ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ಸೋಲು
ಗೆದ್ದು ಕ್ವಾಲಿಫೈಯರ್2ಗೆ ಎಂಟ್ರಿಕೊಟ್ಟ ರಾಜಸ್ಥಾನ್
ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದ ಆರ್ಸಿಬಿ
ಬುಧವಾರ ನಡೆದ ಐಪಿಎಲ್ ಎಲಿಮಿನೇಟರ್ನಲ್ಲಿ ರಾಜಸ್ಥಾನ್ ರಾಯಲ್ಸ್ 4 ವಿಕೆಟ್ಗಳಿಂದ ಆರ್ಸಿಬಿಯನ್ನು ಸೋಲಿಸಿತು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ಮೇ 24 ರಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಎರಡನೇ ಕ್ವಾಲಿಫೈಯರ್ನಲ್ಲಿ ಸೆಣಸಾಟ ನಡೆಸಲಿದೆ.
ಟಾಸ್ ಗೆದ್ದ ರಾಜಸ್ಥಾನ್, ಬೌಲಿಂಗ್ ಆಯ್ಕೆ ಮಾಡಿಕೊಂಡು ಆರ್ಸಿಬಿಯನ್ನು 172ರನ್ಗಳಿಗೆ ಕಟ್ಟಿ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ಬ್ಯಾಟರ್ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಯಶಸ್ವಿ ಜೈಸ್ವಾಲ್ 45, ರಿಯಾನ್ ಪರಾಗ್ 36, ಶಿಮ್ರಾನ್ ಹೆಟ್ಮೆಯರ್ 26, ರೋವ್ಮನ್ ಪೊವೆಲ್ 16 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ ಆರ್ಆರ್ ಎರಡನೇ ಕ್ವಾಲಿಫೈಯರ್ಗೆ ಎಂಟ್ರಿ ಕೊಟ್ಟಿದೆ.
ಇದನ್ನೂ ಓದಿ:ಡಿನ್ನರ್ ಪಾರ್ಟಿ ಮೂಲಕ ರಣತಂತ್ರ ಹೆಣೆದ DK ಶಿವಕುಮಾರ್.. ಸಚಿವರಿಗೆ ಸಿದ್ದರಾಮಯ್ಯ ಕ್ಲಾಸ್..!
ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್ಸಿಬಿ ಕ್ಯಾಪ್ಟನ್ ಫಾಫ್.. ಇಬ್ಬನಿ ಬರುತ್ತಿದ್ದಂತೆ, ನಾವು ನೀಡಿರುವ ಟಾರ್ಗೆಟ್ ಕಮ್ಮಿ ಆಗಿದೆ ಎನಿಸಿತು. ಉತ್ತಮ ಸ್ಪರ್ಧೆ ನೀಡಲು ಇನ್ನೂ ರನ್ಗಳ ಅಗತ್ಯ ಇತ್ತು. ಒಂದು ಒಳ್ಳೆ ಸ್ಕೋರ್ಗೆ 20 ರನ್ಗಳ ಕೊರತೆ ಇತ್ತು. ನಮ್ಮ ಆಟಗಾರರು ಚೆನ್ನಾಗಿಯೇ ಹೋರಾಡಿದ್ದಾರೆ. ಅವರಿಗೆ ಕ್ರೆಡಿಟ್ ನೀಡಲೇಬೇಕು. ಈ ಋತುವಿನಲ್ಲಿ ನಾವು ಕಂಡುಕೊಂಡಿದ್ದೇನೆಂದರೆ.. ಪ್ರಭಾವಶಾಲಿ ಆಟಗಾರರೊಂದಿಗೆ ಸಾಧಾರಣ ಸ್ಕೋರ್ ಸಾಕಾಗಲ್ಲ. ಜೊತೆಗೆ ಇಬ್ಬನಿಯೂ ಬರುತ್ತಿತ್ತು. ನಮ್ಮ ಪ್ರದರ್ಶನದ ಬಗ್ಗೆ ತುಂಬಾ ಹೆಮ್ಮೆ ಇದೆ ಎಂದರು.
ಇದನ್ನೂ ಓದಿ:ಮಕ್ಕಳನ್ನು ಮನೆಯಲ್ಲೇ ಬಿಟ್ಟು ಕೆಲ್ಸಕ್ಕೆ ಹೋಗೋ ಪೋಷಕರೇ ಇರಲಿ ಎಚ್ಚರ.. ಇಲ್ಲಿ 5 ವರ್ಷದ ಮಗು ಸಾವನ್ನಪ್ಪಿದೆ..
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಎಲಿಮಿನೇಟರ್ ಪಂದ್ಯದಲ್ಲಿ ಆರ್ಸಿಬಿ ಸೋಲು
ಗೆದ್ದು ಕ್ವಾಲಿಫೈಯರ್2ಗೆ ಎಂಟ್ರಿಕೊಟ್ಟ ರಾಜಸ್ಥಾನ್
ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದ ಆರ್ಸಿಬಿ
ಬುಧವಾರ ನಡೆದ ಐಪಿಎಲ್ ಎಲಿಮಿನೇಟರ್ನಲ್ಲಿ ರಾಜಸ್ಥಾನ್ ರಾಯಲ್ಸ್ 4 ವಿಕೆಟ್ಗಳಿಂದ ಆರ್ಸಿಬಿಯನ್ನು ಸೋಲಿಸಿತು. ಈ ಮೂಲಕ ರಾಜಸ್ಥಾನ್ ರಾಯಲ್ಸ್ ಮೇ 24 ರಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಎರಡನೇ ಕ್ವಾಲಿಫೈಯರ್ನಲ್ಲಿ ಸೆಣಸಾಟ ನಡೆಸಲಿದೆ.
ಟಾಸ್ ಗೆದ್ದ ರಾಜಸ್ಥಾನ್, ಬೌಲಿಂಗ್ ಆಯ್ಕೆ ಮಾಡಿಕೊಂಡು ಆರ್ಸಿಬಿಯನ್ನು 172ರನ್ಗಳಿಗೆ ಕಟ್ಟಿ ಹಾಕಿತು. ಈ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ ಬ್ಯಾಟರ್ ಅದ್ಭುತ ಇನ್ನಿಂಗ್ಸ್ ಕಟ್ಟಿದರು. ಯಶಸ್ವಿ ಜೈಸ್ವಾಲ್ 45, ರಿಯಾನ್ ಪರಾಗ್ 36, ಶಿಮ್ರಾನ್ ಹೆಟ್ಮೆಯರ್ 26, ರೋವ್ಮನ್ ಪೊವೆಲ್ 16 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಮೂಲಕ ಆರ್ಆರ್ ಎರಡನೇ ಕ್ವಾಲಿಫೈಯರ್ಗೆ ಎಂಟ್ರಿ ಕೊಟ್ಟಿದೆ.
ಇದನ್ನೂ ಓದಿ:ಡಿನ್ನರ್ ಪಾರ್ಟಿ ಮೂಲಕ ರಣತಂತ್ರ ಹೆಣೆದ DK ಶಿವಕುಮಾರ್.. ಸಚಿವರಿಗೆ ಸಿದ್ದರಾಮಯ್ಯ ಕ್ಲಾಸ್..!
ಪಂದ್ಯ ಮುಗಿದ ಬಳಿಕ ಮಾತನಾಡಿದ ಆರ್ಸಿಬಿ ಕ್ಯಾಪ್ಟನ್ ಫಾಫ್.. ಇಬ್ಬನಿ ಬರುತ್ತಿದ್ದಂತೆ, ನಾವು ನೀಡಿರುವ ಟಾರ್ಗೆಟ್ ಕಮ್ಮಿ ಆಗಿದೆ ಎನಿಸಿತು. ಉತ್ತಮ ಸ್ಪರ್ಧೆ ನೀಡಲು ಇನ್ನೂ ರನ್ಗಳ ಅಗತ್ಯ ಇತ್ತು. ಒಂದು ಒಳ್ಳೆ ಸ್ಕೋರ್ಗೆ 20 ರನ್ಗಳ ಕೊರತೆ ಇತ್ತು. ನಮ್ಮ ಆಟಗಾರರು ಚೆನ್ನಾಗಿಯೇ ಹೋರಾಡಿದ್ದಾರೆ. ಅವರಿಗೆ ಕ್ರೆಡಿಟ್ ನೀಡಲೇಬೇಕು. ಈ ಋತುವಿನಲ್ಲಿ ನಾವು ಕಂಡುಕೊಂಡಿದ್ದೇನೆಂದರೆ.. ಪ್ರಭಾವಶಾಲಿ ಆಟಗಾರರೊಂದಿಗೆ ಸಾಧಾರಣ ಸ್ಕೋರ್ ಸಾಕಾಗಲ್ಲ. ಜೊತೆಗೆ ಇಬ್ಬನಿಯೂ ಬರುತ್ತಿತ್ತು. ನಮ್ಮ ಪ್ರದರ್ಶನದ ಬಗ್ಗೆ ತುಂಬಾ ಹೆಮ್ಮೆ ಇದೆ ಎಂದರು.
ಇದನ್ನೂ ಓದಿ:ಮಕ್ಕಳನ್ನು ಮನೆಯಲ್ಲೇ ಬಿಟ್ಟು ಕೆಲ್ಸಕ್ಕೆ ಹೋಗೋ ಪೋಷಕರೇ ಇರಲಿ ಎಚ್ಚರ.. ಇಲ್ಲಿ 5 ವರ್ಷದ ಮಗು ಸಾವನ್ನಪ್ಪಿದೆ..
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್