ನಿನ್ನೆ ಆಡಿದ ಪಂದ್ಯದಲ್ಲೂ ಸೋಲು ಕಂಡ ಆರ್ಸಿಬಿ ತಂಡ
ಭಾರತೀಯ ಟೆನ್ನಿಸ್ ತಾರೆ ಆರ್ಸಿಬಿ ಬಗ್ಗೆ ಏನಂದ್ರು ಗೊತ್ತಾ?
ಮಹೇಶ್ ಭೂಪತಿ ಆರ್ಬಿಸಿ ಮ್ಯಾನೇಜ್ಮೆಂಟ್ ಬಗ್ಗೆ ಬಿಸಿಸಿಐಗೆ ಎನು ಹೇಳಿದ್ರು?
ಸತತ ಏಳು ಪಂದ್ಯ ಎದುರಿಸಿ ಆರು ಪಂದ್ಯದಲ್ಲಿ ಸತತ ಸೋಲು ಎಣಿಸುತ್ತಾ ಬಂದಿರುವ ಆರ್ಸಿಬಿ ವಿರುದ್ಧ ಅನೇಕರು ಕೆಂಡಕಾರುತ್ತಿದ್ದಾರೆ. ಆರ್ಸಿಬಿ ಮ್ಯಾನೇಜ್ಮೆಂಟ್ ಕುರಿತು ಬೈಗುಳದ ಸುರಿಮಳೆ ಸುರಿಸುತ್ತಿದ್ದಾರೆ.
ನಿನ್ನೆ ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೂಡ ಆರ್ಸಿಬಿ ಸೋಲುಂಡಿದೆ. 25 ರನ್ಗೆ ತಲೆಬಾಗಿದೆ. ಇದು ಅಭಿಮಾನಿಗಳಿಗೆ ಬೇಸರಕ್ಕೆ ಕಾರಣವಾಗಿದೆ. ಇದರ ಜೊತೆಗೆ ಹಿರಿಯ ಆಟಗಾರರು, ಕ್ರೀಡಾಭಿಮಾನಿಗಳಿಗೂ ನೋವು ತಂದಿದೆ. ಅನೇಕರು ಸಾಮಾಜಿಕ ಜಾಲತಾಣದಲ್ಲಿ ಆರ್ಸಿಬಿ ಮ್ಯಾನೇಜ್ಮೆಂಟ್ ಕುರಿತು ಬರೆದು ಹಾಕುತ್ತಿದ್ದಾರೆ. ತಂಡದ ಬದಲಾವಣೆ ಅಗತ್ಯ ಎಂಬುದನ್ನು ಸಾರುತ್ತಿದ್ದಾರೆ.
ಭಾರತೀಯ ಟೆನ್ನಿಸ್ ತಾರೆ ಏನಂದ್ರು?
ಭಾರತೀಯ ಟೆನ್ನಿಸ್ ತಾರೆ ಮಹೇಶ್ ಭೂಪತಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಆರ್ಸಿಬಿ ಸೋಲಿನ ಬಗ್ಗೆ ಬರೆದು ಹಾಕಿದ್ದಾರೆ. ‘ಕ್ರೀಡೆ, ಐಪಿಎಲ್, ಅಭಿಮಾನಿಗಳು ಮತ್ತು ಆಟಗಾರ ಸಹ ತಮ್ಮ ಫ್ರಾಂಚೈಸಿಗಳನ್ನು ನಿರ್ವಹಿಸಿದಂತೆ ಯಶಸ್ವಿ ಪ್ರಾಂಚೈಸಿಯನ್ನು ಮಾಡಲು ಹೊಸ ಮಾಲೀಕರಿಗೆ ಆರ್ಸಿಬಿಯನ್ನು ಮಾರಾಟ ಮಾಡಲು ಬಿಸಿಸಿಐ ಒತ್ತಾಯಿಸಬೇಕು’ ಎಂದು ಹೇಳಿದ್ದಾರೆ.
For the sake of the Sport , the IPL, the fans and even the players i think BCCI needs to enforce the Sale of RCB to a New owner who will care to build a sports franchise the way most of the other teams have done so. #tragic
— Mahesh Bhupathi (@Maheshbhupathi) April 15, 2024
ಆರ್ಸಿಬಿ ತಂಡದ ಸೋಲು ಅಭಿಮಾನಿಗಳಿಗಂತೂ ಭಾರೀ ಬೇಸರತರಿಸಿದೆ. ಅದರಲ್ಲೂ ಪಾಯಿಂಟ್ ಟೇಬಲ್ನಲ್ಲಿ ಕೊನೆಯ ಸ್ಥಾನದಲ್ಲಿ ಆರ್ಸಿಬಿ ಕಾಣಿಸಿಕೊಂಡಿದೆ. ಜೊತೆಗೆ ಕೊನೆಯ 5 ಪಂದ್ಯ ಸತತ ಸೋಲು ಕಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿನ್ನೆ ಆಡಿದ ಪಂದ್ಯದಲ್ಲೂ ಸೋಲು ಕಂಡ ಆರ್ಸಿಬಿ ತಂಡ
ಭಾರತೀಯ ಟೆನ್ನಿಸ್ ತಾರೆ ಆರ್ಸಿಬಿ ಬಗ್ಗೆ ಏನಂದ್ರು ಗೊತ್ತಾ?
ಮಹೇಶ್ ಭೂಪತಿ ಆರ್ಬಿಸಿ ಮ್ಯಾನೇಜ್ಮೆಂಟ್ ಬಗ್ಗೆ ಬಿಸಿಸಿಐಗೆ ಎನು ಹೇಳಿದ್ರು?
ಸತತ ಏಳು ಪಂದ್ಯ ಎದುರಿಸಿ ಆರು ಪಂದ್ಯದಲ್ಲಿ ಸತತ ಸೋಲು ಎಣಿಸುತ್ತಾ ಬಂದಿರುವ ಆರ್ಸಿಬಿ ವಿರುದ್ಧ ಅನೇಕರು ಕೆಂಡಕಾರುತ್ತಿದ್ದಾರೆ. ಆರ್ಸಿಬಿ ಮ್ಯಾನೇಜ್ಮೆಂಟ್ ಕುರಿತು ಬೈಗುಳದ ಸುರಿಮಳೆ ಸುರಿಸುತ್ತಿದ್ದಾರೆ.
ನಿನ್ನೆ ನಡೆದ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ಕೂಡ ಆರ್ಸಿಬಿ ಸೋಲುಂಡಿದೆ. 25 ರನ್ಗೆ ತಲೆಬಾಗಿದೆ. ಇದು ಅಭಿಮಾನಿಗಳಿಗೆ ಬೇಸರಕ್ಕೆ ಕಾರಣವಾಗಿದೆ. ಇದರ ಜೊತೆಗೆ ಹಿರಿಯ ಆಟಗಾರರು, ಕ್ರೀಡಾಭಿಮಾನಿಗಳಿಗೂ ನೋವು ತಂದಿದೆ. ಅನೇಕರು ಸಾಮಾಜಿಕ ಜಾಲತಾಣದಲ್ಲಿ ಆರ್ಸಿಬಿ ಮ್ಯಾನೇಜ್ಮೆಂಟ್ ಕುರಿತು ಬರೆದು ಹಾಕುತ್ತಿದ್ದಾರೆ. ತಂಡದ ಬದಲಾವಣೆ ಅಗತ್ಯ ಎಂಬುದನ್ನು ಸಾರುತ್ತಿದ್ದಾರೆ.
ಭಾರತೀಯ ಟೆನ್ನಿಸ್ ತಾರೆ ಏನಂದ್ರು?
ಭಾರತೀಯ ಟೆನ್ನಿಸ್ ತಾರೆ ಮಹೇಶ್ ಭೂಪತಿ ಕೂಡ ಸಾಮಾಜಿಕ ಜಾಲತಾಣದಲ್ಲಿ ಆರ್ಸಿಬಿ ಸೋಲಿನ ಬಗ್ಗೆ ಬರೆದು ಹಾಕಿದ್ದಾರೆ. ‘ಕ್ರೀಡೆ, ಐಪಿಎಲ್, ಅಭಿಮಾನಿಗಳು ಮತ್ತು ಆಟಗಾರ ಸಹ ತಮ್ಮ ಫ್ರಾಂಚೈಸಿಗಳನ್ನು ನಿರ್ವಹಿಸಿದಂತೆ ಯಶಸ್ವಿ ಪ್ರಾಂಚೈಸಿಯನ್ನು ಮಾಡಲು ಹೊಸ ಮಾಲೀಕರಿಗೆ ಆರ್ಸಿಬಿಯನ್ನು ಮಾರಾಟ ಮಾಡಲು ಬಿಸಿಸಿಐ ಒತ್ತಾಯಿಸಬೇಕು’ ಎಂದು ಹೇಳಿದ್ದಾರೆ.
For the sake of the Sport , the IPL, the fans and even the players i think BCCI needs to enforce the Sale of RCB to a New owner who will care to build a sports franchise the way most of the other teams have done so. #tragic
— Mahesh Bhupathi (@Maheshbhupathi) April 15, 2024
ಆರ್ಸಿಬಿ ತಂಡದ ಸೋಲು ಅಭಿಮಾನಿಗಳಿಗಂತೂ ಭಾರೀ ಬೇಸರತರಿಸಿದೆ. ಅದರಲ್ಲೂ ಪಾಯಿಂಟ್ ಟೇಬಲ್ನಲ್ಲಿ ಕೊನೆಯ ಸ್ಥಾನದಲ್ಲಿ ಆರ್ಸಿಬಿ ಕಾಣಿಸಿಕೊಂಡಿದೆ. ಜೊತೆಗೆ ಕೊನೆಯ 5 ಪಂದ್ಯ ಸತತ ಸೋಲು ಕಂಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ