ಸ್ಯಾಂಡಲ್ವುಡ್ ಗಣ್ಯರಿಗೆ ಮದುವೆ ಆಮಂತ್ರಣ ನೀಡಿದ ಸ್ಟಾರ್ ಜೋಡಿ
ಚಿಕ್ಕಮಗಳೂರಿನ ಕಳಸದಲ್ಲಿ ಮಾನ್ವಿತಾ ಮತ್ತು ಅರುಣ್ ಮದುವೆ ಫಿಕ್ಸ್
ಕೆಂಡ ಸಂಪಿಗೆಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದ ಮುದ್ದು ಪೋರಿ
ಕೆಂಡ ಸಂಪಿಗೆಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟು ‘ಟಗರು’ ಪೋರಿ ಇವರು. ಇದೇ ಟಗರು ಪುಟ್ಟಿ ಎನಿಸಿಕೊಂಡ ಕನ್ನಡದ ಮುದ್ದು ನಟಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದರೆ. ಕೆಂಡ ಸಂಪಿಗೆಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟ ಮುದ್ದು ಮೊಗದ ಚೆಲುವೆ ನಮ್ಮ ಮಾನ್ವಿತಾ ಕಾಮತ್.
ಇದನ್ನೂ ಓದಿ: ‘ಯಾವ ದೊಣ್ಣೆ ನಾಯಕ ನೀನು.. ಪ್ರಧಾನ ಮಂತ್ರಿಯೋ, ಸ್ಟೇಷನ್ ಮಾಸ್ಟರೋ’- ನಟ ಪ್ರಕಾಶ್ ರಾಜ್
ಅದಾದ ಮೇಲೆ ಈ ನಟಿಗೆ ಬಿಗ್ ಬ್ರೇಕ್ ತಂದುಕೊಟ್ಟಿದ್ದು, ಶಿವರಾಜ್ಕುಮಾರ್ ನಟನೆಯ ಟಗರು ಸಿನಿಮಾ. ಆನಂತರ ಟಗರು ಪೋರಿ ಅಂತಾನೇ ಫೇಮಸ್ ಆದ್ರು ನಟಿ ಮಾನ್ವಿತಾ ಕಾಮತ್. ಇದೀಗ ಈ ನಟಿ ಹೊಸ ಜೀವನಕ್ಕೆ ಕಾಲಿಡ್ತಿದ್ದಾರೆ.
ಮೇ 1ರಂದು ಚಿಕ್ಕಮಗಳೂರಿನ ಕಳಸದಲ್ಲಿ ಮಾನ್ವಿತಾ ಮತ್ತು ಅರುಣ್ ಮದುವೆ ನಡೆಯಲಿದ್ದು, ಅದಕ್ಕೂ ಮುಂಚೆ ಕೊಂಕಣಿ ಸಂಪ್ರದಾಯದಂತೆ ಕೆಲವು ಶಾಸ್ತ್ರಗಳು ಜರುಗಲಿದೆ.
ಅಮ್ಮನ ಆಸೆಯಂತೆ ಅಮ್ಮನೇ ನಿಶ್ಚಯ ಮಾಡಿದ್ದ ವಧುವಿನ ಜೊತೆ ವೈವಾಹಿಕ ಬದುಕು ಆರಂಭಿಸ್ತಿದ್ದಾರೆ ಈ ಮಿಲ್ಕಿ ಬ್ಯೂಟಿ. ಇನ್ನು, ಮಾನ್ವಿತಾ ಕೈ ಹಿಡಿಯುತ್ತಿರುವ ಅರುಣ್ ಕುಮಾರ್ ಮೂಲತಃ ಮೈಸೂರಿನವರಾಗಿದ್ದು, ಮ್ಯೂಸಿಕ್ ಪ್ರೊಡಸ್ಯೂರ್ ಆಗಿ ಕೆಲಸ ಮಾಡ್ತಿದ್ದಾರೆ. ಈಗಾಗಲೇ ಸ್ಯಾಂಡಲ್ವುಡ್ ಗಣ್ಯರಿಗೆ ಈ ಸ್ಟಾರ್ ಜೋಡಿ ಮದುವೆ ಆಮಂತ್ರಣ ನೀಡ್ತಿದೆ. ಅಶ್ವಿನಿ ಪುನೀತ್ ರಾಜ್ಕುಮಾರ್, ನಾಗತಿಹಳ್ಳಿ ಚಂದ್ರಶೇಖರ್ ಸೇರಿ ಸಾಕಷ್ಟು ಮಂದಿಗೆ ಆಮಂತ್ರಣ ನೀಡಿ ಮದುವೆಗೆ ಆಹ್ವಾನ ನೀಡಿದೆ. ನಮ್ಮ ಕಡೆಯಿಂದಲೂ ಈ ಬ್ಯೂಟಿಫುಲ್ ಕಪಲ್ಸ್ಗೆ ಬೆಸ್ಟ್ ವಿಶಸ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಸ್ಯಾಂಡಲ್ವುಡ್ ಗಣ್ಯರಿಗೆ ಮದುವೆ ಆಮಂತ್ರಣ ನೀಡಿದ ಸ್ಟಾರ್ ಜೋಡಿ
ಚಿಕ್ಕಮಗಳೂರಿನ ಕಳಸದಲ್ಲಿ ಮಾನ್ವಿತಾ ಮತ್ತು ಅರುಣ್ ಮದುವೆ ಫಿಕ್ಸ್
ಕೆಂಡ ಸಂಪಿಗೆಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟಿದ್ದ ಮುದ್ದು ಪೋರಿ
ಕೆಂಡ ಸಂಪಿಗೆಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟು ‘ಟಗರು’ ಪೋರಿ ಇವರು. ಇದೇ ಟಗರು ಪುಟ್ಟಿ ಎನಿಸಿಕೊಂಡ ಕನ್ನಡದ ಮುದ್ದು ನಟಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದರೆ. ಕೆಂಡ ಸಂಪಿಗೆಯಾಗಿ ಸ್ಯಾಂಡಲ್ವುಡ್ಗೆ ಎಂಟ್ರಿಕೊಟ್ಟ ಮುದ್ದು ಮೊಗದ ಚೆಲುವೆ ನಮ್ಮ ಮಾನ್ವಿತಾ ಕಾಮತ್.
ಇದನ್ನೂ ಓದಿ: ‘ಯಾವ ದೊಣ್ಣೆ ನಾಯಕ ನೀನು.. ಪ್ರಧಾನ ಮಂತ್ರಿಯೋ, ಸ್ಟೇಷನ್ ಮಾಸ್ಟರೋ’- ನಟ ಪ್ರಕಾಶ್ ರಾಜ್
ಅದಾದ ಮೇಲೆ ಈ ನಟಿಗೆ ಬಿಗ್ ಬ್ರೇಕ್ ತಂದುಕೊಟ್ಟಿದ್ದು, ಶಿವರಾಜ್ಕುಮಾರ್ ನಟನೆಯ ಟಗರು ಸಿನಿಮಾ. ಆನಂತರ ಟಗರು ಪೋರಿ ಅಂತಾನೇ ಫೇಮಸ್ ಆದ್ರು ನಟಿ ಮಾನ್ವಿತಾ ಕಾಮತ್. ಇದೀಗ ಈ ನಟಿ ಹೊಸ ಜೀವನಕ್ಕೆ ಕಾಲಿಡ್ತಿದ್ದಾರೆ.
ಮೇ 1ರಂದು ಚಿಕ್ಕಮಗಳೂರಿನ ಕಳಸದಲ್ಲಿ ಮಾನ್ವಿತಾ ಮತ್ತು ಅರುಣ್ ಮದುವೆ ನಡೆಯಲಿದ್ದು, ಅದಕ್ಕೂ ಮುಂಚೆ ಕೊಂಕಣಿ ಸಂಪ್ರದಾಯದಂತೆ ಕೆಲವು ಶಾಸ್ತ್ರಗಳು ಜರುಗಲಿದೆ.
ಅಮ್ಮನ ಆಸೆಯಂತೆ ಅಮ್ಮನೇ ನಿಶ್ಚಯ ಮಾಡಿದ್ದ ವಧುವಿನ ಜೊತೆ ವೈವಾಹಿಕ ಬದುಕು ಆರಂಭಿಸ್ತಿದ್ದಾರೆ ಈ ಮಿಲ್ಕಿ ಬ್ಯೂಟಿ. ಇನ್ನು, ಮಾನ್ವಿತಾ ಕೈ ಹಿಡಿಯುತ್ತಿರುವ ಅರುಣ್ ಕುಮಾರ್ ಮೂಲತಃ ಮೈಸೂರಿನವರಾಗಿದ್ದು, ಮ್ಯೂಸಿಕ್ ಪ್ರೊಡಸ್ಯೂರ್ ಆಗಿ ಕೆಲಸ ಮಾಡ್ತಿದ್ದಾರೆ. ಈಗಾಗಲೇ ಸ್ಯಾಂಡಲ್ವುಡ್ ಗಣ್ಯರಿಗೆ ಈ ಸ್ಟಾರ್ ಜೋಡಿ ಮದುವೆ ಆಮಂತ್ರಣ ನೀಡ್ತಿದೆ. ಅಶ್ವಿನಿ ಪುನೀತ್ ರಾಜ್ಕುಮಾರ್, ನಾಗತಿಹಳ್ಳಿ ಚಂದ್ರಶೇಖರ್ ಸೇರಿ ಸಾಕಷ್ಟು ಮಂದಿಗೆ ಆಮಂತ್ರಣ ನೀಡಿ ಮದುವೆಗೆ ಆಹ್ವಾನ ನೀಡಿದೆ. ನಮ್ಮ ಕಡೆಯಿಂದಲೂ ಈ ಬ್ಯೂಟಿಫುಲ್ ಕಪಲ್ಸ್ಗೆ ಬೆಸ್ಟ್ ವಿಶಸ್.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ