ಎ1 ಆರೋಪಿ ಆಗಿದ್ದೀರಾ ಎನ್ನುವ ಪ್ರಶ್ನೆಗೆ ರೇವಣ್ಣ ಏನು ಹೇಳಿದರು?
ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಕುರಿತು ಎಚ್ಡಿ ರೇವಣ್ಣ ಟಾಕ್
ದೇವೇಗೌಡರ ಕುಟುಂಬದ ಮೇಲೆ 40 ವರ್ಷದಿಂದ ಈ ರೀತಿ ಮಾಡ್ತಿದ್ದಾರೆ
ಬೆಂಗಳೂರು: ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದು ಸಂಸದ ಪ್ರಜ್ವಲ್ ರೇವಣ್ಣರನ್ನು ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಲೈಂಗಿಕ ದೌರ್ಜನ್ಯದ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಸದ್ಯ ಜರ್ಮನಿಯಲ್ಲಿದ್ದು ಈ ಬಗ್ಗೆ ಅವರ ತಂದೆ ಹಾಗೂ ಮಾಜಿ ಸಚಿವ ಹೆಚ್.ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಬೆಂಗಳೂರಿನ ಪದ್ಮನಾಭನಗರದಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು, ನಾನು ಯಾವುದರ ಬಗ್ಗೆನೂ ಮಾತನಾಡಲ್ಲ. ಕೇಸ್ ಅನ್ನು ಎಸ್ಐಟಿಗೆ ಕೊಟ್ಟಿದ್ದರಿಂದ ಅವರಿಗೆ ಮುಜುಗರ ಆಗುವ ರೀತಿ ಮಾತನಾಡಲ್ಲ. ನೀವು ಕೂಡ ಎ1 ಆರೋಪಿ ಆಗಿದ್ದೀರಾ ಎನ್ನುವ ಪ್ರಶ್ನೆಗೆ ಅದೆಲ್ಲ ರಾಜಕೀಯ. ಈಗ ಸರ್ಕಾರ ಅವರಲ್ಲಿದೆ. ಅವರು ಏನು ಬೇಕಾದರೂ ಮಾಡ್ತಾರೆ. ಇದೊಂದು ದೊಡ್ಡ ಲೈಂಗಿಕ ಹಗರಣ ಎಂದರೆ ಅದಕ್ಕೆಲ್ಲ ತನಿಖೆ ಮಾಡಲಿ ಎಂದು ರೇವಣ್ಣ ಹೇಳಿದ್ದಾರೆ.
ಇದನ್ನೂ ಓದಿ: 3ಕ್ಕೂ ಆ ಒಂದೇ ಒಂದು ಸಿಕ್ಸರ್ನಿಂದ ಫಿನಿಶಿಂಗ್ ಕೊಟ್ಟ RCBಯ ವಿಲ್ ಜಾಕ್ಸ್.. ವಿರಾಟ್ ಹ್ಯಾಪಿ
ಇದನ್ನೂ ಓದಿ: ಕಾಲ ಕೆಟ್ಟೊಯ್ತು.. ಪ್ರೀತಿ ಮಾಡಿ ಅತ್ತೆಯನ್ನೇ ಮದುವೆಯಾದ ಅಳಿಯ.. ಮಾವನ ಒಪ್ಪಿಗೆ?
ಪ್ರಜ್ವಲ್ ಮಾಮೂಲಿ ಜರ್ಮನಿಗೆ ಹೋಗಬೇಕಾಗಿತ್ತು ಹೋಗಿದ್ದಾನೆ. ಇವರೇನು ಎಫ್ಐಆರ್ ಹಾಕುತ್ತಾರೆಂದು ಅವನಿಗೇನು ಗೊತ್ತಿತ್ತಾ?. ಎಸ್ಐಟಿ ಮಾಡ್ತಾರಾಂತ ಗೊತ್ತಿತ್ತಾ?. ತನಿಖೆಗೆ ಕರೆದಾಗ ಬರ್ತಾನೆ ಅಷ್ಟೇ. ಅವರು ಯಾವಾಗ ಬರ್ತಾರಾ ಅಂತ ಹೇಳಲ್ಲ. ತನಿಖೆಗೆ ಕರೆದಾಗ ಬರುತ್ತಾರೆ. ಇದೊಂದು ಅಲ್ಲ, ದೇವೇಗೌಡರ ಕುಟುಂಬದ ಮೇಲೆ 40 ವರ್ಷದಿಂದ ಸಿಓಡಿ, ಲೋಕಯುಕ್ತ ಸೇರಿ ಎಲ್ಲ ತನಿಖೆ ಎದುರಿಸಿಕೊಂಡು ಬಂದಿದ್ದೇವೆ. ದೇವೇಗೌಡರ ಬಳಿ ಪ್ರಜ್ವಲ್ ಅವರ ವಿಷ್ಯ ಮಾತಾಡಿಲ್ಲ. ಕಾನೂನು ರೀತಿ ಏನಿದೆ, ಅದನ್ನು ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಿ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಎ1 ಆರೋಪಿ ಆಗಿದ್ದೀರಾ ಎನ್ನುವ ಪ್ರಶ್ನೆಗೆ ರೇವಣ್ಣ ಏನು ಹೇಳಿದರು?
ಹಾಸನ ಅಶ್ಲೀಲ ವಿಡಿಯೋ ಪ್ರಕರಣ ಕುರಿತು ಎಚ್ಡಿ ರೇವಣ್ಣ ಟಾಕ್
ದೇವೇಗೌಡರ ಕುಟುಂಬದ ಮೇಲೆ 40 ವರ್ಷದಿಂದ ಈ ರೀತಿ ಮಾಡ್ತಿದ್ದಾರೆ
ಬೆಂಗಳೂರು: ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದು ಸಂಸದ ಪ್ರಜ್ವಲ್ ರೇವಣ್ಣರನ್ನು ಜೆಡಿಎಸ್ ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ಲೈಂಗಿಕ ದೌರ್ಜನ್ಯದ ಪ್ರಕರಣದ ಆರೋಪಿ ಪ್ರಜ್ವಲ್ ರೇವಣ್ಣ ಸದ್ಯ ಜರ್ಮನಿಯಲ್ಲಿದ್ದು ಈ ಬಗ್ಗೆ ಅವರ ತಂದೆ ಹಾಗೂ ಮಾಜಿ ಸಚಿವ ಹೆಚ್.ಡಿ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಬೆಂಗಳೂರಿನ ಪದ್ಮನಾಭನಗರದಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್.ಡಿ ರೇವಣ್ಣ ಅವರು, ನಾನು ಯಾವುದರ ಬಗ್ಗೆನೂ ಮಾತನಾಡಲ್ಲ. ಕೇಸ್ ಅನ್ನು ಎಸ್ಐಟಿಗೆ ಕೊಟ್ಟಿದ್ದರಿಂದ ಅವರಿಗೆ ಮುಜುಗರ ಆಗುವ ರೀತಿ ಮಾತನಾಡಲ್ಲ. ನೀವು ಕೂಡ ಎ1 ಆರೋಪಿ ಆಗಿದ್ದೀರಾ ಎನ್ನುವ ಪ್ರಶ್ನೆಗೆ ಅದೆಲ್ಲ ರಾಜಕೀಯ. ಈಗ ಸರ್ಕಾರ ಅವರಲ್ಲಿದೆ. ಅವರು ಏನು ಬೇಕಾದರೂ ಮಾಡ್ತಾರೆ. ಇದೊಂದು ದೊಡ್ಡ ಲೈಂಗಿಕ ಹಗರಣ ಎಂದರೆ ಅದಕ್ಕೆಲ್ಲ ತನಿಖೆ ಮಾಡಲಿ ಎಂದು ರೇವಣ್ಣ ಹೇಳಿದ್ದಾರೆ.
ಇದನ್ನೂ ಓದಿ: 3ಕ್ಕೂ ಆ ಒಂದೇ ಒಂದು ಸಿಕ್ಸರ್ನಿಂದ ಫಿನಿಶಿಂಗ್ ಕೊಟ್ಟ RCBಯ ವಿಲ್ ಜಾಕ್ಸ್.. ವಿರಾಟ್ ಹ್ಯಾಪಿ
ಇದನ್ನೂ ಓದಿ: ಕಾಲ ಕೆಟ್ಟೊಯ್ತು.. ಪ್ರೀತಿ ಮಾಡಿ ಅತ್ತೆಯನ್ನೇ ಮದುವೆಯಾದ ಅಳಿಯ.. ಮಾವನ ಒಪ್ಪಿಗೆ?
ಪ್ರಜ್ವಲ್ ಮಾಮೂಲಿ ಜರ್ಮನಿಗೆ ಹೋಗಬೇಕಾಗಿತ್ತು ಹೋಗಿದ್ದಾನೆ. ಇವರೇನು ಎಫ್ಐಆರ್ ಹಾಕುತ್ತಾರೆಂದು ಅವನಿಗೇನು ಗೊತ್ತಿತ್ತಾ?. ಎಸ್ಐಟಿ ಮಾಡ್ತಾರಾಂತ ಗೊತ್ತಿತ್ತಾ?. ತನಿಖೆಗೆ ಕರೆದಾಗ ಬರ್ತಾನೆ ಅಷ್ಟೇ. ಅವರು ಯಾವಾಗ ಬರ್ತಾರಾ ಅಂತ ಹೇಳಲ್ಲ. ತನಿಖೆಗೆ ಕರೆದಾಗ ಬರುತ್ತಾರೆ. ಇದೊಂದು ಅಲ್ಲ, ದೇವೇಗೌಡರ ಕುಟುಂಬದ ಮೇಲೆ 40 ವರ್ಷದಿಂದ ಸಿಓಡಿ, ಲೋಕಯುಕ್ತ ಸೇರಿ ಎಲ್ಲ ತನಿಖೆ ಎದುರಿಸಿಕೊಂಡು ಬಂದಿದ್ದೇವೆ. ದೇವೇಗೌಡರ ಬಳಿ ಪ್ರಜ್ವಲ್ ಅವರ ವಿಷ್ಯ ಮಾತಾಡಿಲ್ಲ. ಕಾನೂನು ರೀತಿ ಏನಿದೆ, ಅದನ್ನು ಕಾನೂನು ರೀತಿ ಕ್ರಮ ತೆಗೆದುಕೊಳ್ಳಲಿ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ