ತೆಲುಗು ಕಿರುತೆರೆ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿರುವ ಷಣ್ಮುಖ್ ಜಸ್ವಂತ್
ತಮ್ಮನನ್ನು ಲಾಕ್ ಮಾಡಲು ಹೋಗಿ ಅಣ್ಣನನ್ನು ಅರೆಸ್ಟ್ ಮಾಡಿದ ಪೊಲೀಸ್
ಬಿಗ್ಬಾಸ್ ಸೀಸನ್ 5ರ ರನ್ನರ್ ಅಪ್ ಪಟ್ಟವನ್ನು ಗಿಟ್ಟಿಸಿಕೊಂಡಿದ್ದ ಷಣ್ಮುಖ್
ತೆಲುಗಿನ ಖ್ಯಾತ ಯೂಟ್ಯೂಬರ್ ಹಾಗೂ ಬಿಗ್ಬಾಸ್ ಸೀಸನ್ 5ರ ರನ್ನರ್ ಅಪ್ ಆಗಿದ್ದ ಷಣ್ಮುಖ್ ಜಸ್ವಂತ್ ಗಾಂಜಾದೊಂದಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ತೆಲುಗು ಕಿರುತೆರೆ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿಕೊಂಡಿರೋ ಷಣ್ಮುಖ್ ಜಸ್ವಂತ್ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.
ಕೋಟ್ಯಂತರ ಫಾಲೋವರ್ಸ್ ಅನ್ನು ಯುಟ್ಯೂಬ್ ಚಾನೆಲ್ನಲ್ಲಿ ಹೊಂದಿದ್ದ ಕಾರಣ ಬಿಗ್ಬಾಸ್ ಸೀಸನ್ 5ಕ್ಕೆ ಹೋಗಲು ಒಳ್ಳೆಯ ಚಾನ್ಸ್ ಸಿಕ್ಕಿತ್ತು. ಷಣ್ಮುಖ್ ಜಸ್ವಂತ್ ಅವರ ತಮ್ಮ ಸಂಪತ್ ವಿನಯ್ ಮಾಡಿದ ತಪ್ಪಿಗೆ ಪೊಲೀಸರ ಅತಿಥಿಯಾಗಿದ್ದಾರೆ. ಪ್ರಕರಣವೊಂದರಲ್ಲಿ ಷಣ್ಮುಖ್ ಜಸ್ವಂತ್ ಸಹೋದರ ಸಂಪತ್ ವಿನಯ್ನನ್ನು ಬಂಧಿಸಲು ಹೋದಾಗ ಅನಿರೀಕ್ಷಿತವಾಗಿ ಗಾಂಜಾ ಸಮೇತ ಸಿಕ್ಕಿಬಿದ್ದಿದ್ದಾರೆ.
ಅಸಲಿಗೆ ಆಗಿದ್ದೇನು..?
ಈ ಹಿಂದೆ ವೈದ್ಯ ಗೆಳತಿಯೊಂದಿಗೆ ಸಂಪತ್ ವಿನಯ್ ಲೀವ್ ಇನ್ ರಿಲೇಷನ್ ಶಿಪ್ನಲ್ಲಿ ಇದ್ದರಂತೆ. ನಂತರ ನಿಶ್ಚಿತಾರ್ಥ ಕೂಡ ಆಗಿತ್ತು. ಆದರೆ ಹುಡುಗಿಯ ತಾಯಿಯ ಆರೋಗ್ಯ ಹದಗೆಟ್ಟಿದ್ದರಿಂದ ಮದುವೆಯನ್ನು ಮುಂದೂಡಲಾಗಿತ್ತು. ಅದೇ ಏಕೆ ಕೆಲವೊಂದು ಕಾರಣಗಳಿಂದ ನಿಶ್ಚಿತಾರ್ಥ ಕೂಡ ಮುರಿದು ಬಿದ್ದಿತ್ತು. ನಂತರ ಸಂಪತ್ ಬೇರೆ ಹುಡುಗಿಯೊಂದಿಗೆ ಮದುವೆ ಆಗಿದ್ದರಂತೆ. ಇದನ್ನು ಪ್ರಶ್ನಿಸಿ ವೈದ್ಯ ಗೆಳತಿ ಪೊಲೀಸರಿಗೆ ದೂರು ನೀಡಿದ್ದರು. ಇದೇ ವಿಚಾರವಾಗಿ ಪೊಲೀಸರು ಸಂಪತ್ನನ್ನು ಹುಡುಕಿಕೊಂಡು ಅವರ ಮನೆಗೆ ಬಂದಿದ್ದಾರೆ. ಅದೇ ವೇಳೆ ಸಂಪತ್ ಮನೆಯಲ್ಲಿ ಇರಲಿಲ್ಲ. ಬದಲಾಗಿ ಆ ವೇಳೆಯಲ್ಲಿ ಷಣ್ಮುಖ್ ಜಸ್ವಂತ್ ಗಾಂಜಾ ಸೇವಿಸುತ್ತಿದ್ದರಂತೆ. ತಮ್ಮನನ್ನು ಲಾಕ್ ಮಾಡಲು ಹೋಗಿದ್ದ ಪೊಲೀಸರು ಅಣ್ಣನನ್ನು ಸ್ಟೇಷನ್ಗೆ ಕರೆದುಕೊಂಡು ಬಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ತೆಲುಗು ಕಿರುತೆರೆ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿರುವ ಷಣ್ಮುಖ್ ಜಸ್ವಂತ್
ತಮ್ಮನನ್ನು ಲಾಕ್ ಮಾಡಲು ಹೋಗಿ ಅಣ್ಣನನ್ನು ಅರೆಸ್ಟ್ ಮಾಡಿದ ಪೊಲೀಸ್
ಬಿಗ್ಬಾಸ್ ಸೀಸನ್ 5ರ ರನ್ನರ್ ಅಪ್ ಪಟ್ಟವನ್ನು ಗಿಟ್ಟಿಸಿಕೊಂಡಿದ್ದ ಷಣ್ಮುಖ್
ತೆಲುಗಿನ ಖ್ಯಾತ ಯೂಟ್ಯೂಬರ್ ಹಾಗೂ ಬಿಗ್ಬಾಸ್ ಸೀಸನ್ 5ರ ರನ್ನರ್ ಅಪ್ ಆಗಿದ್ದ ಷಣ್ಮುಖ್ ಜಸ್ವಂತ್ ಗಾಂಜಾದೊಂದಿಗೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ತೆಲುಗು ಕಿರುತೆರೆ ಕ್ಷೇತ್ರದಲ್ಲಿ ಅಪಾರ ಹೆಸರು ಮಾಡಿಕೊಂಡಿರೋ ಷಣ್ಮುಖ್ ಜಸ್ವಂತ್ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.
ಕೋಟ್ಯಂತರ ಫಾಲೋವರ್ಸ್ ಅನ್ನು ಯುಟ್ಯೂಬ್ ಚಾನೆಲ್ನಲ್ಲಿ ಹೊಂದಿದ್ದ ಕಾರಣ ಬಿಗ್ಬಾಸ್ ಸೀಸನ್ 5ಕ್ಕೆ ಹೋಗಲು ಒಳ್ಳೆಯ ಚಾನ್ಸ್ ಸಿಕ್ಕಿತ್ತು. ಷಣ್ಮುಖ್ ಜಸ್ವಂತ್ ಅವರ ತಮ್ಮ ಸಂಪತ್ ವಿನಯ್ ಮಾಡಿದ ತಪ್ಪಿಗೆ ಪೊಲೀಸರ ಅತಿಥಿಯಾಗಿದ್ದಾರೆ. ಪ್ರಕರಣವೊಂದರಲ್ಲಿ ಷಣ್ಮುಖ್ ಜಸ್ವಂತ್ ಸಹೋದರ ಸಂಪತ್ ವಿನಯ್ನನ್ನು ಬಂಧಿಸಲು ಹೋದಾಗ ಅನಿರೀಕ್ಷಿತವಾಗಿ ಗಾಂಜಾ ಸಮೇತ ಸಿಕ್ಕಿಬಿದ್ದಿದ್ದಾರೆ.
ಅಸಲಿಗೆ ಆಗಿದ್ದೇನು..?
ಈ ಹಿಂದೆ ವೈದ್ಯ ಗೆಳತಿಯೊಂದಿಗೆ ಸಂಪತ್ ವಿನಯ್ ಲೀವ್ ಇನ್ ರಿಲೇಷನ್ ಶಿಪ್ನಲ್ಲಿ ಇದ್ದರಂತೆ. ನಂತರ ನಿಶ್ಚಿತಾರ್ಥ ಕೂಡ ಆಗಿತ್ತು. ಆದರೆ ಹುಡುಗಿಯ ತಾಯಿಯ ಆರೋಗ್ಯ ಹದಗೆಟ್ಟಿದ್ದರಿಂದ ಮದುವೆಯನ್ನು ಮುಂದೂಡಲಾಗಿತ್ತು. ಅದೇ ಏಕೆ ಕೆಲವೊಂದು ಕಾರಣಗಳಿಂದ ನಿಶ್ಚಿತಾರ್ಥ ಕೂಡ ಮುರಿದು ಬಿದ್ದಿತ್ತು. ನಂತರ ಸಂಪತ್ ಬೇರೆ ಹುಡುಗಿಯೊಂದಿಗೆ ಮದುವೆ ಆಗಿದ್ದರಂತೆ. ಇದನ್ನು ಪ್ರಶ್ನಿಸಿ ವೈದ್ಯ ಗೆಳತಿ ಪೊಲೀಸರಿಗೆ ದೂರು ನೀಡಿದ್ದರು. ಇದೇ ವಿಚಾರವಾಗಿ ಪೊಲೀಸರು ಸಂಪತ್ನನ್ನು ಹುಡುಕಿಕೊಂಡು ಅವರ ಮನೆಗೆ ಬಂದಿದ್ದಾರೆ. ಅದೇ ವೇಳೆ ಸಂಪತ್ ಮನೆಯಲ್ಲಿ ಇರಲಿಲ್ಲ. ಬದಲಾಗಿ ಆ ವೇಳೆಯಲ್ಲಿ ಷಣ್ಮುಖ್ ಜಸ್ವಂತ್ ಗಾಂಜಾ ಸೇವಿಸುತ್ತಿದ್ದರಂತೆ. ತಮ್ಮನನ್ನು ಲಾಕ್ ಮಾಡಲು ಹೋಗಿದ್ದ ಪೊಲೀಸರು ಅಣ್ಣನನ್ನು ಸ್ಟೇಷನ್ಗೆ ಕರೆದುಕೊಂಡು ಬಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ