ನಟ ದ್ವಾರಕೀಶ್ ನಿಧನಕ್ಕೆ ಸುದ್ದಿ ತಿಳಿಯುತ್ತಿದ್ದಂತೆ ಬಾಮೈದ ವೆಂಕಟೇಶ್ ಕಣ್ಣೀರು
ನಾವು ನಮ್ಮ ಮಯೂರ್ನನ್ನು ಕಳೆದುಕೊಂಡು ತುಂಬಾ ದುಃಖಿತರಾಗಿದ್ದೇವೆ
ಕನ್ನಡ ಸಿನಿಮಾದ ಕುಳ್ಳನ ಅಗಲಿಕೆಗೆ ಕಂಬನಿ ಮಿಡಿದ ಇಡೀ ಸ್ಯಾಂಡಲ್ವುಡ್
ಕನ್ನಡದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ (81) ಅನಾರೋಗ್ಯಕ್ಕೆ ಒಳಗಾಗಿದ್ದ ಇಂದು ಇಹಲೋಕ ತ್ಯಜಿಸಿದ್ದಾರೆ. ಕನ್ನಡ ಸಿನಿಮಾದ ಕುಳ್ಳನ ಅಗಲಿಕೆಗೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ನಟ ದ್ವಾರಕೀಶ್ ಅವರ ಸಾವಿನ ಸುದ್ದಿ ತಿಳಿದ ಸ್ಯಾಂಡಲ್ವುಡ್ ಗಣ್ಯರು ಅವರ ನಿವಾಸಕ್ಕೆ ಆಗಮಿಸುತ್ತಿದ್ದಾರೆ.
ಇದನ್ನೂ ಓದಿ: ಹಿರಿಯ ನಟ ದ್ವಾರಕೀಶ್ ಅಂತಿಮ ದರ್ಶನಕ್ಕೆ ಗಣ್ಯರ ದಂಡು.. ಅಂತ್ಯಕ್ರಿಯೆ ಯಾವಾಗ?
ಇನ್ನು, ನಟ ದ್ವಾರಕೀಶ್ ಅವರ ನಿಧನಕ್ಕೆ ಬಾಮೈದ ವೆಂಕಟೇಶ್ ಕಣ್ಣೀರಿಟ್ಟಿದ್ದಾರೆ. ಈ ಬಗ್ಗೆ ನ್ಯೂಸ್ಫಸ್ಟ್ನೊಂದಿಗೆ ಮಾತಾಡಿದ ಬಾಮೈದ ವೆಂಕಟೇಶ್ ಅವರು, ನಾನು 1972ಯಿಂದ ಅವರ ಮನೆಯಲ್ಲೇ ಇದ್ದೆ. ದ್ವಾರಕೀಶ್ ಅವರ ಅಭಿನಯದ ಭಾಗ್ಯವಂತರು ಎಂಬ ಸಿನಿಮಾದಲ್ಲಿ ನಾನು ಅವರ ಜೊತೆ ಕೆಲಸ ಮಾಡಿದ್ದೇ.
ಬಳಿಕ ನನ್ನ ಎಜುಕೇಶನ್ ನಿಮಿತ್ತೆ ಬೇರೆ ಕಡೆ ಹೋಗಿ ಬಿಟ್ಟೆ. ದ್ವಾರಕೀಶ್ ಅವರ ಪತ್ನಿ ಅಂಬುಜ ಅವರಿಗೆ ನನ್ನ ಮೇಲೆ ಬಹಳ ಅಭಿಮಾನ. ಲಾಸ್ಟ್ ಇಯರ್ ಕೂಡ ಗ್ರ್ಯಾಂಡ್ ಆಗಿ ಅವರ ಹುಟ್ಟ ಹಬ್ಬ ಮಾಡಿದ್ದೇವೆ. ಆವರು ನನಗೆ ಮನೆಯಲ್ಲಿ ಕಂಠಿ ಅಂತಾ ಕರಿಯುತ್ತಿದ್ದರು. ಕಂಠಿ ಸದಾ ನಾನು ನೀನು ಜಂಟಿ ಅಂತಾ ಕರೆಯುತ್ತಿದ್ದರು. ಅವರ ಲೈಫ್ನಲ್ಲಿ ಎಷ್ಟೂ ಗೆಲ್ಲುತ್ತಿದ್ದರೋ ಅಷ್ಟೇ ಸೋಲುತ್ತಿದ್ದರು. ಕೊನೆಯ ಸಮಯದಲ್ಲಿ ತುಂಬಾನೇ ಸೋಲುಂಡರು. ಸಿನಿಮಾದಲ್ಲಿ ಇವರಷ್ಟು ಕಷ್ಟ ಕಂಡವರು ಯಾರು ಇಲ್ಲ. ಯಾವಗಲೂ ನಮ್ಮ ಜೊತೆ ಸುಖ ದುಃಖದ ಬಗ್ಗೆ ಹಂಚಿಕೊಳ್ಳುತ್ತಿದ್ದರು. ಅವರು ಮಲಗುವ ಕೋಣೆಯಲ್ಲೇ ಟಿವಿಯನ್ನು ಇಟ್ಟುಕೊಂಡು ಪ್ರತಿದಿನ ಹೊಸ ಹೊಸ ಸಿನಿಮಾಗಳನ್ನು ನೋಡುತ್ತಿದ್ದರು. ಆದರೆ ನಾವು ನಮ್ಮ ಮಯೂರ್ನನ್ನು ಕಳೆದುಕೊಂಡಿದ್ದೇವೆ. ತುಂಬಾ ದುಃಖ ಆಗುತ್ತಿದೆ. ನಾಳೆ ಬೆಳಗ್ಗೆ 6 ಗಂಟೆಯಿಂದ ರವೀಂದ್ರ ಕಲಾಕ್ಷೇತ್ರಕ್ಕೆ ರವಾನಿಸಲಾಗುತ್ತದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಟ ದ್ವಾರಕೀಶ್ ನಿಧನಕ್ಕೆ ಸುದ್ದಿ ತಿಳಿಯುತ್ತಿದ್ದಂತೆ ಬಾಮೈದ ವೆಂಕಟೇಶ್ ಕಣ್ಣೀರು
ನಾವು ನಮ್ಮ ಮಯೂರ್ನನ್ನು ಕಳೆದುಕೊಂಡು ತುಂಬಾ ದುಃಖಿತರಾಗಿದ್ದೇವೆ
ಕನ್ನಡ ಸಿನಿಮಾದ ಕುಳ್ಳನ ಅಗಲಿಕೆಗೆ ಕಂಬನಿ ಮಿಡಿದ ಇಡೀ ಸ್ಯಾಂಡಲ್ವುಡ್
ಕನ್ನಡದ ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ (81) ಅನಾರೋಗ್ಯಕ್ಕೆ ಒಳಗಾಗಿದ್ದ ಇಂದು ಇಹಲೋಕ ತ್ಯಜಿಸಿದ್ದಾರೆ. ಕನ್ನಡ ಸಿನಿಮಾದ ಕುಳ್ಳನ ಅಗಲಿಕೆಗೆ ಇಡೀ ಚಿತ್ರರಂಗ ಕಂಬನಿ ಮಿಡಿದಿದೆ. ನಟ ದ್ವಾರಕೀಶ್ ಅವರ ಸಾವಿನ ಸುದ್ದಿ ತಿಳಿದ ಸ್ಯಾಂಡಲ್ವುಡ್ ಗಣ್ಯರು ಅವರ ನಿವಾಸಕ್ಕೆ ಆಗಮಿಸುತ್ತಿದ್ದಾರೆ.
ಇದನ್ನೂ ಓದಿ: ಹಿರಿಯ ನಟ ದ್ವಾರಕೀಶ್ ಅಂತಿಮ ದರ್ಶನಕ್ಕೆ ಗಣ್ಯರ ದಂಡು.. ಅಂತ್ಯಕ್ರಿಯೆ ಯಾವಾಗ?
ಇನ್ನು, ನಟ ದ್ವಾರಕೀಶ್ ಅವರ ನಿಧನಕ್ಕೆ ಬಾಮೈದ ವೆಂಕಟೇಶ್ ಕಣ್ಣೀರಿಟ್ಟಿದ್ದಾರೆ. ಈ ಬಗ್ಗೆ ನ್ಯೂಸ್ಫಸ್ಟ್ನೊಂದಿಗೆ ಮಾತಾಡಿದ ಬಾಮೈದ ವೆಂಕಟೇಶ್ ಅವರು, ನಾನು 1972ಯಿಂದ ಅವರ ಮನೆಯಲ್ಲೇ ಇದ್ದೆ. ದ್ವಾರಕೀಶ್ ಅವರ ಅಭಿನಯದ ಭಾಗ್ಯವಂತರು ಎಂಬ ಸಿನಿಮಾದಲ್ಲಿ ನಾನು ಅವರ ಜೊತೆ ಕೆಲಸ ಮಾಡಿದ್ದೇ.
ಬಳಿಕ ನನ್ನ ಎಜುಕೇಶನ್ ನಿಮಿತ್ತೆ ಬೇರೆ ಕಡೆ ಹೋಗಿ ಬಿಟ್ಟೆ. ದ್ವಾರಕೀಶ್ ಅವರ ಪತ್ನಿ ಅಂಬುಜ ಅವರಿಗೆ ನನ್ನ ಮೇಲೆ ಬಹಳ ಅಭಿಮಾನ. ಲಾಸ್ಟ್ ಇಯರ್ ಕೂಡ ಗ್ರ್ಯಾಂಡ್ ಆಗಿ ಅವರ ಹುಟ್ಟ ಹಬ್ಬ ಮಾಡಿದ್ದೇವೆ. ಆವರು ನನಗೆ ಮನೆಯಲ್ಲಿ ಕಂಠಿ ಅಂತಾ ಕರಿಯುತ್ತಿದ್ದರು. ಕಂಠಿ ಸದಾ ನಾನು ನೀನು ಜಂಟಿ ಅಂತಾ ಕರೆಯುತ್ತಿದ್ದರು. ಅವರ ಲೈಫ್ನಲ್ಲಿ ಎಷ್ಟೂ ಗೆಲ್ಲುತ್ತಿದ್ದರೋ ಅಷ್ಟೇ ಸೋಲುತ್ತಿದ್ದರು. ಕೊನೆಯ ಸಮಯದಲ್ಲಿ ತುಂಬಾನೇ ಸೋಲುಂಡರು. ಸಿನಿಮಾದಲ್ಲಿ ಇವರಷ್ಟು ಕಷ್ಟ ಕಂಡವರು ಯಾರು ಇಲ್ಲ. ಯಾವಗಲೂ ನಮ್ಮ ಜೊತೆ ಸುಖ ದುಃಖದ ಬಗ್ಗೆ ಹಂಚಿಕೊಳ್ಳುತ್ತಿದ್ದರು. ಅವರು ಮಲಗುವ ಕೋಣೆಯಲ್ಲೇ ಟಿವಿಯನ್ನು ಇಟ್ಟುಕೊಂಡು ಪ್ರತಿದಿನ ಹೊಸ ಹೊಸ ಸಿನಿಮಾಗಳನ್ನು ನೋಡುತ್ತಿದ್ದರು. ಆದರೆ ನಾವು ನಮ್ಮ ಮಯೂರ್ನನ್ನು ಕಳೆದುಕೊಂಡಿದ್ದೇವೆ. ತುಂಬಾ ದುಃಖ ಆಗುತ್ತಿದೆ. ನಾಳೆ ಬೆಳಗ್ಗೆ 6 ಗಂಟೆಯಿಂದ ರವೀಂದ್ರ ಕಲಾಕ್ಷೇತ್ರಕ್ಕೆ ರವಾನಿಸಲಾಗುತ್ತದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ