newsfirstkannada.com

140-150 ರನ್​ ಟಾರ್ಗೆಟ್​ ಹಾಕೊಂಡಿದ್ವಿ, ಧೋನಿ ಬಗ್ಗೆಯೂ ಯೋಚಿಸಿದ್ದೆ.. ಜಯದ ಬಳಿಕ ಫಾಫ್​ ಅಚ್ಚರಿಯ ಮಾತುಗಳು 

Share :

Published May 19, 2024 at 10:27am

    ಇದು ನಾನು ಟಿ20ಯಲ್ಲಿ ಆಡಿದ ಕಠಿಣ ಪಿಚ್​ ಎಂದು ಭಾವಿಸಿದ್ದೇನೆ

    ಗೆಲುವಿನೊಂದಿಗೆ ಇಂದಿನ ಪಂದ್ಯ ಮುಗಿಸಲು ಸಂತೋಷವಾಗುತ್ತಿದೆ

    ಒಂದು ಹಂತದಲ್ಲಿ ನಾನು ಧೋನಿ ಬಗ್ಗೆ ಯೋಚಿಸಿದ್ದೆ! ಎಂದ ಆರ್​ಸಿಬಿ ನಾಯಕ

‘‘ಇದು ನಾನು ಟಿ20ಯಲ್ಲಿ ಆಡಿದ ಕಠಿಣ ಪಿಚ್​ ಎಂದು ಭಾವಿಸಿದ್ದೇನೆ. ಮಳೆ ನೀಡಿದ ವಿರಾಮದಲ್ಲಿ ನಾನು ಮತ್ತು ವಿರಾಟ್​ ಕೊಹ್ಲಿ 140-150 ರನ್​ ಬಾರಿಸುವ ಟಾರ್ಗೆಟ್​ ಬಗ್ಗೆ ಮಾತನಾಡುತ್ತಿದ್ದೆವು’’

ಇದು ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್​ ಜಯದ ಬಳಿಕ ಹೇಳಿದ ಮಾತುಗಳು. ಆರ್​ಸಿಬಿ 27 ರನ್​ಗಳ ಭರ್ಜರಿ ಗೆಲುವಿನ ಬಳಿಕ ಮತ್ತು ಸಿಎಸ್​ಕೆಯನ್ನು ಸೋಲಿಸಿದ ಸಂತಸದಲ್ಲಿ ಮಾತನಾಡಿದ್ದಾರೆ.

140-150 ರನ್​ ಬಾರಿಸುವ ಟಾರ್ಗೆಟ್

‘‘ಎಂತಹ ರಾತ್ರಿ. ನಂಬಲಾಗದಂತಹ ಮತ್ತು ಉತ್ತಮ ವಾತವರಣ. ಗೆಲುವಿನೊಂದಿಗೆ ಇಂದಿನ ಪಂದ್ಯ ಮುಗಿಸಲು ಸಂತೋಷವಾಗುತ್ತಿದೆ. ಮೊದಲು ಬ್ಯಾಟಿಂಗ್​ ಮಾಡುವುದರಿಂದ, ಇದು ನಾನು ಟಿ20ಯಲ್ಲಿ ಆಡಿದ ಕಠಿಣ ಪಿಚ್​ ಎಂದು ಭಾವಿಸಿದ್ದೇನೆ. ಮಳೆ ನೀಡಿದ ವಿರಾಮದಲ್ಲಿ ನಾನು ಮತ್ತು ವಿರಾಟ್​ ಕೊಹ್ಲಿ 140-150 ರನ್​ ಬಾರಿಸುವ ಟಾರ್ಗೆಟ್​ ಬಗ್ಗೆ ಮಾತನಾಡುತ್ತಿದ್ದೆವು. ಮಳೆಯಿಂದಾಗಿ ಪಿಚ್​ ಒದ್ದೆಯಾಗುತ್ತದೆ ಎಂದು ಅಂಪೈರ್​ ಮಾತನಾಡುತ್ತಿದ್ದರು. ಅವರು ಆಟವನ್ನು ಮುಂದೂಡಲು ಬಯಸಿದರು. ಅದು ನಿಜವಾಗಿಯೂ ಅರ್ಥಪೂರ್ಣವಾಗಿದೆ’’ ಎಂದು ಫಾಫ್​ ಡು ಪ್ಲೆಸಿಸ್​ ಹೇಳಿದ್ದಾರೆ.

ಇದನ್ನೂ ಓದಿ: RCB ಅಭಿಮಾನಿಗಳು ಹೆಮ್ಮೆ ಪಡುವ ಸುದ್ದಿ.. ನಿನ್ನೆ ಚಿನ್ನಸ್ವಾಮಿಯಲ್ಲಿ ಕೊಹ್ಲಿ ಮಾಡಿರೋ ಸಾಧನೆ ಗೊತ್ತಾ?

ಬಳಿಕ ಮಾತು ಮುಂದುವರೆಸಿದ ಅವರು, ‘‘ನಾನು ಸ್ಯಾಂಟ್ನರ್​ಗೆ ಹೇಳುತ್ತಿದ್ದೆ, ಇದು ರಾಂಚಿಯಲ್ಲಿ ನಡೆದಂತೆ 5ನೇ ದಿನ ಟೆಸ್ಟ್​ ಪಂದ್ಯವಾಗಿದೆ. ಅದರಲ್ಲಿ 200 ರನ್​ ಗಳಿಸೋದು ಕೂಡ ನಂಬಲಸಾಧ್ಯವಾಗಿತ್ತು. ಕಳೆದ 6 ಪಂದ್ಯಗಳಲ್ಲಿ ಬ್ಯಾಟರ್​​ಗಳು ಉತ್ತಮ ಉದ್ದೇಶ ಮತ್ತು ಉತ್ತಮ ಸ್ಟೈಕ್​ ರೇಟ್​ನೊಂದಿಗೆ ಬ್ಯಾಟಿಂಗ್​ ಮಾಡಿದ್ದಾರೆ’’ ಎಂದರು.

ಧೋನಿ ಬಗ್ಗೆ ಯೋಚಿಸಿದ್ದೆ

ನಾವು ಮೊದಲೇ ನಿಧನವಾಗಿ ಆಡುತ್ತಿದ್ದೆವು. ಹೆಚ್ಚಿನ ಉದ್ದೇಶವನ್ನು ಬಯಸಿದ್ದೆವು. 175 ರನ್​ ಬಾರಿಸಲು ಯೋಚಿಸಿದ್ದೆವು. ಅದು ಸ್ವಲ್ಪ ಹತ್ತಿರವಾಯಿತು. ಒಂದು ಹಂತದಲ್ಲಿ ನಾನು ಧೋನಿ ಬಗ್ಗೆ ಯೋಚಿಸಿದೆ. ಆತ ಅದನ್ನು ಹಲವು ಬಾರಿ ಮೀರಿಸಿದ್ದಾನೆ. ಒದ್ದೆಯಾದ ಚೆಂಡಿನೊಂದಿಗೆ ನಾವು ಬೌಲಿಂಗ್​ ಮಾಡಿದ ರೀತಿ ನಂಬಲಾಗದಂತಿತ್ತು. ಅದನ್ನು ನಾವು ಬದಲಾಯಿಸಲು ಯತ್ನಿಸಿದೆವು.

ಇದನ್ನೂ ಓದಿ: RCB ಅಭಿಮಾನಿಗಳು ಹೆಮ್ಮೆ ಪಡುವ ಸುದ್ದಿ.. ನಿನ್ನೆ ಚಿನ್ನಸ್ವಾಮಿಯಲ್ಲಿ ಕೊಹ್ಲಿ ಮಾಡಿರೋ ಸಾಧನೆ ಗೊತ್ತಾ?

ಮ್ಯಾನ್​ ಆಫ್​ ದಿ ಮ್ಯಾಚ್​ ಯಶ್​ ದಯಾಳ್​ಗೆ ಅರ್ಪಿಸುತ್ತೇನೆ

ನಾನು ಮ್ಯಾನ್​ ಆಫ್​ ದಿ ಮ್ಯಾಚ್​ ಅನ್ನು ಯಶ್​ ದಯಾಳ್​ಗೆ ಅರ್ಪಿಸುತ್ತೇನೆ. ಅವರು ಬೌಲಿಂಗ್​ ಮಾಡಿದ ರೀತಿ ನಂಬಲಸಾಧ್ಯವಾದಂತಿತ್ತು. ಯಾರ್ಕರ್​ ಮೊದಲ ಎಸೆತದಲ್ಲೆ ವರ್ಕೌಟ್​ ಆಗಿಲ್ಲ. ಬಳಿಕ ವೇಗವಾಗಿ ಎಸೆಯಲು ಯತ್ನಿಸಿದರು. ಅದು ಚೆನ್ನಾಗಿ ಕೆಲಸ ಮಾಡಿತು. ಸಿಎಸ್​ಕೆ ಮತ್ತು ಆರ್​ಸಿಬಿ ನಂಬಲಾಗದ ವಾತವರಣ ಮತ್ತು ಬೆಂಬಲ ನೀಡಿದ ಪ್ರೇಕ್ಷಕರಿಗೆ ಧನ್ಯವಾದ. ನಾವು 6 ಪಂದ್ಯ ಗೆದ್ದಿದ್ದು ನಿಜವಾಗಿ ಮುಖ್ಯವಾಗಿದೆ ಎಂದು ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್​ ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

140-150 ರನ್​ ಟಾರ್ಗೆಟ್​ ಹಾಕೊಂಡಿದ್ವಿ, ಧೋನಿ ಬಗ್ಗೆಯೂ ಯೋಚಿಸಿದ್ದೆ.. ಜಯದ ಬಳಿಕ ಫಾಫ್​ ಅಚ್ಚರಿಯ ಮಾತುಗಳು 

https://newsfirstlive.com/wp-content/uploads/2024/05/faf-duplessis.jpg

    ಇದು ನಾನು ಟಿ20ಯಲ್ಲಿ ಆಡಿದ ಕಠಿಣ ಪಿಚ್​ ಎಂದು ಭಾವಿಸಿದ್ದೇನೆ

    ಗೆಲುವಿನೊಂದಿಗೆ ಇಂದಿನ ಪಂದ್ಯ ಮುಗಿಸಲು ಸಂತೋಷವಾಗುತ್ತಿದೆ

    ಒಂದು ಹಂತದಲ್ಲಿ ನಾನು ಧೋನಿ ಬಗ್ಗೆ ಯೋಚಿಸಿದ್ದೆ! ಎಂದ ಆರ್​ಸಿಬಿ ನಾಯಕ

‘‘ಇದು ನಾನು ಟಿ20ಯಲ್ಲಿ ಆಡಿದ ಕಠಿಣ ಪಿಚ್​ ಎಂದು ಭಾವಿಸಿದ್ದೇನೆ. ಮಳೆ ನೀಡಿದ ವಿರಾಮದಲ್ಲಿ ನಾನು ಮತ್ತು ವಿರಾಟ್​ ಕೊಹ್ಲಿ 140-150 ರನ್​ ಬಾರಿಸುವ ಟಾರ್ಗೆಟ್​ ಬಗ್ಗೆ ಮಾತನಾಡುತ್ತಿದ್ದೆವು’’

ಇದು ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್​ ಜಯದ ಬಳಿಕ ಹೇಳಿದ ಮಾತುಗಳು. ಆರ್​ಸಿಬಿ 27 ರನ್​ಗಳ ಭರ್ಜರಿ ಗೆಲುವಿನ ಬಳಿಕ ಮತ್ತು ಸಿಎಸ್​ಕೆಯನ್ನು ಸೋಲಿಸಿದ ಸಂತಸದಲ್ಲಿ ಮಾತನಾಡಿದ್ದಾರೆ.

140-150 ರನ್​ ಬಾರಿಸುವ ಟಾರ್ಗೆಟ್

‘‘ಎಂತಹ ರಾತ್ರಿ. ನಂಬಲಾಗದಂತಹ ಮತ್ತು ಉತ್ತಮ ವಾತವರಣ. ಗೆಲುವಿನೊಂದಿಗೆ ಇಂದಿನ ಪಂದ್ಯ ಮುಗಿಸಲು ಸಂತೋಷವಾಗುತ್ತಿದೆ. ಮೊದಲು ಬ್ಯಾಟಿಂಗ್​ ಮಾಡುವುದರಿಂದ, ಇದು ನಾನು ಟಿ20ಯಲ್ಲಿ ಆಡಿದ ಕಠಿಣ ಪಿಚ್​ ಎಂದು ಭಾವಿಸಿದ್ದೇನೆ. ಮಳೆ ನೀಡಿದ ವಿರಾಮದಲ್ಲಿ ನಾನು ಮತ್ತು ವಿರಾಟ್​ ಕೊಹ್ಲಿ 140-150 ರನ್​ ಬಾರಿಸುವ ಟಾರ್ಗೆಟ್​ ಬಗ್ಗೆ ಮಾತನಾಡುತ್ತಿದ್ದೆವು. ಮಳೆಯಿಂದಾಗಿ ಪಿಚ್​ ಒದ್ದೆಯಾಗುತ್ತದೆ ಎಂದು ಅಂಪೈರ್​ ಮಾತನಾಡುತ್ತಿದ್ದರು. ಅವರು ಆಟವನ್ನು ಮುಂದೂಡಲು ಬಯಸಿದರು. ಅದು ನಿಜವಾಗಿಯೂ ಅರ್ಥಪೂರ್ಣವಾಗಿದೆ’’ ಎಂದು ಫಾಫ್​ ಡು ಪ್ಲೆಸಿಸ್​ ಹೇಳಿದ್ದಾರೆ.

ಇದನ್ನೂ ಓದಿ: RCB ಅಭಿಮಾನಿಗಳು ಹೆಮ್ಮೆ ಪಡುವ ಸುದ್ದಿ.. ನಿನ್ನೆ ಚಿನ್ನಸ್ವಾಮಿಯಲ್ಲಿ ಕೊಹ್ಲಿ ಮಾಡಿರೋ ಸಾಧನೆ ಗೊತ್ತಾ?

ಬಳಿಕ ಮಾತು ಮುಂದುವರೆಸಿದ ಅವರು, ‘‘ನಾನು ಸ್ಯಾಂಟ್ನರ್​ಗೆ ಹೇಳುತ್ತಿದ್ದೆ, ಇದು ರಾಂಚಿಯಲ್ಲಿ ನಡೆದಂತೆ 5ನೇ ದಿನ ಟೆಸ್ಟ್​ ಪಂದ್ಯವಾಗಿದೆ. ಅದರಲ್ಲಿ 200 ರನ್​ ಗಳಿಸೋದು ಕೂಡ ನಂಬಲಸಾಧ್ಯವಾಗಿತ್ತು. ಕಳೆದ 6 ಪಂದ್ಯಗಳಲ್ಲಿ ಬ್ಯಾಟರ್​​ಗಳು ಉತ್ತಮ ಉದ್ದೇಶ ಮತ್ತು ಉತ್ತಮ ಸ್ಟೈಕ್​ ರೇಟ್​ನೊಂದಿಗೆ ಬ್ಯಾಟಿಂಗ್​ ಮಾಡಿದ್ದಾರೆ’’ ಎಂದರು.

ಧೋನಿ ಬಗ್ಗೆ ಯೋಚಿಸಿದ್ದೆ

ನಾವು ಮೊದಲೇ ನಿಧನವಾಗಿ ಆಡುತ್ತಿದ್ದೆವು. ಹೆಚ್ಚಿನ ಉದ್ದೇಶವನ್ನು ಬಯಸಿದ್ದೆವು. 175 ರನ್​ ಬಾರಿಸಲು ಯೋಚಿಸಿದ್ದೆವು. ಅದು ಸ್ವಲ್ಪ ಹತ್ತಿರವಾಯಿತು. ಒಂದು ಹಂತದಲ್ಲಿ ನಾನು ಧೋನಿ ಬಗ್ಗೆ ಯೋಚಿಸಿದೆ. ಆತ ಅದನ್ನು ಹಲವು ಬಾರಿ ಮೀರಿಸಿದ್ದಾನೆ. ಒದ್ದೆಯಾದ ಚೆಂಡಿನೊಂದಿಗೆ ನಾವು ಬೌಲಿಂಗ್​ ಮಾಡಿದ ರೀತಿ ನಂಬಲಾಗದಂತಿತ್ತು. ಅದನ್ನು ನಾವು ಬದಲಾಯಿಸಲು ಯತ್ನಿಸಿದೆವು.

ಇದನ್ನೂ ಓದಿ: RCB ಅಭಿಮಾನಿಗಳು ಹೆಮ್ಮೆ ಪಡುವ ಸುದ್ದಿ.. ನಿನ್ನೆ ಚಿನ್ನಸ್ವಾಮಿಯಲ್ಲಿ ಕೊಹ್ಲಿ ಮಾಡಿರೋ ಸಾಧನೆ ಗೊತ್ತಾ?

ಮ್ಯಾನ್​ ಆಫ್​ ದಿ ಮ್ಯಾಚ್​ ಯಶ್​ ದಯಾಳ್​ಗೆ ಅರ್ಪಿಸುತ್ತೇನೆ

ನಾನು ಮ್ಯಾನ್​ ಆಫ್​ ದಿ ಮ್ಯಾಚ್​ ಅನ್ನು ಯಶ್​ ದಯಾಳ್​ಗೆ ಅರ್ಪಿಸುತ್ತೇನೆ. ಅವರು ಬೌಲಿಂಗ್​ ಮಾಡಿದ ರೀತಿ ನಂಬಲಸಾಧ್ಯವಾದಂತಿತ್ತು. ಯಾರ್ಕರ್​ ಮೊದಲ ಎಸೆತದಲ್ಲೆ ವರ್ಕೌಟ್​ ಆಗಿಲ್ಲ. ಬಳಿಕ ವೇಗವಾಗಿ ಎಸೆಯಲು ಯತ್ನಿಸಿದರು. ಅದು ಚೆನ್ನಾಗಿ ಕೆಲಸ ಮಾಡಿತು. ಸಿಎಸ್​ಕೆ ಮತ್ತು ಆರ್​ಸಿಬಿ ನಂಬಲಾಗದ ವಾತವರಣ ಮತ್ತು ಬೆಂಬಲ ನೀಡಿದ ಪ್ರೇಕ್ಷಕರಿಗೆ ಧನ್ಯವಾದ. ನಾವು 6 ಪಂದ್ಯ ಗೆದ್ದಿದ್ದು ನಿಜವಾಗಿ ಮುಖ್ಯವಾಗಿದೆ ಎಂದು ಆರ್​ಸಿಬಿ ನಾಯಕ ಫಾಫ್​ ಡು ಪ್ಲೆಸಿಸ್​ ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Load More