2024ರ ಇಂಡಿಯನ್ ಪ್ರೀಮಿಯರ್ ಲೀಗ್ ಪ್ಲೇ ಆಫ್ ಕಾಳಗ ಶುರು!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲಕ್ಕಿ ಚಾರ್ಮ್ ಸ್ವಪ್ನಿಲ್ ಸಿಂಗ್
ವಿರಾಟ್ ರೂಮೇಟ್ ಆಗಿದ್ದ ಸ್ವಪ್ನಿಲ್ ಸಿಂಗ್ ಆರ್ಸಿಬಿಗೆ ಬಂದಿದ್ದು ಹೇಗೆ?
ಇಂದು ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಪ್ಲೇ ಆಫ್ ಕಾಳಗ ನಡೆಯುತ್ತಿದೆ. ಸದ್ಯ ನರೇಂದ್ರ ಮೋದಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ಮತ್ತು ರಾಜಸ್ಥಾನ್ ತಂಡಗಳು ಮುಖಾಮುಖಿ ಆಗಿವೆ. ಟಾಸ್ ಸೋತ್ರೂ ಆರ್ಸಿಬಿ ಫಸ್ಟ್ ಬ್ಯಾಟಿಂಗ್ ಮಾಡುತ್ತಿದೆ.
ಆರ್ಸಿಬಿ ಮೊದಲಾರ್ಧ ಸೀಸನ್ನಲ್ಲಿ ಸೋತು ಸುಣ್ಣವಾಗಿತ್ತು. ಅರ್ಧ ಸೀಸನ್ ಬಳಿಕ ಆರ್ಸಿಬಿ ತಂಡಕ್ಕೆ ಒಬ್ಬ ಆಟಗಾರನಿಂದ ಇಡೀ ದಿಕ್ಕೇ ಬದಲಾಯ್ತು. ಸ್ವಪ್ನಿಲ್ ಸಿಂಗ್ ಆರ್ಸಿಬಿ ತಂಡಕ್ಕೆ ಬಂದಿದ್ದೇ ತಂಡ ಒಂದೇ ಒಂದು ಪಂದ್ಯದಲ್ಲೂ ಸೋಲದೆ ಪ್ಲೇ ಆಫ್ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. ಸ್ವಪ್ನಿಲ್ ಆರ್ಸಿಬಿ ಪಾಲಿಗೆ ಲಕ್ಕಿ ಚಾರ್ಮ್ ಆಗಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲೂ ಸ್ವಪ್ನಿಲ್ ಮಿಂಚುತ್ತಿದ್ದಾರೆ.
ಆರ್ಸಿಬಿ ಟ್ವೀಟ್ ಮಾಡಿರೋ ಒಂದು ವಿಡಿಯೋದಲ್ಲಿ ಸ್ವಪ್ನಿಲ್ ತನ್ನ ಕಷ್ಟದ ಜೀವನದ ಬಗ್ಗೆ ಮಾತಾಡಿದ್ದಾರೆ. ನಾನು ಹಾಗೂ ವಿರಾಟ್ ರೂಮ್ಮೇಟ್ಸ್. ಹರಾಜಿನ ದಿನ ರಣಜಿ ಆಟಕ್ಕಾಗಿ ಡೆಹ್ರಾಡೂನ್ಗೆ ಪ್ರಯಾಣಿಸುತ್ತಿದ್ದೆ. ರಾತ್ರಿ 7-8ರ ವೇಳೆಗೆ ಕೊನೆ ಸುತ್ತಿನ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯುತ್ತಿತ್ತು. ಅಲ್ಲಿಯವರೆಗೆ ನನ್ನನ್ನು ಯಾರೂ ಖರೀದಿಸಿರಲಿಲ್ಲ. ಬಳಿಕ ವಿರಾಟ್ ಕೊಹ್ಲಿ ಹೇಳಿದ ಮೇಲೆ ಆರ್ಸಿಬಿ ನನ್ನನ್ನು ಖರೀದಿಸಿದೆ. ನಾನು ಕ್ರಿಕೆಟ್ಗೆ ಗುಡ್ ಬೈ ಹೇಳಬೇಕು ಎಂದು ನಿರ್ಧಾರ ಮಾಡಿದ್ದೆ. ಆದ್ರೆ, ನನಗೆ ಪುನರ್ ಜನ್ಮ ನೀಡಿದ್ರು ಎಂದರು.
ಇದನ್ನೂ ಓದಿ: ಆರ್ಸಿಬಿ ಫಸ್ಟ್ ಬ್ಯಾಟಿಂಗ್.. ಬೆಂಗಳೂರು ಟೀಮ್ಗೆ ಸ್ಟಾರ್ ಪ್ಲೇಯರ್ ಎಂಟ್ರಿ; ಬಂತು ಆನೆಬಲ!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
2024ರ ಇಂಡಿಯನ್ ಪ್ರೀಮಿಯರ್ ಲೀಗ್ ಪ್ಲೇ ಆಫ್ ಕಾಳಗ ಶುರು!
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಲಕ್ಕಿ ಚಾರ್ಮ್ ಸ್ವಪ್ನಿಲ್ ಸಿಂಗ್
ವಿರಾಟ್ ರೂಮೇಟ್ ಆಗಿದ್ದ ಸ್ವಪ್ನಿಲ್ ಸಿಂಗ್ ಆರ್ಸಿಬಿಗೆ ಬಂದಿದ್ದು ಹೇಗೆ?
ಇಂದು ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್ ಪ್ಲೇ ಆಫ್ ಕಾಳಗ ನಡೆಯುತ್ತಿದೆ. ಸದ್ಯ ನರೇಂದ್ರ ಮೋದಿ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ಮತ್ತು ರಾಜಸ್ಥಾನ್ ತಂಡಗಳು ಮುಖಾಮುಖಿ ಆಗಿವೆ. ಟಾಸ್ ಸೋತ್ರೂ ಆರ್ಸಿಬಿ ಫಸ್ಟ್ ಬ್ಯಾಟಿಂಗ್ ಮಾಡುತ್ತಿದೆ.
ಆರ್ಸಿಬಿ ಮೊದಲಾರ್ಧ ಸೀಸನ್ನಲ್ಲಿ ಸೋತು ಸುಣ್ಣವಾಗಿತ್ತು. ಅರ್ಧ ಸೀಸನ್ ಬಳಿಕ ಆರ್ಸಿಬಿ ತಂಡಕ್ಕೆ ಒಬ್ಬ ಆಟಗಾರನಿಂದ ಇಡೀ ದಿಕ್ಕೇ ಬದಲಾಯ್ತು. ಸ್ವಪ್ನಿಲ್ ಸಿಂಗ್ ಆರ್ಸಿಬಿ ತಂಡಕ್ಕೆ ಬಂದಿದ್ದೇ ತಂಡ ಒಂದೇ ಒಂದು ಪಂದ್ಯದಲ್ಲೂ ಸೋಲದೆ ಪ್ಲೇ ಆಫ್ಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟಿದೆ. ಸ್ವಪ್ನಿಲ್ ಆರ್ಸಿಬಿ ಪಾಲಿಗೆ ಲಕ್ಕಿ ಚಾರ್ಮ್ ಆಗಿದ್ದಾರೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲೂ ಸ್ವಪ್ನಿಲ್ ಮಿಂಚುತ್ತಿದ್ದಾರೆ.
ಆರ್ಸಿಬಿ ಟ್ವೀಟ್ ಮಾಡಿರೋ ಒಂದು ವಿಡಿಯೋದಲ್ಲಿ ಸ್ವಪ್ನಿಲ್ ತನ್ನ ಕಷ್ಟದ ಜೀವನದ ಬಗ್ಗೆ ಮಾತಾಡಿದ್ದಾರೆ. ನಾನು ಹಾಗೂ ವಿರಾಟ್ ರೂಮ್ಮೇಟ್ಸ್. ಹರಾಜಿನ ದಿನ ರಣಜಿ ಆಟಕ್ಕಾಗಿ ಡೆಹ್ರಾಡೂನ್ಗೆ ಪ್ರಯಾಣಿಸುತ್ತಿದ್ದೆ. ರಾತ್ರಿ 7-8ರ ವೇಳೆಗೆ ಕೊನೆ ಸುತ್ತಿನ ಐಪಿಎಲ್ ಹರಾಜು ಪ್ರಕ್ರಿಯೆ ನಡೆಯುತ್ತಿತ್ತು. ಅಲ್ಲಿಯವರೆಗೆ ನನ್ನನ್ನು ಯಾರೂ ಖರೀದಿಸಿರಲಿಲ್ಲ. ಬಳಿಕ ವಿರಾಟ್ ಕೊಹ್ಲಿ ಹೇಳಿದ ಮೇಲೆ ಆರ್ಸಿಬಿ ನನ್ನನ್ನು ಖರೀದಿಸಿದೆ. ನಾನು ಕ್ರಿಕೆಟ್ಗೆ ಗುಡ್ ಬೈ ಹೇಳಬೇಕು ಎಂದು ನಿರ್ಧಾರ ಮಾಡಿದ್ದೆ. ಆದ್ರೆ, ನನಗೆ ಪುನರ್ ಜನ್ಮ ನೀಡಿದ್ರು ಎಂದರು.
ಇದನ್ನೂ ಓದಿ: ಆರ್ಸಿಬಿ ಫಸ್ಟ್ ಬ್ಯಾಟಿಂಗ್.. ಬೆಂಗಳೂರು ಟೀಮ್ಗೆ ಸ್ಟಾರ್ ಪ್ಲೇಯರ್ ಎಂಟ್ರಿ; ಬಂತು ಆನೆಬಲ!
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ