ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ RCBಗೆ ಸೋಲು
ಆರ್ಸಿಬಿ ಸೋಲನ್ನು ಸಂಭ್ರಮಿಸಿ ಟ್ರೋಲ್ ಮಾಡಿದ್ದ ದೇಶಪಾಂಡೆ
ಆರ್ಸಿಬಿ ಟ್ರೋಲ್ ಸಂಭ್ರಮಿಸಿ, ಅವರೇ ಟ್ರೋಲ್ ಆಗ್ತಿದ್ದಾರೆ ಈಗ
ಚೆನ್ನೈ ಸೂಪರ್ ಕಿಂಗ್ಸ್ ವೇಗಿ ತುಷಾರ್ ದೇಶಪಾಂಡೆ ಆರ್ಸಿಬಿಯನ್ನು ಟ್ರೋಲ್ ಮಾಡಿದ್ದಾರೆ. ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಸೋಲುತ್ತಿದ್ದಂತೆಯೇ, ತುಷಾರ್ ದೇಶಪಾಂಡೆ ಆರ್ಸಿಬಿಯನ್ನು ಗೇಲಿ ಮಾಡಿದ್ದಾರೆ.
ಇನ್ಸ್ಟಾ ಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದ ದೇಶಪಾಂಡೆ ತೀವ್ರ ಚರ್ಚೆಗೆ ಕಾರಣ ಆಗ್ತಿದ್ದಂತೆಯೇ ಅದನ್ನು ಡಿಲೀಟ್ ಮಾಡಿದ್ದಾರೆ. ಅಷ್ಟರಲ್ಲಾಗಲೇ ಅಭಿಮಾನಿಗಳು ಅದನ್ನು ಸ್ಕ್ರೀನ್ಶಾಟ್ ತೆಗೆದುಕೊಂಡಿದ್ದು, ಇದೀಗ ಅವರೇ ಟ್ರೋಲ್ ಆಗ್ತಿದ್ದಾರೆ.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಅಪಘಾತ.. ಇಬ್ಬರು ಮಹಿಳೆಯರು ಸಾವು.. 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಅಂದ್ಹಾಗೆ ದೇಶಪಾಂಡೆ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ CSK ಅಭಿಮಾನಿಗಳ ಅಧಿಕೃತ ಪೋಸ್ಟ್ ಹಂಚಿಕೊಂಡಿದ್ದರು. ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದ ಫೋಟೋವು ಅವರ ಪೋಸ್ಟ್ ಕಾಣ್ತಿದೆ. ರೈಲ್ವೇ ನಿಲ್ದಾಣದಲ್ಲಿ ರೈಲು ಬಂದು ನಿಂತಿದೆ. ಕನ್ನಡ, ಹಿಂದಿ ಮತ್ತು ಇಂಗಿಷ್ನಲ್ಲಿ ಬರೆದಿರುವ ಬೋರ್ಡ್ ಒಂದನ್ನ ಕಾಣಬಹುದು. ಅದರಲ್ಲಿ ಇಂಗ್ಲಿಷನ್ನಲ್ಲಿ ‘BENGALURU CANT’ ಎಂದು ಬರೆಯಲಾಗಿದೆ. ಇಲ್ಲಿರುವ ಬರಹ ಮತ್ತು ಟ್ರೈನ್ ಬಂದು ನಿಂತಿರೋದನ್ನು ಆರ್ಸಿಬಿ ಸೋಲಿಗೆ ಲಿಂಕ್ ಮಾಡಿದ್ದ ಪೋಸ್ಟ್ ಅನ್ನು ತುಷಾರ್ ದೇಶಪಾಂಡೆ ಶೇರ್ ಮಾಡಿದ್ದರು. ಇದು ಆರ್ಸಿಬಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಯಾವಾಗ ವಿವಾದ ಆಗುತ್ತೆ ಅನ್ನೋದನ್ನು ಎಚ್ಚೆತ್ತುಕೊಂಡರೋ, ಆಗಲೇ ಅದನ್ನು ಡಿಲೀಸ್ ಮಾಡಿದ್ದಾರೆ.
Tushar Deshpande's Instagram story. pic.twitter.com/bXSed8pf7Y
— Mufaddal Vohra (@mufaddal_vohra) May 22, 2024
ಇದನ್ನೂ ಓದಿ:ಸೋತ ಆರ್ಸಿಬಿ.. ನಾಯಕ ಫಾಫ್ ಡು ಪ್ಲೆಸ್ಸಿಸ್ ಹೇಳಿದ್ದೇನು..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ RCBಗೆ ಸೋಲು
ಆರ್ಸಿಬಿ ಸೋಲನ್ನು ಸಂಭ್ರಮಿಸಿ ಟ್ರೋಲ್ ಮಾಡಿದ್ದ ದೇಶಪಾಂಡೆ
ಆರ್ಸಿಬಿ ಟ್ರೋಲ್ ಸಂಭ್ರಮಿಸಿ, ಅವರೇ ಟ್ರೋಲ್ ಆಗ್ತಿದ್ದಾರೆ ಈಗ
ಚೆನ್ನೈ ಸೂಪರ್ ಕಿಂಗ್ಸ್ ವೇಗಿ ತುಷಾರ್ ದೇಶಪಾಂಡೆ ಆರ್ಸಿಬಿಯನ್ನು ಟ್ರೋಲ್ ಮಾಡಿದ್ದಾರೆ. ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಸೋಲುತ್ತಿದ್ದಂತೆಯೇ, ತುಷಾರ್ ದೇಶಪಾಂಡೆ ಆರ್ಸಿಬಿಯನ್ನು ಗೇಲಿ ಮಾಡಿದ್ದಾರೆ.
ಇನ್ಸ್ಟಾ ಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದ ದೇಶಪಾಂಡೆ ತೀವ್ರ ಚರ್ಚೆಗೆ ಕಾರಣ ಆಗ್ತಿದ್ದಂತೆಯೇ ಅದನ್ನು ಡಿಲೀಟ್ ಮಾಡಿದ್ದಾರೆ. ಅಷ್ಟರಲ್ಲಾಗಲೇ ಅಭಿಮಾನಿಗಳು ಅದನ್ನು ಸ್ಕ್ರೀನ್ಶಾಟ್ ತೆಗೆದುಕೊಂಡಿದ್ದು, ಇದೀಗ ಅವರೇ ಟ್ರೋಲ್ ಆಗ್ತಿದ್ದಾರೆ.
ಇದನ್ನೂ ಓದಿ:ಬೆಳ್ಳಂಬೆಳಗ್ಗೆ ಅಪಘಾತ.. ಇಬ್ಬರು ಮಹಿಳೆಯರು ಸಾವು.. 20ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ
ಅಂದ್ಹಾಗೆ ದೇಶಪಾಂಡೆ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ CSK ಅಭಿಮಾನಿಗಳ ಅಧಿಕೃತ ಪೋಸ್ಟ್ ಹಂಚಿಕೊಂಡಿದ್ದರು. ಬೆಂಗಳೂರು ಕಂಟೋನ್ಮೆಂಟ್ ರೈಲು ನಿಲ್ದಾಣದ ಫೋಟೋವು ಅವರ ಪೋಸ್ಟ್ ಕಾಣ್ತಿದೆ. ರೈಲ್ವೇ ನಿಲ್ದಾಣದಲ್ಲಿ ರೈಲು ಬಂದು ನಿಂತಿದೆ. ಕನ್ನಡ, ಹಿಂದಿ ಮತ್ತು ಇಂಗಿಷ್ನಲ್ಲಿ ಬರೆದಿರುವ ಬೋರ್ಡ್ ಒಂದನ್ನ ಕಾಣಬಹುದು. ಅದರಲ್ಲಿ ಇಂಗ್ಲಿಷನ್ನಲ್ಲಿ ‘BENGALURU CANT’ ಎಂದು ಬರೆಯಲಾಗಿದೆ. ಇಲ್ಲಿರುವ ಬರಹ ಮತ್ತು ಟ್ರೈನ್ ಬಂದು ನಿಂತಿರೋದನ್ನು ಆರ್ಸಿಬಿ ಸೋಲಿಗೆ ಲಿಂಕ್ ಮಾಡಿದ್ದ ಪೋಸ್ಟ್ ಅನ್ನು ತುಷಾರ್ ದೇಶಪಾಂಡೆ ಶೇರ್ ಮಾಡಿದ್ದರು. ಇದು ಆರ್ಸಿಬಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಯಾವಾಗ ವಿವಾದ ಆಗುತ್ತೆ ಅನ್ನೋದನ್ನು ಎಚ್ಚೆತ್ತುಕೊಂಡರೋ, ಆಗಲೇ ಅದನ್ನು ಡಿಲೀಸ್ ಮಾಡಿದ್ದಾರೆ.
Tushar Deshpande's Instagram story. pic.twitter.com/bXSed8pf7Y
— Mufaddal Vohra (@mufaddal_vohra) May 22, 2024
ಇದನ್ನೂ ಓದಿ:ಸೋತ ಆರ್ಸಿಬಿ.. ನಾಯಕ ಫಾಫ್ ಡು ಪ್ಲೆಸ್ಸಿಸ್ ಹೇಳಿದ್ದೇನು..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್