ಬಾಲಕನಿಗೆ ರಿಮಾಂಡ್ ರೂಮ್ನಲ್ಲಿ ಟಿವಿ ನೋಡಲು ಚಾನ್ಸ್ ಇದೆಯಾ?
ಐಷಾರಾಮಿ ಪೋರ್ಶ್ ಕಾರಿನಲ್ಲಿ ವೇಗವಾಗಿ ಬಂದು ಡಿಕ್ಕಿ ಮಾಡಿದ್ದ
ಪುಣೆಯಲ್ಲಿ ಇಬ್ಬರ ಟೆಕ್ಕಿಗಳ ಸಾವಿಗೆ ಕಾರಣವಾಗಿದ್ದ ಅಪ್ರಾಪ್ತ ಬಾಲಕ
ಮುಂಬೈ: ಪುಣೆಯಲ್ಲಿ ಆಪ್ರಾಪ್ತನೊಬ್ಬ ಐಷಾರಾಮಿ ಪೋರ್ಶ್ ಕಾರಿನಲ್ಲಿ ವೇಗವಾಗಿ ಬಂದು ಬೈಕ್ಗೆ ಡಿಕ್ಕಿ ಹೊಡೆದು ಇಬ್ಬರು ಸಾವಿಗೆ ಕಾರಣನಾಗಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪ್ರಾಪ್ತನಿಗೆ ಕೋರ್ಟ್ ಕೆಲ ನಿಯಮಗಳನ್ನು ವಿಧಿಸಿದ್ದು ಅವುಗಳನ್ನು ಬಾಲಕ ರಿಮಾಂಡ್ ರೂಮ್ನಲ್ಲಿ ಪಾಲನೆ ಮಾಡಬೇಕಿದೆ.
ಇಬ್ಬರ ಸಾವಿಗೆ ಕಾರಣನಾದ ಬಾಲಾಪರಾಧಿ ವೇದಾಂದ್ ಅಗರ್ವಾಲ್ನನ್ನ ಸದ್ಯ ರಿಮಾಂಡ್ ರೂಮ್ಗೆ ಜೂನ್ 5ರವರೆಗೆ ಹಾಕಲಾಗಿದೆ. ಆರೋಪಿ ಬಾಲಕ ರಿಮಾಂಡ್ ರೂಮ್ನಲ್ಲಿ ಬೆಳಗಿನ ಜಾವ ಎದ್ದು ನಿತ್ಯ ಕರ್ಮಗಳನ್ನ ಮುಗಿಸಿ, ಪ್ರಾರ್ಥನೆ ಮಾಡಬೇಕು. ಬೆಳಗ್ಗೆ 8 ರಿಂದ 10 ಗಂಟೆ ಒಳಗೆ ತಿಂಡಿ ತಿನ್ನಬೇಕು. ಅವಲಕ್ಕಿ, ಉಪ್ಪಿಟ್ಟು, ಮೊಟ್ಟೆ ಮತ್ತು ಹಾಲಿನಂತ ಆರೋಗ್ಯಕರ ಉಪಹಾರ ತಿನ್ನಬೇಕು. 3 ಗಂಟೆಗಳ ಕಾಲ ಅಧ್ಯಯನ ಮಾಡಬೇಕು ಎಂದು ಹೇಳಲಾಗಿದೆ.
ಇದನ್ನೂ ಓದಿ: ಪೋರ್ಶ್ ಕಾರು ಆಕ್ಸಿಡೆಂಟ್ ಕೇಸ್; 2 ಪಬ್ನಲ್ಲಿ ಸ್ನೇಹಿತರ ಜತೆ ಎಂಜಾಯ್ ಮಾಡಿದ್ದ.. ಎಷ್ಟು ಬಿಲ್ ಕಟ್ಟಿದ್ದ ಬಾಲಕ?
ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಕೈದಿಗಳೆಲ್ಲ ರಿಮಾಂಡ್ ರೂಮ್ನ ತರಗತಿಗಳಿಗೆ ಹಾಜರಾಗಬೇಕು. ಸಂಜೆ 4 ಗಂಟೆಗೆ ಸ್ನ್ಯಾಕ್ಸ್ ನೀಡಲಾಗುತ್ತದೆ. ಇದರ ನಂತರ 1 ಗಂಟೆ ಟಿವಿ ನೋಡಿ, 2 ತಾಸು ವಾಲಿಬಾಲ್ ಅಥವಾ ಫುಟ್ಬಾಲ್ ಆಡಬಹುದು. ರಿಮಾಂಡ್ ರೂಮ್ಗೆ ವಾಪಸ್ ಆದ ಬಳಿಕ ತರಕಾರಿ, ದಾಲ್, ಅನ್ನ ಮತ್ತು ರೊಟ್ಟಿಗಳನ್ನು ಒಳಗೊಂಡ ಊಟ ರಾತ್ರಿ ವೇಳೆ ತಿನ್ನಬೇಕು ಎಂದು ತಿಳಿದು ಬಂದಿದೆ.
ಭೀಕರ ಘಟನೆಯಲ್ಲಿ ಇಬ್ಬರು ಟೆಕ್ಕಿಗಳು ಸಾವನ್ನಪ್ಪಿದರು ಬಾಲಾಪರಾಧಿಗೆ 15 ಗಂಟೆ ಒಳಗೆ ಜಾಮೀನು ಮಂಜೂರು ಮಾಡಿದ್ದಕ್ಕಾಗಿ ತೀವ್ರ ಟೀಕೆ ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಜೂನ್ 5ರವರೆಗೆ ರಿಮಾಂಡ್ ರೂಮ್ಗೆ ಕಳುಹಿಸಲಾಗಿದ್ದು, ಮೇಲಿನ ನಿಯಮಗಳನ್ನು ಬಾಲಕ ಪಾಲಿಸಬೇಕಿದೆ ಎಂದು ಹೇಳಲಾಗಿದೆ.
ಮೊದಲು ಬಾಲಾಪರಾಧಿಗೆ ವಿಧಿಸಿದ್ದ ಷರತ್ತುಗಳು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಾಲಕನಿಗೆ ರಿಮಾಂಡ್ ರೂಮ್ನಲ್ಲಿ ಟಿವಿ ನೋಡಲು ಚಾನ್ಸ್ ಇದೆಯಾ?
ಐಷಾರಾಮಿ ಪೋರ್ಶ್ ಕಾರಿನಲ್ಲಿ ವೇಗವಾಗಿ ಬಂದು ಡಿಕ್ಕಿ ಮಾಡಿದ್ದ
ಪುಣೆಯಲ್ಲಿ ಇಬ್ಬರ ಟೆಕ್ಕಿಗಳ ಸಾವಿಗೆ ಕಾರಣವಾಗಿದ್ದ ಅಪ್ರಾಪ್ತ ಬಾಲಕ
ಮುಂಬೈ: ಪುಣೆಯಲ್ಲಿ ಆಪ್ರಾಪ್ತನೊಬ್ಬ ಐಷಾರಾಮಿ ಪೋರ್ಶ್ ಕಾರಿನಲ್ಲಿ ವೇಗವಾಗಿ ಬಂದು ಬೈಕ್ಗೆ ಡಿಕ್ಕಿ ಹೊಡೆದು ಇಬ್ಬರು ಸಾವಿಗೆ ಕಾರಣನಾಗಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಪ್ರಾಪ್ತನಿಗೆ ಕೋರ್ಟ್ ಕೆಲ ನಿಯಮಗಳನ್ನು ವಿಧಿಸಿದ್ದು ಅವುಗಳನ್ನು ಬಾಲಕ ರಿಮಾಂಡ್ ರೂಮ್ನಲ್ಲಿ ಪಾಲನೆ ಮಾಡಬೇಕಿದೆ.
ಇಬ್ಬರ ಸಾವಿಗೆ ಕಾರಣನಾದ ಬಾಲಾಪರಾಧಿ ವೇದಾಂದ್ ಅಗರ್ವಾಲ್ನನ್ನ ಸದ್ಯ ರಿಮಾಂಡ್ ರೂಮ್ಗೆ ಜೂನ್ 5ರವರೆಗೆ ಹಾಕಲಾಗಿದೆ. ಆರೋಪಿ ಬಾಲಕ ರಿಮಾಂಡ್ ರೂಮ್ನಲ್ಲಿ ಬೆಳಗಿನ ಜಾವ ಎದ್ದು ನಿತ್ಯ ಕರ್ಮಗಳನ್ನ ಮುಗಿಸಿ, ಪ್ರಾರ್ಥನೆ ಮಾಡಬೇಕು. ಬೆಳಗ್ಗೆ 8 ರಿಂದ 10 ಗಂಟೆ ಒಳಗೆ ತಿಂಡಿ ತಿನ್ನಬೇಕು. ಅವಲಕ್ಕಿ, ಉಪ್ಪಿಟ್ಟು, ಮೊಟ್ಟೆ ಮತ್ತು ಹಾಲಿನಂತ ಆರೋಗ್ಯಕರ ಉಪಹಾರ ತಿನ್ನಬೇಕು. 3 ಗಂಟೆಗಳ ಕಾಲ ಅಧ್ಯಯನ ಮಾಡಬೇಕು ಎಂದು ಹೇಳಲಾಗಿದೆ.
ಇದನ್ನೂ ಓದಿ: ಪೋರ್ಶ್ ಕಾರು ಆಕ್ಸಿಡೆಂಟ್ ಕೇಸ್; 2 ಪಬ್ನಲ್ಲಿ ಸ್ನೇಹಿತರ ಜತೆ ಎಂಜಾಯ್ ಮಾಡಿದ್ದ.. ಎಷ್ಟು ಬಿಲ್ ಕಟ್ಟಿದ್ದ ಬಾಲಕ?
ಬೆಳಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆವರೆಗೆ ಕೈದಿಗಳೆಲ್ಲ ರಿಮಾಂಡ್ ರೂಮ್ನ ತರಗತಿಗಳಿಗೆ ಹಾಜರಾಗಬೇಕು. ಸಂಜೆ 4 ಗಂಟೆಗೆ ಸ್ನ್ಯಾಕ್ಸ್ ನೀಡಲಾಗುತ್ತದೆ. ಇದರ ನಂತರ 1 ಗಂಟೆ ಟಿವಿ ನೋಡಿ, 2 ತಾಸು ವಾಲಿಬಾಲ್ ಅಥವಾ ಫುಟ್ಬಾಲ್ ಆಡಬಹುದು. ರಿಮಾಂಡ್ ರೂಮ್ಗೆ ವಾಪಸ್ ಆದ ಬಳಿಕ ತರಕಾರಿ, ದಾಲ್, ಅನ್ನ ಮತ್ತು ರೊಟ್ಟಿಗಳನ್ನು ಒಳಗೊಂಡ ಊಟ ರಾತ್ರಿ ವೇಳೆ ತಿನ್ನಬೇಕು ಎಂದು ತಿಳಿದು ಬಂದಿದೆ.
ಭೀಕರ ಘಟನೆಯಲ್ಲಿ ಇಬ್ಬರು ಟೆಕ್ಕಿಗಳು ಸಾವನ್ನಪ್ಪಿದರು ಬಾಲಾಪರಾಧಿಗೆ 15 ಗಂಟೆ ಒಳಗೆ ಜಾಮೀನು ಮಂಜೂರು ಮಾಡಿದ್ದಕ್ಕಾಗಿ ತೀವ್ರ ಟೀಕೆ ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಜೂನ್ 5ರವರೆಗೆ ರಿಮಾಂಡ್ ರೂಮ್ಗೆ ಕಳುಹಿಸಲಾಗಿದ್ದು, ಮೇಲಿನ ನಿಯಮಗಳನ್ನು ಬಾಲಕ ಪಾಲಿಸಬೇಕಿದೆ ಎಂದು ಹೇಳಲಾಗಿದೆ.
ಮೊದಲು ಬಾಲಾಪರಾಧಿಗೆ ವಿಧಿಸಿದ್ದ ಷರತ್ತುಗಳು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ