ಪಂಜಾಬ್ ಖ್ಯಾತ ಗಾಯಕ ದಿವಂಗತ ಸಿಧು ಮೂಸೆವಾಲಾ
2022ರಲ್ಲಿ ದುಷ್ಕರ್ಮಿಗಳ ಬಂದೂಕಿನ ದಾಳಿಗೆ ಸಿಧು ಹತ್ಯೆ
ಮಾರ್ಚ್ನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಚರಣ್ ಕೌರ್
ಪಂಜಾಬ್ ಖ್ಯಾತ ಗಾಯಕ ದಿವಂಗತ ಸಿಧು ಮೂಸೆವಾಲಾ 2022ರಲ್ಲಿ ದುಷ್ಕರ್ಮಿಗಳ ಬಂದೂಕಿನ ದಾಳಿಗೆ ಹತ್ಯೆಯಾದರು. ನಡುಬೀದಿಯಲ್ಲಿ ಸಿಧು ವಾಹನವನ್ನು ಅಡ್ದಗಟ್ಟಿ ಬಂದೂಕಿನಿಂದ ಹತ್ಯೆ ಮಾಡಿದ್ದರು. ಇದ್ದಕ್ಕಿಂದ್ದಂತೆಯೇ ಶುಭದೀಪ್ ಸಿಂಗ್ (ಮತ್ತೊಂದು ಹೆಸರು) ಹತ್ಯೆಯ ಸುದ್ದಿ ಅಂದು ಅನೇಕ ಅಭಿಮಾನಿಗಳಿಗೆ ನೋವು ನೀಡಿತ್ತು. ಆದರೂ ಇಂದಿಗೂ ಈ ಗಾಯಕನನ್ನು ಅಭಿಮಾನಿಗಳು ನೆನೆಯುತ್ತಾ ಬಂದಿದ್ದಾರೆ. ಹೀಗೆ ನೆನೆಪಿಸುತ್ತಾ, ಆರಾಧಿಸುತ್ತಾ ಬಂದಿರುವ ಅಭಿಮಾನಿಗಳಿಗೀಗ ಸಿಹಿ ಸುದ್ದಿಯೊಂದು ಇಲ್ಲಿದೆ. ಅದೇನು ಗೊತ್ತಾ?
ಸಿಧು ಮೂಸೆವಾಲಾ ತಾಯಿ ಚರಣ್ ಕೌರ್ ಮತ್ತೆ ಗರ್ಭಿಣಿಯಾಗಿದ್ದಾರೆ. ಶೀಘ್ರದಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರಂತೆ. ಇಂತಹದೊಂದು ಸುದ್ದಿಯನ್ನು ಸಿಧು ಕುಟಂಬದ ಮೂಲಗಳು ಖಚಿತಪಡಿಸಿವೆ. ಅಂದಹಾಗೆಯೇ ಈ ಸುದ್ದಿ ಹೊರಬಿದ್ದದ್ದೇ ತಡ ಅಭಿಮಾನಿಗಳಂತೂ ಖುಷಿಯಾಗಿದ್ದಾರೆ. ಮತ್ತೊಬ್ಬು ಸಿಧು ಭೂಮಿಗೆ ಬರಲು ರೆಡಿಯಾಗಿದ್ದಾನೆಂದು ಹೇಳುತ್ತಿದ್ದಾರೆ.
ಸಿಧು ತನ್ನ ಪೋಷಕರಿಗೆ ಒಬ್ಬನೇ ಮಗ. ಆದರೀಗ ತನ್ನ 50ರ ಹರೆಯದ ತಾಯಿ ಮತ್ತೊಮ್ಮೆ ಗರ್ಭಿಣಿಯಾಗುವ ಮೂಲಕ ಮತ್ತೊಬ್ಬ ಸಿಧುವನ್ನು ಮಾರ್ಚ್ನಲ್ಲಿ ಬರಮಾಡಿಕೊಳ್ಳಲು ಕಾಯುತ್ತಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಮತ್ತೊಂದು ವಿಚಾರವೆಂದರೆ ಚರಣ್ ಕೌರ್ ಆರು ತಿಂಗಳಿನಿಂದ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಿಧು 2022ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಸೋತರು. ಆದರೆ ಅದೇ ವರ್ಷ 29ರಂದು ಕೊಲೆಯಾದರು. ಲಾರೆನ್ಸ್ ಬಿಷ್ಣೋಯ್ ಸೇರಿದಂತೆ ನಾಲ್ವರು ಸಿಧುವನ್ನ ಹತ್ಯೆ ಮಾಡಿದರು. ಈ ಸಂಬಂಧ ಸದ್ಯ 25 ಮಂದಿಯನ್ನು ಬಂಧಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪಂಜಾಬ್ ಖ್ಯಾತ ಗಾಯಕ ದಿವಂಗತ ಸಿಧು ಮೂಸೆವಾಲಾ
2022ರಲ್ಲಿ ದುಷ್ಕರ್ಮಿಗಳ ಬಂದೂಕಿನ ದಾಳಿಗೆ ಸಿಧು ಹತ್ಯೆ
ಮಾರ್ಚ್ನಲ್ಲಿ ಮಗುವಿಗೆ ಜನ್ಮ ನೀಡಲಿದ್ದಾರೆ ಚರಣ್ ಕೌರ್
ಪಂಜಾಬ್ ಖ್ಯಾತ ಗಾಯಕ ದಿವಂಗತ ಸಿಧು ಮೂಸೆವಾಲಾ 2022ರಲ್ಲಿ ದುಷ್ಕರ್ಮಿಗಳ ಬಂದೂಕಿನ ದಾಳಿಗೆ ಹತ್ಯೆಯಾದರು. ನಡುಬೀದಿಯಲ್ಲಿ ಸಿಧು ವಾಹನವನ್ನು ಅಡ್ದಗಟ್ಟಿ ಬಂದೂಕಿನಿಂದ ಹತ್ಯೆ ಮಾಡಿದ್ದರು. ಇದ್ದಕ್ಕಿಂದ್ದಂತೆಯೇ ಶುಭದೀಪ್ ಸಿಂಗ್ (ಮತ್ತೊಂದು ಹೆಸರು) ಹತ್ಯೆಯ ಸುದ್ದಿ ಅಂದು ಅನೇಕ ಅಭಿಮಾನಿಗಳಿಗೆ ನೋವು ನೀಡಿತ್ತು. ಆದರೂ ಇಂದಿಗೂ ಈ ಗಾಯಕನನ್ನು ಅಭಿಮಾನಿಗಳು ನೆನೆಯುತ್ತಾ ಬಂದಿದ್ದಾರೆ. ಹೀಗೆ ನೆನೆಪಿಸುತ್ತಾ, ಆರಾಧಿಸುತ್ತಾ ಬಂದಿರುವ ಅಭಿಮಾನಿಗಳಿಗೀಗ ಸಿಹಿ ಸುದ್ದಿಯೊಂದು ಇಲ್ಲಿದೆ. ಅದೇನು ಗೊತ್ತಾ?
ಸಿಧು ಮೂಸೆವಾಲಾ ತಾಯಿ ಚರಣ್ ಕೌರ್ ಮತ್ತೆ ಗರ್ಭಿಣಿಯಾಗಿದ್ದಾರೆ. ಶೀಘ್ರದಲ್ಲೇ ಮಗುವಿಗೆ ಜನ್ಮ ನೀಡಲಿದ್ದಾರಂತೆ. ಇಂತಹದೊಂದು ಸುದ್ದಿಯನ್ನು ಸಿಧು ಕುಟಂಬದ ಮೂಲಗಳು ಖಚಿತಪಡಿಸಿವೆ. ಅಂದಹಾಗೆಯೇ ಈ ಸುದ್ದಿ ಹೊರಬಿದ್ದದ್ದೇ ತಡ ಅಭಿಮಾನಿಗಳಂತೂ ಖುಷಿಯಾಗಿದ್ದಾರೆ. ಮತ್ತೊಬ್ಬು ಸಿಧು ಭೂಮಿಗೆ ಬರಲು ರೆಡಿಯಾಗಿದ್ದಾನೆಂದು ಹೇಳುತ್ತಿದ್ದಾರೆ.
ಸಿಧು ತನ್ನ ಪೋಷಕರಿಗೆ ಒಬ್ಬನೇ ಮಗ. ಆದರೀಗ ತನ್ನ 50ರ ಹರೆಯದ ತಾಯಿ ಮತ್ತೊಮ್ಮೆ ಗರ್ಭಿಣಿಯಾಗುವ ಮೂಲಕ ಮತ್ತೊಬ್ಬ ಸಿಧುವನ್ನು ಮಾರ್ಚ್ನಲ್ಲಿ ಬರಮಾಡಿಕೊಳ್ಳಲು ಕಾಯುತ್ತಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿವೆ. ಮತ್ತೊಂದು ವಿಚಾರವೆಂದರೆ ಚರಣ್ ಕೌರ್ ಆರು ತಿಂಗಳಿನಿಂದ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿಲ್ಲ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಸಿಧು 2022ರಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದರು. ಪಂಜಾಬ್ ಅಸೆಂಬ್ಲಿ ಚುನಾವಣೆಯಲ್ಲಿ ಸೋತರು. ಆದರೆ ಅದೇ ವರ್ಷ 29ರಂದು ಕೊಲೆಯಾದರು. ಲಾರೆನ್ಸ್ ಬಿಷ್ಣೋಯ್ ಸೇರಿದಂತೆ ನಾಲ್ವರು ಸಿಧುವನ್ನ ಹತ್ಯೆ ಮಾಡಿದರು. ಈ ಸಂಬಂಧ ಸದ್ಯ 25 ಮಂದಿಯನ್ನು ಬಂಧಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ