ಬಾರ್ಬಡೊಸ್ ಭಾರೀ ಗಾಳಿ, ಮಳೆಗೆ ತತ್ತರ
ಸೈಕ್ಲೋನ್ ಎದ್ದ ಪರಿಣಾಮ ಮತ್ತಷ್ಟು ವಿಳಂಬ
ಬಾರ್ಬಡೊಸ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಸ್ಥಗಿತ
ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ತವರಿಗೆ ಮರಳಲು ತೊಂದರೆಯಾಗಿದೆ. ಚಂಡಮಾರುತ ಹಿನ್ನೆಲೆಯಲ್ಲಿ ಬಾರ್ಬಡೊಸ್ ಏರ್ಪೋರ್ಟ್ನಲ್ಲಿ ವಿಮಾನ ಸಂಚಾರವನ್ನು ಬಂದ್ ಮಾಡಲಾಗಿದ್ದು, ಸದ್ಯ ಟೀಂ ಇಂಡಿಯಾ ವಾಪಸ್ ಆಗೋದು ಕಷ್ಟವಾಗಿದೆ.
ಬಾರ್ಬಡೊಸ್ನಲ್ಲಿ ಭಾರೀ ಬಿರುಗಾಳಿ ಜೊತೆ ಮಳೆ ನಿರಂತರವಾಗಿ ಸುರಿಯುತ್ತಿವ ಕಾರಣ ಸಂಚಾರ ಸೇರಿದಂತೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಗಂಟೆಗೆ 130 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಈಗಾಗಲೇ ಟೀಂ ಇಂಡಿಯಾ ನ್ಯೂಯಾರ್ಕ್ ತಲುಪಬೇಕಿತ್ತು.
ಇದನ್ನೂ ಓದಿ:ಟಿ20 ವಿಶ್ವಕಪ್ ತಂಡ ಪ್ರಕಟಿಸಿದ ಐಸಿಸಿ.. 6 ಭಾರತೀಯ ಆಟಗಾರರಿಗೆ ಸ್ಥಾನ..!
ಭಾರೀ ಗಾಳಿ ಮಳೆ ಹಿನ್ನೆಲೆಯಲ್ಲಿ ಭಾರತ ತಂಡವು ನ್ಯೂಯಾರ್ಕ್ ಮೂಲಕ ಬರುವ ಪ್ಲಾನ್ ಕ್ಯಾನ್ಸಲ್ ಮಾಡಲಾಗಿದೆ ಎಂದು ವರದಿಗಳು ಹೇಳಿವೆ. ವಿಶೇಷ ವಿಮಾನದ ಮೂಲಕ ನೇರವಾಗಿ ದೆಹಲಿ ತಲುಪುವ ವ್ಯವಸ್ಥೆಗಳು ಆಗುತ್ತಿವೆ. ಆದರೆ ಸೈಕ್ಲೋನ್ ತೀವ್ರತೆ ಕಮ್ಮಿಯಾದ ಮೇಲೆಯೇ ಸರಿಯಾದ ನಿರ್ಧಾರ ಆಗಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಜುಲೈ 3 ರಂದು ಟೀಂ ಇಂಡಿಯಾ ತಾಯ್ನಾಡಿಗೆ ಮರಳಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಬಾರ್ಬಡೊಸ್ ಭಾರೀ ಗಾಳಿ, ಮಳೆಗೆ ತತ್ತರ
ಸೈಕ್ಲೋನ್ ಎದ್ದ ಪರಿಣಾಮ ಮತ್ತಷ್ಟು ವಿಳಂಬ
ಬಾರ್ಬಡೊಸ್ ವಿಮಾನ ನಿಲ್ದಾಣದ ಕಾರ್ಯಾಚರಣೆ ಸ್ಥಗಿತ
ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ತವರಿಗೆ ಮರಳಲು ತೊಂದರೆಯಾಗಿದೆ. ಚಂಡಮಾರುತ ಹಿನ್ನೆಲೆಯಲ್ಲಿ ಬಾರ್ಬಡೊಸ್ ಏರ್ಪೋರ್ಟ್ನಲ್ಲಿ ವಿಮಾನ ಸಂಚಾರವನ್ನು ಬಂದ್ ಮಾಡಲಾಗಿದ್ದು, ಸದ್ಯ ಟೀಂ ಇಂಡಿಯಾ ವಾಪಸ್ ಆಗೋದು ಕಷ್ಟವಾಗಿದೆ.
ಬಾರ್ಬಡೊಸ್ನಲ್ಲಿ ಭಾರೀ ಬಿರುಗಾಳಿ ಜೊತೆ ಮಳೆ ನಿರಂತರವಾಗಿ ಸುರಿಯುತ್ತಿವ ಕಾರಣ ಸಂಚಾರ ಸೇರಿದಂತೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಗಂಟೆಗೆ 130 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದೆ. ಈಗಾಗಲೇ ಟೀಂ ಇಂಡಿಯಾ ನ್ಯೂಯಾರ್ಕ್ ತಲುಪಬೇಕಿತ್ತು.
ಇದನ್ನೂ ಓದಿ:ಟಿ20 ವಿಶ್ವಕಪ್ ತಂಡ ಪ್ರಕಟಿಸಿದ ಐಸಿಸಿ.. 6 ಭಾರತೀಯ ಆಟಗಾರರಿಗೆ ಸ್ಥಾನ..!
ಭಾರೀ ಗಾಳಿ ಮಳೆ ಹಿನ್ನೆಲೆಯಲ್ಲಿ ಭಾರತ ತಂಡವು ನ್ಯೂಯಾರ್ಕ್ ಮೂಲಕ ಬರುವ ಪ್ಲಾನ್ ಕ್ಯಾನ್ಸಲ್ ಮಾಡಲಾಗಿದೆ ಎಂದು ವರದಿಗಳು ಹೇಳಿವೆ. ವಿಶೇಷ ವಿಮಾನದ ಮೂಲಕ ನೇರವಾಗಿ ದೆಹಲಿ ತಲುಪುವ ವ್ಯವಸ್ಥೆಗಳು ಆಗುತ್ತಿವೆ. ಆದರೆ ಸೈಕ್ಲೋನ್ ತೀವ್ರತೆ ಕಮ್ಮಿಯಾದ ಮೇಲೆಯೇ ಸರಿಯಾದ ನಿರ್ಧಾರ ಆಗಲಿದೆ. ಎಲ್ಲವೂ ಅಂದುಕೊಂಡಂತೆ ಆದರೆ ಜುಲೈ 3 ರಂದು ಟೀಂ ಇಂಡಿಯಾ ತಾಯ್ನಾಡಿಗೆ ಮರಳಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ