ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್ ಡ್ರೈವ್ ಕೇಸ್
ಸಿಂಹಗುಹೆ ಸಿನಿಮಾ ಮಾಡಿ ಟೀಸರ್ ರಿಲೀಸ್
ನಿರ್ಮಾಪಕ ಕೃಷ್ಣರವರು ಪ್ರಜ್ವಲ್ ರೇವಣ್ಣನವರ ಸ್ನೇಹಿತ
ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್ ಡ್ರೈವ್ ಕೇಸ್ ಸಂಬಂಧಿತ ಕಥೆ ಸಿನಿಮಾ ಆಗ್ತಿದ್ಯಾ? ಇಂಥದ್ದೊಂದು ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ರಿಲೀಸ್ ಆಗಿರೋ ಅದೊಂದು ಟೀಸರ್.
ನೀವೀಗ ನೋಡ್ತಿರೋದು ಸಿಂಹಗುಹೆ ಅನ್ನೋ ಚಿತ್ರದ ಟೀಸರ್. ಸದ್ಯ ಇದೇ ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್ ಡ್ರೈವ್ ಕೇಸ್ ಸಂಬಂಧಿತ ಕಥೆನಾ ಅನ್ನೋ ಚರ್ಚೆ ಆರಂಭವಾಗಿದೆ.
ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಹೊಸ ತಂಡ ಸಿಂಹಗುಹೆ ಸಿನಿಮಾ ಮಾಡಿ ಟೀಸರ್ ರಿಲೀಸ್ ಮಾಡಿದೆ. ಈ ಟೀಸರ್ನಲ್ಲಿ ಅಶ್ಲೀಲ ವೀಡಿಯೋಗಳ ಕಂಟೆಂಟ್ ಇದೆ. ಇದು ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್ ಡ್ರೈವ್ ಕೇಸ್ ಸಂಬಂಧಿತ ಕಥೆ ಸಿನಿಮಾ ಆಗ್ತಿದ್ಯಾ ಇಂಥದ್ದೊಂದು ಚರ್ಚೆ ಶುರುವಾಗಿದೆ. ಇದನ್ನ ಪ್ರಜ್ವಲ್ ಕೇಸ್ಗೆ ಲಿಂಕ್ ಮಾಡ್ತಿರೋದಕ್ಕೆ ಕಾರಣವೂ ಇದೆ. ಈ ಸಿನಿಮಾದ ಚಿತ್ರೀಕರಣ ನಡೆದಿರೋದು ಹಾಸನ, ಹೊಳೆನರಸೀಪುರ, ಅರಕಲಗೂಡು ಭಾಗದಲ್ಲಿ. ನಿರ್ಮಾಪಕ ಕೃಷ್ಣ ಕೂಡ ಹಾಸನ ಮೂಲದವರು, ವಿಶೇಷ ಅಂದ್ರೆ ಇದೇ ಕೃಷ್ಣ ಪ್ರಜ್ವಲ್ ರೇವಣ್ಣ ಸ್ನೇಹಿತ ಕೂಡ ಹೌದು.
ಇದನ್ನೂ ಓದಿ: ಬರ್ತ್ಡೇ ಹೆಸರಲ್ಲಿ ರೇವ್ ಪಾರ್ಟಿ ಕೇಸ್ಗೆ ಬಿಗ್ ಟ್ವಿಸ್ಟ್.. ಹೊರಬಿತ್ತು ಸ್ಫೋಟಕ ಮಾಹಿತಿ
ಪೆನ್ ಡ್ರೈವ್ ಕಥೆಯಂತೆ ಟೀಸರ್ ಕಾಣ್ತಿದೆ ಎಂದು ಹೋಲಿಕೆ ಶುರುವಾಗಿದೆ. ಈ ಚರ್ಚೆ ಬೆನ್ನಲ್ಲೇ ಸಿಂಹಗುಹೆ ತಂಡ ಸ್ಪಷ್ಟನೆ ಕೂಡ ನೀಡಿದೆ. ಸಿನಿಮಾ ಕಥೆ ಹಾಗೂ ಪೆನ್ ಡ್ರೈವ್ ಕೇಸ್ಗೂ ಯಾವುದೇ ಸಂಬಂಧವಿಲ್ಲ. ಇದು ಬೇರೆಯದ್ದೇ ಸಸ್ಪೆನ್ಸ್ ಸ್ಟೋರಿ ಅಂತಾ ನಿರ್ಮಾಪಕರು ಸ್ಪಷ್ಟವಾಗಿ ಹೇಳಿದ್ದಾರೆ.
ಇದು ಕಾಕತಾಳೀಯ ಅಷ್ಟೇ
ಈ ಸಿನಿಮಾಗೂ, ಪೆನ್ಡ್ರೈವ್ ಪ್ರಕರಣಕ್ಕೂ ಲಿಂಕ್ ಇಲ್ಲ ಅಂತಾ ಚಿತ್ರತಂಡ ಸ್ಪಷ್ಟಪಡಿಸಿದೆ. ಆದರೆ, ತೋಟದ ಮನೆ ರಹಸ್ಯ, ಅಶ್ಲೀಲ ವಿಡಿಯೋ ವಿಚಾರಗಳು ಚಿತ್ರದಲ್ಲಿರೋದು ಹಲವು ಪ್ರಶ್ನೆಗಳು ಮೂಡುವಂತೆ ಮಾಡಿದೆ. ಇದಕ್ಕೆಲ್ಲಾ ಸಿನಿಮಾ ತೆರೆಕಂಡ ಬಳಿಕವೇ ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್ ಡ್ರೈವ್ ಕೇಸ್
ಸಿಂಹಗುಹೆ ಸಿನಿಮಾ ಮಾಡಿ ಟೀಸರ್ ರಿಲೀಸ್
ನಿರ್ಮಾಪಕ ಕೃಷ್ಣರವರು ಪ್ರಜ್ವಲ್ ರೇವಣ್ಣನವರ ಸ್ನೇಹಿತ
ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್ ಡ್ರೈವ್ ಕೇಸ್ ಸಂಬಂಧಿತ ಕಥೆ ಸಿನಿಮಾ ಆಗ್ತಿದ್ಯಾ? ಇಂಥದ್ದೊಂದು ಚರ್ಚೆ ಶುರುವಾಗಿದೆ. ಇದಕ್ಕೆ ಕಾರಣ ರಿಲೀಸ್ ಆಗಿರೋ ಅದೊಂದು ಟೀಸರ್.
ನೀವೀಗ ನೋಡ್ತಿರೋದು ಸಿಂಹಗುಹೆ ಅನ್ನೋ ಚಿತ್ರದ ಟೀಸರ್. ಸದ್ಯ ಇದೇ ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್ ಡ್ರೈವ್ ಕೇಸ್ ಸಂಬಂಧಿತ ಕಥೆನಾ ಅನ್ನೋ ಚರ್ಚೆ ಆರಂಭವಾಗಿದೆ.
ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಹೊಸ ತಂಡ ಸಿಂಹಗುಹೆ ಸಿನಿಮಾ ಮಾಡಿ ಟೀಸರ್ ರಿಲೀಸ್ ಮಾಡಿದೆ. ಈ ಟೀಸರ್ನಲ್ಲಿ ಅಶ್ಲೀಲ ವೀಡಿಯೋಗಳ ಕಂಟೆಂಟ್ ಇದೆ. ಇದು ಪ್ರಜ್ವಲ್ ರೇವಣ್ಣ ವಿರುದ್ಧದ ಪೆನ್ ಡ್ರೈವ್ ಕೇಸ್ ಸಂಬಂಧಿತ ಕಥೆ ಸಿನಿಮಾ ಆಗ್ತಿದ್ಯಾ ಇಂಥದ್ದೊಂದು ಚರ್ಚೆ ಶುರುವಾಗಿದೆ. ಇದನ್ನ ಪ್ರಜ್ವಲ್ ಕೇಸ್ಗೆ ಲಿಂಕ್ ಮಾಡ್ತಿರೋದಕ್ಕೆ ಕಾರಣವೂ ಇದೆ. ಈ ಸಿನಿಮಾದ ಚಿತ್ರೀಕರಣ ನಡೆದಿರೋದು ಹಾಸನ, ಹೊಳೆನರಸೀಪುರ, ಅರಕಲಗೂಡು ಭಾಗದಲ್ಲಿ. ನಿರ್ಮಾಪಕ ಕೃಷ್ಣ ಕೂಡ ಹಾಸನ ಮೂಲದವರು, ವಿಶೇಷ ಅಂದ್ರೆ ಇದೇ ಕೃಷ್ಣ ಪ್ರಜ್ವಲ್ ರೇವಣ್ಣ ಸ್ನೇಹಿತ ಕೂಡ ಹೌದು.
ಇದನ್ನೂ ಓದಿ: ಬರ್ತ್ಡೇ ಹೆಸರಲ್ಲಿ ರೇವ್ ಪಾರ್ಟಿ ಕೇಸ್ಗೆ ಬಿಗ್ ಟ್ವಿಸ್ಟ್.. ಹೊರಬಿತ್ತು ಸ್ಫೋಟಕ ಮಾಹಿತಿ
ಪೆನ್ ಡ್ರೈವ್ ಕಥೆಯಂತೆ ಟೀಸರ್ ಕಾಣ್ತಿದೆ ಎಂದು ಹೋಲಿಕೆ ಶುರುವಾಗಿದೆ. ಈ ಚರ್ಚೆ ಬೆನ್ನಲ್ಲೇ ಸಿಂಹಗುಹೆ ತಂಡ ಸ್ಪಷ್ಟನೆ ಕೂಡ ನೀಡಿದೆ. ಸಿನಿಮಾ ಕಥೆ ಹಾಗೂ ಪೆನ್ ಡ್ರೈವ್ ಕೇಸ್ಗೂ ಯಾವುದೇ ಸಂಬಂಧವಿಲ್ಲ. ಇದು ಬೇರೆಯದ್ದೇ ಸಸ್ಪೆನ್ಸ್ ಸ್ಟೋರಿ ಅಂತಾ ನಿರ್ಮಾಪಕರು ಸ್ಪಷ್ಟವಾಗಿ ಹೇಳಿದ್ದಾರೆ.
ಇದು ಕಾಕತಾಳೀಯ ಅಷ್ಟೇ
ಈ ಸಿನಿಮಾಗೂ, ಪೆನ್ಡ್ರೈವ್ ಪ್ರಕರಣಕ್ಕೂ ಲಿಂಕ್ ಇಲ್ಲ ಅಂತಾ ಚಿತ್ರತಂಡ ಸ್ಪಷ್ಟಪಡಿಸಿದೆ. ಆದರೆ, ತೋಟದ ಮನೆ ರಹಸ್ಯ, ಅಶ್ಲೀಲ ವಿಡಿಯೋ ವಿಚಾರಗಳು ಚಿತ್ರದಲ್ಲಿರೋದು ಹಲವು ಪ್ರಶ್ನೆಗಳು ಮೂಡುವಂತೆ ಮಾಡಿದೆ. ಇದಕ್ಕೆಲ್ಲಾ ಸಿನಿಮಾ ತೆರೆಕಂಡ ಬಳಿಕವೇ ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ