ಧೋನಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ
ಮಾಹಿ ಹೊಡೆದ ಸಿಕ್ಸ್ CSK ಸೋಲಿಗೆ ಕಾರಣವಾಗಿದ್ದು ನಿಜನಾ?
ಧೋನಿ ಅಭಿಮಾನಿಗಳು ಈ ಬಗ್ಗೆ ಏನಂದ್ರು ಗೊತ್ತಾ? ಈ ಸ್ಟೋರಿ ಓದಿ
ಧೋನಿ ಸಿಡಿಸಿದ ಸಿಕ್ಸ್ ಚೆನ್ನೈ ಸೋಲಿಗೂ ಕಾರಣವಾಯ್ತಾ?. ಹೀಗೊಂದು ಮಾತಿಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಕೆಲವರು ಮಾಹಿಯಿಂದ ಪಂದ್ಯ ಸೋತಿತು ಎಂಬ ಮಾತುಗಳನ್ನು ಆಡುತ್ತಿದ್ದಾರೆ. ಆರ್ಸಿಬಿ ಮ್ಯಾಚ್ ಫಿನೀಶರ್, ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕೂಡ ಈ ಬಗ್ಗೆ ಮಾತನಾಡಿದ್ದಾರೆ.
ಧೋನಿ ಸಿಡಿಸಿದ ಸಿಕ್ಸ್ ಮೈದಾನದಿಂದ ಹೊರ ಹೋಗಿದೆ. ಬ್ಯಾಟ್ ಬೀಸಿ ಬಲವಾದ ಏಟು ಹೊಡೆದ ಕಾರಣ ಚೆಂಡು ಸ್ಟೇಡಿಯಂನಿಂದ ಎತ್ತರಕ್ಕೆ ಹೋಗಿ ಕಾಣೆಯಾಗಿದೆ. ಇದು ಆರ್ಸಿಬಿಗೆ ಗೆಲುವಿಗೆ ಕಾರಣವಾಯ್ತು. ಮಾತ್ರವಲ್ಲದೆ ಚೆಂಡು ಕಾಣೆಯಾದ ಕಾರಣ ಹೊಸ ಚೆಂಡಿನಲ್ಲಿ ಆಡಲು ಅವಕಾಶ ಸಿಕ್ಕಿತು. ಇದು ಸಿಎಸ್ಕೆ ಆಟಗಾರರಿಗೆ ಮುಳುವಾಯ್ತು ಎಂದು ಅಭಿಮಾನಿಗಳು ಮಾತನಾಡುತ್ತಿದ್ದಾರೆ.
ಇದನ್ನೂ ಓದಿ: ಫಾಫ್ಗಿದ್ದ ಚಿಂತೆಯೇ ಆತ! ನುಂಗಿ ನೀರು ಕುಡಿತಾನೆ ಅನ್ನೋ ಭಯವಿತ್ತಾ RCB ನಾಯಕನಿಗೆ? ಏನಂದ್ರು?
ದಿನೇಶ್ ಕಾರ್ತಿಕ್ ಏನಂದ್ರು?
ಎಂಎಸ್ ಧೋನಿ 110 ಮೀಟರ್ ಎತ್ತರಕ್ಕೆ ಸಿಕ್ಸರ್ ಬಾರಿಸಿರೋದು ಅತ್ಯುತ್ತಮ ಸಂಗತಿಯಾಗಿದೆ. ಚೆಂಡು ಚಿನ್ನಸ್ವಾಮಿಯ ಮೈದಾನದಿಂದ ಹೊರಗೆ ಹೋಗಿದೆ. ಇದು ನಮಗೆ ಸಹಾಯವಾಯಿತು. ನಮಗೆ ಹೊಸ ಚೆಂಡನ್ನು ನೀಡಲಾಯಿತು.
Dinesh Karthik said, “MS Dhoni hitting that 110M six outside the Chinnaswamy was the best thing that happened, it gave us a new ball which helped us”. pic.twitter.com/07VNp3z4W6
— Mufaddal Vohra (@mufaddal_vohra) May 19, 2024
ಇದನ್ನೂ ಓದಿ: ಖುಷಿಯಲ್ಲಿ ಫಾಫ್ ಕೆನ್ನೆಗೆ ಮುತ್ತಿಟ್ಟ ಕೊಹ್ಲಿ.. ಅನುಷ್ಕಾಗೆ ಟ್ಯಾಗ್ ಮಾಡಿದ ಫ್ಯಾನ್ಸ್!
ಇನ್ನು ಈ ವಿಚಾರವಾಗಿ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಧೋನಿ ಪರ-ವಿರೋಧವಾಗಿ ಕಾಮೆಂಟ್ ಮಾಡಿದ್ದಾರೆ. ಅದರಲ್ಲಿ ಕೆಲವರು ‘ಥಾಲ ಫಾರ್ ರೀಸನ್’ ಎಂದರೆ. ಮತ್ತೊಬ್ಬರು ಹೌದು, ಧೋನಿಯಿಂದ ಆರ್ಸಿಬಿ ಸಣ್ಣ ಸಹಾಯವಾಯ್ತು ಎಂದು ಹೇಳಿದ್ದಾರೆ. ಸಿಎಸ್ಕೆ ಅಭಿಮಾನಿಗಳಂತೂ ಧೋನಿ ಹಿಂದಿನಿಂದಲೂ ಸಿಕ್ಸ್ ಬಾರಿಸುತ್ತಲೇ ಬಂದಿದ್ದಾರೆ ಎಂದಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಧೋನಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ
ಮಾಹಿ ಹೊಡೆದ ಸಿಕ್ಸ್ CSK ಸೋಲಿಗೆ ಕಾರಣವಾಗಿದ್ದು ನಿಜನಾ?
ಧೋನಿ ಅಭಿಮಾನಿಗಳು ಈ ಬಗ್ಗೆ ಏನಂದ್ರು ಗೊತ್ತಾ? ಈ ಸ್ಟೋರಿ ಓದಿ
ಧೋನಿ ಸಿಡಿಸಿದ ಸಿಕ್ಸ್ ಚೆನ್ನೈ ಸೋಲಿಗೂ ಕಾರಣವಾಯ್ತಾ?. ಹೀಗೊಂದು ಮಾತಿಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆಯುತ್ತಿದೆ. ಕೆಲವರು ಮಾಹಿಯಿಂದ ಪಂದ್ಯ ಸೋತಿತು ಎಂಬ ಮಾತುಗಳನ್ನು ಆಡುತ್ತಿದ್ದಾರೆ. ಆರ್ಸಿಬಿ ಮ್ಯಾಚ್ ಫಿನೀಶರ್, ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ ಕೂಡ ಈ ಬಗ್ಗೆ ಮಾತನಾಡಿದ್ದಾರೆ.
ಧೋನಿ ಸಿಡಿಸಿದ ಸಿಕ್ಸ್ ಮೈದಾನದಿಂದ ಹೊರ ಹೋಗಿದೆ. ಬ್ಯಾಟ್ ಬೀಸಿ ಬಲವಾದ ಏಟು ಹೊಡೆದ ಕಾರಣ ಚೆಂಡು ಸ್ಟೇಡಿಯಂನಿಂದ ಎತ್ತರಕ್ಕೆ ಹೋಗಿ ಕಾಣೆಯಾಗಿದೆ. ಇದು ಆರ್ಸಿಬಿಗೆ ಗೆಲುವಿಗೆ ಕಾರಣವಾಯ್ತು. ಮಾತ್ರವಲ್ಲದೆ ಚೆಂಡು ಕಾಣೆಯಾದ ಕಾರಣ ಹೊಸ ಚೆಂಡಿನಲ್ಲಿ ಆಡಲು ಅವಕಾಶ ಸಿಕ್ಕಿತು. ಇದು ಸಿಎಸ್ಕೆ ಆಟಗಾರರಿಗೆ ಮುಳುವಾಯ್ತು ಎಂದು ಅಭಿಮಾನಿಗಳು ಮಾತನಾಡುತ್ತಿದ್ದಾರೆ.
ಇದನ್ನೂ ಓದಿ: ಫಾಫ್ಗಿದ್ದ ಚಿಂತೆಯೇ ಆತ! ನುಂಗಿ ನೀರು ಕುಡಿತಾನೆ ಅನ್ನೋ ಭಯವಿತ್ತಾ RCB ನಾಯಕನಿಗೆ? ಏನಂದ್ರು?
ದಿನೇಶ್ ಕಾರ್ತಿಕ್ ಏನಂದ್ರು?
ಎಂಎಸ್ ಧೋನಿ 110 ಮೀಟರ್ ಎತ್ತರಕ್ಕೆ ಸಿಕ್ಸರ್ ಬಾರಿಸಿರೋದು ಅತ್ಯುತ್ತಮ ಸಂಗತಿಯಾಗಿದೆ. ಚೆಂಡು ಚಿನ್ನಸ್ವಾಮಿಯ ಮೈದಾನದಿಂದ ಹೊರಗೆ ಹೋಗಿದೆ. ಇದು ನಮಗೆ ಸಹಾಯವಾಯಿತು. ನಮಗೆ ಹೊಸ ಚೆಂಡನ್ನು ನೀಡಲಾಯಿತು.
Dinesh Karthik said, “MS Dhoni hitting that 110M six outside the Chinnaswamy was the best thing that happened, it gave us a new ball which helped us”. pic.twitter.com/07VNp3z4W6
— Mufaddal Vohra (@mufaddal_vohra) May 19, 2024
ಇದನ್ನೂ ಓದಿ: ಖುಷಿಯಲ್ಲಿ ಫಾಫ್ ಕೆನ್ನೆಗೆ ಮುತ್ತಿಟ್ಟ ಕೊಹ್ಲಿ.. ಅನುಷ್ಕಾಗೆ ಟ್ಯಾಗ್ ಮಾಡಿದ ಫ್ಯಾನ್ಸ್!
ಇನ್ನು ಈ ವಿಚಾರವಾಗಿ ಅನೇಕರು ಸಾಮಾಜಿಕ ಜಾಲತಾಣದಲ್ಲಿ ಧೋನಿ ಪರ-ವಿರೋಧವಾಗಿ ಕಾಮೆಂಟ್ ಮಾಡಿದ್ದಾರೆ. ಅದರಲ್ಲಿ ಕೆಲವರು ‘ಥಾಲ ಫಾರ್ ರೀಸನ್’ ಎಂದರೆ. ಮತ್ತೊಬ್ಬರು ಹೌದು, ಧೋನಿಯಿಂದ ಆರ್ಸಿಬಿ ಸಣ್ಣ ಸಹಾಯವಾಯ್ತು ಎಂದು ಹೇಳಿದ್ದಾರೆ. ಸಿಎಸ್ಕೆ ಅಭಿಮಾನಿಗಳಂತೂ ಧೋನಿ ಹಿಂದಿನಿಂದಲೂ ಸಿಕ್ಸ್ ಬಾರಿಸುತ್ತಲೇ ಬಂದಿದ್ದಾರೆ ಎಂದಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ