ಪ್ರಜ್ವಲ್ ರೇವಣ್ಣ ಕೇಸ್ ಬೆನ್ನಲ್ಲೇ ಮತ್ತೊಂದು ಹಗರಣ
ಜೆಡಿಎಸ್ ಕಾರ್ಯಕರ್ತನಿಂದಲೇ ದೂರು ದಾಖಲು
ಸೂರಜ್ ವಿರುದ್ಧ ಕೇಳಿಬಂದಿರುವ ಆರೋಪ ಏನು..?
ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಕುಟುಂಬಕ್ಕೆ ಮೇಲಿಂದ ಮೇಲೆ ಮುಜುಗರವಾಗುವಂತ ಘಟನೆಗಳು ನಡೆಯುತ್ತಲೇ ಇವೆ. ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯ ಹಂತದಲ್ಲಿರುವಾಗಲೇ ಸೂರಜ್ ರೇವಣ್ಣ ವಿರುದ್ಧ ಸಲಿಂಗ ಲೈಂಗಿಕ ದೌರ್ಜನ್ಯ ದೂರು ದಾಖಲಾಗಿದೆ. ಇದಕ್ಕೆ ಪ್ರತಿಯಾಗಿ ಸೂರಜ್ನಿಂದಲೂ ಸಂತ್ರಸ್ತನಿಂದ ದೂರು ನೀಡಲಾಗಿದೆ.
ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ
ಹೆಚ್.ಡಿ ರೇವಣ್ಣ ಹಿರಿಯ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. ಹಾಸನದ ಅರಕಲಗೂಡಿನ ತಮ್ಮದೇ ಜೆಡಿಎಸ್ ಪಕ್ಷದ ಕಾರ್ಯಕರ್ತನಿಗೆ ಸಲಿಂಗ ಲೈಂಗಿಕ ದೌರ್ಜನ್ಯ ಮಾಡಿದ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಜೆಡಿಎಸ್ ಕಾರ್ಯಕರ್ತ ಬೆಂಗಳೂರಿಗೆ ತೆರಳಿ ಡಿಸಿ ಹಾಗೂ ಐಜಿಪಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಆರೋಪಿ ಪ್ರದೂಶ್ ಜೊತೆ ಶೆಡ್ಗೆ ಪದೇ ಪದೆ ಬರ್ತಿದ್ದ ಇನ್ನೊಬ್ಬ ವ್ಯಕ್ತಿ.. ವಿಐಪಿನಾ..? ಮತ್ತೊಬ್ಬ ನಟನಾ?
ಸೂರಜ್ ವಿರುದ್ಧ ಆರೋಪ ಏನು..?
ಜೂನ್ 16ರ ಸಂಜೆ ಚನ್ನರಾಯಪಟ್ಟಣ ತಾಲೂಕಿನ ಗನ್ನಿಕಡದ ತೋಟದ ಮನೆಯಲ್ಲಿ ದೌರ್ಜನ್ಯ ನಡೆಸಿರೊ ಬಗ್ಗೆ ಆರೋಪಿಸಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ಪರ ಕೆಲಸ ಮಾಡುತ್ತಿದ್ದಾಗ ನನ್ನನ್ನು ಭೇಟಿಯಾಗಿ ನೀನು ಚೆನ್ನಾಗಿ ಕೆಲಸ ಮಾಡುತ್ತಿದ್ದಿಯಾ ಅಂತ ಹೊಗಳಿದ್ದರು. ಅಲ್ಲದೆ ನಿನ್ನ ನಂಬರ್ ಕೊಡು ಲೈಫ್ ಸೆಟ್ಲ್ ಮಾಡ್ತೀನಿ. ಫೋನ್ ಮಾಡಿದಾಗ ಭೇಟಿಯಾಗು ಅಂತ ನಂಬರ್ ತೆಗೆದುಕೊಂಡಿದ್ದರು. ಜೂನ್ 14 ರಂದು ಗುಡ್ ಇವನಿಂಗ್ ಕಣೋ ಅಂತ ಲವ್ ಸಿಂಬಲ್ ಜೊತೆ ವಾಟ್ಸಾಪ್ ಮಾಡಿದ್ದರು. ನಾನು ವೆರಿ ಗುಡ್ ಇವನಿಂಗ್ ಅಣ್ಣ ಎಂದಿದ್ದೆ. ಬಳಿಕ ಅವರು ನನ್ನನ್ನು ಒಬ್ಬನನ್ನೇ ತೋಟದ ಮನೆಗೆ ಕರೆದಿದ್ದರು. ಭಾನುವಾರ ಸಂಜೆ ಹೋದಾಗ ಅವರು ನನ್ನ ಮೇಲೆ ಬಲವಂತವಾಗಿ ಅಸಹಜವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆಂದು ಯುವಕ ದೂರಲ್ಲಿ ಉಲ್ಲೇಖಿಸಿದ್ದಾನೆ.
ಇದನ್ನೂ ಓದಿ:ಸ್ನೇಹಿತನ ಮೇಲೆ ಪ್ರೀತಿಯ ವ್ಯಾಮೋಹ.. ಗುಟ್ಟಾಗಿ ಗೆಳೆಯನ ಲಿಂಗವನ್ನೇ ಬದಲಾಯಿಸಿಬಿಟ್ಟ ಪ್ರಿಯಕರ..!
ಮಾತ್ರವಲ್ಲದೆ ಇದನ್ನು ಯಾರಿಗಾದ್ರೂ ಹೇಳಿದ್ರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾಗಿ ಆರೋಪಿಸಿದ್ದಾನೆ. ಜೊತೆಗೆ 2 ಕೋಟಿ ದುಡ್ಡು ಕೊಡುವ ಆಮಿಷವೊಡ್ಡಿದ್ದಾರೆಂದು ಹೇಳಿದ್ದಾನೆ. ಒಪ್ಪದಿದ್ದಾಗ ಕೊಲೆ ಮಾಡಲು ಹುಡುಕಾಡುತ್ತಿರುವುದು ನನಗೆ ತಿಳಿದಿದ್ದರಿಂದ ಬೆಂಗಳೂರಿಗೆ ಬಂದು ದೂರು ಕೊಟ್ಟಿದ್ದೇನೆ ಅಂತ ತಿಳಿಸಿದ್ದಾನೆ. ಲೈಂಗಿಕ ದೌರ್ಜನ್ಯದ ವೈದ್ಯಕೀಯ ದಾಖಲಾತಿಯನ್ನೂ ಯುವಕ ಮಾಡಿಸಿದ್ದಾನೆ.
ಸಂತ್ರಸ್ತನ ವಿರುದ್ಧವೇ 5 ಕೋಟಿಗೆ ಡಿಮ್ಯಾಂಡ್ ಮಾಡಿದ್ದಾಗಿ ಬ್ಲಾಕ್ಮೇಲ್ ದೂರು
ಇದಕ್ಕೆ ಪ್ರತಿಯಾಗಿ ಸಂತ್ರಸ್ತನ ವಿರುದ್ಧವೇ ಪ್ರತಿದೂರು ದಾಖಲಾಗಿದೆ. 5 ಕೋಟಿಗೆ ಡಿಮ್ಯಾಂಡ್ ಮಾಡಿದ್ದಾಗಿ ಸಂತ್ರಸ್ತನ ವಿರುದ್ಧವೇ ಸೂರಜ್ ರೇವಣ್ಣ ಬ್ಲಾಕ್ಮೇಲ್ ದೂರು ನೀಡಿದ್ದಾರೆ. ಸೂರಜ್ ಪರ ಆಪ್ತ ಶಿವಕುಮಾರ್ನಿಂದ ಪೊಲೀಸರಿಗೆ ದೂರು ನೀಡಿದ್ದಾರೆ. ಸಲಿಂಗ ಕಾಮ ಆರೋಪಿಸಿ ಹಣಕ್ಕಾಗಿ ಡಿಮ್ಯಾಂಡ್ ಹಾಗೂ ಕುಟುಂಬದ ಮರ್ಯಾದೆ ಹಾಳು ಮಾಡಲು ಬೆದರಿಕೆ ಆರೋಪಿಸಿ ದೂರು ನೀಡಿದ್ದಾರೆ.
ಸಂತ್ರಸ್ತನಿಂದ ₹5 ಕೋಟಿ ಬ್ಲಾಕ್ಮೇಲ್!?
ಜೂನ್ 16 ರಂದು ಗನ್ನಿಕಡದ ತೋಟದ ಮನೆಗೆ ಹೋಗಿದ್ದ ಸಂತ್ರಸ್ತ ಕೆಲಸ ಕೇಳಿ ವಾಪಸ್ಸಾದ ಬಳಿಕ ಬ್ಲಾಕ್ ಮೇಲ್ ಮಾಡಿದ್ದಾಗಿ ದೂರು ನೀಡಲಾಗಿದೆ. ನೀನು ಕೆಲಸ ಕೊಡಿಸಲ್ಲ, ನಿಮ್ಮ ಬಾಸೂ ಕೆಲಸ ಕೊಡಿಸ್ತಿಲ್ಲಂತ ಸೂರಜ್ ಆಪ್ತ ಶಿವಕುಮಾರ್ ಮೂಲಕ ಬೆದರಿಕೆ ಹಾಕಿದ್ದಾನೆಂದು ಆರೋಪಿಸಿದ್ದಾರೆ. ನೀನು ನಿಮ್ಮ ಬಾಸ್ನಿಂದ ಐದು ಕೋಟಿ ಹಣ ಕೊಡಿಸಬೇಕು. ಇಲ್ಲದಿದ್ರೆ ಲೈಂಗಿಕ ದೌರ್ಜನ್ಯ ಕೇಸ್ ಕೊಡ್ತೇನೆ. ನಿಮ್ಮ ಬಾಸ್ ಹಣ ಕೊಡದಿದ್ದರೆ ದೊಡ್ಡ ದೊಡ್ಡೋರು ಹಣ ಕೊಡಲು ರೆಡಿ ಇದ್ದಾರೆ. ನಾನು ಬೆಂಗಳೂರಿಗೆ ಹೋಗಿ ಮಾದ್ಯಮದ ಮುಂದೆ ಹೋಗ್ತೇನೆ. ಸೂರಜ್ ರೇವಣ್ಣ ಗೌರವ ಹಾಳು ಮಾಡೊದಾಗಿ ಬೆದರಿಕೆ ಹಾಕಿದ್ದಾನೆಂದು ಸಂತ್ರಸ್ತನ ವಿರುದ್ಧವೇ ಸೂರಜ್ ರೇವಣ್ಣ ಆಪ್ತ ಪ್ರತಿದೂರು ಕೊಟ್ಟಿದ್ದಾರೆ.
ಇದನ್ನೂ ಓದಿ:ರೀಲ್ಸ್ ಹುಚ್ಚು.. ಗೀಳಿಗೆ ಬಿದ್ದ ರೀಲ್ಸ್ ರಾಣಿ.. ಮುಂದೇನಾಯ್ತು.. ಅಬ್ಬಬ್ಬಾ..! Video
ಒಟ್ಟಾರೆ ದೇವೇಗೌಡರ ಕುಟುಂಬಕ್ಕೆ ಮುಜುಗರದ ಮೇಲೆ ಮುಜುಗರವಾಗುವಂತಹ ಘಟನೆಗಳು ನಡೆಯುತ್ತಿವೆ. ಮೊದಲು ಪ್ರಜ್ವಲ್ ರೇವಣ್ಣ ಆದ್ರೆ ಈಗ ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದ ಕೂಗು ಕೇಳಿಬಂದಿದೆ. ಆದ್ರೆ ಸಂತ್ರಸ್ತನ ವಿರುದ್ಧವೇ ಬ್ಲಾಕ್ಮೇಲ್ ಮಾಡ್ತಿದ್ದಾನೆಂದು ಪ್ರತಿ ದೂರು ದಾಖಲಾಗಿದೆ. ಹೊಳೆನರಸೀಪುರ ನಗರಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು ಇದು ಮತ್ಯಾವ ಹಂತ ತಲುಪುತ್ತೋ ಕಾದು ನೋಡ್ಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಪ್ರಜ್ವಲ್ ರೇವಣ್ಣ ಕೇಸ್ ಬೆನ್ನಲ್ಲೇ ಮತ್ತೊಂದು ಹಗರಣ
ಜೆಡಿಎಸ್ ಕಾರ್ಯಕರ್ತನಿಂದಲೇ ದೂರು ದಾಖಲು
ಸೂರಜ್ ವಿರುದ್ಧ ಕೇಳಿಬಂದಿರುವ ಆರೋಪ ಏನು..?
ಮಾಜಿ ಪ್ರಧಾನಿ ಹೆಚ್ಡಿ ದೇವೇಗೌಡರ ಕುಟುಂಬಕ್ಕೆ ಮೇಲಿಂದ ಮೇಲೆ ಮುಜುಗರವಾಗುವಂತ ಘಟನೆಗಳು ನಡೆಯುತ್ತಲೇ ಇವೆ. ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದ ತನಿಖೆಯ ಹಂತದಲ್ಲಿರುವಾಗಲೇ ಸೂರಜ್ ರೇವಣ್ಣ ವಿರುದ್ಧ ಸಲಿಂಗ ಲೈಂಗಿಕ ದೌರ್ಜನ್ಯ ದೂರು ದಾಖಲಾಗಿದೆ. ಇದಕ್ಕೆ ಪ್ರತಿಯಾಗಿ ಸೂರಜ್ನಿಂದಲೂ ಸಂತ್ರಸ್ತನಿಂದ ದೂರು ನೀಡಲಾಗಿದೆ.
ಸೂರಜ್ ರೇವಣ್ಣ ವಿರುದ್ಧ ಅಸಹಜ ಲೈಂಗಿಕ ದೌರ್ಜನ್ಯ ಆರೋಪ
ಹೆಚ್.ಡಿ ರೇವಣ್ಣ ಹಿರಿಯ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದಿದೆ. ಹಾಸನದ ಅರಕಲಗೂಡಿನ ತಮ್ಮದೇ ಜೆಡಿಎಸ್ ಪಕ್ಷದ ಕಾರ್ಯಕರ್ತನಿಗೆ ಸಲಿಂಗ ಲೈಂಗಿಕ ದೌರ್ಜನ್ಯ ಮಾಡಿದ ಗಂಭೀರ ಆರೋಪ ಕೇಳಿಬಂದಿದೆ. ಈ ಬಗ್ಗೆ ಜೆಡಿಎಸ್ ಕಾರ್ಯಕರ್ತ ಬೆಂಗಳೂರಿಗೆ ತೆರಳಿ ಡಿಸಿ ಹಾಗೂ ಐಜಿಪಿಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: ಆರೋಪಿ ಪ್ರದೂಶ್ ಜೊತೆ ಶೆಡ್ಗೆ ಪದೇ ಪದೆ ಬರ್ತಿದ್ದ ಇನ್ನೊಬ್ಬ ವ್ಯಕ್ತಿ.. ವಿಐಪಿನಾ..? ಮತ್ತೊಬ್ಬ ನಟನಾ?
ಸೂರಜ್ ವಿರುದ್ಧ ಆರೋಪ ಏನು..?
ಜೂನ್ 16ರ ಸಂಜೆ ಚನ್ನರಾಯಪಟ್ಟಣ ತಾಲೂಕಿನ ಗನ್ನಿಕಡದ ತೋಟದ ಮನೆಯಲ್ಲಿ ದೌರ್ಜನ್ಯ ನಡೆಸಿರೊ ಬಗ್ಗೆ ಆರೋಪಿಸಲಾಗಿದೆ. ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ಪರ ಕೆಲಸ ಮಾಡುತ್ತಿದ್ದಾಗ ನನ್ನನ್ನು ಭೇಟಿಯಾಗಿ ನೀನು ಚೆನ್ನಾಗಿ ಕೆಲಸ ಮಾಡುತ್ತಿದ್ದಿಯಾ ಅಂತ ಹೊಗಳಿದ್ದರು. ಅಲ್ಲದೆ ನಿನ್ನ ನಂಬರ್ ಕೊಡು ಲೈಫ್ ಸೆಟ್ಲ್ ಮಾಡ್ತೀನಿ. ಫೋನ್ ಮಾಡಿದಾಗ ಭೇಟಿಯಾಗು ಅಂತ ನಂಬರ್ ತೆಗೆದುಕೊಂಡಿದ್ದರು. ಜೂನ್ 14 ರಂದು ಗುಡ್ ಇವನಿಂಗ್ ಕಣೋ ಅಂತ ಲವ್ ಸಿಂಬಲ್ ಜೊತೆ ವಾಟ್ಸಾಪ್ ಮಾಡಿದ್ದರು. ನಾನು ವೆರಿ ಗುಡ್ ಇವನಿಂಗ್ ಅಣ್ಣ ಎಂದಿದ್ದೆ. ಬಳಿಕ ಅವರು ನನ್ನನ್ನು ಒಬ್ಬನನ್ನೇ ತೋಟದ ಮನೆಗೆ ಕರೆದಿದ್ದರು. ಭಾನುವಾರ ಸಂಜೆ ಹೋದಾಗ ಅವರು ನನ್ನ ಮೇಲೆ ಬಲವಂತವಾಗಿ ಅಸಹಜವಾಗಿ ಲೈಂಗಿಕ ದೌರ್ಜನ್ಯವೆಸಗಿದ್ದಾರೆಂದು ಯುವಕ ದೂರಲ್ಲಿ ಉಲ್ಲೇಖಿಸಿದ್ದಾನೆ.
ಇದನ್ನೂ ಓದಿ:ಸ್ನೇಹಿತನ ಮೇಲೆ ಪ್ರೀತಿಯ ವ್ಯಾಮೋಹ.. ಗುಟ್ಟಾಗಿ ಗೆಳೆಯನ ಲಿಂಗವನ್ನೇ ಬದಲಾಯಿಸಿಬಿಟ್ಟ ಪ್ರಿಯಕರ..!
ಮಾತ್ರವಲ್ಲದೆ ಇದನ್ನು ಯಾರಿಗಾದ್ರೂ ಹೇಳಿದ್ರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾಗಿ ಆರೋಪಿಸಿದ್ದಾನೆ. ಜೊತೆಗೆ 2 ಕೋಟಿ ದುಡ್ಡು ಕೊಡುವ ಆಮಿಷವೊಡ್ಡಿದ್ದಾರೆಂದು ಹೇಳಿದ್ದಾನೆ. ಒಪ್ಪದಿದ್ದಾಗ ಕೊಲೆ ಮಾಡಲು ಹುಡುಕಾಡುತ್ತಿರುವುದು ನನಗೆ ತಿಳಿದಿದ್ದರಿಂದ ಬೆಂಗಳೂರಿಗೆ ಬಂದು ದೂರು ಕೊಟ್ಟಿದ್ದೇನೆ ಅಂತ ತಿಳಿಸಿದ್ದಾನೆ. ಲೈಂಗಿಕ ದೌರ್ಜನ್ಯದ ವೈದ್ಯಕೀಯ ದಾಖಲಾತಿಯನ್ನೂ ಯುವಕ ಮಾಡಿಸಿದ್ದಾನೆ.
ಸಂತ್ರಸ್ತನ ವಿರುದ್ಧವೇ 5 ಕೋಟಿಗೆ ಡಿಮ್ಯಾಂಡ್ ಮಾಡಿದ್ದಾಗಿ ಬ್ಲಾಕ್ಮೇಲ್ ದೂರು
ಇದಕ್ಕೆ ಪ್ರತಿಯಾಗಿ ಸಂತ್ರಸ್ತನ ವಿರುದ್ಧವೇ ಪ್ರತಿದೂರು ದಾಖಲಾಗಿದೆ. 5 ಕೋಟಿಗೆ ಡಿಮ್ಯಾಂಡ್ ಮಾಡಿದ್ದಾಗಿ ಸಂತ್ರಸ್ತನ ವಿರುದ್ಧವೇ ಸೂರಜ್ ರೇವಣ್ಣ ಬ್ಲಾಕ್ಮೇಲ್ ದೂರು ನೀಡಿದ್ದಾರೆ. ಸೂರಜ್ ಪರ ಆಪ್ತ ಶಿವಕುಮಾರ್ನಿಂದ ಪೊಲೀಸರಿಗೆ ದೂರು ನೀಡಿದ್ದಾರೆ. ಸಲಿಂಗ ಕಾಮ ಆರೋಪಿಸಿ ಹಣಕ್ಕಾಗಿ ಡಿಮ್ಯಾಂಡ್ ಹಾಗೂ ಕುಟುಂಬದ ಮರ್ಯಾದೆ ಹಾಳು ಮಾಡಲು ಬೆದರಿಕೆ ಆರೋಪಿಸಿ ದೂರು ನೀಡಿದ್ದಾರೆ.
ಸಂತ್ರಸ್ತನಿಂದ ₹5 ಕೋಟಿ ಬ್ಲಾಕ್ಮೇಲ್!?
ಜೂನ್ 16 ರಂದು ಗನ್ನಿಕಡದ ತೋಟದ ಮನೆಗೆ ಹೋಗಿದ್ದ ಸಂತ್ರಸ್ತ ಕೆಲಸ ಕೇಳಿ ವಾಪಸ್ಸಾದ ಬಳಿಕ ಬ್ಲಾಕ್ ಮೇಲ್ ಮಾಡಿದ್ದಾಗಿ ದೂರು ನೀಡಲಾಗಿದೆ. ನೀನು ಕೆಲಸ ಕೊಡಿಸಲ್ಲ, ನಿಮ್ಮ ಬಾಸೂ ಕೆಲಸ ಕೊಡಿಸ್ತಿಲ್ಲಂತ ಸೂರಜ್ ಆಪ್ತ ಶಿವಕುಮಾರ್ ಮೂಲಕ ಬೆದರಿಕೆ ಹಾಕಿದ್ದಾನೆಂದು ಆರೋಪಿಸಿದ್ದಾರೆ. ನೀನು ನಿಮ್ಮ ಬಾಸ್ನಿಂದ ಐದು ಕೋಟಿ ಹಣ ಕೊಡಿಸಬೇಕು. ಇಲ್ಲದಿದ್ರೆ ಲೈಂಗಿಕ ದೌರ್ಜನ್ಯ ಕೇಸ್ ಕೊಡ್ತೇನೆ. ನಿಮ್ಮ ಬಾಸ್ ಹಣ ಕೊಡದಿದ್ದರೆ ದೊಡ್ಡ ದೊಡ್ಡೋರು ಹಣ ಕೊಡಲು ರೆಡಿ ಇದ್ದಾರೆ. ನಾನು ಬೆಂಗಳೂರಿಗೆ ಹೋಗಿ ಮಾದ್ಯಮದ ಮುಂದೆ ಹೋಗ್ತೇನೆ. ಸೂರಜ್ ರೇವಣ್ಣ ಗೌರವ ಹಾಳು ಮಾಡೊದಾಗಿ ಬೆದರಿಕೆ ಹಾಕಿದ್ದಾನೆಂದು ಸಂತ್ರಸ್ತನ ವಿರುದ್ಧವೇ ಸೂರಜ್ ರೇವಣ್ಣ ಆಪ್ತ ಪ್ರತಿದೂರು ಕೊಟ್ಟಿದ್ದಾರೆ.
ಇದನ್ನೂ ಓದಿ:ರೀಲ್ಸ್ ಹುಚ್ಚು.. ಗೀಳಿಗೆ ಬಿದ್ದ ರೀಲ್ಸ್ ರಾಣಿ.. ಮುಂದೇನಾಯ್ತು.. ಅಬ್ಬಬ್ಬಾ..! Video
ಒಟ್ಟಾರೆ ದೇವೇಗೌಡರ ಕುಟುಂಬಕ್ಕೆ ಮುಜುಗರದ ಮೇಲೆ ಮುಜುಗರವಾಗುವಂತಹ ಘಟನೆಗಳು ನಡೆಯುತ್ತಿವೆ. ಮೊದಲು ಪ್ರಜ್ವಲ್ ರೇವಣ್ಣ ಆದ್ರೆ ಈಗ ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದ ಕೂಗು ಕೇಳಿಬಂದಿದೆ. ಆದ್ರೆ ಸಂತ್ರಸ್ತನ ವಿರುದ್ಧವೇ ಬ್ಲಾಕ್ಮೇಲ್ ಮಾಡ್ತಿದ್ದಾನೆಂದು ಪ್ರತಿ ದೂರು ದಾಖಲಾಗಿದೆ. ಹೊಳೆನರಸೀಪುರ ನಗರಠಾಣೆ ಪೊಲೀಸರು ದೂರು ದಾಖಲಿಸಿಕೊಂಡಿದ್ದು ಇದು ಮತ್ಯಾವ ಹಂತ ತಲುಪುತ್ತೋ ಕಾದು ನೋಡ್ಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ