ಫೈನಲ್ಗೆ ಎಂಟ್ರಿಯಾಗಲು RCB ಇನ್ನೆರಡು ಮಹತ್ವದ ಹೆಜ್ಜೆ ಇಡಬೇಕು
ಇಂದಿನ ಮ್ಯಾಚ್ ಮಳೆಯಿಂದ ವಾಶ್ಔಟ್ ಆದರೆ ಮುಂದಿನ ನಡೆ ಏನು?
ಪಂದ್ಯದ ವೇಳೆ ಮಳೆ ಬಂದ್ರೆ ಏನ್ ಮಾಡೋದು ಅನ್ನೋ ಪ್ರಶ್ನೆ ಇದ್ದೇ ಇದೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ಗೆ ಎಂಟ್ರಿ ಕೊಟ್ಟ ಬೆನ್ನಲ್ಲೇ, ಫ್ಯಾನ್ಸ್ ಮನದಲ್ಲಿ ಹೊಸ ಆಸೆ ಚಿಗುರಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಈ 3 ವಿಭಾಗಗಳಲ್ಲೂ ಸಾಲಿಡ್ ಪರ್ಫಾಮೆನ್ಸ್ ನೀಡಿದ ಆರ್ಸಿಬಿ ಅಭಿಮಾನಿ ವಲಯದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಆದರೆ ಇಂದಿನ RCB vs RR ಎಲಿಮಿನೇಟರ್ ಪಂದ್ಯ ವರುಣಾರ್ಭದಿಂದ ವಾಶ್ಔಟ್ ಆಗುತ್ತಾ ಎಂಬ ಅನುಮಾನ ಇರೋರು ಈ ಸುದ್ದಿಯನ್ನ ಸಂಪೂರ್ಣವಾಗಿ ಓದಿ.
ಇದನ್ನೂ ಓದಿ: ಪವರ್ ಪ್ಲೇನಲ್ಲಿ RCBಗೆ ಬೇಕಿದೆ ಪವರ್ ಫುಲ್ ಆಟ.. ಈ ಸ್ಟಾರ್ ಪ್ಲೇಯರ್ನಿಂದ ಮಾತ್ರ ಅದು ಸಾಧ್ಯ!
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಇಂದಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಎಲಿಮಿನೇಟರ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಪಂದ್ಯ ನಡೆಯುವ ವೇಳೆ ಮಳೆ ಏನಾದ್ರೂ ಬಂದು ಅಡ್ಡಿ ಪಡಿಸುತ್ತ ಎನ್ನುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಇದೆ. ಆದರೆ ಮಳೆಯಿಂದ ಈ ಎಲಿಮಿನೇಟರ್ ಪಂದ್ಯಕ್ಕೆ ಯಾವುದೇ ಅಡ್ಡಿಯಾಗಲ್ಲ. ಏಕೆಂದರೆ ಸ್ಟೇಡಿಯಂ ಸುತ್ತ ಮಳೆ ಬೀಳುವ ಮುನ್ಸೂಚನೆ ‘0’ ಪರ್ಸೆಂಟ್ ಇದೆ. ಬಿಸಿಲಿನ ವಾತಾವರಣವೇ ಅಧಿಕವಾಗಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ ಎನ್ನಲಾಗಿದೆ.
ಇದನ್ನೂ ಓದಿ: RCBಗೆ ಶುಭ ಶಕುನ.. ಶುಭ ಶಕುನ ಬಂದೈತೆ.. ಗೆಲ್ಲೋ ಲೆಕ್ಕಚಾರ ಹೇಳುತ್ತಿದೆ ಈ ತಿಂಗಳು
ಇನ್ನು ಈ IPL ಸೀಸನ್ನಲ್ಲಿ ವರುಣರಾಯ ಕೆಲ ಪಂದ್ಯಗಳಿಗೆ ಅಡ್ಡಿಪಡಿಸಿದ್ದರೂ, ಇಂದಿನ ಬೆಂಗಳೂರು ಮತ್ತು ರಾಜಸ್ಥಾನ ಪಂದ್ಯದಿಂದ ದೂರ ಇದ್ದಾನೆ. ಅಹಮದಾಬಾದ್ನಲ್ಲಿ ಆಕಾಶ ಸ್ವಚ್ಛಂದವಾಗಿದ್ದು ಬಳಿ ಮೋಡವಾಗಿದೆ. ಮ್ಯಾಚ್ ವೀಕ್ಷಕರು ಯಾವುದೇ ಸಮಸ್ಯೆಯ ಗೊಂದಲ ಇಲ್ಲದೇ ಪಂದ್ಯವನ್ನು ನೋಡಿ ಆನಂದಿಸಬಹುದು. ಸದ್ಯ ಸೂರ್ಯನ ತಾಪಮಾನ 42 C ಇದ್ದು ಉರಿ ಬಿಸಿಲಿನಿಂದ ವಾತಾವರಣ ಕೂಡಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
ಫೈನಲ್ಗೆ ಎಂಟ್ರಿಯಾಗಲು RCB ಇನ್ನೆರಡು ಮಹತ್ವದ ಹೆಜ್ಜೆ ಇಡಬೇಕು
ಇಂದಿನ ಮ್ಯಾಚ್ ಮಳೆಯಿಂದ ವಾಶ್ಔಟ್ ಆದರೆ ಮುಂದಿನ ನಡೆ ಏನು?
ಪಂದ್ಯದ ವೇಳೆ ಮಳೆ ಬಂದ್ರೆ ಏನ್ ಮಾಡೋದು ಅನ್ನೋ ಪ್ರಶ್ನೆ ಇದ್ದೇ ಇದೆ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ಗೆ ಎಂಟ್ರಿ ಕೊಟ್ಟ ಬೆನ್ನಲ್ಲೇ, ಫ್ಯಾನ್ಸ್ ಮನದಲ್ಲಿ ಹೊಸ ಆಸೆ ಚಿಗುರಿದೆ. ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಈ 3 ವಿಭಾಗಗಳಲ್ಲೂ ಸಾಲಿಡ್ ಪರ್ಫಾಮೆನ್ಸ್ ನೀಡಿದ ಆರ್ಸಿಬಿ ಅಭಿಮಾನಿ ವಲಯದಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಆದರೆ ಇಂದಿನ RCB vs RR ಎಲಿಮಿನೇಟರ್ ಪಂದ್ಯ ವರುಣಾರ್ಭದಿಂದ ವಾಶ್ಔಟ್ ಆಗುತ್ತಾ ಎಂಬ ಅನುಮಾನ ಇರೋರು ಈ ಸುದ್ದಿಯನ್ನ ಸಂಪೂರ್ಣವಾಗಿ ಓದಿ.
ಇದನ್ನೂ ಓದಿ: ಪವರ್ ಪ್ಲೇನಲ್ಲಿ RCBಗೆ ಬೇಕಿದೆ ಪವರ್ ಫುಲ್ ಆಟ.. ಈ ಸ್ಟಾರ್ ಪ್ಲೇಯರ್ನಿಂದ ಮಾತ್ರ ಅದು ಸಾಧ್ಯ!
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಇಂದಿನ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಎಲಿಮಿನೇಟರ್ ಪಂದ್ಯಕ್ಕೆ ಸಾಕ್ಷಿಯಾಗಲಿದೆ. ಪಂದ್ಯ ನಡೆಯುವ ವೇಳೆ ಮಳೆ ಏನಾದ್ರೂ ಬಂದು ಅಡ್ಡಿ ಪಡಿಸುತ್ತ ಎನ್ನುವುದು ಕ್ರಿಕೆಟ್ ಅಭಿಮಾನಿಗಳಲ್ಲಿ ಇದೆ. ಆದರೆ ಮಳೆಯಿಂದ ಈ ಎಲಿಮಿನೇಟರ್ ಪಂದ್ಯಕ್ಕೆ ಯಾವುದೇ ಅಡ್ಡಿಯಾಗಲ್ಲ. ಏಕೆಂದರೆ ಸ್ಟೇಡಿಯಂ ಸುತ್ತ ಮಳೆ ಬೀಳುವ ಮುನ್ಸೂಚನೆ ‘0’ ಪರ್ಸೆಂಟ್ ಇದೆ. ಬಿಸಿಲಿನ ವಾತಾವರಣವೇ ಅಧಿಕವಾಗಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ ಎನ್ನಲಾಗಿದೆ.
ಇದನ್ನೂ ಓದಿ: RCBಗೆ ಶುಭ ಶಕುನ.. ಶುಭ ಶಕುನ ಬಂದೈತೆ.. ಗೆಲ್ಲೋ ಲೆಕ್ಕಚಾರ ಹೇಳುತ್ತಿದೆ ಈ ತಿಂಗಳು
ಇನ್ನು ಈ IPL ಸೀಸನ್ನಲ್ಲಿ ವರುಣರಾಯ ಕೆಲ ಪಂದ್ಯಗಳಿಗೆ ಅಡ್ಡಿಪಡಿಸಿದ್ದರೂ, ಇಂದಿನ ಬೆಂಗಳೂರು ಮತ್ತು ರಾಜಸ್ಥಾನ ಪಂದ್ಯದಿಂದ ದೂರ ಇದ್ದಾನೆ. ಅಹಮದಾಬಾದ್ನಲ್ಲಿ ಆಕಾಶ ಸ್ವಚ್ಛಂದವಾಗಿದ್ದು ಬಳಿ ಮೋಡವಾಗಿದೆ. ಮ್ಯಾಚ್ ವೀಕ್ಷಕರು ಯಾವುದೇ ಸಮಸ್ಯೆಯ ಗೊಂದಲ ಇಲ್ಲದೇ ಪಂದ್ಯವನ್ನು ನೋಡಿ ಆನಂದಿಸಬಹುದು. ಸದ್ಯ ಸೂರ್ಯನ ತಾಪಮಾನ 42 C ಇದ್ದು ಉರಿ ಬಿಸಿಲಿನಿಂದ ವಾತಾವರಣ ಕೂಡಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ