ಚೆನ್ನೈ ಆಸ್ಪತ್ರೆಯಲ್ಲಿ ನಿಧನರಾದ ಅಪರಾಧಿ ಸಂತನ್
1991ರಲ್ಲಿ ನಡೆದ ರಾಜೀವ್ ಗಾಂಧಿ ಹತ್ಯೆ ಕೇಸ್ನಲ್ಲಿ ಅರೆಸ್ಟ್
ಎಲ್ಟಿಟಿಇ ಸದಸ್ಯನಾಗಿ ಹತ್ಯೆಯ ಪಿತೂರಿಗೆ ಕಾರಣನಾಗಿದ್ದ ಸಂತನ್
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಕೇಸ್ನಲ್ಲಿ ಅಪರಾಧಿಯಾಗಿ ಬಿಡುಗಡೆಯಾದ ಸಂತನ್ ನಿನ್ನೆ ಚೆನ್ನೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬೆಳಗ್ಗೆ 7:50ಕ್ಕೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
1991ರಲ್ಲಿ ನಡೆದ ರಾಜೀವ್ ಗಾಂಧಿ ಹತ್ಯೆ ಕೇಸ್ನಲ್ಲಿ ಬಂಧನವಾದ 7 ಅಪರಾಧಿಗಳಲ್ಲಿ ಸಂತನ್ ಕೂಡ ಒಬ್ಬರು. ಇವರನ್ನು ಟಿ ಸತೇಂದ್ರರಾಜ ಎಂದು ಕರೆಯುತ್ತಿದ್ದರು. ಮೂಲತಃ ಶ್ರೀಲಂಕಾದ ಪ್ರಜೆಯಾಗಿರುವ ಇವರು ಅನಾರೋಗ್ಯದ ಕಾರಣ ಚೆನ್ನೈನಲ್ಲಿದ್ದರು. ಇಲ್ಲಿನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆ ಬೆಳಗ್ಗೆ ಅವರು ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಡೀನ್ ಡಾ.ವಿ ಥೆರನಿರಾಜನ್ ತಿಳಿಸಿದ್ದಾರೆ.
ಯಕೃತ್ ವೈಫಲ್ಯದಿಂದ ಸಾವು
ಸಂತನ್ ಯಕೃತ್ ವೈಫಲ್ಯ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ ನಿನ್ನೆ ಸಂಜೆ 4 ಗಂಟೆಗೆ ಹೃದಯ ಸ್ತಂಭನಕ್ಕೆ ಒಳಗಾದರು. ಬೆಳಗ್ಗೆ 7:30ಕ್ಕೆ ನಿಧನರಾದರು ಎಂದು ಡಾ.ವಿ ಥೆರನಿರಾಜನ್ ಹೇಳಿದ್ದಾರೆ.
ಸಂತನ್ ಮಾಜಿ ಪ್ರಧಾನಿಯ ಹತ್ಯೆಯಲ್ಲಿ ಭಾಗಿಯಾಗಿ ಶಿಕ್ಷೆ ಅನುಭವಿಸಿ ಬಂದವರಲ್ಲಿ ಇವರು ಒಬ್ಬರಾಗಿದ್ದರು. ಸಂತನ್ ಜೊತೆಗೆ ಮುರುಗನ್ ಮತ್ತು ಪೆರಿವಾಲನ್ ಕೂಡ ಹೊರಬಂದಿದ್ದಾರೆ. 1999ರಲ್ಲಿ ಇವರಿಗೆ ಸುಪ್ರೀಂ ಕೋರ್ಟ್ ವಿಧಿಸಿದ ಮರಣದಂಡನೆ ಶಿಕ್ಷೆಯನ್ನು ಅನುಭವಿಸಿದ ಸಂತನ್ 2022ರಲ್ಲಿ ಜೈಲಿನಿಂದ ಹೊರಬಂದರು.
ಭಾರತೀಯ ನಿಯಮಾವಳಿ ಪ್ರಕಾರ ಸಂತಾನ್ ವಿದೇಶಿ ಪ್ರಜೆಯಾಗಿದ್ದು, ಇವರನ್ನು ತಿರುಚ್ಚಿಯ ವಿಶೇಷ ಶಿಬಿರದಲ್ಲಿ ಇರಿಸಲಾಗಿತ್ತು. ಆದರೆ ಶ್ರೀಲಂಕಾಗೆ ತೆರಳಲು ತಾತ್ಕಾಲಿಕ ಪ್ರಯಾಣ ದಾಖಲೆಯನ್ನು ಸರ್ಕಾರ ಮದ್ರಾಸ್ ಹೈಕೋರ್ಟ್ಗೆ ತಿಳಿಸಿತ್ತು. ಆದರೆ ಅನಾರೋಗ್ಯದ ಕಾರಣ ಎಲ್ಟಿಟಿಇಯ ಸದಸ್ಯರಾಗಿ ರಾಜೀವ್ ಗಾಂಧಿ ಹತ್ಯೆಯ ಪಿತೂರಿಗೆ ಸಹಾಯ ಮಾಡಿದ ಸಂತನ್ ನಿನ್ನೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಚೆನ್ನೈ ಆಸ್ಪತ್ರೆಯಲ್ಲಿ ನಿಧನರಾದ ಅಪರಾಧಿ ಸಂತನ್
1991ರಲ್ಲಿ ನಡೆದ ರಾಜೀವ್ ಗಾಂಧಿ ಹತ್ಯೆ ಕೇಸ್ನಲ್ಲಿ ಅರೆಸ್ಟ್
ಎಲ್ಟಿಟಿಇ ಸದಸ್ಯನಾಗಿ ಹತ್ಯೆಯ ಪಿತೂರಿಗೆ ಕಾರಣನಾಗಿದ್ದ ಸಂತನ್
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆಯ ಕೇಸ್ನಲ್ಲಿ ಅಪರಾಧಿಯಾಗಿ ಬಿಡುಗಡೆಯಾದ ಸಂತನ್ ನಿನ್ನೆ ಚೆನ್ನೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬೆಳಗ್ಗೆ 7:50ಕ್ಕೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
1991ರಲ್ಲಿ ನಡೆದ ರಾಜೀವ್ ಗಾಂಧಿ ಹತ್ಯೆ ಕೇಸ್ನಲ್ಲಿ ಬಂಧನವಾದ 7 ಅಪರಾಧಿಗಳಲ್ಲಿ ಸಂತನ್ ಕೂಡ ಒಬ್ಬರು. ಇವರನ್ನು ಟಿ ಸತೇಂದ್ರರಾಜ ಎಂದು ಕರೆಯುತ್ತಿದ್ದರು. ಮೂಲತಃ ಶ್ರೀಲಂಕಾದ ಪ್ರಜೆಯಾಗಿರುವ ಇವರು ಅನಾರೋಗ್ಯದ ಕಾರಣ ಚೆನ್ನೈನಲ್ಲಿದ್ದರು. ಇಲ್ಲಿನ ರಾಜೀವ್ ಗಾಂಧಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ನಿನ್ನೆ ಬೆಳಗ್ಗೆ ಅವರು ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಡೀನ್ ಡಾ.ವಿ ಥೆರನಿರಾಜನ್ ತಿಳಿಸಿದ್ದಾರೆ.
ಯಕೃತ್ ವೈಫಲ್ಯದಿಂದ ಸಾವು
ಸಂತನ್ ಯಕೃತ್ ವೈಫಲ್ಯ ಚಿಕಿತ್ಸೆಗಾಗಿ ದಾಖಲಾಗಿದ್ದರು. ಆದರೆ ನಿನ್ನೆ ಸಂಜೆ 4 ಗಂಟೆಗೆ ಹೃದಯ ಸ್ತಂಭನಕ್ಕೆ ಒಳಗಾದರು. ಬೆಳಗ್ಗೆ 7:30ಕ್ಕೆ ನಿಧನರಾದರು ಎಂದು ಡಾ.ವಿ ಥೆರನಿರಾಜನ್ ಹೇಳಿದ್ದಾರೆ.
ಸಂತನ್ ಮಾಜಿ ಪ್ರಧಾನಿಯ ಹತ್ಯೆಯಲ್ಲಿ ಭಾಗಿಯಾಗಿ ಶಿಕ್ಷೆ ಅನುಭವಿಸಿ ಬಂದವರಲ್ಲಿ ಇವರು ಒಬ್ಬರಾಗಿದ್ದರು. ಸಂತನ್ ಜೊತೆಗೆ ಮುರುಗನ್ ಮತ್ತು ಪೆರಿವಾಲನ್ ಕೂಡ ಹೊರಬಂದಿದ್ದಾರೆ. 1999ರಲ್ಲಿ ಇವರಿಗೆ ಸುಪ್ರೀಂ ಕೋರ್ಟ್ ವಿಧಿಸಿದ ಮರಣದಂಡನೆ ಶಿಕ್ಷೆಯನ್ನು ಅನುಭವಿಸಿದ ಸಂತನ್ 2022ರಲ್ಲಿ ಜೈಲಿನಿಂದ ಹೊರಬಂದರು.
ಭಾರತೀಯ ನಿಯಮಾವಳಿ ಪ್ರಕಾರ ಸಂತಾನ್ ವಿದೇಶಿ ಪ್ರಜೆಯಾಗಿದ್ದು, ಇವರನ್ನು ತಿರುಚ್ಚಿಯ ವಿಶೇಷ ಶಿಬಿರದಲ್ಲಿ ಇರಿಸಲಾಗಿತ್ತು. ಆದರೆ ಶ್ರೀಲಂಕಾಗೆ ತೆರಳಲು ತಾತ್ಕಾಲಿಕ ಪ್ರಯಾಣ ದಾಖಲೆಯನ್ನು ಸರ್ಕಾರ ಮದ್ರಾಸ್ ಹೈಕೋರ್ಟ್ಗೆ ತಿಳಿಸಿತ್ತು. ಆದರೆ ಅನಾರೋಗ್ಯದ ಕಾರಣ ಎಲ್ಟಿಟಿಇಯ ಸದಸ್ಯರಾಗಿ ರಾಜೀವ್ ಗಾಂಧಿ ಹತ್ಯೆಯ ಪಿತೂರಿಗೆ ಸಹಾಯ ಮಾಡಿದ ಸಂತನ್ ನಿನ್ನೆ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ