ವೆಂಕಟಪ್ಪ ನಾಯಕ ಸಾವಿನ ಬಳಿಕ ನಂಬರ್ ಗೇಮ್ ಚೇಂಜ್
ರೆಸಾರ್ಟ್ ಪಾಲಿಟಿಕ್ಸ್ ಮೊರೆ ಹೋಗಲು ಮುಂದಾದ ಕಾಂಗ್ರೆಸ್
ಕೊನೆ ಕ್ಷಣದಲ್ಲಿ ಏರುಪೇರು ತಪ್ಪಿಸಲು ಶಾಸಕರ ಮೇಲೆ ತೀವ್ರ ನಿಗಾ
ರಾಜ್ಯಸಭೆ ಚುನಾವಣೆಗೆ ಇವತ್ತೊಂದೆ ದಿನ ಬಾಕಿ. ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆ ಕಣವಾಗಿದ್ರೆ, ದೋಸ್ತಿ ಸಾಮರ್ಥ್ಯ ಸಾಬೀತಿಗೆ ಕಮಲ-ದಳಕ್ಕೂ ಸವಾಲಾಗಿದೆ.. ವೆಂಕಟಪ್ಪ ನಾಯಕ ಸಾವಿನ ಬಳಿಕ ನಂಬರ್ ಗೇಮ್ ಚೇಂಜ್ ಆಗಿದ್ದು, ರಾಜಕೀಯ ಮೇಲಾಟ ಶುರುವಾಗಿದೆ.
ಮೇಲ್ಮನೆ ಗೆಲುವಿಗಾಗಿ ರಾಜಕೀಯ ಮೇಲಾಟ ಶುರುವಾಗಿದೆ. 3ನೇ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಕಾಂಗ್ರೆಸ್ ರಣತಂತ್ರಕ್ಕೆ ಇಳಿದಿದೆ. ಇತ್ತ, ಕೈಪಡೆಗೆ ಇಕ್ಕಟ್ಟಿಗೆ ತಳ್ಳಲು ದೋಸ್ತಿಗಳು ಸಂಪರ್ಕ ಕ್ರಾಂತಿಗೆ ಚಾಲನೆ ಕೊಟ್ಟಿದ್ದಾರೆ. ಇದರಿಂದ ಎಚ್ಚೆತ್ತಿರುವ ಕಾಂಗ್ರೆಸ್ನ ಜೋಡೆತ್ತುಗಳು, ರೆಸಾರ್ಟ್ ಪಾಲಿಟಿಕ್ಸ್ ಮೊರೆ ಹೋಗಲು ಮುಂದಾಗಿದ್ದಾರೆ.
ಮೇಲ್ಮನೆಯ ಗೆಲುವಿಗಾಗಿ ಮೂರು ಪಕ್ಷಗಳ ಮೇಲಾಟ!
ರಾಜ್ಯಸಭೆಯ 4 ಸ್ಥಾನಗಳಿಗೆ ನಾಳೆ ಮತದಾನ ನಡೆಯಲಿದೆ. ನಂಬರ್ ಗೇಮ್ ಲೆಕ್ಕಾಚಾರದಲ್ಲಿ ಕೈಪಡೆ ಸುಸ್ಥಿತಿಯಲ್ಲಿದ್ರೂ ಸಹ ಕೊನೆ ಕ್ಷಣದಲ್ಲಾಗುವ ಏರುಪೇರು ತಪ್ಪಿಸಲು ಶಾಸಕರ ಮೇಲೆ ತೀವ್ರ ನಿಗಾ ಇಟ್ಟಿದೆ. 3 ಪಕ್ಷಗಳಲ್ಲೂ ಅಡ್ಡ ಮತದಾನದ ಆತಂಕದ ಕಾರ್ಮೋಡ ಕವಿದಿದ್ದು, ಶಾಸಕರ ಮೇಲೆ ಸಂಶಯದ ಕಣ್ಣುಗಳು ನೆಟ್ಟಿವೆ. ಅದೇ ರೀತಿ ಮತದಾನಕ್ಕೆ ಗೈರಾಗುವ ಅಥವಾ ಗೈರು ಮಾಡಿಸುವ ಹೊಸ ಲೆಕ್ಕಾಚಾರವೂ ಶುರುವಾಗಿದೆ.
ಬದಲಾದ ನಂಬರ್ ಗೇಮ್
ಇದೇ ವೇಳೆ ಮೈತ್ರಿ ಅಭ್ಯರ್ಥಿ ಆಗಿ ಕಣಕ್ಕಿಳಿದಿರುವ ಶಾಸಕ ಕುಪೇಂದ್ರ ರೆಡ್ಡಿ ಕೂಡ ಈ ಶಾಸಕರ ಮನವೊಲಿಸಲು ಯತ್ನಿಸಿದ್ದಾರೆ. ಅಷ್ಟೇ ಅಲ್ಲದೇ ಕಾಂಗ್ರೆಸ್ನ ಕೆಲವು ಶಾಸಕರಿಗೂ ಸಹಕಾರ ಕೋರಿದ್ದಾರೆ. ಬಿಜೆಪಿಯಿಂದ ದೊರೆಯಬಹುದಾದ ಹೆಚ್ಚುವರಿ 20 ಮತದ ಜತೆಗೆ ಇನ್ನೂ 7 ಮತಗಳಿಗೆ ಕುಪೇಂದ್ರ ರೆಡ್ಡಿ ಸಾಕಷ್ಟು ಬೆವರು ಹರಿಸಿದ್ದಾರೆ. ದೋಸ್ತಿಗಳು ಆತ್ಮಸಾಕ್ಷಿ ಮತದ ಅಸ್ತ್ರ ಪ್ರಯೋಗಿಸಿದ್ದು, ಕಾಂಗ್ರೆಸ್ ಆತಂಕ ಹೆಚ್ಚಿಸಿದೆ.
ಯಾವ ಶಾಸಕರ ನಡೆ? ಯಾರತ್ತ ಎಂಬ ಕುತೂಹಲ?
ಬಿಜೆಪಿ ಶಾಸಕ ಎಸ್.ಟಿ ಸೋಮೇಶಖರ್, ಶಿವರಾಂ ಹೆಬ್ಬಾರ್ ನಡೆ ಕುತೂಹಲಕ್ಕೆ ಕಾರಣ ಆಗಿದೆ. ಇತ್ತ, ಗುರುಮಿಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಆಡ್ತಿರುವ ಒಗಟು ಒಗಟಾಗಿನ ಮಾತು ದಳಕ್ಕೆ ಗುಮಾನಿ ಇದೆ. ಇನ್ನು, ಕಾಂಗ್ರೆಸ್ಗೆ 2-3 ಶಾಸಕರು ಮತದಾನದಿಂದ ದೂರ ಉಳಿಯುವ ಸಾಧ್ಯತೆಯ ಆತಂಕ ಕಾಡ್ತಿದೆ. ಈ ಎಲ್ಲ ಆತಂಕಗಳ ನಡುವೆ ವಿಧಾನ ಮಂಡಲ ಅಧಿವೇಶನ ಬುಧವಾರಕ್ಕೂ ವಿಸ್ತರಣೆಗೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವೆಂಕಟಪ್ಪ ನಾಯಕ ಸಾವಿನ ಬಳಿಕ ನಂಬರ್ ಗೇಮ್ ಚೇಂಜ್
ರೆಸಾರ್ಟ್ ಪಾಲಿಟಿಕ್ಸ್ ಮೊರೆ ಹೋಗಲು ಮುಂದಾದ ಕಾಂಗ್ರೆಸ್
ಕೊನೆ ಕ್ಷಣದಲ್ಲಿ ಏರುಪೇರು ತಪ್ಪಿಸಲು ಶಾಸಕರ ಮೇಲೆ ತೀವ್ರ ನಿಗಾ
ರಾಜ್ಯಸಭೆ ಚುನಾವಣೆಗೆ ಇವತ್ತೊಂದೆ ದಿನ ಬಾಕಿ. ಕಾಂಗ್ರೆಸ್ ಪಾಲಿಗೆ ಪ್ರತಿಷ್ಠೆ ಕಣವಾಗಿದ್ರೆ, ದೋಸ್ತಿ ಸಾಮರ್ಥ್ಯ ಸಾಬೀತಿಗೆ ಕಮಲ-ದಳಕ್ಕೂ ಸವಾಲಾಗಿದೆ.. ವೆಂಕಟಪ್ಪ ನಾಯಕ ಸಾವಿನ ಬಳಿಕ ನಂಬರ್ ಗೇಮ್ ಚೇಂಜ್ ಆಗಿದ್ದು, ರಾಜಕೀಯ ಮೇಲಾಟ ಶುರುವಾಗಿದೆ.
ಮೇಲ್ಮನೆ ಗೆಲುವಿಗಾಗಿ ರಾಜಕೀಯ ಮೇಲಾಟ ಶುರುವಾಗಿದೆ. 3ನೇ ಅಭ್ಯರ್ಥಿ ಗೆಲ್ಲಿಸಿಕೊಳ್ಳಲು ಕಾಂಗ್ರೆಸ್ ರಣತಂತ್ರಕ್ಕೆ ಇಳಿದಿದೆ. ಇತ್ತ, ಕೈಪಡೆಗೆ ಇಕ್ಕಟ್ಟಿಗೆ ತಳ್ಳಲು ದೋಸ್ತಿಗಳು ಸಂಪರ್ಕ ಕ್ರಾಂತಿಗೆ ಚಾಲನೆ ಕೊಟ್ಟಿದ್ದಾರೆ. ಇದರಿಂದ ಎಚ್ಚೆತ್ತಿರುವ ಕಾಂಗ್ರೆಸ್ನ ಜೋಡೆತ್ತುಗಳು, ರೆಸಾರ್ಟ್ ಪಾಲಿಟಿಕ್ಸ್ ಮೊರೆ ಹೋಗಲು ಮುಂದಾಗಿದ್ದಾರೆ.
ಮೇಲ್ಮನೆಯ ಗೆಲುವಿಗಾಗಿ ಮೂರು ಪಕ್ಷಗಳ ಮೇಲಾಟ!
ರಾಜ್ಯಸಭೆಯ 4 ಸ್ಥಾನಗಳಿಗೆ ನಾಳೆ ಮತದಾನ ನಡೆಯಲಿದೆ. ನಂಬರ್ ಗೇಮ್ ಲೆಕ್ಕಾಚಾರದಲ್ಲಿ ಕೈಪಡೆ ಸುಸ್ಥಿತಿಯಲ್ಲಿದ್ರೂ ಸಹ ಕೊನೆ ಕ್ಷಣದಲ್ಲಾಗುವ ಏರುಪೇರು ತಪ್ಪಿಸಲು ಶಾಸಕರ ಮೇಲೆ ತೀವ್ರ ನಿಗಾ ಇಟ್ಟಿದೆ. 3 ಪಕ್ಷಗಳಲ್ಲೂ ಅಡ್ಡ ಮತದಾನದ ಆತಂಕದ ಕಾರ್ಮೋಡ ಕವಿದಿದ್ದು, ಶಾಸಕರ ಮೇಲೆ ಸಂಶಯದ ಕಣ್ಣುಗಳು ನೆಟ್ಟಿವೆ. ಅದೇ ರೀತಿ ಮತದಾನಕ್ಕೆ ಗೈರಾಗುವ ಅಥವಾ ಗೈರು ಮಾಡಿಸುವ ಹೊಸ ಲೆಕ್ಕಾಚಾರವೂ ಶುರುವಾಗಿದೆ.
ಬದಲಾದ ನಂಬರ್ ಗೇಮ್
ಇದೇ ವೇಳೆ ಮೈತ್ರಿ ಅಭ್ಯರ್ಥಿ ಆಗಿ ಕಣಕ್ಕಿಳಿದಿರುವ ಶಾಸಕ ಕುಪೇಂದ್ರ ರೆಡ್ಡಿ ಕೂಡ ಈ ಶಾಸಕರ ಮನವೊಲಿಸಲು ಯತ್ನಿಸಿದ್ದಾರೆ. ಅಷ್ಟೇ ಅಲ್ಲದೇ ಕಾಂಗ್ರೆಸ್ನ ಕೆಲವು ಶಾಸಕರಿಗೂ ಸಹಕಾರ ಕೋರಿದ್ದಾರೆ. ಬಿಜೆಪಿಯಿಂದ ದೊರೆಯಬಹುದಾದ ಹೆಚ್ಚುವರಿ 20 ಮತದ ಜತೆಗೆ ಇನ್ನೂ 7 ಮತಗಳಿಗೆ ಕುಪೇಂದ್ರ ರೆಡ್ಡಿ ಸಾಕಷ್ಟು ಬೆವರು ಹರಿಸಿದ್ದಾರೆ. ದೋಸ್ತಿಗಳು ಆತ್ಮಸಾಕ್ಷಿ ಮತದ ಅಸ್ತ್ರ ಪ್ರಯೋಗಿಸಿದ್ದು, ಕಾಂಗ್ರೆಸ್ ಆತಂಕ ಹೆಚ್ಚಿಸಿದೆ.
ಯಾವ ಶಾಸಕರ ನಡೆ? ಯಾರತ್ತ ಎಂಬ ಕುತೂಹಲ?
ಬಿಜೆಪಿ ಶಾಸಕ ಎಸ್.ಟಿ ಸೋಮೇಶಖರ್, ಶಿವರಾಂ ಹೆಬ್ಬಾರ್ ನಡೆ ಕುತೂಹಲಕ್ಕೆ ಕಾರಣ ಆಗಿದೆ. ಇತ್ತ, ಗುರುಮಿಠಕಲ್ ಜೆಡಿಎಸ್ ಶಾಸಕ ಶರಣಗೌಡ ಕಂದಕೂರು ಆಡ್ತಿರುವ ಒಗಟು ಒಗಟಾಗಿನ ಮಾತು ದಳಕ್ಕೆ ಗುಮಾನಿ ಇದೆ. ಇನ್ನು, ಕಾಂಗ್ರೆಸ್ಗೆ 2-3 ಶಾಸಕರು ಮತದಾನದಿಂದ ದೂರ ಉಳಿಯುವ ಸಾಧ್ಯತೆಯ ಆತಂಕ ಕಾಡ್ತಿದೆ. ಈ ಎಲ್ಲ ಆತಂಕಗಳ ನಡುವೆ ವಿಧಾನ ಮಂಡಲ ಅಧಿವೇಶನ ಬುಧವಾರಕ್ಕೂ ವಿಸ್ತರಣೆಗೊಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ