ದರ್ಶನ್ ವಿರುದ್ಧ ಸಾಕು ಸಾಲು ದೂರು ದಾಖಲು
ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ ಎಂದಿದ್ದ ದರ್ಶನ್
ದರ್ಶನ್ ‘ಬೆಳ್ಳಿ ಪರ್ವ’ದಲ್ಲಿ ನೀಡಿದ ಹೇಳಿಕೆ ಮುಳುವಾಗುತ್ತಾ?
ಬೆಂಗಳೂರು: ಸ್ಯಾಂಡಲ್ವುಡ್ ನಟ ದರ್ಶನ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಮಹಿಳಾ ಸಂಘಟನೆಯಿಂದ ಕಾವೇರಿ ಭವನದಲ್ಲಿರೋ ಮಹಿಳಾ ಆಯೋಗದಲ್ಲಿ ದೂರು ದಾಖಲಾಗಿದೆ.
ಶ್ರೀರಂಗಪಟ್ಟಣದಲ್ಲಿ ಇತ್ತೀಚೆಗೆ ನಡೆದ ‘ದರ್ಶನ್ ಬೆಳ್ಳಿ ಪರ್ವ’ ಕಾರ್ಯಕ್ರಮದಲ್ಲಿ ಡಿಬಾಸ್ ಎಡವಟ್ಟು ಮಾಡಿಕೊಂಡಿದ್ದರು. ‘ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ.. ಹೋಗ್ರೋ ಇವರಜ್ಜೀನ ಬಡಿಯಾ’ ಎಂದು ದರ್ಶನ್ ಹೇಳಿದ್ದರು. ಈ ವಿಚಾರ ಮಹಿಳೆಯರ ಕೋಪಕ್ಕೆ ಕಾರಣವಾಗಿದ್ದು, ಗೌಡತಿಗರ ಸೇನೆ ಸೇರಿಕೊಂಡು ದೂರು ನೀಡಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡಿದ್ದ ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
View this post on Instagram
ಕಾಟೇರ ಟೈಟಲ್ ವಿಚಾರವಾಗಿ ನಿರ್ದೇಶಕ ಉಮಾಪತಿಗೆ ತಗಡು, ಗುಮ್ಮಿಸ್ಕೊತಿಯಾ ಎಂದು ಹೇಳಿಕೆ ನೀಡಿದ್ದ ದರ್ಶನ್ ವಿರುದ್ಧ ನಿನ್ನೆ ಕರ್ನಾಟಕ ಪ್ರಜಾಪರ ವೇದಿಕೆ ಕೂಡ ದೂರು ನೀಡಿದೆ. ಕರ್ನಾಟಕ ಫಿಲ್ಮ್ ಚೇಂಬರ್ನಲ್ಲಿ ದೂರು ಸಲ್ಲಿಸಿದೆ. ರಾಜ್ಯಾಧ್ಯಕ್ಷ ಕನ್ನಡ ಶಫಿ ಅವರಿಂದ ದೂರು ದಾಖಲಾಗಿದೆ. ಮಾತ್ರವಲ್ಲದೆ, ಡಿಬಾಸ್ ಈ ಹೇಳಿಕೆ ನೀಡಿದ್ದಕ್ಕೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಇದೀಗ ಮಹಿಳೆಯರ ಗೌಡತಿಗರ ಸೇನೆ ಕೂಡ ನಟನ ವಿರುದ್ಧ ತಿರುಗಿ ಬಿದ್ದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ದರ್ಶನ್ ವಿರುದ್ಧ ಸಾಕು ಸಾಲು ದೂರು ದಾಖಲು
ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ ಎಂದಿದ್ದ ದರ್ಶನ್
ದರ್ಶನ್ ‘ಬೆಳ್ಳಿ ಪರ್ವ’ದಲ್ಲಿ ನೀಡಿದ ಹೇಳಿಕೆ ಮುಳುವಾಗುತ್ತಾ?
ಬೆಂಗಳೂರು: ಸ್ಯಾಂಡಲ್ವುಡ್ ನಟ ದರ್ಶನ್ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಮಹಿಳಾ ಸಂಘಟನೆಯಿಂದ ಕಾವೇರಿ ಭವನದಲ್ಲಿರೋ ಮಹಿಳಾ ಆಯೋಗದಲ್ಲಿ ದೂರು ದಾಖಲಾಗಿದೆ.
ಶ್ರೀರಂಗಪಟ್ಟಣದಲ್ಲಿ ಇತ್ತೀಚೆಗೆ ನಡೆದ ‘ದರ್ಶನ್ ಬೆಳ್ಳಿ ಪರ್ವ’ ಕಾರ್ಯಕ್ರಮದಲ್ಲಿ ಡಿಬಾಸ್ ಎಡವಟ್ಟು ಮಾಡಿಕೊಂಡಿದ್ದರು. ‘ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ.. ಹೋಗ್ರೋ ಇವರಜ್ಜೀನ ಬಡಿಯಾ’ ಎಂದು ದರ್ಶನ್ ಹೇಳಿದ್ದರು. ಈ ವಿಚಾರ ಮಹಿಳೆಯರ ಕೋಪಕ್ಕೆ ಕಾರಣವಾಗಿದ್ದು, ಗೌಡತಿಗರ ಸೇನೆ ಸೇರಿಕೊಂಡು ದೂರು ನೀಡಿದ್ದಾರೆ. ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡಿದ್ದ ದರ್ಶನ್ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
View this post on Instagram
ಕಾಟೇರ ಟೈಟಲ್ ವಿಚಾರವಾಗಿ ನಿರ್ದೇಶಕ ಉಮಾಪತಿಗೆ ತಗಡು, ಗುಮ್ಮಿಸ್ಕೊತಿಯಾ ಎಂದು ಹೇಳಿಕೆ ನೀಡಿದ್ದ ದರ್ಶನ್ ವಿರುದ್ಧ ನಿನ್ನೆ ಕರ್ನಾಟಕ ಪ್ರಜಾಪರ ವೇದಿಕೆ ಕೂಡ ದೂರು ನೀಡಿದೆ. ಕರ್ನಾಟಕ ಫಿಲ್ಮ್ ಚೇಂಬರ್ನಲ್ಲಿ ದೂರು ಸಲ್ಲಿಸಿದೆ. ರಾಜ್ಯಾಧ್ಯಕ್ಷ ಕನ್ನಡ ಶಫಿ ಅವರಿಂದ ದೂರು ದಾಖಲಾಗಿದೆ. ಮಾತ್ರವಲ್ಲದೆ, ಡಿಬಾಸ್ ಈ ಹೇಳಿಕೆ ನೀಡಿದ್ದಕ್ಕೆ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ. ಇದೀಗ ಮಹಿಳೆಯರ ಗೌಡತಿಗರ ಸೇನೆ ಕೂಡ ನಟನ ವಿರುದ್ಧ ತಿರುಗಿ ಬಿದ್ದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ