ಇಂಡಿಯನ್ ಪ್ರೀಮಿಯರ್ ಲೀಗ್ ಬೆನ್ನಲ್ಲೇ ನಡೆಯಲಿದೆ ಟಿ20 ವಿಶ್ವಕಪ್
ಟಿ20 ವಿಶ್ವಕಪ್ನಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ ರೋಹಿತ್ ಶರ್ಮಾ!
ರೋಹಿತ್ ಶರ್ಮಾ ಬಳಿಕ ಟೀಮ್ ಇಂಡಿಯಾದ ಕ್ಯಾಪ್ಟನ್ ಯಾರು ಗೊತ್ತಾ?
ಟೀಮ್ ಇಂಡಿಯಾದ ದಿಗ್ಗಜ ಹರ್ಭಜನ್ ಸಿಂಗ್. ಇವರು ಭಾರತಕ್ಕಾಗಿ ಹಲವು ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಎಲ್ಲಾ ಮಾದರಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರೋ ಭಜ್ಜಿ ಈಗ ಕಾಮೆಂಟರಿ ಮೂಲಕ ಭಾರತ ತಂಡಕ್ಕೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ಐಪಿಎಲ್ ಬೆನ್ನಲ್ಲೇ ಟಿ20 ವಿಶ್ವಕಪ್ ನಡೆಯಲಿದ್ದು, ಈ ಮಧ್ಯೆ ರೋಹಿತ್ ಶರ್ಮಾ ಬಳಿಕ ಟೀಮ್ ಇಂಡಿಯಾದ ಕ್ಯಾಪ್ಟನ್ ಯಾರು? ಎಂಬ ವಿಚಾರವನ್ನು ಹರ್ಭಜನ್ ಸಿಂಗ್ ಮತ್ತೆ ಮುನ್ನಲೆಗೆ ತಂದಿದ್ದಾರೆ.
ರೋಹಿತ್ ಶರ್ಮಾ ಬಳಿಕ ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಅಥವಾ ಜಸ್ಪ್ರೀತ್ ಬುಮ್ರಾ ಭಾರತ ತಂಡದ ಕ್ಯಾಪ್ಟನ್ ಎಂಬ ಚರ್ಚೆ ನಡೆಯುತ್ತಿತ್ತು. ಅಷ್ಟೇ ಅಲ್ಲದೇ ಸುರೇಶ್ ರೈನಾ ಕೂಡ ಭಾರತ ಕ್ರಿಕೆಟ್ ತಂಡದ 24ರ ಹರೆಯದ ಶುಭ್ಮನ್ ಗಿಲ್ ರೋಹಿತ್ ಬಳಿಕ ನಾಯಕನಾಗಬಹುದು ಎಂದಿದ್ದರು. ಈ ಹೊತ್ತಲ್ಲೇ ಹರ್ಭಜನ್ ಸಿಂಗ್ ಭಾರತ ತಂಡದ ನಾಯಕ ಈ ಪ್ಲೇಯರ್ ಆಗಬೇಕು ಎಂದಿದ್ದಾರೆ.
ಇತ್ತೀಚೆಗೆ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ರಾಜಸ್ಥಾನ್ ತಂಡವು ಗೆದ್ದು ಬೀಗಿತ್ತು. ಇದಕ್ಕೆ ಕಾರಣ ಕ್ಯಾಪ್ಟನ್ ಸಂಜು ಸ್ಯಾಮ್ಸನ್. ಈ ಬಗ್ಗೆ ಮಾತಾಡಿರೋ ಹರ್ಭಜನ್ ಸಿಂಗ್, ಜೈಸ್ವಾಲ್ ಬ್ಯಾಟಿಂಗ್ ಅದ್ಭುತ. ಸಂಜು ಸ್ಯಾಮ್ಸನ್ ಬಗ್ಗೆ ನಾವು ಮಾತಾಡೋ ಹಾಗೇ ಇಲ್ಲ. ಸಂಜು ಸ್ಯಾಮ್ಸನ್ ಟಿ20 ವಿಶ್ವಕಪ್ಗಾಗಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ಆಗಬೇಕು. ಜತೆಗೆ ಇವರನ್ನು ರೋಹಿತ್ ಶರ್ಮಾ ಬಳಿಕ ಭಾರತ ತಂಡದ ಕ್ಯಾಪ್ಟನ್ ಆಗಿ ಬೆಳೆಸಬೇಕು ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಇಂಡಿಯನ್ ಪ್ರೀಮಿಯರ್ ಲೀಗ್ ಬೆನ್ನಲ್ಲೇ ನಡೆಯಲಿದೆ ಟಿ20 ವಿಶ್ವಕಪ್
ಟಿ20 ವಿಶ್ವಕಪ್ನಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ ರೋಹಿತ್ ಶರ್ಮಾ!
ರೋಹಿತ್ ಶರ್ಮಾ ಬಳಿಕ ಟೀಮ್ ಇಂಡಿಯಾದ ಕ್ಯಾಪ್ಟನ್ ಯಾರು ಗೊತ್ತಾ?
ಟೀಮ್ ಇಂಡಿಯಾದ ದಿಗ್ಗಜ ಹರ್ಭಜನ್ ಸಿಂಗ್. ಇವರು ಭಾರತಕ್ಕಾಗಿ ಹಲವು ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಎಲ್ಲಾ ಮಾದರಿ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರೋ ಭಜ್ಜಿ ಈಗ ಕಾಮೆಂಟರಿ ಮೂಲಕ ಭಾರತ ತಂಡಕ್ಕೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುತ್ತಿದ್ದಾರೆ. ಐಪಿಎಲ್ ಬೆನ್ನಲ್ಲೇ ಟಿ20 ವಿಶ್ವಕಪ್ ನಡೆಯಲಿದ್ದು, ಈ ಮಧ್ಯೆ ರೋಹಿತ್ ಶರ್ಮಾ ಬಳಿಕ ಟೀಮ್ ಇಂಡಿಯಾದ ಕ್ಯಾಪ್ಟನ್ ಯಾರು? ಎಂಬ ವಿಚಾರವನ್ನು ಹರ್ಭಜನ್ ಸಿಂಗ್ ಮತ್ತೆ ಮುನ್ನಲೆಗೆ ತಂದಿದ್ದಾರೆ.
ರೋಹಿತ್ ಶರ್ಮಾ ಬಳಿಕ ಹಾರ್ದಿಕ್ ಪಾಂಡ್ಯ, ಕೆಎಲ್ ರಾಹುಲ್ ಅಥವಾ ಜಸ್ಪ್ರೀತ್ ಬುಮ್ರಾ ಭಾರತ ತಂಡದ ಕ್ಯಾಪ್ಟನ್ ಎಂಬ ಚರ್ಚೆ ನಡೆಯುತ್ತಿತ್ತು. ಅಷ್ಟೇ ಅಲ್ಲದೇ ಸುರೇಶ್ ರೈನಾ ಕೂಡ ಭಾರತ ಕ್ರಿಕೆಟ್ ತಂಡದ 24ರ ಹರೆಯದ ಶುಭ್ಮನ್ ಗಿಲ್ ರೋಹಿತ್ ಬಳಿಕ ನಾಯಕನಾಗಬಹುದು ಎಂದಿದ್ದರು. ಈ ಹೊತ್ತಲ್ಲೇ ಹರ್ಭಜನ್ ಸಿಂಗ್ ಭಾರತ ತಂಡದ ನಾಯಕ ಈ ಪ್ಲೇಯರ್ ಆಗಬೇಕು ಎಂದಿದ್ದಾರೆ.
ಇತ್ತೀಚೆಗೆ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ರೋಚಕ ಪಂದ್ಯದಲ್ಲಿ ರಾಜಸ್ಥಾನ್ ತಂಡವು ಗೆದ್ದು ಬೀಗಿತ್ತು. ಇದಕ್ಕೆ ಕಾರಣ ಕ್ಯಾಪ್ಟನ್ ಸಂಜು ಸ್ಯಾಮ್ಸನ್. ಈ ಬಗ್ಗೆ ಮಾತಾಡಿರೋ ಹರ್ಭಜನ್ ಸಿಂಗ್, ಜೈಸ್ವಾಲ್ ಬ್ಯಾಟಿಂಗ್ ಅದ್ಭುತ. ಸಂಜು ಸ್ಯಾಮ್ಸನ್ ಬಗ್ಗೆ ನಾವು ಮಾತಾಡೋ ಹಾಗೇ ಇಲ್ಲ. ಸಂಜು ಸ್ಯಾಮ್ಸನ್ ಟಿ20 ವಿಶ್ವಕಪ್ಗಾಗಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟರ್ ಆಗಬೇಕು. ಜತೆಗೆ ಇವರನ್ನು ರೋಹಿತ್ ಶರ್ಮಾ ಬಳಿಕ ಭಾರತ ತಂಡದ ಕ್ಯಾಪ್ಟನ್ ಆಗಿ ಬೆಳೆಸಬೇಕು ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ