ಆರೋಪಿಯಿಂದ ಜೈಲರ್ ಮೇಲೆ ಆರೋಪ
ಪ್ರಾಥಮಿಕ ವಿಚಾರಣೆ ನಡೆಸಿದ ಬಳಿಕ ಜೈಲರ್ ಅಮಾನತು
ಜೈಲಿನಲ್ಲಿ ಬಂಧಿಗಳಿಗೆ ಹಣ ಬೇಡಿಕೆ ಇಟ್ಟಿರುವ ಆರೋಪ
ಚಿತ್ರದುರ್ಗ: ಕರ್ತವ್ಯ ಲೋಪ ಎಸಗಿದ ಹಿನ್ನೆಲೆ ಚಿತ್ರದುರ್ಗ ಜಿಲ್ಲಾ ಬಂಧಿಖಾನೆ ಜೈಲರನ್ನು ಸಸ್ಪೆಂಡ್ ಮಾಡಲಾಗಿದೆ. ಶ್ರೀಮಂತಗೌಡ ಪಾಟೀಲ್ ಅಮಾನತ್ತಾಗಿರುವ ಜೈಲರ್.
ಕಾರಗೃಹ ಮಹಾ ನಿರ್ದೇಶಕ ಮಾಲಿನಿ ಕೃಷ್ಣಮೂರ್ತಿ ಆದೇಶ ಹೊರಡಿಸಿದ್ದಾರೆ. ಪ್ರಾಥಮಿಕ ವಿಚಾರಣೆ ನಡೆಸಿ ಅಮಾನತು ಮಾಡಿ ಆದೇಶಿಸಿದ್ದಾರೆ. ಅವರ ಆದೇಶದಂತೆ ಶ್ರೀಮಂತಗೌಡ ಪಾಟೀಲ್ ಅವರನ್ನು ಸಸ್ಪೆಂಡ್ ಮಾಡಿದ್ದಾರೆ.
ಸಂದರ್ಶನದ ವೇಳೆ ಜೈಲಿನಲ್ಲಿ ಬಂಧಿಗಳಿಗೆ ಹಣ ಬೇಡಿಕೆ ಇಟ್ಟಿರುವ ಆರೋಪ ಹಿನ್ನೆಲೆ ಶ್ರೀಮಂತಗೌಡ ಪಾಟೀಲ್ ಅಮಾನತುಗೊಳಿಸಲಾಗಿದೆ. ಜೈಲಿನಲ್ಲಿ ಗಲಾಟೆ ನಡೆದ ವೇಳೆ ಶಿಸ್ತು ಕ್ರಮ ಜರುಗಿಸಿಲ್ಲ ಎಂಬ ಆರೋಪದಡಿ ಕೂಡ ಅಮಾನತು ಮಾಡಲಾಗಿದೆ.
ಇದನ್ನೂ ಓದಿ: ಮಕ್ಕಳಾಗಿಲ್ಲ ಎಂದು ಗಂಡನ ಮನೆಯವರಿಂದ ಕಿರುಕುಳ ಆರೋಪ.. ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಜೈಲಿನಲ್ಲಿ ಕೆಲ ಆರೋಪಿಗಳು ಚಂದ್ರಪ್ಪ ಎಂಬಾತನ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆ ನಡೆಸಿದವರ ವಿರುದ್ದ ಕ್ರಮ ಜರುಗಿಸಿಲ್ಲ ಎಂದು ಆರೋಪಿ ಚಂದ್ರಪ್ಪ ಆರೋಪ ಮಾಡಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ಕತ್ಯವ್ಯಲೋಪ ಎಸಗಿರುವ ಹಿನ್ನೆಲೆ ಶ್ರೀಮಂತಗೌಡ ಪಾಟೀಲ್ ಸಸ್ಪೆಂಡ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಆರೋಪಿಯಿಂದ ಜೈಲರ್ ಮೇಲೆ ಆರೋಪ
ಪ್ರಾಥಮಿಕ ವಿಚಾರಣೆ ನಡೆಸಿದ ಬಳಿಕ ಜೈಲರ್ ಅಮಾನತು
ಜೈಲಿನಲ್ಲಿ ಬಂಧಿಗಳಿಗೆ ಹಣ ಬೇಡಿಕೆ ಇಟ್ಟಿರುವ ಆರೋಪ
ಚಿತ್ರದುರ್ಗ: ಕರ್ತವ್ಯ ಲೋಪ ಎಸಗಿದ ಹಿನ್ನೆಲೆ ಚಿತ್ರದುರ್ಗ ಜಿಲ್ಲಾ ಬಂಧಿಖಾನೆ ಜೈಲರನ್ನು ಸಸ್ಪೆಂಡ್ ಮಾಡಲಾಗಿದೆ. ಶ್ರೀಮಂತಗೌಡ ಪಾಟೀಲ್ ಅಮಾನತ್ತಾಗಿರುವ ಜೈಲರ್.
ಕಾರಗೃಹ ಮಹಾ ನಿರ್ದೇಶಕ ಮಾಲಿನಿ ಕೃಷ್ಣಮೂರ್ತಿ ಆದೇಶ ಹೊರಡಿಸಿದ್ದಾರೆ. ಪ್ರಾಥಮಿಕ ವಿಚಾರಣೆ ನಡೆಸಿ ಅಮಾನತು ಮಾಡಿ ಆದೇಶಿಸಿದ್ದಾರೆ. ಅವರ ಆದೇಶದಂತೆ ಶ್ರೀಮಂತಗೌಡ ಪಾಟೀಲ್ ಅವರನ್ನು ಸಸ್ಪೆಂಡ್ ಮಾಡಿದ್ದಾರೆ.
ಸಂದರ್ಶನದ ವೇಳೆ ಜೈಲಿನಲ್ಲಿ ಬಂಧಿಗಳಿಗೆ ಹಣ ಬೇಡಿಕೆ ಇಟ್ಟಿರುವ ಆರೋಪ ಹಿನ್ನೆಲೆ ಶ್ರೀಮಂತಗೌಡ ಪಾಟೀಲ್ ಅಮಾನತುಗೊಳಿಸಲಾಗಿದೆ. ಜೈಲಿನಲ್ಲಿ ಗಲಾಟೆ ನಡೆದ ವೇಳೆ ಶಿಸ್ತು ಕ್ರಮ ಜರುಗಿಸಿಲ್ಲ ಎಂಬ ಆರೋಪದಡಿ ಕೂಡ ಅಮಾನತು ಮಾಡಲಾಗಿದೆ.
ಇದನ್ನೂ ಓದಿ: ಮಕ್ಕಳಾಗಿಲ್ಲ ಎಂದು ಗಂಡನ ಮನೆಯವರಿಂದ ಕಿರುಕುಳ ಆರೋಪ.. ಆತ್ಮಹತ್ಯೆ ಮಾಡಿಕೊಂಡ ಮಹಿಳೆ
ಜೈಲಿನಲ್ಲಿ ಕೆಲ ಆರೋಪಿಗಳು ಚಂದ್ರಪ್ಪ ಎಂಬಾತನ ಮೇಲೆ ಹಲ್ಲೆ ನಡೆಸಿದ್ದರು. ಹಲ್ಲೆ ನಡೆಸಿದವರ ವಿರುದ್ದ ಕ್ರಮ ಜರುಗಿಸಿಲ್ಲ ಎಂದು ಆರೋಪಿ ಚಂದ್ರಪ್ಪ ಆರೋಪ ಮಾಡಿದ್ದರು. ಹೀಗಾಗಿ ಈ ಪ್ರಕರಣದಲ್ಲಿ ಕತ್ಯವ್ಯಲೋಪ ಎಸಗಿರುವ ಹಿನ್ನೆಲೆ ಶ್ರೀಮಂತಗೌಡ ಪಾಟೀಲ್ ಸಸ್ಪೆಂಡ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ