ಮಗನನ್ನು ಕೊನೆಯ ಬಾರಿ ಕಳುಹಿಸಲು ಕುಟುಂಬಸ್ಥರ ಮನವಿ
ರಘುಗಾಗಿ ಬೆಳಗ್ಗೆಯಿಂದಲೇ ಕಾದು ಕುಳಿತಿದ್ದ ಕುಟುಂಬಸ್ಥರು
ರಘು ಬಾರದ ಹಿನ್ನೆಲೆ ಸಂಬಂಧಿಕರೆಲ್ಲ ಸೇರಿ ಅಂತ್ಯಕ್ರಿಯೆ ಮುಕ್ತಾಯ
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಂಧನದಲ್ಲಿರುವ ದರ್ಶನ್ ಗ್ಯಾಂಗ್ಗೆ ಆಘಾತದ ಮೇಲೆ ಆಘಾತ ಎದುರಾಗುತ್ತಿದೆ. ಇಂದು A4 ಚಿತ್ರದುರ್ಗದ ರಾಘವೇಂದ್ರ ಅಲಿಯಾಸ್ ರಘು ಅವರ ತಾಯಿ ನಿಧನರಾಗಿದ್ದಾರೆ. ಜೈಲಿನಿಂದ ಮಗ ಬರುತ್ತಾನೆ ಎಂದು ಕಾಯುತ್ತಿದ್ದ ತಾಯಿ ಮಂಜುಳಮ್ಮ ಚಿತ್ರದುರ್ಗದ ಕೋಳಿ ಬುರುಜನಹಟ್ಟಿ ನಿವಾಸದಲ್ಲಿ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಮೇಲೆ ದರ್ಶನ್ ಮಾಡಿರೋ ಹಲ್ಲೆ ವಿಡಿಯೋ ಸೆರೆ? 3 ಸೆಕೆಂಡ್ನ ಕರಾಳತೆಯ ಸತ್ಯ ಕಕ್ಕಿದ ಈ ಆರೋಪಿ
ರಘು ತಾಯಿ ನಿಧನದ ಹಿನ್ನೆಲೆ ಮಗನನ್ನು ಕೊನೆಯ ಬಾರಿ ಕಳುಹಿಸಲು ಕುಟುಂಬಸ್ಥರು ಮನವಿ ಮಾಡಿದ್ದರು. ಆದರೆ ಆರೋಪಿ ರಘು ಬಾರದ ಹಿನ್ನೆಲೆ ಸಂಬಂಧಿಕರೆಲ್ಲ ಸೇರಿ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ. ಚಿತ್ರದುರ್ಗದ ಜೋಗಿಮಟ್ಟಿ ಬಳಿ ಇರುವ ರುದ್ರಭೂಮಿಯಲ್ಲಿ ಮೃತ ರಘುವಿನ ತಾಯಿ ಮಂಜುಳಮ್ಮ ಅವರ ಅಂತ್ಯಕ್ರಿಯೆ ಮಾಡಲಾಗಿದೆ.
ತಾಯಿಯ ಸಾವಿನ ಸುದ್ದಿ ತಿಳಿದ ಆರೋಪಿ ರಾಘವೇಂದ್ರ ಅವರು ಜೈಲಿನಲ್ಲೇ ಕಣ್ಣೀರು ಹಾಕಿದ್ದರು. ಮೃತ ತಾಯಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಕೋರ್ಟ್ಗೆ ಮನವಿ ಮಾಡಿದ್ದರು. ಆರೋಪಿ ರಾಘವೇಂದ್ರ ಮನವಿ ಪುರಸ್ಕರಿಸಿದ ಕೋರ್ಟ್ ಅನುಮತಿಯನ್ನು ನೀಡಿತ್ತು. ಆದರೆ ತಾಯಿಯ ಮುಖವನ್ನು ಮಗ ರಘು ನೋಡುವ ಮುನ್ನವೇ ಅಂತ್ಯಕ್ರಿಯೆ ನಡೆದು ಹೋಗಿದೆ.
ಕೊನೆಯ ಬಾರಿ ತಾಯಿ ಮುಖ ನೋಡದೆ ರಘು ತಾಯಿ ಅಂತ್ಯಕ್ರಿಯೆ ನೆರವೇರಿದೆ. ಮಗ ರಘುಗಾಗಿ ಬೆಳಗ್ಗೆಯಿಂದಲೇ ಕುಟುಂಬಸ್ಥರು ಕಾದು ಕುಳಿತಿದ್ದರು. ರಘು ಬರೋದಿಲ್ಲ ಅಂತ ತಿಳಿದು ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ಮಗನನ್ನು ಕೊನೆಯ ಬಾರಿ ಕಳುಹಿಸಲು ಕುಟುಂಬಸ್ಥರ ಮನವಿ
ರಘುಗಾಗಿ ಬೆಳಗ್ಗೆಯಿಂದಲೇ ಕಾದು ಕುಳಿತಿದ್ದ ಕುಟುಂಬಸ್ಥರು
ರಘು ಬಾರದ ಹಿನ್ನೆಲೆ ಸಂಬಂಧಿಕರೆಲ್ಲ ಸೇರಿ ಅಂತ್ಯಕ್ರಿಯೆ ಮುಕ್ತಾಯ
ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ಬಂಧನದಲ್ಲಿರುವ ದರ್ಶನ್ ಗ್ಯಾಂಗ್ಗೆ ಆಘಾತದ ಮೇಲೆ ಆಘಾತ ಎದುರಾಗುತ್ತಿದೆ. ಇಂದು A4 ಚಿತ್ರದುರ್ಗದ ರಾಘವೇಂದ್ರ ಅಲಿಯಾಸ್ ರಘು ಅವರ ತಾಯಿ ನಿಧನರಾಗಿದ್ದಾರೆ. ಜೈಲಿನಿಂದ ಮಗ ಬರುತ್ತಾನೆ ಎಂದು ಕಾಯುತ್ತಿದ್ದ ತಾಯಿ ಮಂಜುಳಮ್ಮ ಚಿತ್ರದುರ್ಗದ ಕೋಳಿ ಬುರುಜನಹಟ್ಟಿ ನಿವಾಸದಲ್ಲಿ ಬೆಳಗಿನ ಜಾವ ಕೊನೆಯುಸಿರೆಳೆದಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಮೇಲೆ ದರ್ಶನ್ ಮಾಡಿರೋ ಹಲ್ಲೆ ವಿಡಿಯೋ ಸೆರೆ? 3 ಸೆಕೆಂಡ್ನ ಕರಾಳತೆಯ ಸತ್ಯ ಕಕ್ಕಿದ ಈ ಆರೋಪಿ
ರಘು ತಾಯಿ ನಿಧನದ ಹಿನ್ನೆಲೆ ಮಗನನ್ನು ಕೊನೆಯ ಬಾರಿ ಕಳುಹಿಸಲು ಕುಟುಂಬಸ್ಥರು ಮನವಿ ಮಾಡಿದ್ದರು. ಆದರೆ ಆರೋಪಿ ರಘು ಬಾರದ ಹಿನ್ನೆಲೆ ಸಂಬಂಧಿಕರೆಲ್ಲ ಸೇರಿ ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ. ಚಿತ್ರದುರ್ಗದ ಜೋಗಿಮಟ್ಟಿ ಬಳಿ ಇರುವ ರುದ್ರಭೂಮಿಯಲ್ಲಿ ಮೃತ ರಘುವಿನ ತಾಯಿ ಮಂಜುಳಮ್ಮ ಅವರ ಅಂತ್ಯಕ್ರಿಯೆ ಮಾಡಲಾಗಿದೆ.
ತಾಯಿಯ ಸಾವಿನ ಸುದ್ದಿ ತಿಳಿದ ಆರೋಪಿ ರಾಘವೇಂದ್ರ ಅವರು ಜೈಲಿನಲ್ಲೇ ಕಣ್ಣೀರು ಹಾಕಿದ್ದರು. ಮೃತ ತಾಯಿ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಕೋರ್ಟ್ಗೆ ಮನವಿ ಮಾಡಿದ್ದರು. ಆರೋಪಿ ರಾಘವೇಂದ್ರ ಮನವಿ ಪುರಸ್ಕರಿಸಿದ ಕೋರ್ಟ್ ಅನುಮತಿಯನ್ನು ನೀಡಿತ್ತು. ಆದರೆ ತಾಯಿಯ ಮುಖವನ್ನು ಮಗ ರಘು ನೋಡುವ ಮುನ್ನವೇ ಅಂತ್ಯಕ್ರಿಯೆ ನಡೆದು ಹೋಗಿದೆ.
ಕೊನೆಯ ಬಾರಿ ತಾಯಿ ಮುಖ ನೋಡದೆ ರಘು ತಾಯಿ ಅಂತ್ಯಕ್ರಿಯೆ ನೆರವೇರಿದೆ. ಮಗ ರಘುಗಾಗಿ ಬೆಳಗ್ಗೆಯಿಂದಲೇ ಕುಟುಂಬಸ್ಥರು ಕಾದು ಕುಳಿತಿದ್ದರು. ರಘು ಬರೋದಿಲ್ಲ ಅಂತ ತಿಳಿದು ಅಂತ್ಯಕ್ರಿಯೆ ಮಾಡಿ ಮುಗಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ