ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಆಟೋ.. ಇಬ್ಬರು ಸಾವು
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಪೊಲೀಸರು
ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹ ಕಂಡು ಕುಟುಂಬಸ್ಥರು ಶಾಕ್
ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದ್ದ ಮೃತದೇಹಗಳನ್ನು ಇಲಿಗಳು ತಿಂದ ಘಟನೆ ಉತ್ತರ ಪ್ರದೇಶದ ಬೆಳಕಿಗೆ ಬಂದಿದೆ. ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನು ಸಂಗ್ರಹಿಸಲು ಬಂದಿದ್ದ ಕುಟುಂಬಸ್ಥರು ಶವದ ಸ್ಥಿತಿ ಕಂಡು ಬೆಚ್ಚಿ ಬಿದ್ದಿದ್ದಾರೆ.
ಇಲ್ಲಿನ ದೇವಗಾಂವ್ ಕೊತ್ವಾಲಿಯ ಚೇವಾರ ಗ್ರಾಮದಲ್ಲಿ ಮಂಗಳವಾರ ಆಟೋವೊಂದು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಬಳಿಕ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: ಆತ್ಮಗಳ ಕಾಟ.. ಮೂಢನಂಬಿಕೆಗೆ ಮರುಳಾಗಿ 2 ಕಂದಮ್ಮಗಳ ಬಲಿ ಕೊಟ್ಟ ಸೋದರತ್ತೆ!
ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರು ಮನೆಗೆ ಕೊಂಡೊಯ್ದಿದ್ದಾರೆ. ಮನೆಗೆ ಕೊಂಡೊಯ್ದು ಕೊನೆಯ ಕ್ರಿಯೆ ಮಾಡುವ ವೇಳೆ ಮೃತದೇಹಗಳ ಹೆಬ್ಬೆರಳು, ಕಣ್ಣುಗಳನ್ನು ಇಲಿಗಳು ತಿಂದಿರುವುದು ಗೊತ್ತಾಗಿದೆ.
ಇದನ್ನೂ ಓದಿ: ಸಿನಿಮಾ ಆಯ್ತು ಹಾಸನ ಪೆನ್ ಡ್ರೈವ್ ಕೇಸ್? ರಿಲೀಸ್ ಆಯ್ತು ಟೀಸರ್! ಹೀರೋ ಯಾರು? ನಿರ್ಮಾಪಕ ಏನಂದ್ರು?
ಇದರಿಂದ ಕೋಪಗೊಂಡ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಆರೋಗ್ಯ ಇಲಾಖೆ ನಿರ್ಲಕ್ಷ ವಹಿಸಿದೆ ಎಂದು ಆರೋಪಿಸಿದ್ದಾರೆ. ಇನ್ನು ಫಾರ್ಮಾಸಿಸ್ಟ್ ಅರವಿಂದ್ ಎಂಬವರು ಇಲಿಗಳ ಕಾಟದಿಂದ ಹೀಗಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಇನ್ನು ಜಿಲ್ಪಾಸ್ಪತ್ರೆಯ ಇಲಿಗಳ ಕಾಟದ ವಿಚಾರವಾಗಿ ಸಿಎಂಗೆ ಪತ್ರ ಬರೆಯಲಾಗಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಆಟೋ.. ಇಬ್ಬರು ಸಾವು
ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ ಪೊಲೀಸರು
ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹ ಕಂಡು ಕುಟುಂಬಸ್ಥರು ಶಾಕ್
ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆಗೆ ಇರಿಸಲಾಗಿದ್ದ ಮೃತದೇಹಗಳನ್ನು ಇಲಿಗಳು ತಿಂದ ಘಟನೆ ಉತ್ತರ ಪ್ರದೇಶದ ಬೆಳಕಿಗೆ ಬಂದಿದೆ. ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನು ಸಂಗ್ರಹಿಸಲು ಬಂದಿದ್ದ ಕುಟುಂಬಸ್ಥರು ಶವದ ಸ್ಥಿತಿ ಕಂಡು ಬೆಚ್ಚಿ ಬಿದ್ದಿದ್ದಾರೆ.
ಇಲ್ಲಿನ ದೇವಗಾಂವ್ ಕೊತ್ವಾಲಿಯ ಚೇವಾರ ಗ್ರಾಮದಲ್ಲಿ ಮಂಗಳವಾರ ಆಟೋವೊಂದು ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದರು. ಬಳಿಕ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಇದನ್ನೂ ಓದಿ: ಆತ್ಮಗಳ ಕಾಟ.. ಮೂಢನಂಬಿಕೆಗೆ ಮರುಳಾಗಿ 2 ಕಂದಮ್ಮಗಳ ಬಲಿ ಕೊಟ್ಟ ಸೋದರತ್ತೆ!
ಮರಣೋತ್ತರ ಪರೀಕ್ಷೆಯ ಬಳಿಕ ಕುಟುಂಬಸ್ಥರು ಮನೆಗೆ ಕೊಂಡೊಯ್ದಿದ್ದಾರೆ. ಮನೆಗೆ ಕೊಂಡೊಯ್ದು ಕೊನೆಯ ಕ್ರಿಯೆ ಮಾಡುವ ವೇಳೆ ಮೃತದೇಹಗಳ ಹೆಬ್ಬೆರಳು, ಕಣ್ಣುಗಳನ್ನು ಇಲಿಗಳು ತಿಂದಿರುವುದು ಗೊತ್ತಾಗಿದೆ.
ಇದನ್ನೂ ಓದಿ: ಸಿನಿಮಾ ಆಯ್ತು ಹಾಸನ ಪೆನ್ ಡ್ರೈವ್ ಕೇಸ್? ರಿಲೀಸ್ ಆಯ್ತು ಟೀಸರ್! ಹೀರೋ ಯಾರು? ನಿರ್ಮಾಪಕ ಏನಂದ್ರು?
ಇದರಿಂದ ಕೋಪಗೊಂಡ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ. ಆರೋಗ್ಯ ಇಲಾಖೆ ನಿರ್ಲಕ್ಷ ವಹಿಸಿದೆ ಎಂದು ಆರೋಪಿಸಿದ್ದಾರೆ. ಇನ್ನು ಫಾರ್ಮಾಸಿಸ್ಟ್ ಅರವಿಂದ್ ಎಂಬವರು ಇಲಿಗಳ ಕಾಟದಿಂದ ಹೀಗಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಇನ್ನು ಜಿಲ್ಪಾಸ್ಪತ್ರೆಯ ಇಲಿಗಳ ಕಾಟದ ವಿಚಾರವಾಗಿ ಸಿಎಂಗೆ ಪತ್ರ ಬರೆಯಲಾಗಿದೆ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ