newsfirstkannada.com

ಸಾವಿಗೂ ಮುನ್ನ ತೇಜಸ್ ಕೊನೇ ವಿಡಿಯೋ ವೈರಲ್‌.. ಸ್ನೇಹಿತನ ನೆನೆದು ಕಣ್ಣೀರಿಟ್ಟ ವರುಣ್ ಆರಾಧ್ಯ ಬಳಗ

Share :

Published June 26, 2024 at 6:37pm

    ಅಂದು ರೀಲ್ಸ್​ನಲ್ಲಿ ಹೇಳಿದ್ದ ಮಾತೇ ಇಂದು ತೇಜಸ್ ಬಾಳಲ್ಲಿ ನಿಜವಾಗಿ ಬಿಡ್ತಾ

    ಭೀಕರವಾಗಿ ಅಪಘಾತದಲ್ಲಿ ಮೃತಪಟ್ಟ ತೇಜಸ್​ಗೆ ಫ್ರೆಂಡ್ಸ್ ಎಂದರೇ ಪ್ರಾಣ

    ವೈರಲ್​ ಆಗುತ್ತಿರೋ ತೇಜಸ್ ವಿಡಿಯೋ ನೋಡಿ ನೆಟ್ಟಿಗರು ಭಾವುಕ ನುಡಿ

ಸ್ನೇಹ ಎಂಬುದು ಎಂದೆಂದಿಗೂ ಬಿಡಿಸಲಾರದ ನಂಟು. ಒಬ್ಬ ವ್ಯಕ್ತಿಗೆ ಜೀವನದ ಎಲ್ಲಾ ಹಂತಗಳಲ್ಲೂ ಸ್ನೇಹಿತರ ಪಾತ್ರ ಪ್ರಮುಖವಾದದ್ದು. ಎಲ್ಲಿಗಾದರೂ ಬಿಂದಾಸ್​ ಆಗಿ ಹೋಗಬೇಕಾದರೇ ಅದು ಸ್ನೇಹಿತರ ಜೊತೆಗೆ ಮಾತ್ರ. ಹೀಗೆ ಇಂದು ಭೀಕರವಾಗಿ ಮೃತಪಟ್ಟ ತೇಜಸ್ ಫ್ರೆಂಡ್ಸ್ ಎಂದರೇ ಪಂಚಪ್ರಾಣ.

ಇದನ್ನೂ ಓದಿ: ಕಿರುತೆರೆ ನಟನ ಗೆಳೆಯ ಭೀಕರ ರಸ್ತೆ ಅಪಘಾತದಲ್ಲಿ ದಾರುಣ ಸಾವು.. ಇನ್ನೊಬ್ಬ ಗಂಭೀರ

ತೇಜಸ್ ಎಲ್ಲಿಗೆ ಹೋದರೂ ಫ್ರೆಂಡ್ಸ್​ಗಳ ಜೊತೆಗೆ ಹೋಗುತ್ತಿದ್ದ. ತೇಜಸ್ ಜೀವಕ್ಕಿಂತ ಜಾಸ್ತಿ ಸ್ನೇಹಿತರನ್ನು ಹಚ್ಚಿಕೊಂಡಿದ್ದ. ತೇಜಸ್​ನನ್ನು ಅಷ್ಟೇ ಹಚ್ಚಿಕೊಂಡಿದ್ದರು ಅವರ ಗೆಳೆಯರು. ವರುಣ್​​ ಆರಾಧ್ಯ, ವರ್ಷ ಕಾವೇರಿ, ಸೂರ್ಯ, ಕಾರ್ತಿಕ್​ ಗೌಡ ಹೀಗೆ ಸಾಕಷ್ಟು ಜನರ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದ. ಹೀಗೆ ಗೆಳೆಯರ ಜೊತೆಗೆ ಪಾರ್ಟಿ, ಟ್ರಿಪ್​ ಅಂತ ಊರು ಊರು ಸುತ್ತುತ್ತಿದ್ದ ತೇಜಸ್ ಇನ್ನೂ ನೆನೆಪು ಮಾತ್ರ.

ಇದನ್ನೂ ಓದಿ: ಇಷ್ಟು ಚಿಕ್ಕ ವಯಸ್ಸಿನಲ್ಲೇ ಘೋರ ದುರಂತ.. ತೇಜಸ್ ಸಾವಿಗೆ ವರುಣ್, ವರ್ಷ ಕಾವೇರಿ ನೋವಿನ ವಿದಾಯ

ಸೋಷಿಯಲ್ ಮೀಡಿಯಾ ರೀಲ್ ಸ್ಟಾರ್ ಎಂದೇ ಖ್ಯಾತಿ ಪಡೆದಿರೋ ಕಿರುತೆರೆ ನಟ ವರುಣ್ ಆರಾಧ್ಯ ಹಾಗೂ ವರ್ಷ ಕಾವೇರಿ ಅವರ ಆಪ್ತ ಸ್ನೇಹಿತ ತೇಜಸ್ ಇನ್ನಿಲ್ಲ. ಇಂದು ಬೆಳಗಿನ ಜಾವ 12 ಗಂಟೆ 30 ನಿಮಿಷಕ್ಕೆ ಕೆಲಸದ ನಿಮಿತ್ತ ಸ್ನೇಹಿತನ ಜೊತೆಯಲ್ಲಿ ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ವಾಪಸ್ಸು ಬರುತ್ತಿದ್ದಾಗ ದುರ್ಘಟನೆಯೊಂದು ಸಂಭವಿಸಿದೆ. ಈ ಘಟನೆಯಲ್ಲಿ ತೇಜಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೊತೆಗೆ ಬೈಕ್​ನಲ್ಲಿದ್ದ ಆಕಾಶ್ (19) ಎಂಬಾತನಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 

View this post on Instagram

 

A post shared by TÊJÁŠ (@tejas_ki_ng)

ಆದರೆ ತೇಜಸ್ ಸಾವಿಗೂ ಮುನ್ನ ಒಂದು ರೀಲ್ಸ್​ ಮಾಡಿದ್ದ. ಆ ರೀಲ್ಸ್​ ಅನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಆದರೆ ಸಾವಿಗೂ ಮುನ್ನ ತೇಜಸ್ ಶೇರ್ ಮಾಡಿರೋ ರೀಲ್ಸ್​ ಅನ್ನು ಗೆಳೆಯರಿಗೆ ಟ್ಯಾಗ್​​ ಮಾಡಿದ್ದ. ತೇಜಸ್ ಶೇರ್ ಮಾಡಿಕೊಂಡ ರೀಲ್ಸ್​ನಲ್ಲಿ ಅವರ ಶಾಲೆಯನ್ನು ನೆನಪು ಮಾಡಿಕೊಂಡಿದ್ದಾರೆ. ಜೊತೆಗೆ ಆ ವಿಡಿಯೋದಲ್ಲಿ  ಸ್ನೇಹಿತರನ್ನು ಮಿಸ್​ ಮಾಡಿಕೊಳ್ಳೋ ಭಯ ಅಂತ ಹೇಳಿದ್ದಾರೆ. ಅದು ಕೂಡ ಅವರ ಸ್ವಂತ ಧ್ವನಿಯಲ್ಲಿ ಈ ರೀಲ್​​ ಅನ್ನು ಮಾಡಿದ್ದಾರೆ.

ಇದೇ ತೇಜಸ್​​ ಸಾವಿಗೂ ಮುನ್ನ ಮಾಡಿರೋ ರೀಲ್ಸ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದೇ ವಿಡಿಯೋ ನೋಡಿದ ನೆಟ್ಟಿಗರು, ಜೊತೆಗಿರುವ ಜೀವ ಎಂದೆಂದಿಗೂ ಜೀವಂತ, ತುಂಬಾ ಬೇಜಾರ್ ಆಯಿತು. ಈ ವಿಷಯ ಕೇಳಿ ನಿನ್ನೆ ಇದ್ದೋರು ಇವತ್ತಿಲ್ಲ ಅಂದ್ರೆ ಇಷ್ಟೇ ಜೀವನ, ನಿಮ್ಮ ಕೊನೆ ಮಾತು ಕೂಡ ಫ್ರೆಂಡ್ಶಿಪ್ ಬಗ್ಗೆ ಹೇಳಿ ಲಾಸ್ಟ್ ಮಾಡಿ ಬಿಟ್ಟರಿ ಎಂದು ಭಾವುಕರಾಗಿ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸಾವಿಗೂ ಮುನ್ನ ತೇಜಸ್ ಕೊನೇ ವಿಡಿಯೋ ವೈರಲ್‌.. ಸ್ನೇಹಿತನ ನೆನೆದು ಕಣ್ಣೀರಿಟ್ಟ ವರುಣ್ ಆರಾಧ್ಯ ಬಳಗ

https://newsfirstlive.com/wp-content/uploads/2024/06/tejas6.jpg

    ಅಂದು ರೀಲ್ಸ್​ನಲ್ಲಿ ಹೇಳಿದ್ದ ಮಾತೇ ಇಂದು ತೇಜಸ್ ಬಾಳಲ್ಲಿ ನಿಜವಾಗಿ ಬಿಡ್ತಾ

    ಭೀಕರವಾಗಿ ಅಪಘಾತದಲ್ಲಿ ಮೃತಪಟ್ಟ ತೇಜಸ್​ಗೆ ಫ್ರೆಂಡ್ಸ್ ಎಂದರೇ ಪ್ರಾಣ

    ವೈರಲ್​ ಆಗುತ್ತಿರೋ ತೇಜಸ್ ವಿಡಿಯೋ ನೋಡಿ ನೆಟ್ಟಿಗರು ಭಾವುಕ ನುಡಿ

ಸ್ನೇಹ ಎಂಬುದು ಎಂದೆಂದಿಗೂ ಬಿಡಿಸಲಾರದ ನಂಟು. ಒಬ್ಬ ವ್ಯಕ್ತಿಗೆ ಜೀವನದ ಎಲ್ಲಾ ಹಂತಗಳಲ್ಲೂ ಸ್ನೇಹಿತರ ಪಾತ್ರ ಪ್ರಮುಖವಾದದ್ದು. ಎಲ್ಲಿಗಾದರೂ ಬಿಂದಾಸ್​ ಆಗಿ ಹೋಗಬೇಕಾದರೇ ಅದು ಸ್ನೇಹಿತರ ಜೊತೆಗೆ ಮಾತ್ರ. ಹೀಗೆ ಇಂದು ಭೀಕರವಾಗಿ ಮೃತಪಟ್ಟ ತೇಜಸ್ ಫ್ರೆಂಡ್ಸ್ ಎಂದರೇ ಪಂಚಪ್ರಾಣ.

ಇದನ್ನೂ ಓದಿ: ಕಿರುತೆರೆ ನಟನ ಗೆಳೆಯ ಭೀಕರ ರಸ್ತೆ ಅಪಘಾತದಲ್ಲಿ ದಾರುಣ ಸಾವು.. ಇನ್ನೊಬ್ಬ ಗಂಭೀರ

ತೇಜಸ್ ಎಲ್ಲಿಗೆ ಹೋದರೂ ಫ್ರೆಂಡ್ಸ್​ಗಳ ಜೊತೆಗೆ ಹೋಗುತ್ತಿದ್ದ. ತೇಜಸ್ ಜೀವಕ್ಕಿಂತ ಜಾಸ್ತಿ ಸ್ನೇಹಿತರನ್ನು ಹಚ್ಚಿಕೊಂಡಿದ್ದ. ತೇಜಸ್​ನನ್ನು ಅಷ್ಟೇ ಹಚ್ಚಿಕೊಂಡಿದ್ದರು ಅವರ ಗೆಳೆಯರು. ವರುಣ್​​ ಆರಾಧ್ಯ, ವರ್ಷ ಕಾವೇರಿ, ಸೂರ್ಯ, ಕಾರ್ತಿಕ್​ ಗೌಡ ಹೀಗೆ ಸಾಕಷ್ಟು ಜನರ ಜೊತೆಗೆ ಉತ್ತಮ ಬಾಂಧವ್ಯವನ್ನು ಹೊಂದಿದ್ದ. ಹೀಗೆ ಗೆಳೆಯರ ಜೊತೆಗೆ ಪಾರ್ಟಿ, ಟ್ರಿಪ್​ ಅಂತ ಊರು ಊರು ಸುತ್ತುತ್ತಿದ್ದ ತೇಜಸ್ ಇನ್ನೂ ನೆನೆಪು ಮಾತ್ರ.

ಇದನ್ನೂ ಓದಿ: ಇಷ್ಟು ಚಿಕ್ಕ ವಯಸ್ಸಿನಲ್ಲೇ ಘೋರ ದುರಂತ.. ತೇಜಸ್ ಸಾವಿಗೆ ವರುಣ್, ವರ್ಷ ಕಾವೇರಿ ನೋವಿನ ವಿದಾಯ

ಸೋಷಿಯಲ್ ಮೀಡಿಯಾ ರೀಲ್ ಸ್ಟಾರ್ ಎಂದೇ ಖ್ಯಾತಿ ಪಡೆದಿರೋ ಕಿರುತೆರೆ ನಟ ವರುಣ್ ಆರಾಧ್ಯ ಹಾಗೂ ವರ್ಷ ಕಾವೇರಿ ಅವರ ಆಪ್ತ ಸ್ನೇಹಿತ ತೇಜಸ್ ಇನ್ನಿಲ್ಲ. ಇಂದು ಬೆಳಗಿನ ಜಾವ 12 ಗಂಟೆ 30 ನಿಮಿಷಕ್ಕೆ ಕೆಲಸದ ನಿಮಿತ್ತ ಸ್ನೇಹಿತನ ಜೊತೆಯಲ್ಲಿ ದೊಡ್ಡಬಳ್ಳಾಪುರದಿಂದ ಬೆಂಗಳೂರಿಗೆ ವಾಪಸ್ಸು ಬರುತ್ತಿದ್ದಾಗ ದುರ್ಘಟನೆಯೊಂದು ಸಂಭವಿಸಿದೆ. ಈ ಘಟನೆಯಲ್ಲಿ ತೇಜಸ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೊತೆಗೆ ಬೈಕ್​ನಲ್ಲಿದ್ದ ಆಕಾಶ್ (19) ಎಂಬಾತನಿಗೆ ಗಂಭೀರ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 

View this post on Instagram

 

A post shared by TÊJÁŠ (@tejas_ki_ng)

ಆದರೆ ತೇಜಸ್ ಸಾವಿಗೂ ಮುನ್ನ ಒಂದು ರೀಲ್ಸ್​ ಮಾಡಿದ್ದ. ಆ ರೀಲ್ಸ್​ ಅನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದರು. ಆದರೆ ಸಾವಿಗೂ ಮುನ್ನ ತೇಜಸ್ ಶೇರ್ ಮಾಡಿರೋ ರೀಲ್ಸ್​ ಅನ್ನು ಗೆಳೆಯರಿಗೆ ಟ್ಯಾಗ್​​ ಮಾಡಿದ್ದ. ತೇಜಸ್ ಶೇರ್ ಮಾಡಿಕೊಂಡ ರೀಲ್ಸ್​ನಲ್ಲಿ ಅವರ ಶಾಲೆಯನ್ನು ನೆನಪು ಮಾಡಿಕೊಂಡಿದ್ದಾರೆ. ಜೊತೆಗೆ ಆ ವಿಡಿಯೋದಲ್ಲಿ  ಸ್ನೇಹಿತರನ್ನು ಮಿಸ್​ ಮಾಡಿಕೊಳ್ಳೋ ಭಯ ಅಂತ ಹೇಳಿದ್ದಾರೆ. ಅದು ಕೂಡ ಅವರ ಸ್ವಂತ ಧ್ವನಿಯಲ್ಲಿ ಈ ರೀಲ್​​ ಅನ್ನು ಮಾಡಿದ್ದಾರೆ.

ಇದೇ ತೇಜಸ್​​ ಸಾವಿಗೂ ಮುನ್ನ ಮಾಡಿರೋ ರೀಲ್ಸ್​ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದೇ ವಿಡಿಯೋ ನೋಡಿದ ನೆಟ್ಟಿಗರು, ಜೊತೆಗಿರುವ ಜೀವ ಎಂದೆಂದಿಗೂ ಜೀವಂತ, ತುಂಬಾ ಬೇಜಾರ್ ಆಯಿತು. ಈ ವಿಷಯ ಕೇಳಿ ನಿನ್ನೆ ಇದ್ದೋರು ಇವತ್ತಿಲ್ಲ ಅಂದ್ರೆ ಇಷ್ಟೇ ಜೀವನ, ನಿಮ್ಮ ಕೊನೆ ಮಾತು ಕೂಡ ಫ್ರೆಂಡ್ಶಿಪ್ ಬಗ್ಗೆ ಹೇಳಿ ಲಾಸ್ಟ್ ಮಾಡಿ ಬಿಟ್ಟರಿ ಎಂದು ಭಾವುಕರಾಗಿ ಕಾಮೆಂಟ್​ ಮಾಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More