ನನಗಾಗಿ ಅಲ್ಲ, ನನ್ನ ಮಗಳಿಗಾಗಿ ಮಾತ್ರ ಗಂಡ ಬೇಕು ಎಂದು ಬಯಸಿರುವೆ!
ರೇಣುಕಾ ಕೊಲೆ ಕೇಸ್ನಲ್ಲಿ ದರ್ಶನ್ ಸೇರಿ ಒಟ್ಟು 17 ಆರೋಪಿಗಳು ಜೈಲಿಗೆ
ರೇಣುಕಾಸ್ವಾಮಿ ಬಗ್ಗೆ ರಾಘವೇಂದ್ರ ಪತ್ನಿ ಸಹನಾ ಬಳಿ ಹೇಳಿದ್ದೇನು ಗೊತ್ತಾ?
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಸೇರಿ ಒಟ್ಟು 17 ಆರೋಪಿಗಳು ಜೈಲು ಸೇರಿದ್ದಾರೆ. ಅದರಲ್ಲಿ ರೇಣುಕಾಸ್ವಾಮಿಯನ್ನು ಪ್ಲಾನ್ ಮಾಡಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದೇ ಆರೋಪಿ ರಾಘವೇಂದ್ರ ಎನ್ನಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ A4 ಆರೋಪಿಯಾಗಿರೋ ರಾಘವೇಂದ್ರ ಸದ್ಯ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ರಾಘವೇಂದ್ರ ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದಾರೆ. ಆದರೆ ರಾಘವೇಂದ್ರ ಪತ್ನಿ ಸಹನಾ ಮಾತ್ರ ನನ್ನ ಪತಿ ಈ ವಿಚಾರ ಮಾತಾನಾಡಿಲ್ಲ. ಈ ವಿಚಾರದ ಬಗ್ಗೆ ನನಗೆ ಏನು ಗೊತ್ತಿಲ್ಲ. ಆರೋಪ ಮಾಡಿದ್ದು ಸುಳ್ಳಿನ ವಿಚಾರ ಅಂತ ಹೇಳುತ್ತಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ನಿವಾಸಕ್ಕೆ ಬೆಂಗಳೂರು ಪೊಲೀಸರು ದಿಢೀರ್ ಭೇಟಿ.. ಅದೊಂದು ವಸ್ತುವಿಗಾಗಿ ತೀವ್ರ ಹುಡುಕಾಟ..!
ಇದೇ ವಿಚಾರವಾಗಿ ನ್ಯೂಸ್ ಫಸ್ಟ್ನೊಂದಿಗೆ ಮಾತಾಡಿದ ರಾಘವೇಂದ್ರ ಪತ್ನಿ ಸಹನಾ, ನನ್ನ ಪತಿ ಈ ವಿಚಾರ ಮಾತಾನಾಡಿಲ್ಲ. ಈ ವಿಚಾರದ ಬಗ್ಗೆ ನನಗೆ ಏನು ಗೊತ್ತಿಲ್ಲ. ಆರೋಪ ಮಾಡಿದ್ದು ಸುಳ್ಳಿನ ವಿಚಾರ. ನನ್ನ ಮನೆಯವರ ಜೊತೆ ಚೆನ್ನಾಗಿ ಇದ್ದಾಗ ಬುದ್ದಿ ಹೇಳಿದ್ದೆ. ಇದೇ ಊರಲ್ಲಿ ಅಕ್ಕ ಪಕ್ಕದ ಮನೆಯವರನ್ನ ಕೇಳಿ. ನಾನು ಬೆಂಗಳೂರಿಗೆ ಹೋಗಿಲ್ಲ. ಮನೆಯಲ್ಲಿ ಹತ್ತು ಲಕ್ಷ ಹಣ ಸಿಕ್ಕಿತ್ತು. ನಾನು ಎಲ್ಲಿಯೂ ಹೋಗಿಲ್ಲ, ನಾನು ಮನೆಯಲ್ಲಿ ಇದ್ದೆ. ನನ್ನ ಪತಿ ಮಾಡಿದ್ದು ತಪ್ಪು, ಅವರಿಗೆ ಶಿಕ್ಷೆಯಾಗಲಿ. ಯಾವುದೇ ಟವರ್ ಡಂಪ್ ಮಾಡಿ ನನ್ನ ಹುಡುಕಿಲ್ಲ. ನನ್ನ ಮನೆಯಲ್ಲಿ ರೇಷನ್ ಇಲ್ಲ, ತುಂಬಾ ಕಷ್ಟ ಇಲ್ಲ. ಏನೂ ಮಾಡಿದ್ದಾರೆ ಏನೂ ಗೊತ್ತಿಲ್ಲ, ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ಏನೂ ಆಗಿದೆ ಅಂತ ಗೊತ್ತಿಲ್ಲ, ಏನೂ ಅಂತ ಹೇಳಬೇಕು. ಅಭಿಮಾನಕ್ಕೆ ಹೋಗಿರಬಹುದು, ಕೊಲೆ ಮಾಡ್ತಿನಿ ಅಂದಾಗ ಯಾರು ಕರ್ಕೊಂಡ್ ಹೋಗ್ತಾರೆ. ದರ್ಶನ್ ಅವರು ಈ ಕೃತ್ಯ ಎಸಗಿದ್ದು, ನಿಜಕ್ಕೂ ತಪ್ಪು. ನಾನು ನನ್ನ ಗಂಡನ ಪರವಾಗಿ ನಿಲ್ಲುವೆ. ಒಬ್ಬ ಮಗಳಿದ್ದಾಳೆ. ಯಾವುದೇ ಹೀರೋಗಳು ಈತರ ಮಾಡಬಾರದು. ನನ್ನ ಗಂಡನ ಸಂಬಳ ನಂಬಿಕೊಂಡು ನಾನಿಲ್ಲ. ನಾನು ಪಾರ್ಲರ್ ಮಾಡ್ತಾ ದುಡಿಮೆ ಮಾಡುವೆ. ನನ್ನ ಮಗಳಿಗಾಗಿ ಮಾತ್ರ ಗಂಡ ಬೇಕು ಎಂದು ಬಯಸಿರುವೆ. ನನ್ನ ಮದುವೆಗೂ ಮುಂಚೆಯೇ ದರ್ಶನ್ ಪರಿಚಯ ಇತ್ತು ಅಂತ ಹೇಳಿದ್ದಾರೆ.
ರೇಣುಕಾಸ್ವಾಮಿ ಬಗ್ಗೆ ರಘು ನಿಮ್ಮ ಹತ್ತಿರ ಹೇಳಿದ್ದೇನು?
ಅಂದು ಬೆಳಗಿನ ಜಾವವೇ ಮನ ಬಿಟ್ಟು ಹೋಗಿದ್ದರು. ನನಗೆ ಯಾವುದೇ ವಿಚಾರ ಹೇಳಿಲ್ಲ. ರಾತ್ರಿ ವೇಳೆ ಲೇಟ್ ಆದಾಗ ಮಾತ್ರ ಮಾಡಲ್ಲ. ಅವತ್ತು ರಾತ್ರಿ ಮಾತ್ರ ನಾನು ಮನೆಗೆ ಬರಲ್ಲ ಎಂದು ಫೋನ್ ಮಾಡಿದ್ದರು. ಅವತ್ತು ರಾತ್ರಿ ಗಾಡಿಗೆ ಬಂದಿದ್ದೇನೆ ನಾನು ಬರಲ್ಲ ಎಂದು ಹೇಳಿದ್ದರು. ಘಟನೆ ನಡೆದ ಬಳಿಕ ಫೋನ್ ಮಾಡಿದ್ದರು, ಆದರೆ ವಿಚಾರ ಗೊತ್ತಿಲ್ಲ. ಅನು, ಜಗ್ಗ ಇಬ್ಬರು ಗಂಡನ ಸ್ನೇಹಿತರು. ಆಗೋದು ಆಗಿದೆ. ಸುಮ್ನೇ ಆರೋಪಗಳು ಮಾಡುವುದು ಬೇಡ. ಜಗ್ಗನ ಮನೆಯಲ್ಲಿ ಅವನ ಪರ ಹೇಳ್ತಾರೆ, ನಾನು ಗಂಡನ ಪರ ಹೇಳ್ತೇನೆ. ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದು ಮೊದಲ ತಪ್ಪು. ಹೆಂಡ್ತಿ ಗರ್ಭಿಣಿ ಇದ್ದಾಳೆ, ದೊಡ್ಡವರ ಸಹವಾಸ ಯಾಕೆ ಬೇಕಿತ್ತು. ಅವರು ಮಾಡಿದ್ದು ಮೊದಲ ತಪ್ಪು, ದರ್ಶನ್ ಮಾಡಿದ್ದು ದೊಡ್ಡ ತಪ್ಪು. ಜೈಲಿಗೆ ಭೇಟಿಗೆ ಹೋದಾಗ ನಾನು ಕೇಳುತ್ತೇನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನನಗಾಗಿ ಅಲ್ಲ, ನನ್ನ ಮಗಳಿಗಾಗಿ ಮಾತ್ರ ಗಂಡ ಬೇಕು ಎಂದು ಬಯಸಿರುವೆ!
ರೇಣುಕಾ ಕೊಲೆ ಕೇಸ್ನಲ್ಲಿ ದರ್ಶನ್ ಸೇರಿ ಒಟ್ಟು 17 ಆರೋಪಿಗಳು ಜೈಲಿಗೆ
ರೇಣುಕಾಸ್ವಾಮಿ ಬಗ್ಗೆ ರಾಘವೇಂದ್ರ ಪತ್ನಿ ಸಹನಾ ಬಳಿ ಹೇಳಿದ್ದೇನು ಗೊತ್ತಾ?
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಸೇರಿ ಒಟ್ಟು 17 ಆರೋಪಿಗಳು ಜೈಲು ಸೇರಿದ್ದಾರೆ. ಅದರಲ್ಲಿ ರೇಣುಕಾಸ್ವಾಮಿಯನ್ನು ಪ್ಲಾನ್ ಮಾಡಿ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದೇ ಆರೋಪಿ ರಾಘವೇಂದ್ರ ಎನ್ನಲಾಗಿದೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ A4 ಆರೋಪಿಯಾಗಿರೋ ರಾಘವೇಂದ್ರ ಸದ್ಯ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ರಾಘವೇಂದ್ರ ರೇಣುಕಾಸ್ವಾಮಿ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದಾರೆ. ಆದರೆ ರಾಘವೇಂದ್ರ ಪತ್ನಿ ಸಹನಾ ಮಾತ್ರ ನನ್ನ ಪತಿ ಈ ವಿಚಾರ ಮಾತಾನಾಡಿಲ್ಲ. ಈ ವಿಚಾರದ ಬಗ್ಗೆ ನನಗೆ ಏನು ಗೊತ್ತಿಲ್ಲ. ಆರೋಪ ಮಾಡಿದ್ದು ಸುಳ್ಳಿನ ವಿಚಾರ ಅಂತ ಹೇಳುತ್ತಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ನಿವಾಸಕ್ಕೆ ಬೆಂಗಳೂರು ಪೊಲೀಸರು ದಿಢೀರ್ ಭೇಟಿ.. ಅದೊಂದು ವಸ್ತುವಿಗಾಗಿ ತೀವ್ರ ಹುಡುಕಾಟ..!
ಇದೇ ವಿಚಾರವಾಗಿ ನ್ಯೂಸ್ ಫಸ್ಟ್ನೊಂದಿಗೆ ಮಾತಾಡಿದ ರಾಘವೇಂದ್ರ ಪತ್ನಿ ಸಹನಾ, ನನ್ನ ಪತಿ ಈ ವಿಚಾರ ಮಾತಾನಾಡಿಲ್ಲ. ಈ ವಿಚಾರದ ಬಗ್ಗೆ ನನಗೆ ಏನು ಗೊತ್ತಿಲ್ಲ. ಆರೋಪ ಮಾಡಿದ್ದು ಸುಳ್ಳಿನ ವಿಚಾರ. ನನ್ನ ಮನೆಯವರ ಜೊತೆ ಚೆನ್ನಾಗಿ ಇದ್ದಾಗ ಬುದ್ದಿ ಹೇಳಿದ್ದೆ. ಇದೇ ಊರಲ್ಲಿ ಅಕ್ಕ ಪಕ್ಕದ ಮನೆಯವರನ್ನ ಕೇಳಿ. ನಾನು ಬೆಂಗಳೂರಿಗೆ ಹೋಗಿಲ್ಲ. ಮನೆಯಲ್ಲಿ ಹತ್ತು ಲಕ್ಷ ಹಣ ಸಿಕ್ಕಿತ್ತು. ನಾನು ಎಲ್ಲಿಯೂ ಹೋಗಿಲ್ಲ, ನಾನು ಮನೆಯಲ್ಲಿ ಇದ್ದೆ. ನನ್ನ ಪತಿ ಮಾಡಿದ್ದು ತಪ್ಪು, ಅವರಿಗೆ ಶಿಕ್ಷೆಯಾಗಲಿ. ಯಾವುದೇ ಟವರ್ ಡಂಪ್ ಮಾಡಿ ನನ್ನ ಹುಡುಕಿಲ್ಲ. ನನ್ನ ಮನೆಯಲ್ಲಿ ರೇಷನ್ ಇಲ್ಲ, ತುಂಬಾ ಕಷ್ಟ ಇಲ್ಲ. ಏನೂ ಮಾಡಿದ್ದಾರೆ ಏನೂ ಗೊತ್ತಿಲ್ಲ, ತಪ್ಪು ಮಾಡಿದ್ದರೆ ಶಿಕ್ಷೆಯಾಗಲಿ. ಏನೂ ಆಗಿದೆ ಅಂತ ಗೊತ್ತಿಲ್ಲ, ಏನೂ ಅಂತ ಹೇಳಬೇಕು. ಅಭಿಮಾನಕ್ಕೆ ಹೋಗಿರಬಹುದು, ಕೊಲೆ ಮಾಡ್ತಿನಿ ಅಂದಾಗ ಯಾರು ಕರ್ಕೊಂಡ್ ಹೋಗ್ತಾರೆ. ದರ್ಶನ್ ಅವರು ಈ ಕೃತ್ಯ ಎಸಗಿದ್ದು, ನಿಜಕ್ಕೂ ತಪ್ಪು. ನಾನು ನನ್ನ ಗಂಡನ ಪರವಾಗಿ ನಿಲ್ಲುವೆ. ಒಬ್ಬ ಮಗಳಿದ್ದಾಳೆ. ಯಾವುದೇ ಹೀರೋಗಳು ಈತರ ಮಾಡಬಾರದು. ನನ್ನ ಗಂಡನ ಸಂಬಳ ನಂಬಿಕೊಂಡು ನಾನಿಲ್ಲ. ನಾನು ಪಾರ್ಲರ್ ಮಾಡ್ತಾ ದುಡಿಮೆ ಮಾಡುವೆ. ನನ್ನ ಮಗಳಿಗಾಗಿ ಮಾತ್ರ ಗಂಡ ಬೇಕು ಎಂದು ಬಯಸಿರುವೆ. ನನ್ನ ಮದುವೆಗೂ ಮುಂಚೆಯೇ ದರ್ಶನ್ ಪರಿಚಯ ಇತ್ತು ಅಂತ ಹೇಳಿದ್ದಾರೆ.
ರೇಣುಕಾಸ್ವಾಮಿ ಬಗ್ಗೆ ರಘು ನಿಮ್ಮ ಹತ್ತಿರ ಹೇಳಿದ್ದೇನು?
ಅಂದು ಬೆಳಗಿನ ಜಾವವೇ ಮನ ಬಿಟ್ಟು ಹೋಗಿದ್ದರು. ನನಗೆ ಯಾವುದೇ ವಿಚಾರ ಹೇಳಿಲ್ಲ. ರಾತ್ರಿ ವೇಳೆ ಲೇಟ್ ಆದಾಗ ಮಾತ್ರ ಮಾಡಲ್ಲ. ಅವತ್ತು ರಾತ್ರಿ ಮಾತ್ರ ನಾನು ಮನೆಗೆ ಬರಲ್ಲ ಎಂದು ಫೋನ್ ಮಾಡಿದ್ದರು. ಅವತ್ತು ರಾತ್ರಿ ಗಾಡಿಗೆ ಬಂದಿದ್ದೇನೆ ನಾನು ಬರಲ್ಲ ಎಂದು ಹೇಳಿದ್ದರು. ಘಟನೆ ನಡೆದ ಬಳಿಕ ಫೋನ್ ಮಾಡಿದ್ದರು, ಆದರೆ ವಿಚಾರ ಗೊತ್ತಿಲ್ಲ. ಅನು, ಜಗ್ಗ ಇಬ್ಬರು ಗಂಡನ ಸ್ನೇಹಿತರು. ಆಗೋದು ಆಗಿದೆ. ಸುಮ್ನೇ ಆರೋಪಗಳು ಮಾಡುವುದು ಬೇಡ. ಜಗ್ಗನ ಮನೆಯಲ್ಲಿ ಅವನ ಪರ ಹೇಳ್ತಾರೆ, ನಾನು ಗಂಡನ ಪರ ಹೇಳ್ತೇನೆ. ರೇಣುಕಾಸ್ವಾಮಿ ಮೆಸೇಜ್ ಮಾಡಿದ್ದು ಮೊದಲ ತಪ್ಪು. ಹೆಂಡ್ತಿ ಗರ್ಭಿಣಿ ಇದ್ದಾಳೆ, ದೊಡ್ಡವರ ಸಹವಾಸ ಯಾಕೆ ಬೇಕಿತ್ತು. ಅವರು ಮಾಡಿದ್ದು ಮೊದಲ ತಪ್ಪು, ದರ್ಶನ್ ಮಾಡಿದ್ದು ದೊಡ್ಡ ತಪ್ಪು. ಜೈಲಿಗೆ ಭೇಟಿಗೆ ಹೋದಾಗ ನಾನು ಕೇಳುತ್ತೇನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ