ವರುಣನ ಅವಾಂತರದ ನಡುವೆಯೂ ಜಯಿಸಿದ ಆರ್ಸಿಬಿ
ಬ್ಯಾಟಿಂಗ್ನಲ್ಲೂ ಫೀಲ್ಡಿಂಗ್ನಲ್ಲೂ ವಿರಾಟ್ ಕೊಹ್ಲಿ ಎತ್ತಿದ ಕೈ
ಗಂಡನನ್ನು ನೋಡಿ ಕಣ್ಣೀರು ಸುರಿಸಿದ ಅನುಷ್ಕಾ ಶರ್ಮಾ
ನಿನ್ನೆ ಚಿನ್ನಸ್ವಾಮಿಯಲ್ಲಿ ನಂಬಲಸಾಧ್ಯವಾದ ಪಂದ್ಯ ಏರ್ಪಟ್ಟಿತ್ತು. ಮಳೆಯ ಅವಾಂತರದ ನಡುವೆಯೇ ಹೋರಾಡಿ ಕೊನೆಗೆ ಆರ್ಸಿಬಿ ಚೆನ್ನೈ ವಿರುದ್ಧ 27 ರನ್ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಪ್ಲೇಆಫ್ಗೆ ಕಾಲಿಟ್ಟಿದೆ. ಆದರೆ ಈ ಗೆಲುವು ಅಭಿಮಾನಿಗಳಿಗೆ ಮಾತ್ರವಲ್ಲದೆ, ಆರ್ಸಿಬಿ ಕ್ರಿಕೆಟಗರಿಗೂ ಅಚ್ಚಳಿಯಾಗಿ ಉಳಿಯುವಂತೆ ಮಾಡಿದೆ. ಕಿಂಗ್ ಕೊಹ್ಲಿಯಂತೂ ಗೆಲುವಿನ ಜೊತೆ ಜೊತೆಗೆ ಕಂಬನಿ ಸುರಿಸಿದ್ದಾರೆ. ಅತ್ತ ಸ್ಟೇಡಿಯಂನಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ಅನುಷ್ಕಾ ಶರ್ಮಾ ಕೂಡ ಗಂಡನನ್ನು ಕಂಡ ಸಂತಸದ ಕಣ್ಣೀರು ಹಾಕಿದ್ದಾರೆ.
ಪಂದ್ಯದ ವೇಳೆ ವರುಣನಿಂದ ಆದ ಅವಾಂತರ ಕಂಡಾಗ ಆರ್ಸಿಬಿ ಗೆಲುವು ತುಸು ಕಷ್ಟ ಎಂಬಂತ್ತಿತ್ತು. ಏಕೆಂದರೆ ಆರ್ಸಿಬಿ ಟಾಸ್ ಸೋತು ಬ್ಯಾಟ್ ಬೀಸಲು ಮೈದಾನಕ್ಕೆ ಇಳಿದಿತ್ತು. ಮೊದಲ 10 ಓವರ್ನಲ್ಲಿ ರನ್ ಬಾರಿಸಲು ಆಟಗಾರರು ಪರದಾಡಿದರು. ಆದರೆ ಉಳಿದ 10 ಓವರ್ನಲ್ಲಿ 218 ರನ್ ಬಾರಿಸುವ ಮೂಲಕ ಸಿಎಸ್ಕೆಗೆ ಸವಾಲು ಎಸೆದರು.
ಮೊದಲ ಎಸೆತಕ್ಕೆ ಎಡವಿದ ಸಿಎಸ್ಕೆ
ಆದರೆ ಅತ್ತ ಸಿಎಸ್ಕೆ ಮೊದಲ ಎಸೆತದಲ್ಲೇ ಎಡವಿತ್ತು. ನಾಯಕ ರುತುರಾಜ್ ಕ್ಯಾಚ್ ನೀಡಿ ಔಟ್ ಆಗಿದ್ದರು. ಇದು ಆರ್ಸಿಬಿ ದಾರಿಯನ್ನು ಸುಗಮವಾಗಿಸಿತು. ಬೌಲಿಗರ ದಾಳಿಗೆ ಕ್ಯಾಚ್ ನೀಡುತ್ತಾ ಸಿಎಸ್ಕೆ ಆಟಗಾರರು ಹೊರನಡೆದರು. ನಿರೀಕ್ಷೆಯಲ್ಲಿ ಸಿಎಸ್ಕೆ ಅಭಿಮಾನಿಗಳಿಗೆ ನಿನ್ನೆಯ ಪಂದ್ಯ ಶಾಕ್ ನೀಡಿದರೆ, ಆರ್ಸಿಬಿ ಅಭಿಮಾನಿಗಳಿಗೆ ಸಿಹಿ ಊಟ ಉಣಬಡಿಸಿದಂತಿತ್ತು.
ಕೊಹ್ಲಿ ಕಣ್ಣೀರು
ಕೊನೆಗೂ ಮ್ಯಾಜಿಕ್ ಸಿಎಸ್ಕೆ ಆಟಗಾರರನ್ನು ಆರ್ಸಿಬಿ ಕಲಿಗಳು ಕಟ್ಟಿಹಾಕಿದ್ದಂತೂ ಸುಳ್ಳಲ್ಲ. ಅದರಲ್ಲೂ ಮ್ಯಾಜಿಕ್ ಎಂಬಂತೆ ಆರ್ಸಿಬಿ ಜಯ ಮಾತ್ರ ಎಲ್ಲರನ್ನು ಸಂತಸದ ಕಡಲಲ್ಲಿ ತೇಲುವಂತೆ ಮಾಡಿದರೆ. ಅತ್ತ ಕೊಹ್ಲಿಗೆ ಈ ಗೆಲುವು ದೊಡ್ಡ ಸಮಧಾನ ನೀಡಿದೆ. ತನ್ನ ಛಲ, ಹೋರಾಟದ ಪ್ರತಿಫಲವಾಗಿ ಆರ್ಸಿಬಿ ಪ್ಲೇಆಪ್ಗೆ ಹೋಗಿರುವುದನ್ನು ತನ್ನಿಂದಲೇ ನಂಬಲಾಗುತ್ತಿಲ್ಲವೆಂಬಂತೆ ಮೈದಾನದಲ್ಲಿ ಕೊಹ್ಲಿ ಕಣ್ಣೀರು ಸುರಿಸಿದ್ದಾರೆ.
They say Man don’t Cry… Yes Man do Cry 🥹
Virat after RCB Qualified for Playoffs.
17 Yrs of extreme Struggle & Loyalty with 1 Franchise can make anyone cry pic.twitter.com/daqVl0VwLb
— Vivek Singh (@VivekSi85847001) May 18, 2024
ಇದನ್ನೂ ಓದಿ: ಚೆನ್ನೈಯನ್ನು ಮನೆಗೆ ಕಳುಹಿಸಿದ ಬೆಂಗಳೂರು.. RCBಯ ಮುಂದಿನ ಪಂದ್ಯ ಯಾರ ಜೊತೆ?
ಅತ್ತ ಅನುಷ್ಕಾ ಶರ್ಮಾ ಕೂಡ ಗಂಡನ ಸಂತಸವನ್ನು ಕಣ್ಣಾರೆ ಕಂಡು ಮೈದಾನದಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಮಾತ್ರವಲ್ಲದೆ ಗಂಡನ ಖುಷಿಯನ್ನು ಕಂಡ ಕಣ್ಣೀರು ಸುರಿಸಿದ್ದಾರೆ. ಈ ದೃಶ್ಯ ಕ್ಯಾಮೆರಾ ಕಣ್ಣಿಗೆ ಸರಿಯಾಗಿ ಸಿಕ್ಕಿದ್ದು, ಸದ್ಯ ವೈರಲ್ ಆಗುತ್ತಿದೆ.
ಅರ್ಧ ಶತಕದ ಹಾದಿಯಲ್ಲಿ ಎಡವಿದ್ರು
ಇನ್ನು ಕೊಹ್ಲಿ ಆಟವನ್ನು ಕಂಡು ಅಭಿಮಾನಿಗಳು ಕೊಂಡಾಡಿದ್ದಾರೆ. 29 ಎಸೆತದಲ್ಲಿ 47 ರನ್ ಬಾರಿಸಿದ್ದಾರೆ. ಮಳೆಯ ಅವಾಂತರದಿಂದ ಪಿಚ್ ಕೂಡ ಕೈಕೊಟ್ಟ ಸಮಯದಲ್ಲೂ ಅರ್ಧ ಶತಕದ ಹಾದಿಯಲ್ಲಿದ್ದರು. ಆದರೆ ಸಿಕ್ಸ್ ಬಾರಿಸಲು ಹೋಗಿ ಕ್ಯಾಚ್ ನೀಡಿ ಔಟ್ ಆದರು. ಕೊಹ್ಲಿ ಮೂರು ಬೌಂಡರಿ, 4 ಸಿಕ್ಸ್ ಬಾರಿಸಿದನ್ನು ನೆನಪಿಸಲೇಬೇಕು.
ಇದನ್ನೂ ಓದಿ: ಮಳೆಯಬ್ಬರಕ್ಕೆ ಬೆಟ್ಟದಲ್ಲಿ ಜಲಪಾತ ಸೃಷ್ಟಿ! ಹೊಲ, ಗದ್ದೆ ಜಲಾವೃತ.. ರಾಜ್ಯದಲ್ಲಿ ವರಣಾರ್ಭಟಕ್ಕೆ ಜನರು ತತ್ತರ
ಕೊಹ್ಲಿ ಅಲ್ಲ..ಕಿಂಗ್ ಕೊಹ್ಲಿ
ಬ್ಯಾಟಿಂಗ್ ಮಾತ್ರವಲ್ಲ, ಫೀಲ್ಡಿಂಗ್ನಲ್ಲೂ ಪೂರ್ಣ ಪ್ರಮಾಣದ ಆಟವನ್ನು ಕೊಹ್ಲಿ ಆಡಿದ್ದಾರೆ. ತನ್ನತ್ತ ಬಂದ ಕ್ಯಾಚ್ ಅನ್ನು ಹಿಡಿಯುವ ಮೂಲಕ ಆರ್ಸಿಬಿ ಗೆಲುವಿಗೆ ಸಹಾಯ ಮಾಡಿದ್ದಾರೆ. ಇಷ್ಟೆಲ್ಲಾ ಹೋರಾಡಿ ಕೊನೆಗೆ ತಂಡವನ್ನು ಗೆಲುವಿನ ಲಯಕ್ಕೆ ಮತ್ತು ಪ್ಲೇಆಫ್ಗೆ ಕೊಡೊಯ್ದಲು ಶ್ರಮಪಟ್ಟ ಕೊಹ್ಲಿ ಖುಷಿಯಲ್ಲಿ ಕಣ್ಣೀರು ಹಾಕದೆ ಇರುತ್ತಾರೆಯೇ?. ಅದಕ್ಕೆ ಹೇಳೋದು ಕಿಂಗ್ ಕೊಹ್ಲಿ ಅಂತ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ವರುಣನ ಅವಾಂತರದ ನಡುವೆಯೂ ಜಯಿಸಿದ ಆರ್ಸಿಬಿ
ಬ್ಯಾಟಿಂಗ್ನಲ್ಲೂ ಫೀಲ್ಡಿಂಗ್ನಲ್ಲೂ ವಿರಾಟ್ ಕೊಹ್ಲಿ ಎತ್ತಿದ ಕೈ
ಗಂಡನನ್ನು ನೋಡಿ ಕಣ್ಣೀರು ಸುರಿಸಿದ ಅನುಷ್ಕಾ ಶರ್ಮಾ
ನಿನ್ನೆ ಚಿನ್ನಸ್ವಾಮಿಯಲ್ಲಿ ನಂಬಲಸಾಧ್ಯವಾದ ಪಂದ್ಯ ಏರ್ಪಟ್ಟಿತ್ತು. ಮಳೆಯ ಅವಾಂತರದ ನಡುವೆಯೇ ಹೋರಾಡಿ ಕೊನೆಗೆ ಆರ್ಸಿಬಿ ಚೆನ್ನೈ ವಿರುದ್ಧ 27 ರನ್ಗಳ ಭರ್ಜರಿ ಜಯ ಸಾಧಿಸಿದೆ. ಆ ಮೂಲಕ ಪ್ಲೇಆಫ್ಗೆ ಕಾಲಿಟ್ಟಿದೆ. ಆದರೆ ಈ ಗೆಲುವು ಅಭಿಮಾನಿಗಳಿಗೆ ಮಾತ್ರವಲ್ಲದೆ, ಆರ್ಸಿಬಿ ಕ್ರಿಕೆಟಗರಿಗೂ ಅಚ್ಚಳಿಯಾಗಿ ಉಳಿಯುವಂತೆ ಮಾಡಿದೆ. ಕಿಂಗ್ ಕೊಹ್ಲಿಯಂತೂ ಗೆಲುವಿನ ಜೊತೆ ಜೊತೆಗೆ ಕಂಬನಿ ಸುರಿಸಿದ್ದಾರೆ. ಅತ್ತ ಸ್ಟೇಡಿಯಂನಲ್ಲಿ ಕುಳಿತು ಪಂದ್ಯ ವೀಕ್ಷಿಸುತ್ತಿದ್ದ ಅನುಷ್ಕಾ ಶರ್ಮಾ ಕೂಡ ಗಂಡನನ್ನು ಕಂಡ ಸಂತಸದ ಕಣ್ಣೀರು ಹಾಕಿದ್ದಾರೆ.
ಪಂದ್ಯದ ವೇಳೆ ವರುಣನಿಂದ ಆದ ಅವಾಂತರ ಕಂಡಾಗ ಆರ್ಸಿಬಿ ಗೆಲುವು ತುಸು ಕಷ್ಟ ಎಂಬಂತ್ತಿತ್ತು. ಏಕೆಂದರೆ ಆರ್ಸಿಬಿ ಟಾಸ್ ಸೋತು ಬ್ಯಾಟ್ ಬೀಸಲು ಮೈದಾನಕ್ಕೆ ಇಳಿದಿತ್ತು. ಮೊದಲ 10 ಓವರ್ನಲ್ಲಿ ರನ್ ಬಾರಿಸಲು ಆಟಗಾರರು ಪರದಾಡಿದರು. ಆದರೆ ಉಳಿದ 10 ಓವರ್ನಲ್ಲಿ 218 ರನ್ ಬಾರಿಸುವ ಮೂಲಕ ಸಿಎಸ್ಕೆಗೆ ಸವಾಲು ಎಸೆದರು.
ಮೊದಲ ಎಸೆತಕ್ಕೆ ಎಡವಿದ ಸಿಎಸ್ಕೆ
ಆದರೆ ಅತ್ತ ಸಿಎಸ್ಕೆ ಮೊದಲ ಎಸೆತದಲ್ಲೇ ಎಡವಿತ್ತು. ನಾಯಕ ರುತುರಾಜ್ ಕ್ಯಾಚ್ ನೀಡಿ ಔಟ್ ಆಗಿದ್ದರು. ಇದು ಆರ್ಸಿಬಿ ದಾರಿಯನ್ನು ಸುಗಮವಾಗಿಸಿತು. ಬೌಲಿಗರ ದಾಳಿಗೆ ಕ್ಯಾಚ್ ನೀಡುತ್ತಾ ಸಿಎಸ್ಕೆ ಆಟಗಾರರು ಹೊರನಡೆದರು. ನಿರೀಕ್ಷೆಯಲ್ಲಿ ಸಿಎಸ್ಕೆ ಅಭಿಮಾನಿಗಳಿಗೆ ನಿನ್ನೆಯ ಪಂದ್ಯ ಶಾಕ್ ನೀಡಿದರೆ, ಆರ್ಸಿಬಿ ಅಭಿಮಾನಿಗಳಿಗೆ ಸಿಹಿ ಊಟ ಉಣಬಡಿಸಿದಂತಿತ್ತು.
ಕೊಹ್ಲಿ ಕಣ್ಣೀರು
ಕೊನೆಗೂ ಮ್ಯಾಜಿಕ್ ಸಿಎಸ್ಕೆ ಆಟಗಾರರನ್ನು ಆರ್ಸಿಬಿ ಕಲಿಗಳು ಕಟ್ಟಿಹಾಕಿದ್ದಂತೂ ಸುಳ್ಳಲ್ಲ. ಅದರಲ್ಲೂ ಮ್ಯಾಜಿಕ್ ಎಂಬಂತೆ ಆರ್ಸಿಬಿ ಜಯ ಮಾತ್ರ ಎಲ್ಲರನ್ನು ಸಂತಸದ ಕಡಲಲ್ಲಿ ತೇಲುವಂತೆ ಮಾಡಿದರೆ. ಅತ್ತ ಕೊಹ್ಲಿಗೆ ಈ ಗೆಲುವು ದೊಡ್ಡ ಸಮಧಾನ ನೀಡಿದೆ. ತನ್ನ ಛಲ, ಹೋರಾಟದ ಪ್ರತಿಫಲವಾಗಿ ಆರ್ಸಿಬಿ ಪ್ಲೇಆಪ್ಗೆ ಹೋಗಿರುವುದನ್ನು ತನ್ನಿಂದಲೇ ನಂಬಲಾಗುತ್ತಿಲ್ಲವೆಂಬಂತೆ ಮೈದಾನದಲ್ಲಿ ಕೊಹ್ಲಿ ಕಣ್ಣೀರು ಸುರಿಸಿದ್ದಾರೆ.
They say Man don’t Cry… Yes Man do Cry 🥹
Virat after RCB Qualified for Playoffs.
17 Yrs of extreme Struggle & Loyalty with 1 Franchise can make anyone cry pic.twitter.com/daqVl0VwLb
— Vivek Singh (@VivekSi85847001) May 18, 2024
ಇದನ್ನೂ ಓದಿ: ಚೆನ್ನೈಯನ್ನು ಮನೆಗೆ ಕಳುಹಿಸಿದ ಬೆಂಗಳೂರು.. RCBಯ ಮುಂದಿನ ಪಂದ್ಯ ಯಾರ ಜೊತೆ?
ಅತ್ತ ಅನುಷ್ಕಾ ಶರ್ಮಾ ಕೂಡ ಗಂಡನ ಸಂತಸವನ್ನು ಕಣ್ಣಾರೆ ಕಂಡು ಮೈದಾನದಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಮಾತ್ರವಲ್ಲದೆ ಗಂಡನ ಖುಷಿಯನ್ನು ಕಂಡ ಕಣ್ಣೀರು ಸುರಿಸಿದ್ದಾರೆ. ಈ ದೃಶ್ಯ ಕ್ಯಾಮೆರಾ ಕಣ್ಣಿಗೆ ಸರಿಯಾಗಿ ಸಿಕ್ಕಿದ್ದು, ಸದ್ಯ ವೈರಲ್ ಆಗುತ್ತಿದೆ.
ಅರ್ಧ ಶತಕದ ಹಾದಿಯಲ್ಲಿ ಎಡವಿದ್ರು
ಇನ್ನು ಕೊಹ್ಲಿ ಆಟವನ್ನು ಕಂಡು ಅಭಿಮಾನಿಗಳು ಕೊಂಡಾಡಿದ್ದಾರೆ. 29 ಎಸೆತದಲ್ಲಿ 47 ರನ್ ಬಾರಿಸಿದ್ದಾರೆ. ಮಳೆಯ ಅವಾಂತರದಿಂದ ಪಿಚ್ ಕೂಡ ಕೈಕೊಟ್ಟ ಸಮಯದಲ್ಲೂ ಅರ್ಧ ಶತಕದ ಹಾದಿಯಲ್ಲಿದ್ದರು. ಆದರೆ ಸಿಕ್ಸ್ ಬಾರಿಸಲು ಹೋಗಿ ಕ್ಯಾಚ್ ನೀಡಿ ಔಟ್ ಆದರು. ಕೊಹ್ಲಿ ಮೂರು ಬೌಂಡರಿ, 4 ಸಿಕ್ಸ್ ಬಾರಿಸಿದನ್ನು ನೆನಪಿಸಲೇಬೇಕು.
ಇದನ್ನೂ ಓದಿ: ಮಳೆಯಬ್ಬರಕ್ಕೆ ಬೆಟ್ಟದಲ್ಲಿ ಜಲಪಾತ ಸೃಷ್ಟಿ! ಹೊಲ, ಗದ್ದೆ ಜಲಾವೃತ.. ರಾಜ್ಯದಲ್ಲಿ ವರಣಾರ್ಭಟಕ್ಕೆ ಜನರು ತತ್ತರ
ಕೊಹ್ಲಿ ಅಲ್ಲ..ಕಿಂಗ್ ಕೊಹ್ಲಿ
ಬ್ಯಾಟಿಂಗ್ ಮಾತ್ರವಲ್ಲ, ಫೀಲ್ಡಿಂಗ್ನಲ್ಲೂ ಪೂರ್ಣ ಪ್ರಮಾಣದ ಆಟವನ್ನು ಕೊಹ್ಲಿ ಆಡಿದ್ದಾರೆ. ತನ್ನತ್ತ ಬಂದ ಕ್ಯಾಚ್ ಅನ್ನು ಹಿಡಿಯುವ ಮೂಲಕ ಆರ್ಸಿಬಿ ಗೆಲುವಿಗೆ ಸಹಾಯ ಮಾಡಿದ್ದಾರೆ. ಇಷ್ಟೆಲ್ಲಾ ಹೋರಾಡಿ ಕೊನೆಗೆ ತಂಡವನ್ನು ಗೆಲುವಿನ ಲಯಕ್ಕೆ ಮತ್ತು ಪ್ಲೇಆಫ್ಗೆ ಕೊಡೊಯ್ದಲು ಶ್ರಮಪಟ್ಟ ಕೊಹ್ಲಿ ಖುಷಿಯಲ್ಲಿ ಕಣ್ಣೀರು ಹಾಕದೆ ಇರುತ್ತಾರೆಯೇ?. ಅದಕ್ಕೆ ಹೇಳೋದು ಕಿಂಗ್ ಕೊಹ್ಲಿ ಅಂತ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ