ವಶಪಡಿಸಿಕೊಂಡು ಗೋದಾಮಿನಲ್ಲಿ ಇಟ್ಟಿದ್ದ 19 ಕೆಜಿ ಗಾಂಜಾ ಮಾಯ
10 ಕೆಜಿ ಗಾಂಜಾ ಮತ್ತು 9 ಕೆಜಿ ಭಾಂಗ್ ಅನ್ನು ಇಲಿಗಳು ತಿಂದಿವೆ ಎಂದ ಪೊಲೀಸರು
ಇದು 2018ರ ಕೇಸ್.. ಕೋರ್ಟ್ ವಿಚಾರಣೆ ವೇಳೆ ಕೇಳಿದ ಪ್ರಶ್ನೆಗೆ ಪೊಲೀಸರು ಏನಂದ್ರು?
ಜಾರ್ಖಂಡ್: ಧನ್ಬಾದ್ ಪೊಲೀಸರು 5 ವರ್ಷದ ಹಿಂದೆ ಗಾಂಜಾ ಮಾರಾಟ ಮಾಡುತ್ತಿದ್ದ ತಂದೆ-ಮಗನನ್ನು ಬಂಧಿಸಿದ್ದರು. ಅವರ ಬಳಿ ಇದ್ದ ಗಾಂಜಾವನ್ನು ವಶಪಡಿಸಿಕೊಂಡು ಗೋದಾಮಿನಲ್ಲಿ ಇರಿಸಿದ್ದರು. ಆದರೀಗ ಗೋದಾಮಿನಲ್ಲಿ ಇರಿಸಿದ್ದ ಗಾಂಜಾದಲ್ಲಿ 19 ಕೆ.ಜಿಯಷ್ಟು ಇಲಿಗಳು ತಿಂದಿವೆ ಎಂದು ಪೊಲೀಸರು ನ್ಯಾಯಾಲಕ್ಕೆ ತಿಳಿಸಿದ್ದಾರೆ.
ಶಂಭು ಅಗರ್ವಾಲ್ ಮತ್ತು ಆತನ ಮಗನನ್ನು ಗಾಂಜಾ ಮಾರಾಟ ಆರೋಪದಡಿ ಡಿಸೆಂಬರ್ 14, 2018ರಲ್ಲಿ ಬಂಧಿಸಿದ್ದರು. ಅವರ ಬಳಿಯಿದ್ದ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಆದರೆ ವಶಪಡಿಸಿಕೊಂಡ 10 ಕೆಜಿ ಗಾಂಜಾ ಮತ್ತು 9 ಕೆಜಿ ಭಾಂಗ್ ಅನ್ನು ಇಲಿಗಳು ತಿಂದಿವೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಿನ್ಸಿಪಾಲ್ ಮತ್ತ ಸೆಷನ್ ನ್ಯಾಯಾಧೀಶ ರಾಮ್ಶರ್ಮಾ, ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಿಂದ ವಶಪಡಿಸಿಕೊಂಡಿದ್ದ ವಸ್ತುಗಳನ್ನು ಪ್ರದರ್ಶಿಸುವಂತೆ ತನಿಖಾಧಿಕಾರಿ ಜೈ ಪ್ರಸಾದ್ ಅವರಿಗೆ ಸೂಚಿಸಿದ್ದರು. ಆದರೆ ಅವುಗಳನ್ನು ಇಲಿಗಳು ಸೇವಿಸಿದ್ದರಿಂದ ನ್ಯಾಯಾಲಯದ ಆದೇಶದಂತೆ ಪೊಲೀಸರಿಗೆ ವಸ್ತುಗಳನ್ನು ಪ್ರದರ್ಶಿಸಲು ಸಾಧ್ಯವಾಗಿಲ್ಲ. ಈ ಕುರಿತಾಗಿ ಇದೇ ಏಪ್ರಿಲ್ 6ರಂದು ತನಿಖಾಧಿಕಾರಿ ವರದಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಮೋದಿ ರೋಡ್ ಶೋ ವೇಳೆ ಏಕಾಏಕಿ ಕುಸಿದ ವೇದಿಕೆ.. ಹಲವರಿಗೆ ಗಾಯ
ಇನ್ನು ಶಂಭು ಮತ್ತು ಆತನ ಪರ ವಕೀಲರು ತಮ್ಮ ಕಕ್ಷಿದಾರನ ಬಗ್ಗೆ ತಪ್ಪಾಗಿ ಆರೋಪ ಮಾಡಿದ್ದಾರೆ. ಪೊಲೀಸರು ಜಪ್ತಿ ಮಾಡಿದ ವಸ್ತುಗಳನ್ನು ನೀಡಲು ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ್ದಾರೆ. ಸದ್ಯ ಈ ಕುರಿತು ತನಿಖೆ ಮುಂದುವರೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ವಶಪಡಿಸಿಕೊಂಡು ಗೋದಾಮಿನಲ್ಲಿ ಇಟ್ಟಿದ್ದ 19 ಕೆಜಿ ಗಾಂಜಾ ಮಾಯ
10 ಕೆಜಿ ಗಾಂಜಾ ಮತ್ತು 9 ಕೆಜಿ ಭಾಂಗ್ ಅನ್ನು ಇಲಿಗಳು ತಿಂದಿವೆ ಎಂದ ಪೊಲೀಸರು
ಇದು 2018ರ ಕೇಸ್.. ಕೋರ್ಟ್ ವಿಚಾರಣೆ ವೇಳೆ ಕೇಳಿದ ಪ್ರಶ್ನೆಗೆ ಪೊಲೀಸರು ಏನಂದ್ರು?
ಜಾರ್ಖಂಡ್: ಧನ್ಬಾದ್ ಪೊಲೀಸರು 5 ವರ್ಷದ ಹಿಂದೆ ಗಾಂಜಾ ಮಾರಾಟ ಮಾಡುತ್ತಿದ್ದ ತಂದೆ-ಮಗನನ್ನು ಬಂಧಿಸಿದ್ದರು. ಅವರ ಬಳಿ ಇದ್ದ ಗಾಂಜಾವನ್ನು ವಶಪಡಿಸಿಕೊಂಡು ಗೋದಾಮಿನಲ್ಲಿ ಇರಿಸಿದ್ದರು. ಆದರೀಗ ಗೋದಾಮಿನಲ್ಲಿ ಇರಿಸಿದ್ದ ಗಾಂಜಾದಲ್ಲಿ 19 ಕೆ.ಜಿಯಷ್ಟು ಇಲಿಗಳು ತಿಂದಿವೆ ಎಂದು ಪೊಲೀಸರು ನ್ಯಾಯಾಲಕ್ಕೆ ತಿಳಿಸಿದ್ದಾರೆ.
ಶಂಭು ಅಗರ್ವಾಲ್ ಮತ್ತು ಆತನ ಮಗನನ್ನು ಗಾಂಜಾ ಮಾರಾಟ ಆರೋಪದಡಿ ಡಿಸೆಂಬರ್ 14, 2018ರಲ್ಲಿ ಬಂಧಿಸಿದ್ದರು. ಅವರ ಬಳಿಯಿದ್ದ ಗಾಂಜಾವನ್ನು ವಶಪಡಿಸಿಕೊಂಡಿದ್ದರು. ಆದರೆ ವಶಪಡಿಸಿಕೊಂಡ 10 ಕೆಜಿ ಗಾಂಜಾ ಮತ್ತು 9 ಕೆಜಿ ಭಾಂಗ್ ಅನ್ನು ಇಲಿಗಳು ತಿಂದಿವೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರಿನ್ಸಿಪಾಲ್ ಮತ್ತ ಸೆಷನ್ ನ್ಯಾಯಾಧೀಶ ರಾಮ್ಶರ್ಮಾ, ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳಿಂದ ವಶಪಡಿಸಿಕೊಂಡಿದ್ದ ವಸ್ತುಗಳನ್ನು ಪ್ರದರ್ಶಿಸುವಂತೆ ತನಿಖಾಧಿಕಾರಿ ಜೈ ಪ್ರಸಾದ್ ಅವರಿಗೆ ಸೂಚಿಸಿದ್ದರು. ಆದರೆ ಅವುಗಳನ್ನು ಇಲಿಗಳು ಸೇವಿಸಿದ್ದರಿಂದ ನ್ಯಾಯಾಲಯದ ಆದೇಶದಂತೆ ಪೊಲೀಸರಿಗೆ ವಸ್ತುಗಳನ್ನು ಪ್ರದರ್ಶಿಸಲು ಸಾಧ್ಯವಾಗಿಲ್ಲ. ಈ ಕುರಿತಾಗಿ ಇದೇ ಏಪ್ರಿಲ್ 6ರಂದು ತನಿಖಾಧಿಕಾರಿ ವರದಿ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಮೋದಿ ರೋಡ್ ಶೋ ವೇಳೆ ಏಕಾಏಕಿ ಕುಸಿದ ವೇದಿಕೆ.. ಹಲವರಿಗೆ ಗಾಯ
ಇನ್ನು ಶಂಭು ಮತ್ತು ಆತನ ಪರ ವಕೀಲರು ತಮ್ಮ ಕಕ್ಷಿದಾರನ ಬಗ್ಗೆ ತಪ್ಪಾಗಿ ಆರೋಪ ಮಾಡಿದ್ದಾರೆ. ಪೊಲೀಸರು ಜಪ್ತಿ ಮಾಡಿದ ವಸ್ತುಗಳನ್ನು ನೀಡಲು ಏಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ್ದಾರೆ. ಸದ್ಯ ಈ ಕುರಿತು ತನಿಖೆ ಮುಂದುವರೆದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ