ಕಿರುತೆರೆ, ಬೆಳ್ಳಿತೆರೆಯಲ್ಲಿ ತಮ್ಮದೇಯಾದ ಚಾಪನ್ನು ಮೂಡಿಸಿದ ನಟಿ ಸಿರಿ
ಬಿಗ್ಬಾಸ್ ಸೀಸನ್ 10ರ ಮೂಲಕ ಸಾಕಷ್ಟು ಜನರ ಮನಸ್ಸು ಕದ್ದಿದ್ದ ನಟಿ
ಕಿರುತೆರೆಯಿಂದ ದೂರು ಉಳಿದುಕೊಂಡಿದ್ದ ನಟಿ ಸಿರಿ ಕಡೆಯಿಂದ ಶುಭಸುದ್ದಿ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಯಾಗಿರೋ ಸಿರಿ ಯಾರಿಗೆ ತಾನೇ ಗೊತ್ತಿಲ್ಲ. ರಂಗೋಲಿ ಸೀರಿಯಲ್ ಮೂಲಕ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು. ಇದಾದ ಬಳಿಕ ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟಿ ತಮ್ಮದೇಯಾದ ಅದ್ಭುತ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು.
ಇನ್ನೂ, ಇದಲ್ಲದೇ ಬಿಗ್ಬಾಸ್ ಸೀಸನ್ 10ಕ್ಕೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದ ಸಿರಿ ಅವರು ಸಾಕಷ್ಟು ಜನರ ಮನಸ್ಸನ್ನು ಗೆದ್ದಿದ್ದರು. ಇದಾದ ಬಳಿಕ ನಟಿ ಸಿರಿ ಅವರನ್ನು ಅಭಿಮಾನಿಗಳು ಮೇಡಂ ಯಾವಾಗ ನೀವು ಮತ್ತೆ ಕಿರುತೆರೆಗೆ ಎಂಟ್ರಿ ಕೋಡ್ತಿರಾ ಹೇಳಿ. ನಿಮ್ಮನ್ನು ಮತ್ತೆ ತೆರೆ ಮೇಲೆ ಕಣ್ತುಂಬಿಕೊಳ್ಳಬೇಕು ಅಂತ ಆಸೆ ವ್ಯಕ್ತಪಡಿಸಿದ್ದರು. ಈಗ ಅದಕ್ಕೆ ಸಮಯ ಕೂಡಿ ಬಂದಿದೆ.
ಇದನ್ನೂ ಓದಿ: ಬೆಂಗಳೂರು: ರೇವ್ ಪಾರ್ಟಿಯಲ್ಲಿ ಸಿಸಿಬಿಗೆ ಕಂಡ ಕಿರುತೆರೆ ಮತ್ತು ಸಿನಿಮಾ ನಟಿಯರು! ಯಾರೆಲ್ಲಾ ಇದ್ದರು ಗೊತ್ತಾ?
ಹೌದು, ಒಂದು ವಿಶೇಷವಾದ ಪಾತ್ರದ ಮೂಲಕ ಸಿರಿ ಅವರು ಮತ್ತೆ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಚುಕ್ಕಿತಾರೆ ಸೀರಿಯಲ್ನಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಸದ್ಯ ಸಿರಿ ಅವರ ಪಾತ್ರದ ಶೂಟಿಂಗ್ ನಡೆಯುತ್ತಿದ್ದು, ಚುಕ್ಕಿ-ಇಬ್ಬನಿಗೆ ದಾರಿ ತೋರಿ ರಕ್ಷಿಸೋ ವಿಶಿಷ್ಟ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ಇನ್ನು, ಚುಕ್ಕಿ ಅಪ್ಪನನ್ನ ಕಳೆದುಕೊಂಡ ನೋವಲ್ಲಿದ್ದಾಳೆ. ಸ್ನೇಹಿತೆಗೆ ಸಹಾಯ ಮಾಡಲು ಇಬ್ಬನಿ ಓಡೋಡಿ ಬಂದಿದ್ದಾಳೆ.
ಇತ್ತ ಇಬ್ಬನಿ ಮನೆಯಲ್ಲಿ ಬೆಂಕಿ ಹಚ್ಚುತ್ತಿದ್ದಾಳೆ ಅತ್ತೆ. ಇದಿಷ್ಟು ಸ್ಟೋರಿ ಲೈನ್. ಆದ್ರೇ ಈಗ ಸಿರಿ ಅವರ ಎಂಟ್ರಿ ಕತೆಗೆ ಹೊಸ ಫ್ಲೇವರ್ನ ಆ್ಯಡ್ ಮಾಡಲಿದೆ. ಇನ್ನೂ, ಅತಿಥಿ ಪಾತ್ರಗಳು ಚುಕ್ಕಿತಾರೆಗೆ ಹೊಸದಲ್ಲ. ಈ ಹಿಂದೆ ವಿನಯ್ ಗೌಡ ಹಾಗೂ ಪತ್ನಿ ಅಕ್ಷತಾ ಒಟ್ಟಿಗೆ ಕಾಣಿಸಿಕೊಂಡಿದ್ದನ್ನು ನಾವೆಲ್ಲ ಇಲ್ಲಿ ಸ್ಮರಿಸಬಹುದು. ಒಟ್ಟಿನಲ್ಲಿ ಅಪ್ಪ-ಮಗಳ ಬಾಂಧವ್ಯಕ್ಕೆ ಸಾಕ್ಷಿಯಾಗಿರೋ ಚುಕ್ಕಿತಾರೆ ಭಾವುಕ ಸನ್ನಿವೇಷಗಳು ಪ್ರಸಾರವಾಗುತ್ತಿದ್ದು, ಸಿರಿ ಅವರ ಎಂಟ್ರಿಯಿಂದ ಹೊಸ ತಿರುವು ಪಡೆದುಕೊಳ್ಳಲಿದೆ ಸ್ಟೋರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಕಿರುತೆರೆ, ಬೆಳ್ಳಿತೆರೆಯಲ್ಲಿ ತಮ್ಮದೇಯಾದ ಚಾಪನ್ನು ಮೂಡಿಸಿದ ನಟಿ ಸಿರಿ
ಬಿಗ್ಬಾಸ್ ಸೀಸನ್ 10ರ ಮೂಲಕ ಸಾಕಷ್ಟು ಜನರ ಮನಸ್ಸು ಕದ್ದಿದ್ದ ನಟಿ
ಕಿರುತೆರೆಯಿಂದ ದೂರು ಉಳಿದುಕೊಂಡಿದ್ದ ನಟಿ ಸಿರಿ ಕಡೆಯಿಂದ ಶುಭಸುದ್ದಿ
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಸೀಸನ್ 10ರ ಸ್ಪರ್ಧಿಯಾಗಿರೋ ಸಿರಿ ಯಾರಿಗೆ ತಾನೇ ಗೊತ್ತಿಲ್ಲ. ರಂಗೋಲಿ ಸೀರಿಯಲ್ ಮೂಲಕ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು. ಇದಾದ ಬಳಿಕ ಕಿರುತೆರೆಯಿಂದ ಬೆಳ್ಳಿತೆರೆಗೆ ಕಾಲಿಟ್ಟಿ ತಮ್ಮದೇಯಾದ ಅದ್ಭುತ ಅಭಿನಯದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಗಳಿಸಿಕೊಂಡಿದ್ದರು.
ಇನ್ನೂ, ಇದಲ್ಲದೇ ಬಿಗ್ಬಾಸ್ ಸೀಸನ್ 10ಕ್ಕೆ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದ ಸಿರಿ ಅವರು ಸಾಕಷ್ಟು ಜನರ ಮನಸ್ಸನ್ನು ಗೆದ್ದಿದ್ದರು. ಇದಾದ ಬಳಿಕ ನಟಿ ಸಿರಿ ಅವರನ್ನು ಅಭಿಮಾನಿಗಳು ಮೇಡಂ ಯಾವಾಗ ನೀವು ಮತ್ತೆ ಕಿರುತೆರೆಗೆ ಎಂಟ್ರಿ ಕೋಡ್ತಿರಾ ಹೇಳಿ. ನಿಮ್ಮನ್ನು ಮತ್ತೆ ತೆರೆ ಮೇಲೆ ಕಣ್ತುಂಬಿಕೊಳ್ಳಬೇಕು ಅಂತ ಆಸೆ ವ್ಯಕ್ತಪಡಿಸಿದ್ದರು. ಈಗ ಅದಕ್ಕೆ ಸಮಯ ಕೂಡಿ ಬಂದಿದೆ.
ಇದನ್ನೂ ಓದಿ: ಬೆಂಗಳೂರು: ರೇವ್ ಪಾರ್ಟಿಯಲ್ಲಿ ಸಿಸಿಬಿಗೆ ಕಂಡ ಕಿರುತೆರೆ ಮತ್ತು ಸಿನಿಮಾ ನಟಿಯರು! ಯಾರೆಲ್ಲಾ ಇದ್ದರು ಗೊತ್ತಾ?
ಹೌದು, ಒಂದು ವಿಶೇಷವಾದ ಪಾತ್ರದ ಮೂಲಕ ಸಿರಿ ಅವರು ಮತ್ತೆ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರೋ ಚುಕ್ಕಿತಾರೆ ಸೀರಿಯಲ್ನಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ. ಸದ್ಯ ಸಿರಿ ಅವರ ಪಾತ್ರದ ಶೂಟಿಂಗ್ ನಡೆಯುತ್ತಿದ್ದು, ಚುಕ್ಕಿ-ಇಬ್ಬನಿಗೆ ದಾರಿ ತೋರಿ ರಕ್ಷಿಸೋ ವಿಶಿಷ್ಟ ಪಾತ್ರಕ್ಕೆ ಬಣ್ಣಹಚ್ಚಿದ್ದಾರೆ. ಇನ್ನು, ಚುಕ್ಕಿ ಅಪ್ಪನನ್ನ ಕಳೆದುಕೊಂಡ ನೋವಲ್ಲಿದ್ದಾಳೆ. ಸ್ನೇಹಿತೆಗೆ ಸಹಾಯ ಮಾಡಲು ಇಬ್ಬನಿ ಓಡೋಡಿ ಬಂದಿದ್ದಾಳೆ.
ಇತ್ತ ಇಬ್ಬನಿ ಮನೆಯಲ್ಲಿ ಬೆಂಕಿ ಹಚ್ಚುತ್ತಿದ್ದಾಳೆ ಅತ್ತೆ. ಇದಿಷ್ಟು ಸ್ಟೋರಿ ಲೈನ್. ಆದ್ರೇ ಈಗ ಸಿರಿ ಅವರ ಎಂಟ್ರಿ ಕತೆಗೆ ಹೊಸ ಫ್ಲೇವರ್ನ ಆ್ಯಡ್ ಮಾಡಲಿದೆ. ಇನ್ನೂ, ಅತಿಥಿ ಪಾತ್ರಗಳು ಚುಕ್ಕಿತಾರೆಗೆ ಹೊಸದಲ್ಲ. ಈ ಹಿಂದೆ ವಿನಯ್ ಗೌಡ ಹಾಗೂ ಪತ್ನಿ ಅಕ್ಷತಾ ಒಟ್ಟಿಗೆ ಕಾಣಿಸಿಕೊಂಡಿದ್ದನ್ನು ನಾವೆಲ್ಲ ಇಲ್ಲಿ ಸ್ಮರಿಸಬಹುದು. ಒಟ್ಟಿನಲ್ಲಿ ಅಪ್ಪ-ಮಗಳ ಬಾಂಧವ್ಯಕ್ಕೆ ಸಾಕ್ಷಿಯಾಗಿರೋ ಚುಕ್ಕಿತಾರೆ ಭಾವುಕ ಸನ್ನಿವೇಷಗಳು ಪ್ರಸಾರವಾಗುತ್ತಿದ್ದು, ಸಿರಿ ಅವರ ಎಂಟ್ರಿಯಿಂದ ಹೊಸ ತಿರುವು ಪಡೆದುಕೊಳ್ಳಲಿದೆ ಸ್ಟೋರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ