ಮಗ ಪೊಲೀಸರಿಗೆ ಶರಣಾದ ಸುದ್ದಿ ಕೇಳುತ್ತಿದ್ದಂತೆ ಕುಸಿದು ಬಿದ್ದ ತಂದೆ
ಕಳೆದ ಐದು ದಿನಗಳಿಂದ ತಲೆ ಮರೆಸಿಕೊಂಡಿದ್ದ 7ನೇ ಆರೋಪಿ ಅನು
ಮಗನ ಸ್ಥಿತಿ ನೆನೆದು ಮನೆಯಿಂದ ಆಚೆ ಬಂದ ಚಂದ್ರಪ್ಪಗೆ ಹೃದಯಾಘಾತ
ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪೊಲೀಸರ ತನಿಖೆ ಚುರುಕಾಗಿರುವಂತೆ ಪ್ರಕರಣ ದಿನಕ್ಕೊಂದು ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಡೆಡ್ಲಿ ಮರ್ಡರ್ ಕೇಸ್ನಲ್ಲಿ ಇದುವರೆಗೂ ಬಂಧಿತರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಈ 18ರಲ್ಲಿ ಹಲವರು ದರ್ಶನ್ ಕಟ್ಟಾ ಅಭಿಮಾನಿಗಳಾಗಿದ್ದು ಪೊಲೀಸರ ಕಸ್ಟಡಿಯಲ್ಲಿದ್ದಾರೆ. ಆರೋಪಿಯ ಮನೆಯವರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಇಂದು A7 ಅನು ಕುಮಾರ್ ಚಿತ್ರದುರ್ಗ ಪೊಲೀಸರಿಗೆ ಶರಣಾಗಿದ್ದ. ಈ ಸುದ್ದಿ ತಿಳಿದ ಅನು ತಂದೆ ಚಂದ್ರಪ್ಪ(55) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಆರೋಪಿ ಅನುಕುಮಾರ್ ಚಿತ್ರದುರ್ಗದ ಸಿಹಿನೀರ ಹೊಂಡ ಏರಿಯಾದಲ್ಲಿ ನೆಲೆಸಿದ್ದ. ತನ್ನ ಮಗ ಕೊಲೆ ಕೇಸ್ನಲ್ಲಿ ಪೊಲೀಸರಿಗೆ ಶರಣಾದ ಸುದ್ದಿ ಕೇಳುತ್ತಿದ್ದಂತೆ ಕುಸಿದು ಬಿದ್ದ ತಂದೆ ಪ್ರಾಣ ಬಿಟ್ಟಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅನು ಕೂಡ ಪ್ರಮುಖ ಆರೋಪಿಯಾಗಿದ್ದ. ಕಳೆದ ಐದು ದಿನಗಳಿಂದ ತಲೆ ಮರೆಸಿಕೊಂಡಿದ್ದ 7ನೇ ಆರೋಪಿ ಅನು, ಜಗ್ಗಿ ಎಂಬುವ ಮತ್ತೊಬ್ಬ ಆರೋಪಿ ಜೊತೆ ಇಂದು ಡಿವೈಎಸ್ಪಿ ಕಚೇರಿಯಲ್ಲಿ ಶರಣಾಗಿದ್ದ. ಮಗ ಕೊಲೆ ಕೇಸ್ನಲ್ಲಿ ಆರೋಪಿ ಅಂತ ತಿಳಿಯುತ್ತಿದ್ದಂತೆ ಚಂದ್ರಪ್ಪ ಆತಂಕಕ್ಕೆ ಒಳಗಾಗಿದ್ದರು. ಮನೆಯಲ್ಲಿ ಟಿವಿ ನೋಡುತ್ತಾ ಕುಳಿತಿದ್ದ ಚಂದ್ರಪ್ಪ ಅವರಿಗೆ ಹೃದಾಯಘಾತವಾಗಿದೆ.
ಇದನ್ನೂ ಓದಿ: ದರ್ಶನ್ ಭೇಟಿಯ ನೆಪ.. ಮನೆಯ ಆಧಾರಸ್ತಂಭವೇ ಈತ.. ರೇಣುಕಾಸ್ವಾಮಿ ಕೇಸ್ನಲ್ಲಿ ಮತ್ತೊಬ್ಬ ಅಮಾಯಕ
ಅನುಕುಮಾರ್ ತಂದೆ ಚಂದ್ರಪ್ಪ ಗಾರೆ ಕೆಲಸ ಮಾಡಿಕೊಂಡಿದ್ದ. ಮಗನ ಸ್ಥಿತಿ ನೆನೆದು ಮನೆಯಿಂದ ಆಚೆ ಬಂದ ಚಂದ್ರಪ್ಪ ಕುಸಿದು ಬಿದ್ದಿದ್ದಾರೆ. ಕೂಡಲೇ ಅನು ಸ್ನೇಹಿತರು ಚಂದ್ರಪ್ಪ ಅವರನ್ನು ಜಿಲ್ಲಾಸ್ಪತ್ರೆಗೆ ಆಟೋದಲ್ಲಿ ಕರೆದೊಯ್ದಿದ್ದರು. ಆಸ್ಪತ್ರೆಗೆ ದಾಖಲಿಸಿದ್ದ ವೇಳೆ ಲೋ ಬಿಪಿ ಆಗಿದೆ. ಹೃದಯಾಘಾತದಿಂದ ಚಂದ್ರಪ್ಪ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಅಮಾಯಕರ ಮನೆಯಲ್ಲಿ ಆಕ್ರಂದನ
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅವರ ಜೊತೆಗಿದ್ದ ಅಮಾಯಕರು ಸಿಕ್ಕಿಬಿದ್ದಿದ್ದಾರೆ. ಮಗ ಪೊಲೀಸರ ಕಸ್ಟಡಿಯಲ್ಲಿದ್ದು, ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಆರೋಪಿ ಅನುಕುಮಾರ್ ತಂದೆ ಚಂದ್ರಪ್ಪ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಚಂದ್ರಪ್ಪ ಮನೆಯಲ್ಲಿ ಪತ್ನಿ ಜಯಮ್ಮ, ಪುತ್ರಿ ಸೌಮ್ಯ, ಪುತ್ರರಾದ ಮಂಜುನಾಥ್, ಶ್ರೀನಿವಾಸ್ ಗೋಳಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಗ ಪೊಲೀಸರಿಗೆ ಶರಣಾದ ಸುದ್ದಿ ಕೇಳುತ್ತಿದ್ದಂತೆ ಕುಸಿದು ಬಿದ್ದ ತಂದೆ
ಕಳೆದ ಐದು ದಿನಗಳಿಂದ ತಲೆ ಮರೆಸಿಕೊಂಡಿದ್ದ 7ನೇ ಆರೋಪಿ ಅನು
ಮಗನ ಸ್ಥಿತಿ ನೆನೆದು ಮನೆಯಿಂದ ಆಚೆ ಬಂದ ಚಂದ್ರಪ್ಪಗೆ ಹೃದಯಾಘಾತ
ಚಿತ್ರದುರ್ಗ: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಪೊಲೀಸರ ತನಿಖೆ ಚುರುಕಾಗಿರುವಂತೆ ಪ್ರಕರಣ ದಿನಕ್ಕೊಂದು ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಡೆಡ್ಲಿ ಮರ್ಡರ್ ಕೇಸ್ನಲ್ಲಿ ಇದುವರೆಗೂ ಬಂಧಿತರ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. ಈ 18ರಲ್ಲಿ ಹಲವರು ದರ್ಶನ್ ಕಟ್ಟಾ ಅಭಿಮಾನಿಗಳಾಗಿದ್ದು ಪೊಲೀಸರ ಕಸ್ಟಡಿಯಲ್ಲಿದ್ದಾರೆ. ಆರೋಪಿಯ ಮನೆಯವರು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಇಂದು A7 ಅನು ಕುಮಾರ್ ಚಿತ್ರದುರ್ಗ ಪೊಲೀಸರಿಗೆ ಶರಣಾಗಿದ್ದ. ಈ ಸುದ್ದಿ ತಿಳಿದ ಅನು ತಂದೆ ಚಂದ್ರಪ್ಪ(55) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಆರೋಪಿ ಅನುಕುಮಾರ್ ಚಿತ್ರದುರ್ಗದ ಸಿಹಿನೀರ ಹೊಂಡ ಏರಿಯಾದಲ್ಲಿ ನೆಲೆಸಿದ್ದ. ತನ್ನ ಮಗ ಕೊಲೆ ಕೇಸ್ನಲ್ಲಿ ಪೊಲೀಸರಿಗೆ ಶರಣಾದ ಸುದ್ದಿ ಕೇಳುತ್ತಿದ್ದಂತೆ ಕುಸಿದು ಬಿದ್ದ ತಂದೆ ಪ್ರಾಣ ಬಿಟ್ಟಿದ್ದಾರೆ.
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಅನು ಕೂಡ ಪ್ರಮುಖ ಆರೋಪಿಯಾಗಿದ್ದ. ಕಳೆದ ಐದು ದಿನಗಳಿಂದ ತಲೆ ಮರೆಸಿಕೊಂಡಿದ್ದ 7ನೇ ಆರೋಪಿ ಅನು, ಜಗ್ಗಿ ಎಂಬುವ ಮತ್ತೊಬ್ಬ ಆರೋಪಿ ಜೊತೆ ಇಂದು ಡಿವೈಎಸ್ಪಿ ಕಚೇರಿಯಲ್ಲಿ ಶರಣಾಗಿದ್ದ. ಮಗ ಕೊಲೆ ಕೇಸ್ನಲ್ಲಿ ಆರೋಪಿ ಅಂತ ತಿಳಿಯುತ್ತಿದ್ದಂತೆ ಚಂದ್ರಪ್ಪ ಆತಂಕಕ್ಕೆ ಒಳಗಾಗಿದ್ದರು. ಮನೆಯಲ್ಲಿ ಟಿವಿ ನೋಡುತ್ತಾ ಕುಳಿತಿದ್ದ ಚಂದ್ರಪ್ಪ ಅವರಿಗೆ ಹೃದಾಯಘಾತವಾಗಿದೆ.
ಇದನ್ನೂ ಓದಿ: ದರ್ಶನ್ ಭೇಟಿಯ ನೆಪ.. ಮನೆಯ ಆಧಾರಸ್ತಂಭವೇ ಈತ.. ರೇಣುಕಾಸ್ವಾಮಿ ಕೇಸ್ನಲ್ಲಿ ಮತ್ತೊಬ್ಬ ಅಮಾಯಕ
ಅನುಕುಮಾರ್ ತಂದೆ ಚಂದ್ರಪ್ಪ ಗಾರೆ ಕೆಲಸ ಮಾಡಿಕೊಂಡಿದ್ದ. ಮಗನ ಸ್ಥಿತಿ ನೆನೆದು ಮನೆಯಿಂದ ಆಚೆ ಬಂದ ಚಂದ್ರಪ್ಪ ಕುಸಿದು ಬಿದ್ದಿದ್ದಾರೆ. ಕೂಡಲೇ ಅನು ಸ್ನೇಹಿತರು ಚಂದ್ರಪ್ಪ ಅವರನ್ನು ಜಿಲ್ಲಾಸ್ಪತ್ರೆಗೆ ಆಟೋದಲ್ಲಿ ಕರೆದೊಯ್ದಿದ್ದರು. ಆಸ್ಪತ್ರೆಗೆ ದಾಖಲಿಸಿದ್ದ ವೇಳೆ ಲೋ ಬಿಪಿ ಆಗಿದೆ. ಹೃದಯಾಘಾತದಿಂದ ಚಂದ್ರಪ್ಪ ಸಾವನ್ನಪ್ಪಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಅಮಾಯಕರ ಮನೆಯಲ್ಲಿ ಆಕ್ರಂದನ
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಅವರ ಜೊತೆಗಿದ್ದ ಅಮಾಯಕರು ಸಿಕ್ಕಿಬಿದ್ದಿದ್ದಾರೆ. ಮಗ ಪೊಲೀಸರ ಕಸ್ಟಡಿಯಲ್ಲಿದ್ದು, ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಆರೋಪಿ ಅನುಕುಮಾರ್ ತಂದೆ ಚಂದ್ರಪ್ಪ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಚಂದ್ರಪ್ಪ ಮನೆಯಲ್ಲಿ ಪತ್ನಿ ಜಯಮ್ಮ, ಪುತ್ರಿ ಸೌಮ್ಯ, ಪುತ್ರರಾದ ಮಂಜುನಾಥ್, ಶ್ರೀನಿವಾಸ್ ಗೋಳಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ