newsfirstkannada.com

ಒಳಹರಿವಿನಲ್ಲಿ ಭಾರೀ ಇಳಿಕೆ.. KRSನಲ್ಲಿ ಎಷ್ಟು ಸಾವಿರ ಕ್ಯೂಸೆಕ್​ ನೀರು ಕಡಿಮೆ ಆಗಿದೆ ಗೊತ್ತಾ?

Share :

Published July 13, 2024 at 9:38am

    ಶ್ರೀರಂಗಪಟ್ಟಣ ತಾಲೂಕಿನಲ್ಲಿನ ಕೃಷ್ಣರಾಜ ಸಾಗರ ಅಣೆಕಟ್ಟು

    ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆ ಆಗಿದೆಯಾ?

    KRSನ ಒಳ ಹರಿವು, ಹೊರ ಹರಿವಿನ ಕುರಿತು ಮಾಹಿತಿ ಇಲ್ಲಿದೆ

ಮಂಡ್ಯ: ಮಳೆ ಬಂದರೆ ಮಾತ್ರ ಕೆಆರ್​ಎಸ್ (ಕೃಷ್ಣ ರಾಜ ಸಾಗರ)​ ಡ್ಯಾಂ ಭರ್ತಿಯಾಗುತ್ತದೆ. ಆದರೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ತಗ್ಗಿದ್ದರಿಂದ ಕೆಆರ್​ಎಸ್ ಡ್ಯಾಂನ ಒಳಹರಿವು 3,406 ಕ್ಯೂಸೆಕ್​ಗೆ ಇಳಿಕೆಯಾಗಿರುವುದು ಕೊಂಚ ಬೇಸರದ ಸಂಗತಿಯಾಗಿದೆ.

ಇದನ್ನೂ ಓದಿ: ಜುಲೈ 15 ರಿಂದ ಮಳೆಗಾಲದ ಅಧಿವೇಶನ.. ಸರ್ಕಾರದ ವಿರುದ್ಧ ದೋಸ್ತಿಗಳಿಗೆ ಸಿಕ್ಕಿದೆ ಡಬಲ್​ ಅಸ್ತ್ರ!

ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್ ಸುತ್ತ ಮಳೆ ಕಡಿಮೆಯಾಗಿದ್ದರಿಂದ ಒಳಹರಿವು 3,406 ಕ್ಯೂಸೆಕ್​ಗೆ ಇಳಿಕೆ ಆಗಿದೆ. ನಿನ್ನೆ 4,673 ಕ್ಯೂಸೆಕ್ ಇದ್ದ ಒಳಹರಿವು ಇಂದು ಕಡಿಮೆಯಾಗಿದೆ. 124.80 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ 104.60 ಅಡಿ ನೀರು ಸಂಗ್ರಹವಾಗಿದೆ. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ 26.635 ಟಿಎಂಸಿ ನೀರು ಮಾತ್ರ ಶೇಖರಣೆ ಆಗಿದೆ. ಕೆಆರ್​ಎಸ್​ನಿಂದ 2,257 ಕ್ಯೂಸೆಕ್ ನೀರನ್ನ ನಾಲೆ ಹಾಗೂ ಕುಡಿಯುವ ನೀರಿಗಾಗಿ ಬಿಡಲಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತಷ್ಟು ಮಳೆಯಾದರೆ ಡ್ಯಾಂನ ನೀರಿನ ಮಟ್ಟ ಹೆಚ್ಚಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರ ED ಕಸ್ಟಡಿಗೆ.. 13 ಮಂದಿ ಅರೆಸ್ಟ್​, ಎಲ್ಲಿದ್ದಾರೆ ಇನ್ನೂ 8 ಆರೋಪಿಗಳು..?

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

  • ಗರಿಷ್ಠ ಮಟ್ಟ- 124.80 ಅಡಿ
  • ಇಂದಿನ ಮಟ್ಟ- 104.60 ಅಡಿ
  • ಗರಿಷ್ಠ ಸಾಮರ್ಥ್ಯ- 49.452 ಟಿಎಂಸಿ
  • ಇಂದಿನ ಸಾಮರ್ಥ್ಯ- 26.635 ಟಿಎಂಸಿ
  • ಒಳ ಹರಿವು- 3,406 ಕ್ಯೂಸೆಕ್
  • ಹೊರ ಹರಿವು- 2,257 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಳಹರಿವಿನಲ್ಲಿ ಭಾರೀ ಇಳಿಕೆ.. KRSನಲ್ಲಿ ಎಷ್ಟು ಸಾವಿರ ಕ್ಯೂಸೆಕ್​ ನೀರು ಕಡಿಮೆ ಆಗಿದೆ ಗೊತ್ತಾ?

https://newsfirstlive.com/wp-content/uploads/2024/07/KRS-Dam.jpg

    ಶ್ರೀರಂಗಪಟ್ಟಣ ತಾಲೂಕಿನಲ್ಲಿನ ಕೃಷ್ಣರಾಜ ಸಾಗರ ಅಣೆಕಟ್ಟು

    ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆ ಆಗಿದೆಯಾ?

    KRSನ ಒಳ ಹರಿವು, ಹೊರ ಹರಿವಿನ ಕುರಿತು ಮಾಹಿತಿ ಇಲ್ಲಿದೆ

ಮಂಡ್ಯ: ಮಳೆ ಬಂದರೆ ಮಾತ್ರ ಕೆಆರ್​ಎಸ್ (ಕೃಷ್ಣ ರಾಜ ಸಾಗರ)​ ಡ್ಯಾಂ ಭರ್ತಿಯಾಗುತ್ತದೆ. ಆದರೆ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ತಗ್ಗಿದ್ದರಿಂದ ಕೆಆರ್​ಎಸ್ ಡ್ಯಾಂನ ಒಳಹರಿವು 3,406 ಕ್ಯೂಸೆಕ್​ಗೆ ಇಳಿಕೆಯಾಗಿರುವುದು ಕೊಂಚ ಬೇಸರದ ಸಂಗತಿಯಾಗಿದೆ.

ಇದನ್ನೂ ಓದಿ: ಜುಲೈ 15 ರಿಂದ ಮಳೆಗಾಲದ ಅಧಿವೇಶನ.. ಸರ್ಕಾರದ ವಿರುದ್ಧ ದೋಸ್ತಿಗಳಿಗೆ ಸಿಕ್ಕಿದೆ ಡಬಲ್​ ಅಸ್ತ್ರ!

ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್ ಸುತ್ತ ಮಳೆ ಕಡಿಮೆಯಾಗಿದ್ದರಿಂದ ಒಳಹರಿವು 3,406 ಕ್ಯೂಸೆಕ್​ಗೆ ಇಳಿಕೆ ಆಗಿದೆ. ನಿನ್ನೆ 4,673 ಕ್ಯೂಸೆಕ್ ಇದ್ದ ಒಳಹರಿವು ಇಂದು ಕಡಿಮೆಯಾಗಿದೆ. 124.80 ಅಡಿ ಗರಿಷ್ಠ ಮಟ್ಟದ ಜಲಾಶಯದಲ್ಲಿ 104.60 ಅಡಿ ನೀರು ಸಂಗ್ರಹವಾಗಿದೆ. 49.452 ಟಿಎಂಸಿ ಸಾಮರ್ಥ್ಯದ ಡ್ಯಾಂನಲ್ಲಿ 26.635 ಟಿಎಂಸಿ ನೀರು ಮಾತ್ರ ಶೇಖರಣೆ ಆಗಿದೆ. ಕೆಆರ್​ಎಸ್​ನಿಂದ 2,257 ಕ್ಯೂಸೆಕ್ ನೀರನ್ನ ನಾಲೆ ಹಾಗೂ ಕುಡಿಯುವ ನೀರಿಗಾಗಿ ಬಿಡಲಾಗಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಮತ್ತಷ್ಟು ಮಳೆಯಾದರೆ ಡ್ಯಾಂನ ನೀರಿನ ಮಟ್ಟ ಹೆಚ್ಚಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: ಮಾಜಿ ಸಚಿವ ನಾಗೇಂದ್ರ ED ಕಸ್ಟಡಿಗೆ.. 13 ಮಂದಿ ಅರೆಸ್ಟ್​, ಎಲ್ಲಿದ್ದಾರೆ ಇನ್ನೂ 8 ಆರೋಪಿಗಳು..?

ಇಂದಿನ ಕೆಆರ್‌ಎಸ್ ನೀರಿನ ಮಟ್ಟ

  • ಗರಿಷ್ಠ ಮಟ್ಟ- 124.80 ಅಡಿ
  • ಇಂದಿನ ಮಟ್ಟ- 104.60 ಅಡಿ
  • ಗರಿಷ್ಠ ಸಾಮರ್ಥ್ಯ- 49.452 ಟಿಎಂಸಿ
  • ಇಂದಿನ ಸಾಮರ್ಥ್ಯ- 26.635 ಟಿಎಂಸಿ
  • ಒಳ ಹರಿವು- 3,406 ಕ್ಯೂಸೆಕ್
  • ಹೊರ ಹರಿವು- 2,257 ಕ್ಯೂಸೆಕ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Load More