newsfirstkannada.com

ಪವಿತ್ರಾ ಜಯರಾಂ ನೆನಪಲ್ಲೇ ಸಾವಿಗೆ ಶರಣಾದ ಕಿರುತೆರೆ ನಟ; ಸಾವಿಗೂ ಮುನ್ನ ಆ ಒಂದು ಪೋಸ್ಟ್ ಮಾಡಿದ ಚಂದು!

Share :

Published May 19, 2024 at 6:32am

    ಹೈದರಾಬಾದ್​​ ಮಣಿಕೊಂಡ ಪ್ಲಾಟ್​ನಲ್ಲಿ ನೇಣಿಗೆ ಶರಣಾದ ಚಂದು

    ಶುಕ್ರವಾರದಿಂದ ಫೋನ್ ಸ್ವೀಚ್ ಆಫ್ ಮಾಡಿ ಗುಡ್​ಬೈ ಹೇಳಿದ ನಟ

    ಪವಿತ್ರಾ ಜಯರಾಂ ​ಗೆಳತಿಯ ಸಾವಿನ ನೋವಿನಲ್ಲೇ ಪ್ರಾಣ ಬಿಟ್ಟ ಗೆಳೆಯ

ಕೆಲ ಜನರ ನಡುವಿನ ಬಾಂಧವ್ಯದ ಬಗ್ಗೆ ಪದಗಳಲ್ಲಿ ಹೇಳೋದಿಕ್ಕೆ ಆಗಲ್ಲ. ಯಾಕಂದ್ರೆ ಈ ಬಾಂಧವ್ಯದಲ್ಲಿ ಯಾರು ಒಬ್ಬರೂ ಇಲ್ಲವಾದ್ರೂ ಇನ್ನೊಬ್ಬರಿಗೆ ಜಗತ್ತು ಭಾರವಾಗಿಬಿಡುತ್ತೆ. ಜೀವಕ್ಕೆ ಜೀವವಾಗಿದ್ದವರು ದೂರವಾದ್ರೆ ಇನ್ನೊಬ್ಬರು ಅವರನ್ನೇ ಫಾಲೋ ಮಾಡ್ತೀನಿ ಅನ್ನೋಷ್ಟರ ಮಟ್ಟಿಗೆ ಆ ಬಾಂಡಿಂಗ್ ಇರುತ್ತೆ. ಇವತ್ತಿನ ಜನರೇಷನ್​ನಲ್ಲಿ ಕೆಲವೇ ಕೆಲವು ಜನರಲ್ಲಿ ಮಾತ್ರ ಇಷ್ಟು ಗಟ್ಟಿಯಾಗಿರುವ ಪ್ರೀತಿ ಮತ್ತು ಬಾಂಡಿಂಗ್ ನೋಡೋದಿಕ್ಕೆ ಸಿಗುತ್ತೆ. ಇದೀಗ ಇಂತಾದ್ದೆ ಒಂದು ಬಾಂಧವ್ಯಕ್ಕೆ ಮತ್ತು ಪ್ರೀತಿಗೆ ಸಾಕ್ಷಿಯಾಗಿರೋದು ಪವಿತ್ರ ಜಯರಾಂ ಸಾವು ಮತ್ತು ನಟ ಚಂದ್ರಕಾಂತ್ ಆತ್ಮಹತ್ಯೆ.

ಕೆಲ ದಿನಗಳ ಹಿಂದೆ ನಟಿ ಪವಿತ್ರಾ ಜಯರಾಂ ಅಪಘಾತದಲ್ಲಿ ಬದುಕಿನ ಪಯಣ ಮುಗಿಸಿರೋ ವಿಚಾರ ನಿಮಗೆ ಗೊತ್ತೆ ಇದೆ. ಒಂದೇ ಒಂದು ಸಣ್ಣ ಗಾಯವಾಗದೇ ಇದ್ರು ಅಪಘಾತದ ಶಾಕ್​ನಿಂದ ಪವಿತ್ರಾ ಜಯರಾಂ ಬದುಕು ದುರಂತ ಅಂತ್ಯ ಕಂಡಿತ್ತು. ಈ ಅಪಘಾತಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದು ಪವಿತ್ರಾ ಜಯರಾಂ ಜೊತೆ ಪ್ರಯಾಣ ಮಾಡ್ತಿದ್ದ ಆಕೆ ಸ್ನೇಹಿತ, ಪ್ರಿಯಕರ ಚಂದ್ರಕಾಂತ್. ಚಂದ್ರಕಾಂತ್ ಮಡಿಲಲ್ಲೇ ಪವಿತ್ರಾ ಜಯರಾಂ ಕೊನೆಯುಸಿರು ಎಳೆದಿದ್ರು. ಏನಾಯ್ತು ಏನಾಯ್ತು ಎನ್ನುತ್ತಲೇ ಚಂದ್ರಕಾಂತ್ ಕಣ್ಣಲ್ಲಿ ಕಣ್ಣಿಟ್ಟು ಪವಿತ್ರಾ ಜೀವ ಬಿಟ್ಟಿದ್ರು. ಆದ್ರೀಗ ಈ ಘಟನೆಯನ್ನ ಕಣ್ಣಾರೆ ಕಂಡಿದ್ದ ಚಂದ್ರಕಾಂತ್ ಆ ನೋವನ್ನ ಅರಗಿಸಿಕೊಳ್ಳಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇವತ್ತಿನ ಕಾಲದಲ್ಲಿ ಒಬ್ಬರು ದೂರವಾದ್ರೆ ಅಬ್ಬಬ್ಬಾ ಅಂದ್ರೆ ಒಂದು ತಿಂಗಳೋ ಅಥವಾ ಒಂದು ವರ್ಷ ಅವರ ನೆನಪಲ್ಲೇ ಬದುಕುಬಹುದು. ದಿನ ಕಳೆದಂತೆಲ್ಲ ಬದುಕು ಸರಿದಾರಿಗೆ ಬರುತ್ತೆ ಅನ್ನೋ ಭರವಸೆಯಲ್ಲಿ ಜೀವನ ಸಾಗುತ್ತೆ. ಆದ್ರೆ ಪವಿತ್ರಾ ಮತ್ತು ಚಂದ್ರಕಾಂತ್ ವಿಚಾರದಲ್ಲಿ ಆಗಿದ್ದು ಯಾರೂ ಉಹಿಸಿಕೊಳ್ಳಲಾಗದ ದುರಂತ. ಇಬ್ಬರೂ ಗಂಡ ಹೆಂಡತಿ ಅಲದೇ ಇದ್ರು ಇಬ್ಬರ ನಡುವಿನ ಬಾಂಧವ್ಯ ಗಟ್ಟಿಯಾಗಿತ್ತು. ಒಬ್ಬರನ್ನ ಬಿಟ್ಟು ಇನ್ನೊಬ್ಬರು ಇರ್ತಿರಲಿಲ್ಲ. ಚಂದ್ರಕಾಂತ್​ಗೆ ಮದುವೆಯಾಗಿ ಎರಡು ಮಕ್ಕಳಿದ್ರೂ ಕೂಡ ಪವಿತ್ರಾ ಮೇಲಿನ ಪ್ರೀತಿ ಒಂದು ಕೈ ಜಾಸ್ತಿಯಿತ್ತು. ಎಲ್ಲೇ ಹೋದ್ರೂ ಒಟ್ಟಿಗೆ ಹೋಗ್ತಿದ್ರು. ಒಟ್ಟಿಗೆ ಇರ್ತಿದ್ರು. ಆದ್ರೆ ಬದುಕಿನ ಬಂಡಿಯಲ್ಲಿ ಪವಿತ್ರಾ ಚಂದ್ರಕಾಂತ್​​ರನ್ನ ಒಂಟಿಯಾಗಿಸಿ ಅಕಾಲಿಕ ಮರಣಕ್ಕೆ ತುತ್ತಾದಾಗ ಚಂದ್ರಕಾಂತ್ ಅಕ್ಷರಶಃ ಕುಗ್ಗಿ ಹೋಗಿದ್ರು. ಪರಿಣಾಮ ಪವಿತ್ರಾ ಇಲ್ಲದ ಜೀವನವನ್ನ ಊಹಿಸಿಕೊಳ್ಳೋದಕ್ಕು ಒದ್ದಾಡ್ತಿದ್ದ ಚಂದ್ರಕಾಂತ್ ದುಡುಕಿನ ನಿರ್ಧಾರ ಮಾಡಿಬಿಟ್ಟಿದ್ದಾರೆ. ಯಾವ ಮನೆಯಲ್ಲಿ ಪವಿತ್ರಾ ಜೊತೆ ಜೀವನ ಹಂಚಿಕೊಂಡಿದ್ರು. ಅದೇ ಮನೆಯಲ್ಲೇ ಪವಿತ್ರಾ ಪ್ರಿಯಕರ ಚಂದ್ರಕಾಂತ್​ ಸೂಸೈಡ್ ಮಾಡಿಕೊಂಡಿದ್ದಾರೆ.

ಬಹುಶಃ ಇದು ಊಹೆ ಮಾಡಲಾರದ ಘಟನೆ ಅಂದ್ರೂ ತಪ್ಪಾಗಲ್ಲ. ಯಾಕಂದ್ರೆ ಪವಿತ್ರಾ ಜಯರಾಂ ಇನ್ನಿಲ್ಲ ಅನ್ನೋ ನೋವು ಚಂದ್ರಕಾಂತ್​ ಮನಸ್ಸನ್ನ ಘಾಸಿಗೊಳಿಸಿತ್ತು. ಹೀಗಾಗಿ ಪವಿತ್ರಾ ಸಾವನ್ನಪ್ಪಿದ್ದ ಬಳಿಕ ಇಬ್ಬರು ಒಟ್ಟಿಗೆ ಇದ್ದ ಪ್ಲಾಟ್​​ಗೆ ಚಂದ್ರಕಾಂತ್ ಹೋಗಿರಲಿಲ್ಲ. ಆದ್ರೆ ಶುಕ್ರವಾರ ಬೆಳಗ್ಗೆ ಪವಿತ್ರಾ ಇನ್ಶೂರೆನ್ಸ್ ಬಗ್ಗೆ ವಿಚಾರಿಸಿ ಬರ್ತೀನಿ ಅಂತ ಪವಿತ್ರಾ ಫ್ಲಾಟ್​ಗೆ ಬಂದಿದ್ದ ಚಂದ್ರಾಕಾಂತ್ ಫೋನ್ ಸ್ವೀಚ್ ಮಾಡಿಕೊಂಡಿದ್ರು. ಮನೆಯಿಂದ ಹೋದ್ಮೇಲೆ ಫೋನ್​ ಆಫ್ ಮಾಡಿಟ್ಟುಕೊಂಡಿದ್ದ ಚಂದು, ಎಷ್ಟೆ ಕಾಲ್ ಮಾಡಿದ್ರೂ ರಿಸೀವ್ ಮಾಡ್ತಿರಲಿಲ್ವಂತೆ. ಅತ್ತ ಚಂದು ಸ್ನೇಹಿತರಿಗೂ ವಿಚಾರಿಸಿದ್ರೂ ಚಂದು ಎಲ್ಲಿದ್ದಾನೆ ಅನ್ನೋದು ಗೊತ್ತಾಗಿಲ್ಲ. ಕೊನೆಗೆ ಸ್ನೇಹಿತರು ಪವಿತ್ರಾ ಫ್ಲಾಟ್ ಬಳಿ ಹೋಗಿ ನೋಡ್ದಾಗ ಚಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದು ಗೊತ್ತಾಗಿದೆ.

ಕೊನೆ ಬಾರಿ ಮುಂಜಾನೆ 9.30 ಕ್ಕೆ ಫೋನ್​ನಲ್ಲಿ ಮಾತನಾಡಿದ್ರು. ಎಲ್ಲಿಗೆ ಹೋಗ್ತಿದ್ಯಾ ಮನೆಗೆ ಬಾ ಅಂತ ಅಂದೆ. ಅದಕ್ಕೆ ನಾನು ಪವಿತ್ರಾ ಮನೆಗೆ ಹೋಗ್ತಿದ್ದೀನಿ ಆಕೆ ಇನ್ಶೂರೆನ್ಸ್ ವಿಚಾರ ಮಾತಾಡ್ಬೇಕು ಅಂತ ಹೇಳ್ದ. ನನ್ನ ಜೊತೆ ಯಾರು ಇಲ್ಲ. ನಾನೊಬ್ಬನೇ ಹೋಗ್ತಿದ್ದೀನಿ ಅಂದ. ಆಮೇಲೆ ಮತ್ತೆ ಗಂಟೆಗೊಂದು ಸಾರಿ ಕಾಲ್ ಮಾಡ್ದೆ.. ಆದ್ರೆ ರಿಸೀವ್ ಮಾಡಿರಲಿಲ್ಲ. ಏನೋ ಕೆಲಸದಲ್ಲಿ ಇರ್ಬೇಕು ಅಂತ ಅಂದುಕೊಂಡಿದ್ದೆ. ಅವರ ಫ್ರೆಂಡ್ಸ್ ಎಲ್ಲರನ್ನ ಕಳಿಸಿದ್ದೆ. ಎಲ್ಲರಿಗೂ ಕಾಲ್ ಮಾಡಿ ವಿಚಾರಿಸಿದ್ದೆ. ಎಲ್ಲಿದ್ದಾನೆ ಗೊತ್ತಿಲ್ಲ ಅಂತ ಹೇಳಿದ್ರು. ಕೊನೆಗೆ ಡೌಟ್ ಬಂದು ಪವಿತ್ರಾ ಮನೆಗೆ ಕಳಿಸಿದೆ. ಆಗ ಕಿಟಕಿಯಿಂದ ನೋಡ್ದಾಗ ಸೂಸೈಡ್ ಮಾಡ್ಕೊಂಡಿದ್ದಾನೆ ಅಂತ ಹೇಳಿದ್ರು.

– ನಟ ಚಂದು ಸಹೋದರಿ

ಹೈದರಾಬಾದ್​ನ ಮಣಿಕೊಂಡದಲ್ಲಿರೋ ಅಲ್ಕಾಪುರ ಕಾಲೋನಿಯಲ್ಲಿದ್ದ ಫ್ಲಾಟ್​ನಲ್ಲಿ ಪವಿತ್ರಾ ಮತ್ತು ಚಂದು ಕಳೆದ ಆರು ತಿಂಗಳಿದ್ದ ಒಟ್ಟಿಗೆ ವಾಸವಿದ್ರು. ಪವಿತ್ರಾ ಜೊತೆ ಆಕೆ ಇಬ್ಬರ ಮಕ್ಕಳು ಕೂಡ ಇಲ್ಲೇ ಇದ್ರು. ಪವಿತ್ರಾ ಅಗಲಿಕೆ ನೋವಿನಲ್ಲೇ ಬಳಲಿ ಬೆಂಡಾಗಿದ್ದ ಚಂದು ಈಗ ಅದೇ ಫ್ಲಾಟ್​ನಲ್ಲಿ ನೇಣಿಗೆ ಕೊರಳೊಡುವ ಮೂಲಕ ಬದುಕಿಗೆ ಗುಡ್​ ಬಾಯ್ ಹೇಳಿದ್ದಾರೆ. ಆದ್ರೆ ಚಂದು ಆತ್ಮಹತ್ಯೆಗೆ ಶರಣಾಗಿರೋದು ಚಂದು ಕುಟುಂಬಕ್ಕೂ ದೊಡ್ಡ ಶಾಕ್ ನೀಡಿದೆ. ಇಷ್ಟು ಜನ ಇದ್ರೂ, ಅಮ್ಮ ಇದ್ರೂ ಹೆಂಡತಿ ಇದ್ರೂ ಮಕ್ಕಳೂ ಇದ್ರೂ. ಆದ್ರೆ ಇವಱರು ನೆನಪು ಬರಲಿಲ್ವಾ ಅಂತ ಚಂದು ಸಹೋದರಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನಾವೆಲ್ಲ ಇದ್ವಿ ಆದ್ರೆ ಅವನು ದುಡುಕು ನಿರ್ಧಾರ ಮಾಡಿಬಿಟ್ಟ ಅಂತ ಇಡೀ ಕುಟುಂಬ ಕಣ್ಣೀರು ಸುರಿಸಿದೆ.

ಯಾವಾಗ ಸೂಸೈಡ್ ಮಾಡ್ಕೊಂಡಿದ್ದಾನೆ ಗೊತ್ತಿಲ್ಲ. ವಾಚಮ್ಯಾನ್ ಕೂಡ ಫೋನ್ ಮಾಡ್ತಾನೆ ಇದ್ರಂತೆ. ನನಗೇನು ಏನ್ ಹೇಳ್ಬೇಕು ಗೊತ್ತಾಗ್ತಿಲ್ಲ. ಈಗ ಏನ್ ಮಾತಾಡಿದ್ರೂ ನಮ್ಮ ಅಣ್ಣ ವಾಪಸ್ ಬರ್ತಾನ. ನಮ್ಮಣ್ಣ ಬದುಕ್ತಾನೆ ಅನ್ನೋ ಆಸೆ ಇತ್ತು. ನೋಡಿದ್ರೆ ಅವನೇ ಶವವಾಗಿ ಬಂದ. ನಾವ ಯಾರು ನೆನಪು ಇರ್ಲಿಲ್ವಾ.. ಇಷ್ಟು ಜನ ಇದ್ವಿ. ಮಕ್ಕಳು ಮುಖ ಕೂಡ ನೆನಪಾಗ್ಲಿಲ್ವಾ ನಿನಗೆ.
– ನಟ ಚಂದು ಸಹೋದರಿ

ಗೆಳತಿ ಪವಿತ್ರಾ ಜಯರಾಂ ಸಾವಿನ ನೋವಲ್ಲೇ ಸೂಸೈಡ್ ಮಾಡಿಕೊಂಡಿರೋ ಚಂದು ಎರಡು ದಿನದ ಹಿಂದೆಯೇ ಸಾವಿನ ಸುಳಿವು ನೀಡಿದ್ರಾ ಅನ್ನೋ ಪ್ರಶ್ನೆಯೂ ಹುಟ್ಟಿಕೊಂಡಿದೆ. ಯಾಕಂದ್ರೆ ಪವಿತ್ರಾ ಸಾವಿನ ಬಳಿಕ ಆಕೆ ನೋವಲ್ಲೇ ಪೋಸ್ಟ್ ಮಾಡ್ತಿದ್ದ ಚಂದು ನಿನನ್ನ ಮರೆಯಲು ಸಾಧ್ಯವಿಲ್ಲ ಅಂತ ಬರೆದುಕೊಂಡಿದ್ರು. ಇದ್ರ ಮಧ್ಯೆ ಮೇ 14 ಪವಿತ್ರಾ ಹುಟ್ಟುಹಬ್ಬವಿತ್ತಂತೆ. ಅವತ್ತು ಕೂಡ ಇನ್​ಸ್ಟಾದಲ್ಲಿ ಪೋಸ್ಟ್ ಮಾಡಿದ್ದ ಚಂದು ಅವರ ಜೊತೆಗಿದ್ದ ಫೋಟೋಗಳನ್ನೆಲ್ಲ ಶೇರ್ ಮಾಡಿ ಭಾವುಕರಾಗಿದ್ರು. ಈ ವೇಳೆ ಎರಡು ದಿನ ವೇಟ್ ಮಾಡು ಚಿನ್ನ ನಾನು ಬರ್ತೀನಿ ಅಂತ ಬರೆದಿದ್ರು. ಈ ಫೋಸ್ಟ್ ಹಾಕಿದ ಎರಡೇ ದಿನದಲ್ಲಿ ಈಗ ಚಂದು ಆತ್ಮಹತ್ಯೆಗೆ ಶರಣಾಗಿರೋದು ಅಭಿಮಾನಿಗಳಿಗೆ ಮಾತ್ರವಲ್ಲ. ತೆಲುಗು ಕಿರುತೆರೆ ಮಂದಿಗೂ ದೊಡ್ಡ ಶಾಕ್ ನೀಡಿದೆ. ಪವಿತ್ರಾ ಸಾವಿನ ಬಳಿಕ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದ ಚಂದು ಅಲ್ಲೂ ಕೂಡ ಇದೇ ಮಾತನ್ನ ಹೇಳಿದ್ರು. ಆಕೆಯಿಲ್ಲದೇ ನನ್ನ ಬದುಕಿಲ್ಲ ಅಂತ ಭಾವುಕರಾಗಿದ್ರು. ನಾನು ಸಾವಿರಕ್ಕೆ ಒಂದು ಮಾತು ಹೇಳ್ತೀನಿ. ನನಗೆ ಅವಳು ತಾಯಿ ತರಹ. ನನ್ನ ಸಣ್ಣ ಮಗುವಿನ ತರಹ ನೋಡ್ಕೊಂಡಿದ್ಳು. ನನ್ನ ಪವಿ ಸತ್ತಿಲ್ಲ. ನನ್ನ ಜೊತೆಯಲ್ಲೇ ಇದ್ದಾಳೆ.

ಪವಿತ್ರಾ ಸಾವಿನಿಂದ ಬದುಕಲು ಇಷ್ಟವಿಲ್ಲ! ಪವಿತ್ರಾ ಸಂಬಂಧಿ ಬಳಿ ಹೇಳಿದ್ದೇನು?

ಪವಿತ್ರಾ ಸಾವಿನ ಬಳಿಕ ಆಕೆ ಅಂತ್ಯಕ್ರಿಯೆ ಮುಗಿಯುವವರೆಗೂ ಚಂದು ಮಂಡ್ಯದಲ್ಲೇ ಇದ್ರು. ಆದ್ರೆ ಈ ವೇಳೆಯೂ ಚಂದು ಸಾವಿನ ಮಾತುಗಳನ್ನಾಡಿದ್ರಂತೆ. ಪವಿತ್ರಾ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದಾಗ ಪವಿತ್ರಾ ಸಂಬಂಧಿ ಲೋಕೆಶ್ ಅನ್ನೋರ ಜೊತೆ ಚಂದು ಮನಸ್ಸಿನಲ್ಲಿದ್ದ ನೋವು ಹಂಚಿಕೊಂಡಿದ್ರಂತೆ. ಈ ವಿಚಾರವನ್ನು ಪವಿತ್ರಾ ಜಯರಾಮ್ ಸಂಬಂಧಿ, ಲೋಕೇಶ್ ನ್ಯೂಸ್ ಫಸ್ಸ್​ಗೆ ತಿಳಿಸಿದ್ದು, ಪವಿತ್ರಾ ಸಾವಿನಿಂದ ಚಂದು ಬದುಕಲು ಇಷ್ಟವಿರಲಿಲ್ಲ ಎಂದಿದ್ರು ಅಂತ ಹೇಳಿದ್ದಾರೆ. ಪವಿತ್ರಾಗಾಗಿ ನನ್ನ ಜೀವವನ್ನೇ ತ್ಯಾಗ ಮಾಡಿದ್ದೇನೆ. ಅವರನ್ನ ಬಿಟ್ಟಿರಲು ಆಗಲ್ಲ ಅಂತ ಚಂದು ತಮ್ಮ ಸಂಕಟವನ್ನು ಹಂಚಿಕೊಂಡಿದ್ರಂತೆ.
ಏನೇ ನೋವಿದ್ದರು ಇಲ್ಲಿಗೆ ಬನ್ನಿ ಎಂದಿದ್ದರು. ನನಗೆ ಅವರ ನಂಬರ್ ಕೂಡ ಕೊಟ್ಟಿದ್ದರು. ರಾತ್ರಿ 11.30 ಆತ್ಮಹತ್ಯೆ ವಿಚಾರ ತಿಳಿಯಿತು. ಅಂತ್ಯಕ್ರಿಯೆ ವೇಳೆಯೇ ನೋವು ತೋಡಿಕೊಂಡಿದ್ದರು. ಪವಿತ್ರಾ ಅವರ ಮಗ್ನದಲ್ಲೇ ಇದ್ದರು. ಏನು ಮಾಡಬೇಕು ಎಂದು ತೋಚುತ್ತಿಲ್ಲ ಅಂತ ಚಂದು ಪವಿತ್ರಾ ಅಗಲಿಕೆ ಸಂಟಕವನ್ನು ಹೇಳಿಕೊಂಡಿದ್ರಂತೆ. ಆದ್ರೀಗ ಆ ನೋವಲ್ಲೇ ಬದುಕಿಗೆ ವಿದಾಯ ಹೇಳಿ ಬಾರದ ಲೋಕಕಕ್ಕೆ ಪಯಣ ಬೆಳೆಸಿರೋದು ನಿಜಕ್ಕೂ ದುರಂತವೇ ಸರಿ. ಆದ್ರೆ ಇದೆಲ್ಲದ್ದರ ಮಧ್ಯೆ ಮದುವೆಯಾಗಿದ್ರೂ ಚಂದು ಪವಿತ್ರಾ ಸಂಬಂಧ ಬೆಳೆಸಿದ್ದೇಕೆ? ಗಂಡನ ಬಗ್ಗೆ ಚಂದು ಹೆಂಡತಿ ಹೇಳಿದ್ದೇನು? ಪವಿತ್ರಾ ಎಂಟ್ರಿಯಿಂದ ಚಂದು ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದೇಕೆ ಅನ್ನೋ ವಿಚಾರ ಈಗ ಚರ್ಚೆಗೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪವಿತ್ರಾ ಜಯರಾಂ ನೆನಪಲ್ಲೇ ಸಾವಿಗೆ ಶರಣಾದ ಕಿರುತೆರೆ ನಟ; ಸಾವಿಗೂ ಮುನ್ನ ಆ ಒಂದು ಪೋಸ್ಟ್ ಮಾಡಿದ ಚಂದು!

https://newsfirstlive.com/wp-content/uploads/2024/05/candu.jpg

    ಹೈದರಾಬಾದ್​​ ಮಣಿಕೊಂಡ ಪ್ಲಾಟ್​ನಲ್ಲಿ ನೇಣಿಗೆ ಶರಣಾದ ಚಂದು

    ಶುಕ್ರವಾರದಿಂದ ಫೋನ್ ಸ್ವೀಚ್ ಆಫ್ ಮಾಡಿ ಗುಡ್​ಬೈ ಹೇಳಿದ ನಟ

    ಪವಿತ್ರಾ ಜಯರಾಂ ​ಗೆಳತಿಯ ಸಾವಿನ ನೋವಿನಲ್ಲೇ ಪ್ರಾಣ ಬಿಟ್ಟ ಗೆಳೆಯ

ಕೆಲ ಜನರ ನಡುವಿನ ಬಾಂಧವ್ಯದ ಬಗ್ಗೆ ಪದಗಳಲ್ಲಿ ಹೇಳೋದಿಕ್ಕೆ ಆಗಲ್ಲ. ಯಾಕಂದ್ರೆ ಈ ಬಾಂಧವ್ಯದಲ್ಲಿ ಯಾರು ಒಬ್ಬರೂ ಇಲ್ಲವಾದ್ರೂ ಇನ್ನೊಬ್ಬರಿಗೆ ಜಗತ್ತು ಭಾರವಾಗಿಬಿಡುತ್ತೆ. ಜೀವಕ್ಕೆ ಜೀವವಾಗಿದ್ದವರು ದೂರವಾದ್ರೆ ಇನ್ನೊಬ್ಬರು ಅವರನ್ನೇ ಫಾಲೋ ಮಾಡ್ತೀನಿ ಅನ್ನೋಷ್ಟರ ಮಟ್ಟಿಗೆ ಆ ಬಾಂಡಿಂಗ್ ಇರುತ್ತೆ. ಇವತ್ತಿನ ಜನರೇಷನ್​ನಲ್ಲಿ ಕೆಲವೇ ಕೆಲವು ಜನರಲ್ಲಿ ಮಾತ್ರ ಇಷ್ಟು ಗಟ್ಟಿಯಾಗಿರುವ ಪ್ರೀತಿ ಮತ್ತು ಬಾಂಡಿಂಗ್ ನೋಡೋದಿಕ್ಕೆ ಸಿಗುತ್ತೆ. ಇದೀಗ ಇಂತಾದ್ದೆ ಒಂದು ಬಾಂಧವ್ಯಕ್ಕೆ ಮತ್ತು ಪ್ರೀತಿಗೆ ಸಾಕ್ಷಿಯಾಗಿರೋದು ಪವಿತ್ರ ಜಯರಾಂ ಸಾವು ಮತ್ತು ನಟ ಚಂದ್ರಕಾಂತ್ ಆತ್ಮಹತ್ಯೆ.

ಕೆಲ ದಿನಗಳ ಹಿಂದೆ ನಟಿ ಪವಿತ್ರಾ ಜಯರಾಂ ಅಪಘಾತದಲ್ಲಿ ಬದುಕಿನ ಪಯಣ ಮುಗಿಸಿರೋ ವಿಚಾರ ನಿಮಗೆ ಗೊತ್ತೆ ಇದೆ. ಒಂದೇ ಒಂದು ಸಣ್ಣ ಗಾಯವಾಗದೇ ಇದ್ರು ಅಪಘಾತದ ಶಾಕ್​ನಿಂದ ಪವಿತ್ರಾ ಜಯರಾಂ ಬದುಕು ದುರಂತ ಅಂತ್ಯ ಕಂಡಿತ್ತು. ಈ ಅಪಘಾತಕ್ಕೆ ಪ್ರತ್ಯಕ್ಷ ಸಾಕ್ಷಿಯಾಗಿದ್ದು ಪವಿತ್ರಾ ಜಯರಾಂ ಜೊತೆ ಪ್ರಯಾಣ ಮಾಡ್ತಿದ್ದ ಆಕೆ ಸ್ನೇಹಿತ, ಪ್ರಿಯಕರ ಚಂದ್ರಕಾಂತ್. ಚಂದ್ರಕಾಂತ್ ಮಡಿಲಲ್ಲೇ ಪವಿತ್ರಾ ಜಯರಾಂ ಕೊನೆಯುಸಿರು ಎಳೆದಿದ್ರು. ಏನಾಯ್ತು ಏನಾಯ್ತು ಎನ್ನುತ್ತಲೇ ಚಂದ್ರಕಾಂತ್ ಕಣ್ಣಲ್ಲಿ ಕಣ್ಣಿಟ್ಟು ಪವಿತ್ರಾ ಜೀವ ಬಿಟ್ಟಿದ್ರು. ಆದ್ರೀಗ ಈ ಘಟನೆಯನ್ನ ಕಣ್ಣಾರೆ ಕಂಡಿದ್ದ ಚಂದ್ರಕಾಂತ್ ಆ ನೋವನ್ನ ಅರಗಿಸಿಕೊಳ್ಳಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇವತ್ತಿನ ಕಾಲದಲ್ಲಿ ಒಬ್ಬರು ದೂರವಾದ್ರೆ ಅಬ್ಬಬ್ಬಾ ಅಂದ್ರೆ ಒಂದು ತಿಂಗಳೋ ಅಥವಾ ಒಂದು ವರ್ಷ ಅವರ ನೆನಪಲ್ಲೇ ಬದುಕುಬಹುದು. ದಿನ ಕಳೆದಂತೆಲ್ಲ ಬದುಕು ಸರಿದಾರಿಗೆ ಬರುತ್ತೆ ಅನ್ನೋ ಭರವಸೆಯಲ್ಲಿ ಜೀವನ ಸಾಗುತ್ತೆ. ಆದ್ರೆ ಪವಿತ್ರಾ ಮತ್ತು ಚಂದ್ರಕಾಂತ್ ವಿಚಾರದಲ್ಲಿ ಆಗಿದ್ದು ಯಾರೂ ಉಹಿಸಿಕೊಳ್ಳಲಾಗದ ದುರಂತ. ಇಬ್ಬರೂ ಗಂಡ ಹೆಂಡತಿ ಅಲದೇ ಇದ್ರು ಇಬ್ಬರ ನಡುವಿನ ಬಾಂಧವ್ಯ ಗಟ್ಟಿಯಾಗಿತ್ತು. ಒಬ್ಬರನ್ನ ಬಿಟ್ಟು ಇನ್ನೊಬ್ಬರು ಇರ್ತಿರಲಿಲ್ಲ. ಚಂದ್ರಕಾಂತ್​ಗೆ ಮದುವೆಯಾಗಿ ಎರಡು ಮಕ್ಕಳಿದ್ರೂ ಕೂಡ ಪವಿತ್ರಾ ಮೇಲಿನ ಪ್ರೀತಿ ಒಂದು ಕೈ ಜಾಸ್ತಿಯಿತ್ತು. ಎಲ್ಲೇ ಹೋದ್ರೂ ಒಟ್ಟಿಗೆ ಹೋಗ್ತಿದ್ರು. ಒಟ್ಟಿಗೆ ಇರ್ತಿದ್ರು. ಆದ್ರೆ ಬದುಕಿನ ಬಂಡಿಯಲ್ಲಿ ಪವಿತ್ರಾ ಚಂದ್ರಕಾಂತ್​​ರನ್ನ ಒಂಟಿಯಾಗಿಸಿ ಅಕಾಲಿಕ ಮರಣಕ್ಕೆ ತುತ್ತಾದಾಗ ಚಂದ್ರಕಾಂತ್ ಅಕ್ಷರಶಃ ಕುಗ್ಗಿ ಹೋಗಿದ್ರು. ಪರಿಣಾಮ ಪವಿತ್ರಾ ಇಲ್ಲದ ಜೀವನವನ್ನ ಊಹಿಸಿಕೊಳ್ಳೋದಕ್ಕು ಒದ್ದಾಡ್ತಿದ್ದ ಚಂದ್ರಕಾಂತ್ ದುಡುಕಿನ ನಿರ್ಧಾರ ಮಾಡಿಬಿಟ್ಟಿದ್ದಾರೆ. ಯಾವ ಮನೆಯಲ್ಲಿ ಪವಿತ್ರಾ ಜೊತೆ ಜೀವನ ಹಂಚಿಕೊಂಡಿದ್ರು. ಅದೇ ಮನೆಯಲ್ಲೇ ಪವಿತ್ರಾ ಪ್ರಿಯಕರ ಚಂದ್ರಕಾಂತ್​ ಸೂಸೈಡ್ ಮಾಡಿಕೊಂಡಿದ್ದಾರೆ.

ಬಹುಶಃ ಇದು ಊಹೆ ಮಾಡಲಾರದ ಘಟನೆ ಅಂದ್ರೂ ತಪ್ಪಾಗಲ್ಲ. ಯಾಕಂದ್ರೆ ಪವಿತ್ರಾ ಜಯರಾಂ ಇನ್ನಿಲ್ಲ ಅನ್ನೋ ನೋವು ಚಂದ್ರಕಾಂತ್​ ಮನಸ್ಸನ್ನ ಘಾಸಿಗೊಳಿಸಿತ್ತು. ಹೀಗಾಗಿ ಪವಿತ್ರಾ ಸಾವನ್ನಪ್ಪಿದ್ದ ಬಳಿಕ ಇಬ್ಬರು ಒಟ್ಟಿಗೆ ಇದ್ದ ಪ್ಲಾಟ್​​ಗೆ ಚಂದ್ರಕಾಂತ್ ಹೋಗಿರಲಿಲ್ಲ. ಆದ್ರೆ ಶುಕ್ರವಾರ ಬೆಳಗ್ಗೆ ಪವಿತ್ರಾ ಇನ್ಶೂರೆನ್ಸ್ ಬಗ್ಗೆ ವಿಚಾರಿಸಿ ಬರ್ತೀನಿ ಅಂತ ಪವಿತ್ರಾ ಫ್ಲಾಟ್​ಗೆ ಬಂದಿದ್ದ ಚಂದ್ರಾಕಾಂತ್ ಫೋನ್ ಸ್ವೀಚ್ ಮಾಡಿಕೊಂಡಿದ್ರು. ಮನೆಯಿಂದ ಹೋದ್ಮೇಲೆ ಫೋನ್​ ಆಫ್ ಮಾಡಿಟ್ಟುಕೊಂಡಿದ್ದ ಚಂದು, ಎಷ್ಟೆ ಕಾಲ್ ಮಾಡಿದ್ರೂ ರಿಸೀವ್ ಮಾಡ್ತಿರಲಿಲ್ವಂತೆ. ಅತ್ತ ಚಂದು ಸ್ನೇಹಿತರಿಗೂ ವಿಚಾರಿಸಿದ್ರೂ ಚಂದು ಎಲ್ಲಿದ್ದಾನೆ ಅನ್ನೋದು ಗೊತ್ತಾಗಿಲ್ಲ. ಕೊನೆಗೆ ಸ್ನೇಹಿತರು ಪವಿತ್ರಾ ಫ್ಲಾಟ್ ಬಳಿ ಹೋಗಿ ನೋಡ್ದಾಗ ಚಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರೋದು ಗೊತ್ತಾಗಿದೆ.

ಕೊನೆ ಬಾರಿ ಮುಂಜಾನೆ 9.30 ಕ್ಕೆ ಫೋನ್​ನಲ್ಲಿ ಮಾತನಾಡಿದ್ರು. ಎಲ್ಲಿಗೆ ಹೋಗ್ತಿದ್ಯಾ ಮನೆಗೆ ಬಾ ಅಂತ ಅಂದೆ. ಅದಕ್ಕೆ ನಾನು ಪವಿತ್ರಾ ಮನೆಗೆ ಹೋಗ್ತಿದ್ದೀನಿ ಆಕೆ ಇನ್ಶೂರೆನ್ಸ್ ವಿಚಾರ ಮಾತಾಡ್ಬೇಕು ಅಂತ ಹೇಳ್ದ. ನನ್ನ ಜೊತೆ ಯಾರು ಇಲ್ಲ. ನಾನೊಬ್ಬನೇ ಹೋಗ್ತಿದ್ದೀನಿ ಅಂದ. ಆಮೇಲೆ ಮತ್ತೆ ಗಂಟೆಗೊಂದು ಸಾರಿ ಕಾಲ್ ಮಾಡ್ದೆ.. ಆದ್ರೆ ರಿಸೀವ್ ಮಾಡಿರಲಿಲ್ಲ. ಏನೋ ಕೆಲಸದಲ್ಲಿ ಇರ್ಬೇಕು ಅಂತ ಅಂದುಕೊಂಡಿದ್ದೆ. ಅವರ ಫ್ರೆಂಡ್ಸ್ ಎಲ್ಲರನ್ನ ಕಳಿಸಿದ್ದೆ. ಎಲ್ಲರಿಗೂ ಕಾಲ್ ಮಾಡಿ ವಿಚಾರಿಸಿದ್ದೆ. ಎಲ್ಲಿದ್ದಾನೆ ಗೊತ್ತಿಲ್ಲ ಅಂತ ಹೇಳಿದ್ರು. ಕೊನೆಗೆ ಡೌಟ್ ಬಂದು ಪವಿತ್ರಾ ಮನೆಗೆ ಕಳಿಸಿದೆ. ಆಗ ಕಿಟಕಿಯಿಂದ ನೋಡ್ದಾಗ ಸೂಸೈಡ್ ಮಾಡ್ಕೊಂಡಿದ್ದಾನೆ ಅಂತ ಹೇಳಿದ್ರು.

– ನಟ ಚಂದು ಸಹೋದರಿ

ಹೈದರಾಬಾದ್​ನ ಮಣಿಕೊಂಡದಲ್ಲಿರೋ ಅಲ್ಕಾಪುರ ಕಾಲೋನಿಯಲ್ಲಿದ್ದ ಫ್ಲಾಟ್​ನಲ್ಲಿ ಪವಿತ್ರಾ ಮತ್ತು ಚಂದು ಕಳೆದ ಆರು ತಿಂಗಳಿದ್ದ ಒಟ್ಟಿಗೆ ವಾಸವಿದ್ರು. ಪವಿತ್ರಾ ಜೊತೆ ಆಕೆ ಇಬ್ಬರ ಮಕ್ಕಳು ಕೂಡ ಇಲ್ಲೇ ಇದ್ರು. ಪವಿತ್ರಾ ಅಗಲಿಕೆ ನೋವಿನಲ್ಲೇ ಬಳಲಿ ಬೆಂಡಾಗಿದ್ದ ಚಂದು ಈಗ ಅದೇ ಫ್ಲಾಟ್​ನಲ್ಲಿ ನೇಣಿಗೆ ಕೊರಳೊಡುವ ಮೂಲಕ ಬದುಕಿಗೆ ಗುಡ್​ ಬಾಯ್ ಹೇಳಿದ್ದಾರೆ. ಆದ್ರೆ ಚಂದು ಆತ್ಮಹತ್ಯೆಗೆ ಶರಣಾಗಿರೋದು ಚಂದು ಕುಟುಂಬಕ್ಕೂ ದೊಡ್ಡ ಶಾಕ್ ನೀಡಿದೆ. ಇಷ್ಟು ಜನ ಇದ್ರೂ, ಅಮ್ಮ ಇದ್ರೂ ಹೆಂಡತಿ ಇದ್ರೂ ಮಕ್ಕಳೂ ಇದ್ರೂ. ಆದ್ರೆ ಇವಱರು ನೆನಪು ಬರಲಿಲ್ವಾ ಅಂತ ಚಂದು ಸಹೋದರಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನಾವೆಲ್ಲ ಇದ್ವಿ ಆದ್ರೆ ಅವನು ದುಡುಕು ನಿರ್ಧಾರ ಮಾಡಿಬಿಟ್ಟ ಅಂತ ಇಡೀ ಕುಟುಂಬ ಕಣ್ಣೀರು ಸುರಿಸಿದೆ.

ಯಾವಾಗ ಸೂಸೈಡ್ ಮಾಡ್ಕೊಂಡಿದ್ದಾನೆ ಗೊತ್ತಿಲ್ಲ. ವಾಚಮ್ಯಾನ್ ಕೂಡ ಫೋನ್ ಮಾಡ್ತಾನೆ ಇದ್ರಂತೆ. ನನಗೇನು ಏನ್ ಹೇಳ್ಬೇಕು ಗೊತ್ತಾಗ್ತಿಲ್ಲ. ಈಗ ಏನ್ ಮಾತಾಡಿದ್ರೂ ನಮ್ಮ ಅಣ್ಣ ವಾಪಸ್ ಬರ್ತಾನ. ನಮ್ಮಣ್ಣ ಬದುಕ್ತಾನೆ ಅನ್ನೋ ಆಸೆ ಇತ್ತು. ನೋಡಿದ್ರೆ ಅವನೇ ಶವವಾಗಿ ಬಂದ. ನಾವ ಯಾರು ನೆನಪು ಇರ್ಲಿಲ್ವಾ.. ಇಷ್ಟು ಜನ ಇದ್ವಿ. ಮಕ್ಕಳು ಮುಖ ಕೂಡ ನೆನಪಾಗ್ಲಿಲ್ವಾ ನಿನಗೆ.
– ನಟ ಚಂದು ಸಹೋದರಿ

ಗೆಳತಿ ಪವಿತ್ರಾ ಜಯರಾಂ ಸಾವಿನ ನೋವಲ್ಲೇ ಸೂಸೈಡ್ ಮಾಡಿಕೊಂಡಿರೋ ಚಂದು ಎರಡು ದಿನದ ಹಿಂದೆಯೇ ಸಾವಿನ ಸುಳಿವು ನೀಡಿದ್ರಾ ಅನ್ನೋ ಪ್ರಶ್ನೆಯೂ ಹುಟ್ಟಿಕೊಂಡಿದೆ. ಯಾಕಂದ್ರೆ ಪವಿತ್ರಾ ಸಾವಿನ ಬಳಿಕ ಆಕೆ ನೋವಲ್ಲೇ ಪೋಸ್ಟ್ ಮಾಡ್ತಿದ್ದ ಚಂದು ನಿನನ್ನ ಮರೆಯಲು ಸಾಧ್ಯವಿಲ್ಲ ಅಂತ ಬರೆದುಕೊಂಡಿದ್ರು. ಇದ್ರ ಮಧ್ಯೆ ಮೇ 14 ಪವಿತ್ರಾ ಹುಟ್ಟುಹಬ್ಬವಿತ್ತಂತೆ. ಅವತ್ತು ಕೂಡ ಇನ್​ಸ್ಟಾದಲ್ಲಿ ಪೋಸ್ಟ್ ಮಾಡಿದ್ದ ಚಂದು ಅವರ ಜೊತೆಗಿದ್ದ ಫೋಟೋಗಳನ್ನೆಲ್ಲ ಶೇರ್ ಮಾಡಿ ಭಾವುಕರಾಗಿದ್ರು. ಈ ವೇಳೆ ಎರಡು ದಿನ ವೇಟ್ ಮಾಡು ಚಿನ್ನ ನಾನು ಬರ್ತೀನಿ ಅಂತ ಬರೆದಿದ್ರು. ಈ ಫೋಸ್ಟ್ ಹಾಕಿದ ಎರಡೇ ದಿನದಲ್ಲಿ ಈಗ ಚಂದು ಆತ್ಮಹತ್ಯೆಗೆ ಶರಣಾಗಿರೋದು ಅಭಿಮಾನಿಗಳಿಗೆ ಮಾತ್ರವಲ್ಲ. ತೆಲುಗು ಕಿರುತೆರೆ ಮಂದಿಗೂ ದೊಡ್ಡ ಶಾಕ್ ನೀಡಿದೆ. ಪವಿತ್ರಾ ಸಾವಿನ ಬಳಿಕ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದ ಚಂದು ಅಲ್ಲೂ ಕೂಡ ಇದೇ ಮಾತನ್ನ ಹೇಳಿದ್ರು. ಆಕೆಯಿಲ್ಲದೇ ನನ್ನ ಬದುಕಿಲ್ಲ ಅಂತ ಭಾವುಕರಾಗಿದ್ರು. ನಾನು ಸಾವಿರಕ್ಕೆ ಒಂದು ಮಾತು ಹೇಳ್ತೀನಿ. ನನಗೆ ಅವಳು ತಾಯಿ ತರಹ. ನನ್ನ ಸಣ್ಣ ಮಗುವಿನ ತರಹ ನೋಡ್ಕೊಂಡಿದ್ಳು. ನನ್ನ ಪವಿ ಸತ್ತಿಲ್ಲ. ನನ್ನ ಜೊತೆಯಲ್ಲೇ ಇದ್ದಾಳೆ.

ಪವಿತ್ರಾ ಸಾವಿನಿಂದ ಬದುಕಲು ಇಷ್ಟವಿಲ್ಲ! ಪವಿತ್ರಾ ಸಂಬಂಧಿ ಬಳಿ ಹೇಳಿದ್ದೇನು?

ಪವಿತ್ರಾ ಸಾವಿನ ಬಳಿಕ ಆಕೆ ಅಂತ್ಯಕ್ರಿಯೆ ಮುಗಿಯುವವರೆಗೂ ಚಂದು ಮಂಡ್ಯದಲ್ಲೇ ಇದ್ರು. ಆದ್ರೆ ಈ ವೇಳೆಯೂ ಚಂದು ಸಾವಿನ ಮಾತುಗಳನ್ನಾಡಿದ್ರಂತೆ. ಪವಿತ್ರಾ ಅಂತ್ಯಕ್ರಿಯೆ ಮುಗಿಸಿ ಮನೆಗೆ ಬಂದಾಗ ಪವಿತ್ರಾ ಸಂಬಂಧಿ ಲೋಕೆಶ್ ಅನ್ನೋರ ಜೊತೆ ಚಂದು ಮನಸ್ಸಿನಲ್ಲಿದ್ದ ನೋವು ಹಂಚಿಕೊಂಡಿದ್ರಂತೆ. ಈ ವಿಚಾರವನ್ನು ಪವಿತ್ರಾ ಜಯರಾಮ್ ಸಂಬಂಧಿ, ಲೋಕೇಶ್ ನ್ಯೂಸ್ ಫಸ್ಸ್​ಗೆ ತಿಳಿಸಿದ್ದು, ಪವಿತ್ರಾ ಸಾವಿನಿಂದ ಚಂದು ಬದುಕಲು ಇಷ್ಟವಿರಲಿಲ್ಲ ಎಂದಿದ್ರು ಅಂತ ಹೇಳಿದ್ದಾರೆ. ಪವಿತ್ರಾಗಾಗಿ ನನ್ನ ಜೀವವನ್ನೇ ತ್ಯಾಗ ಮಾಡಿದ್ದೇನೆ. ಅವರನ್ನ ಬಿಟ್ಟಿರಲು ಆಗಲ್ಲ ಅಂತ ಚಂದು ತಮ್ಮ ಸಂಕಟವನ್ನು ಹಂಚಿಕೊಂಡಿದ್ರಂತೆ.
ಏನೇ ನೋವಿದ್ದರು ಇಲ್ಲಿಗೆ ಬನ್ನಿ ಎಂದಿದ್ದರು. ನನಗೆ ಅವರ ನಂಬರ್ ಕೂಡ ಕೊಟ್ಟಿದ್ದರು. ರಾತ್ರಿ 11.30 ಆತ್ಮಹತ್ಯೆ ವಿಚಾರ ತಿಳಿಯಿತು. ಅಂತ್ಯಕ್ರಿಯೆ ವೇಳೆಯೇ ನೋವು ತೋಡಿಕೊಂಡಿದ್ದರು. ಪವಿತ್ರಾ ಅವರ ಮಗ್ನದಲ್ಲೇ ಇದ್ದರು. ಏನು ಮಾಡಬೇಕು ಎಂದು ತೋಚುತ್ತಿಲ್ಲ ಅಂತ ಚಂದು ಪವಿತ್ರಾ ಅಗಲಿಕೆ ಸಂಟಕವನ್ನು ಹೇಳಿಕೊಂಡಿದ್ರಂತೆ. ಆದ್ರೀಗ ಆ ನೋವಲ್ಲೇ ಬದುಕಿಗೆ ವಿದಾಯ ಹೇಳಿ ಬಾರದ ಲೋಕಕಕ್ಕೆ ಪಯಣ ಬೆಳೆಸಿರೋದು ನಿಜಕ್ಕೂ ದುರಂತವೇ ಸರಿ. ಆದ್ರೆ ಇದೆಲ್ಲದ್ದರ ಮಧ್ಯೆ ಮದುವೆಯಾಗಿದ್ರೂ ಚಂದು ಪವಿತ್ರಾ ಸಂಬಂಧ ಬೆಳೆಸಿದ್ದೇಕೆ? ಗಂಡನ ಬಗ್ಗೆ ಚಂದು ಹೆಂಡತಿ ಹೇಳಿದ್ದೇನು? ಪವಿತ್ರಾ ಎಂಟ್ರಿಯಿಂದ ಚಂದು ಸಂಸಾರದಲ್ಲಿ ಬಿರುಗಾಳಿ ಎದ್ದಿದ್ದೇಕೆ ಅನ್ನೋ ವಿಚಾರ ಈಗ ಚರ್ಚೆಗೆ ಕಾರಣವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More