ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ತೂಗುದೀಪ
ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆಯುತ್ತಿರುವ ಸ್ಯಾಂಡಲ್ವುಡ್ ನಟ
ಇಲ್ಲಿ ದರ್ಶನ್ ಸಿನಿಮಾದ ಈ ಹಾಡು ಖೈದಿಗಳ ಹಾಟ್ ಫೇವರೇಟ್
ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ನಟ ದರ್ಶನ್ ಜೈಲುವಾಸ ಅನುಭವಿಸುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಹೀಗಿರುವಾಗ ಸಹಖೈದಿಗಳಿಗೆ ದರ್ಶನ್ ಸಿನಿಮಾ ಸಾಂಗ್ ಫೇವರೇಟ್ ಆಗ್ಬಿಟ್ಟಿದೆಯಂತೆ. ಅಂದಹಾಗೆಯೇ ಆ ಹಾಡು ಯಾವುದು ಗೊತ್ತಾ?. ಈ ಸ್ಟೋರಿ ಓದಿ.
ಜೈಲಿನಲ್ಲಿರುವ ನಟ ದರ್ಶನ್ ನೋಡಲಿಕ್ಕೆ ವಿಚಾರಣಾಧೀನ ಖೈದಿಗಳು ಸೇರಿದಂತೆ ಸಜಾಬಂಧಿಗಳಿಂದಲೂ ಮನವಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಜೈಲಿನ ಯಾವುದೇ ಕಾರ್ಯಕ್ರಮ ಇದ್ದರೂ ನಟ ದರ್ಶನ್ ಸಿನಿಮಾದ ಅದೊಂದು ಹಾಡು ಇರಲೇಬೇಕು ಎಂಬಂತಾಗಿದೆಯಂತೆ.
ಕರಿಯ ಸಿನಿಮಾ ಹಾಡಿಗೆ ಡಿಮ್ಯಾಂಡ್
ಜೈಲಿನಲ್ಲಿ ‘ಕರಿಯ’ ಚಿತ್ರದ ‘ಕೆಂಚಾಲೋ ಮಂಚಾಲೋ’ ಹಾಡು ಖೈದಿಗಳ ಹಾಟ್ ಫೇವರೇಟ್ ಆಗಿಬಿಟ್ಟಿದೆಯಂತೆ. ದರ್ಶನ್ ನಟನೆಯ ಆ ಹಾಡು ರೌಡಿಗಳ ಆ್ಯಂಥಮ್ ಎನಿಸಿಕೊಂಡಿದೆಯಂತೆ. ಹೀಗಾಗಿ ಜೈಲಿನಲ್ಲಿ ಯಾವುದೇ ಕಾರ್ಯಕ್ರಮದಲ್ಲೂ ಕರಿಯ ಸಿನಿಮಾದ ಹಾಡಿಗೆ ಫುಲ್ ಡಿಮ್ಯಾಂಡ್ ಸೃಷ್ಟಿಯಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು.. ಚಾಲಕನ ಪರಿಸ್ಥಿತಿ?
ಅಣ್ಣಾವ್ರ ಹಾಡಿಗೂ ಡಿಮ್ಯಾಂಡ್
ಜೈಲಿನ ವಿಶೇಷ ದಿನಗಳಲ್ಲಿ ‘ಕೆಂಚಾಲೋ ಮಂಚಾಲೋ’ ಹಾಡನ್ನು ಹಾಕಿದ ಬಳಿಕವೇ ಕಾರ್ಯಕ್ರಮ ಶುರು ಮಾಡಲಾಗುತ್ತಿದೆಯಂತೆ. ಜೈಲು ಬಂಧಿಗಳು ಕರಿಯ ಚಿತ್ರ ಬಿಡುಗಡೆಯಾದ ಬಳಿಕ ಅದನ್ನೇ ಟ್ರೆಂಡ್ ಮಾಡಿಕೊಂಡಿದ್ದಾರೆ. ‘ಕೆಂಚಾಲೋ ಮಂಚಾಲೋ’ ಹಾಡಿನ ಬಳಿಕ ಡಾ. ರಾಜ್ಕುಮಾರ್ ನಟನೆಯ ‘ಸತ್ಯಹರಿಶ್ಚಂದ್ರ’ ಸಿನಿಮಾದ ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ’ ಹಾಡು ಹಾಕಲಾಗುತ್ತದೆ ಎನ್ನಲಾಗುತ್ತದೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೊಂದು ದೊಡ್ಡ ಅನಾಹುತದ ಆತಂಕ.. ಇಲ್ಲಿ ಓಡಾಡೋ ಪ್ರಯಾಣಿಕರೇ ಹುಷಾರ್..!
ಒಟ್ಟಿನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಜೈಲು ಬಂಧಿಗಳು ಈ ಎರಡು ಹಾಡು ಕಂಪಲ್ಸರಿ ಮಾಡಿಕೊಂಡಿದ್ದಾರೆ. ಏನೇ ವಿಶೇಷ ಕಾರ್ಯಕ್ರಮವಿದ್ದರೂ ಈ ಹಾಡುಗಳು ಜೈಲಿನಲ್ಲಿ ಕೇಳಿಬರುತ್ತವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ತೂಗುದೀಪ
ಪರಪ್ಪನ ಅಗ್ರಹಾರದಲ್ಲಿ ಕಾಲ ಕಳೆಯುತ್ತಿರುವ ಸ್ಯಾಂಡಲ್ವುಡ್ ನಟ
ಇಲ್ಲಿ ದರ್ಶನ್ ಸಿನಿಮಾದ ಈ ಹಾಡು ಖೈದಿಗಳ ಹಾಟ್ ಫೇವರೇಟ್
ರೇಣುಕಾಸ್ವಾಮಿ ಹತ್ಯೆ ಕೇಸ್ ನಲ್ಲಿ ನಟ ದರ್ಶನ್ ಜೈಲುವಾಸ ಅನುಭವಿಸುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಕಾಲ ಕಳೆಯುತ್ತಿದ್ದಾರೆ. ಹೀಗಿರುವಾಗ ಸಹಖೈದಿಗಳಿಗೆ ದರ್ಶನ್ ಸಿನಿಮಾ ಸಾಂಗ್ ಫೇವರೇಟ್ ಆಗ್ಬಿಟ್ಟಿದೆಯಂತೆ. ಅಂದಹಾಗೆಯೇ ಆ ಹಾಡು ಯಾವುದು ಗೊತ್ತಾ?. ಈ ಸ್ಟೋರಿ ಓದಿ.
ಜೈಲಿನಲ್ಲಿರುವ ನಟ ದರ್ಶನ್ ನೋಡಲಿಕ್ಕೆ ವಿಚಾರಣಾಧೀನ ಖೈದಿಗಳು ಸೇರಿದಂತೆ ಸಜಾಬಂಧಿಗಳಿಂದಲೂ ಮನವಿ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಜೈಲಿನ ಯಾವುದೇ ಕಾರ್ಯಕ್ರಮ ಇದ್ದರೂ ನಟ ದರ್ಶನ್ ಸಿನಿಮಾದ ಅದೊಂದು ಹಾಡು ಇರಲೇಬೇಕು ಎಂಬಂತಾಗಿದೆಯಂತೆ.
ಕರಿಯ ಸಿನಿಮಾ ಹಾಡಿಗೆ ಡಿಮ್ಯಾಂಡ್
ಜೈಲಿನಲ್ಲಿ ‘ಕರಿಯ’ ಚಿತ್ರದ ‘ಕೆಂಚಾಲೋ ಮಂಚಾಲೋ’ ಹಾಡು ಖೈದಿಗಳ ಹಾಟ್ ಫೇವರೇಟ್ ಆಗಿಬಿಟ್ಟಿದೆಯಂತೆ. ದರ್ಶನ್ ನಟನೆಯ ಆ ಹಾಡು ರೌಡಿಗಳ ಆ್ಯಂಥಮ್ ಎನಿಸಿಕೊಂಡಿದೆಯಂತೆ. ಹೀಗಾಗಿ ಜೈಲಿನಲ್ಲಿ ಯಾವುದೇ ಕಾರ್ಯಕ್ರಮದಲ್ಲೂ ಕರಿಯ ಸಿನಿಮಾದ ಹಾಡಿಗೆ ಫುಲ್ ಡಿಮ್ಯಾಂಡ್ ಸೃಷ್ಟಿಯಾಗಿದೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ನಡು ರಸ್ತೆಯಲ್ಲೇ ಹೊತ್ತಿ ಉರಿದ ಕಾರು.. ಚಾಲಕನ ಪರಿಸ್ಥಿತಿ?
ಅಣ್ಣಾವ್ರ ಹಾಡಿಗೂ ಡಿಮ್ಯಾಂಡ್
ಜೈಲಿನ ವಿಶೇಷ ದಿನಗಳಲ್ಲಿ ‘ಕೆಂಚಾಲೋ ಮಂಚಾಲೋ’ ಹಾಡನ್ನು ಹಾಕಿದ ಬಳಿಕವೇ ಕಾರ್ಯಕ್ರಮ ಶುರು ಮಾಡಲಾಗುತ್ತಿದೆಯಂತೆ. ಜೈಲು ಬಂಧಿಗಳು ಕರಿಯ ಚಿತ್ರ ಬಿಡುಗಡೆಯಾದ ಬಳಿಕ ಅದನ್ನೇ ಟ್ರೆಂಡ್ ಮಾಡಿಕೊಂಡಿದ್ದಾರೆ. ‘ಕೆಂಚಾಲೋ ಮಂಚಾಲೋ’ ಹಾಡಿನ ಬಳಿಕ ಡಾ. ರಾಜ್ಕುಮಾರ್ ನಟನೆಯ ‘ಸತ್ಯಹರಿಶ್ಚಂದ್ರ’ ಸಿನಿಮಾದ ‘ಕುಲದಲ್ಲಿ ಕೀಳ್ಯಾವುದೋ ಹುಚ್ಚಪ್ಪ’ ಹಾಡು ಹಾಕಲಾಗುತ್ತದೆ ಎನ್ನಲಾಗುತ್ತದೆ.
ಇದನ್ನೂ ಓದಿ: ರಾಜ್ಯದಲ್ಲಿ ಮತ್ತೊಂದು ದೊಡ್ಡ ಅನಾಹುತದ ಆತಂಕ.. ಇಲ್ಲಿ ಓಡಾಡೋ ಪ್ರಯಾಣಿಕರೇ ಹುಷಾರ್..!
ಒಟ್ಟಿನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಜೈಲು ಬಂಧಿಗಳು ಈ ಎರಡು ಹಾಡು ಕಂಪಲ್ಸರಿ ಮಾಡಿಕೊಂಡಿದ್ದಾರೆ. ಏನೇ ವಿಶೇಷ ಕಾರ್ಯಕ್ರಮವಿದ್ದರೂ ಈ ಹಾಡುಗಳು ಜೈಲಿನಲ್ಲಿ ಕೇಳಿಬರುತ್ತವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ