫರ್ ಕೊಟ್ಟಿತ್ತಾ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸುರೇಶ್ ಅವರು, ಬಿಜೆಪಿಯವರು ಬೆದರಿಕೆ ಹಾಕುವುದು, ಆಮಿಷ ಕೊಡೋದು ಎಲ್ಲ ನಿರಂತರವಾಗಿ ನಡೆಯುತ್ತಿರುತ್ತದೆ ಎಂದರು.
ದೇಶದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಪುನರ್ ಸ್ಥಾಪನೆ ಹಾಗೂ ಬಿಜೆಪಿಯನ್ನು ಎದುರಿಸಲು ಕಾಂಗ್ರೆಸ್ ಬತ್ತಳಿಕೆಯಲ್ಲಿ ಏಕತೆಯ ಮಂತ್ರ, ಭಾರತದ ಅಭಿವೃದ್ಧಿ ಮಂತ್ರವಿದೆ. ಸರ್ವ ಜನಾಂಗವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವಂತ ಶಾಂತಿಯ ತೋಟವಿದ್ದು ಇದು ಭಾರತದಲ್ಲಿ ಆಗಬೇಕು ಎನ್ನುವ ನಂಬಿಕೆ ನಮ್ಮಲ್ಲಿದೆ. ತತ್ವ ಸಿದ್ಧಾತಂಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಹೋರಾಟ ಮಾಡುತ್ತಿದೆ ಎಂದು ಹೇಳಿದರು.
ಇವತ್ತು ಭಾರತ ಅಭಿವೃದ್ಧಿಯಾಗಿದೆ ಎಂದರೆ ಅದಕ್ಕೆ ಕಾರಣ ಕಾಂಗ್ರೆಸ್. ಈ 10 ವರ್ಷದಲ್ಲಿ ಆದಂತಹ ಬೆಳವಣಿಗೆಯಲ್ಲ. ಕಳೆದ 65 ವರ್ಷದಲ್ಲಿ ಆದಂತಹ ಸುದೀರ್ಘ ಆಡಳಿತದಲ್ಲಿ ದೇಶ ಹೆಚ್ಚು ಅಭಿವೃದ್ಧಿ ಕಂಡಿದೆ. ಒಂದು ಗುಂಡು ಸೂಜಿಯನ್ನು ತಯಾರು ಮಾಡಲು ಸಾಧ್ಯ ಇರುತ್ತಿರಲಿಲ್ಲ. ಇವತ್ತು ವಿಶ್ವದ ಅಗ್ರ ಸ್ಥಾನದಲ್ಲಿ ಇದ್ದೇವೆ ಅಂತ ಹೇಳಿದರೆ, ಅದಕ್ಕೆ ಕಾಂಗ್ರೆಸ್ ಪಕ್ಷ ಕಾರಣ ಎಂದು ಸಂಸದ ಡಿ.ಕೆ ಸುರೇಶ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ