ನಟ ಕಿಚ್ಚ ಸುದೀಪ್ ವಿರುದ್ಧ ನಿರ್ಮಾಪಕ ಫುಲ್ ಗರಂ
ಸಾಲು ಆರೋಪಕ್ಕೆ ‘ಮಾಣಿಕ್ಯ’ನ ಖಡಕ್ ಉತ್ತರ ಏನು?
ಕಿಚ್ಚನ ಮೇಲೆ ತಿರುಗಿಬಿದ್ದ ನಿರ್ಮಾಪಕ ಹೇಳಿದ್ದೇನು..?
ಸ್ಯಾಂಡಲ್ವುಡ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿರುದ್ಧ ನಿರ್ಮಾಪಕ ಮತ್ತು ವಿತರಕ ಎಮ್.ಎನ್ ಕುಮಾರ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಇತ್ತೀಚೆಗೆ ನನಗೆ ಕಾಲ್ ಶೀಟ್ ಕೊಡುತ್ತೇನೆ ಎಂದು ಹೇಳಿ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದು ಸಾಲು ಸಾಲು ಆರೋಪ ಮಾಡಿದ್ದರು.
ಈ ಬಗ್ಗೆ ನಟ ಕಿಚ್ಚ ಸುದೀಪ್ ಟ್ವೀಟ್ ಮಾಡುವ ಮೂಲಕ ಪರೋಕ್ಷವಾಗಿ ಉತ್ತರ ನೀಡಿದ್ದರು. ‘‘ನನ್ನ ಒಳ್ಳೆಯತನ ದುರುಪಯೋಗ ಆಗದಿರಲಿ, ಅದನ್ನ ಯಾರೂ ಕೂಡ ತಮ್ಮ ಇಷ್ಟಗಳಿಗೆ ಉಪಯೋಗಿಸಿಕೊಳ್ಳದಿರಲಿ. ನೀವು ನಿಯತ್ತಿನಿಂದ ಇದ್ದರೆ, ನನ್ನ ಈ ಒಳ್ಳೆಯತನ ಹೆಚ್ಚಾಗಿ ಹೊಳೆಯುತ್ತದೆ. ಯಾವತ್ತಿದ್ದರೂ ವಿನಮ್ರತೆ ಇಂದ ಬದುಕಿ’’ ಎಂದು ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ. ನಟ ಕಿಚ್ಚ ಸುದೀಪ್ ಮಾಡಿದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಸಹ ಆಗಿತ್ತು.
ಇದೀಗ ಈ ವಿಚಾರ ಮುಂದಿನ ಹಂತ ತಲುಪುವ ಸಾಧ್ಯತೆ ಇದೆ. ಇನ್ನು ಈ ಕುರಿತು ನ್ಯೂಸ್ಫಸ್ಟ್ಗೆ ಪ್ರತಿಕ್ರಿಯೆ ನೀಡಿದ ಎಮ್.ಎನ್.ಕುಮಾರ್ ಅವರು, ಇಂದು ಈ ಸಂಬಂಧ ನಿರ್ಮಾಪಕ ಸಂಘದಲ್ಲಿ ಸಭೆ ಮಾಡಲಿದ್ದೇವೆ. ಈ ಬಗ್ಗೆ ನಿರ್ಮಾಪಕ ಸಂಘ ಸಲಹೆ ಕೇಳಿ ಮುಂದುವರೆಯುದಾಗಿ ಎಮ್.ಎನ್.ಕುಮಾರ್ ನ್ಯೂಸ್ಫಸ್ಟ್ಗೆ ತಿಳಿಸಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ
ನಟ ಕಿಚ್ಚ ಸುದೀಪ್ ವಿರುದ್ಧ ನಿರ್ಮಾಪಕ ಫುಲ್ ಗರಂ
ಸಾಲು ಆರೋಪಕ್ಕೆ ‘ಮಾಣಿಕ್ಯ’ನ ಖಡಕ್ ಉತ್ತರ ಏನು?
ಕಿಚ್ಚನ ಮೇಲೆ ತಿರುಗಿಬಿದ್ದ ನಿರ್ಮಾಪಕ ಹೇಳಿದ್ದೇನು..?
ಸ್ಯಾಂಡಲ್ವುಡ್ ನಟ, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿರುದ್ಧ ನಿರ್ಮಾಪಕ ಮತ್ತು ವಿತರಕ ಎಮ್.ಎನ್ ಕುಮಾರ್ ಅವರು ಗಂಭೀರ ಆರೋಪ ಮಾಡಿದ್ದಾರೆ. ಇತ್ತೀಚೆಗೆ ನನಗೆ ಕಾಲ್ ಶೀಟ್ ಕೊಡುತ್ತೇನೆ ಎಂದು ಹೇಳಿ ಕೊಡದೆ ಸತಾಯಿಸುತ್ತಿದ್ದಾರೆ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಕರೆದು ಸಾಲು ಸಾಲು ಆರೋಪ ಮಾಡಿದ್ದರು.
ಈ ಬಗ್ಗೆ ನಟ ಕಿಚ್ಚ ಸುದೀಪ್ ಟ್ವೀಟ್ ಮಾಡುವ ಮೂಲಕ ಪರೋಕ್ಷವಾಗಿ ಉತ್ತರ ನೀಡಿದ್ದರು. ‘‘ನನ್ನ ಒಳ್ಳೆಯತನ ದುರುಪಯೋಗ ಆಗದಿರಲಿ, ಅದನ್ನ ಯಾರೂ ಕೂಡ ತಮ್ಮ ಇಷ್ಟಗಳಿಗೆ ಉಪಯೋಗಿಸಿಕೊಳ್ಳದಿರಲಿ. ನೀವು ನಿಯತ್ತಿನಿಂದ ಇದ್ದರೆ, ನನ್ನ ಈ ಒಳ್ಳೆಯತನ ಹೆಚ್ಚಾಗಿ ಹೊಳೆಯುತ್ತದೆ. ಯಾವತ್ತಿದ್ದರೂ ವಿನಮ್ರತೆ ಇಂದ ಬದುಕಿ’’ ಎಂದು ಕಿಚ್ಚ ಸುದೀಪ್ ಅವರು ಟ್ವೀಟ್ ಮಾಡಿದ್ದಾರೆ. ನಟ ಕಿಚ್ಚ ಸುದೀಪ್ ಮಾಡಿದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಸಹ ಆಗಿತ್ತು.
ಇದೀಗ ಈ ವಿಚಾರ ಮುಂದಿನ ಹಂತ ತಲುಪುವ ಸಾಧ್ಯತೆ ಇದೆ. ಇನ್ನು ಈ ಕುರಿತು ನ್ಯೂಸ್ಫಸ್ಟ್ಗೆ ಪ್ರತಿಕ್ರಿಯೆ ನೀಡಿದ ಎಮ್.ಎನ್.ಕುಮಾರ್ ಅವರು, ಇಂದು ಈ ಸಂಬಂಧ ನಿರ್ಮಾಪಕ ಸಂಘದಲ್ಲಿ ಸಭೆ ಮಾಡಲಿದ್ದೇವೆ. ಈ ಬಗ್ಗೆ ನಿರ್ಮಾಪಕ ಸಂಘ ಸಲಹೆ ಕೇಳಿ ಮುಂದುವರೆಯುದಾಗಿ ಎಮ್.ಎನ್.ಕುಮಾರ್ ನ್ಯೂಸ್ಫಸ್ಟ್ಗೆ ತಿಳಿಸಿದ್ದಾರೆ.
ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ