ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್
ಇಂದು ರಾಜಸ್ಥಾನ್ ರಾಯಲ್ಸ್, ಬೆಂಗಳೂರು ಟೀಮ್ ಮಧ್ಯೆ ರೋಚಕ ಪಂದ್ಯ!
ಆರ್ಆರ್ ಟೀಮ್ ವಿರುದ್ಧ ಗೆಲ್ಲಲು ಆರ್ಸಿಬಿ ಬಳಿ ಇದ್ದಾರೆ ಮಿಸೈಲ್ ಮ್ಯಾನ್
ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿದೆ. ಇಂದು ನರೇಂದ್ರ ಮೋದಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯಲಿರೋ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ, ರಾಜಸ್ಥಾನ್ ರಾಯಲ್ಸ್ ಮುಖಾಮುಖಿ ಆಗುತ್ತಿವೆ. ಹೇಗಾದ್ರೂ ಮಾಡಿ ಗೆದ್ದು ಕ್ವಾಲಿಫೈಯರ್ 2ಕ್ಕೆ ಹೋಗಬೇಕು ಎಂದು ಎರಡು ತಂಡಗಳು ಎದುರು ನೋಡುತ್ತಿವೆ.
ಇನ್ನೊಂದೆಡೆ ಯಾವುದೇ ಕಾರಣಕ್ಕೂ ಪಂದ್ಯ ರದ್ದಾಗಬಾರದು. ಒಂದು ವೇಳೆ ಮ್ಯಾಚ್ ಕ್ಯಾನ್ಸಲ್ ಆದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಟ್ಯಂತರ ಅಭಿಮಾನಿಗಳ ಕನಸು ನುಚ್ಚು ನೂರಾಗಲಿದೆ. ಫೀನಿಕ್ಸ್ನಂತೆ ಎದ್ದು ಬಂದು ಕೊನೆ ಕ್ಷಣದಲ್ಲಿ ಹೋರಾಟ ನಿಲ್ಲಿಸಲು ಸಾಧ್ಯವಿಲ್ಲ ಎಂದು ಫ್ಯಾನ್ಸ್ ಮಾತಾಡೋಕೆ ಶುರು ಮಾಡಿದ್ದಾರೆ.
ಇಂದಿನ ಎಲಿಮಿನೇಟರ್ ಪಂದ್ಯ ಕ್ವಾಲಿಫೈಯರ್ 2ಕ್ಕೆ ಹೋಗೋದ್ಯಾರು ಎಂದು ನಿರ್ಧರಿಸಲಿದೆ. ಏನೇ ಆದರೂ ಪಂದ್ಯ ಗೆಲ್ಲಲೇಬೇಕು ಎಂದು ಆರ್ಸಿಬಿ ಮುಂದಾಗಿದೆ. ಅತ್ತ ರಾಜಸ್ಥಾನ್ ಪರ ಸಂಜು ಸ್ಯಾಮ್ಸನ್, ಆರ್. ಅಶ್ವಿನ್, ರಿಯಾನ್ ಪರಾಗ್, ಜೈಸ್ವಾಲ್, ಧೃವ್ ಜುರೆಲ್, ಚಹಾಲ್ ಇದ್ದಾರೆ.
ಇತ್ತ ಆರ್ಆರ್ ಬೌಲಿಂಗ್ಗೆ ಆರ್ಸಿಬಿ ಬಳಿ ದೊಡ್ಡ ಬ್ರಹ್ಮಾಸ್ತ್ರವೇ ಇದೆ. ಸ್ಪಿನ್ನರ್ಸ್ ಬೆವರಿಳಿಸಲು ಆರ್ಸಿಬಿ ರಜತ್ ಪಾಟಿದಾರ್ ಸಜ್ಜಾಗಿದ್ದಾರೆ. ಕಳೆದ 6 ಪಂದ್ಯಗಳಲ್ಲೂ ರಜತ್ ಸ್ಪಿನ್ನರ್ಸ್ ಎದುರು ಅದ್ಭುತ ಬ್ಯಾಟಿಂಗ್ ಮಾಡಿದ್ದಾರೆ. ಇವರಿಗೆ ಸಾಥ್ ನೀಡಲು ಕೊಹ್ಲಿ, ಫಾಫ್ ಡುಪ್ಲೆಸಿಸ್, ಗ್ರೀನ್, ದಿನೇಶ್ ಕಾರ್ತಿಕ್ ಇದ್ದಾರೆ.
ಇದನ್ನೂ ಓದಿ: ಆರ್ಸಿಬಿಗೆ ಬಂತು ಹಾರ್ಸ್ ಪವರ್.. ಸ್ಟಾರ್ ಪ್ಲೇಯರ್ ಸ್ಟ್ರಾಂಗ್ ಕಮ್ಬ್ಯಾಕ್!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್
ಇಂದು ರಾಜಸ್ಥಾನ್ ರಾಯಲ್ಸ್, ಬೆಂಗಳೂರು ಟೀಮ್ ಮಧ್ಯೆ ರೋಚಕ ಪಂದ್ಯ!
ಆರ್ಆರ್ ಟೀಮ್ ವಿರುದ್ಧ ಗೆಲ್ಲಲು ಆರ್ಸಿಬಿ ಬಳಿ ಇದ್ದಾರೆ ಮಿಸೈಲ್ ಮ್ಯಾನ್
ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಇನ್ನೇನು ಮುಕ್ತಾಯದ ಹಂತಕ್ಕೆ ಬಂದಿದೆ. ಇಂದು ನರೇಂದ್ರ ಮೋದಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯಲಿರೋ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ, ರಾಜಸ್ಥಾನ್ ರಾಯಲ್ಸ್ ಮುಖಾಮುಖಿ ಆಗುತ್ತಿವೆ. ಹೇಗಾದ್ರೂ ಮಾಡಿ ಗೆದ್ದು ಕ್ವಾಲಿಫೈಯರ್ 2ಕ್ಕೆ ಹೋಗಬೇಕು ಎಂದು ಎರಡು ತಂಡಗಳು ಎದುರು ನೋಡುತ್ತಿವೆ.
ಇನ್ನೊಂದೆಡೆ ಯಾವುದೇ ಕಾರಣಕ್ಕೂ ಪಂದ್ಯ ರದ್ದಾಗಬಾರದು. ಒಂದು ವೇಳೆ ಮ್ಯಾಚ್ ಕ್ಯಾನ್ಸಲ್ ಆದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಟ್ಯಂತರ ಅಭಿಮಾನಿಗಳ ಕನಸು ನುಚ್ಚು ನೂರಾಗಲಿದೆ. ಫೀನಿಕ್ಸ್ನಂತೆ ಎದ್ದು ಬಂದು ಕೊನೆ ಕ್ಷಣದಲ್ಲಿ ಹೋರಾಟ ನಿಲ್ಲಿಸಲು ಸಾಧ್ಯವಿಲ್ಲ ಎಂದು ಫ್ಯಾನ್ಸ್ ಮಾತಾಡೋಕೆ ಶುರು ಮಾಡಿದ್ದಾರೆ.
ಇಂದಿನ ಎಲಿಮಿನೇಟರ್ ಪಂದ್ಯ ಕ್ವಾಲಿಫೈಯರ್ 2ಕ್ಕೆ ಹೋಗೋದ್ಯಾರು ಎಂದು ನಿರ್ಧರಿಸಲಿದೆ. ಏನೇ ಆದರೂ ಪಂದ್ಯ ಗೆಲ್ಲಲೇಬೇಕು ಎಂದು ಆರ್ಸಿಬಿ ಮುಂದಾಗಿದೆ. ಅತ್ತ ರಾಜಸ್ಥಾನ್ ಪರ ಸಂಜು ಸ್ಯಾಮ್ಸನ್, ಆರ್. ಅಶ್ವಿನ್, ರಿಯಾನ್ ಪರಾಗ್, ಜೈಸ್ವಾಲ್, ಧೃವ್ ಜುರೆಲ್, ಚಹಾಲ್ ಇದ್ದಾರೆ.
ಇತ್ತ ಆರ್ಆರ್ ಬೌಲಿಂಗ್ಗೆ ಆರ್ಸಿಬಿ ಬಳಿ ದೊಡ್ಡ ಬ್ರಹ್ಮಾಸ್ತ್ರವೇ ಇದೆ. ಸ್ಪಿನ್ನರ್ಸ್ ಬೆವರಿಳಿಸಲು ಆರ್ಸಿಬಿ ರಜತ್ ಪಾಟಿದಾರ್ ಸಜ್ಜಾಗಿದ್ದಾರೆ. ಕಳೆದ 6 ಪಂದ್ಯಗಳಲ್ಲೂ ರಜತ್ ಸ್ಪಿನ್ನರ್ಸ್ ಎದುರು ಅದ್ಭುತ ಬ್ಯಾಟಿಂಗ್ ಮಾಡಿದ್ದಾರೆ. ಇವರಿಗೆ ಸಾಥ್ ನೀಡಲು ಕೊಹ್ಲಿ, ಫಾಫ್ ಡುಪ್ಲೆಸಿಸ್, ಗ್ರೀನ್, ದಿನೇಶ್ ಕಾರ್ತಿಕ್ ಇದ್ದಾರೆ.
ಇದನ್ನೂ ಓದಿ: ಆರ್ಸಿಬಿಗೆ ಬಂತು ಹಾರ್ಸ್ ಪವರ್.. ಸ್ಟಾರ್ ಪ್ಲೇಯರ್ ಸ್ಟ್ರಾಂಗ್ ಕಮ್ಬ್ಯಾಕ್!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್