ನಾಳೆ ಮಹತ್ವದ ತೀರ್ಪು.. ಇವತ್ತು ಡಿಸಿಎಂ ಭೇಟಿಯಾದ ನಟ ದರ್ಶನ್ ಪತ್ನಿ
ಮನೆಯೂಟಕ್ಕೆ ಮನವಿ ಮಾಡಿರುವ ದರ್ಶನ್ ಭವಿಷ್ಯ ನಾಳೆ ನಿರ್ಧಾರ
‘ಯಾವ ಬಾಸ್ ನಂಗೆ ಗೊತ್ತಿಲ್ಲ.. ದರ್ಶನ್ ಕೇಸ್ಗೆ ಡಿಸಿಎಂ ಖಡಕ್ ಮಾತು
ಮನೆಯೂಟಕ್ಕಾಗಿ ಕೋರ್ಟ್ ಮೊರೆ ಹೋಗಿರುವ ನಟ ದರ್ಶನ್ಗೆ ನಾಳೆ ಡಿ-ಡೇ. ಕೊಲೆ ಕೇಸ್ನಲ್ಲಿ ಜೈಲು ಸೇರಿರುವ ದರ್ಶನ್ಗೆ ಮನೆ ಊಟ ಕೊಡ್ಬೇಕಾ.. ಬೇಡ್ವಾ ಅನ್ನೋದು ನಾಳೆ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ನಿರ್ಧಾರವಾಗಲಿದೆ. ಇಂತಹ ಸಮಯದಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಡಿಸಿಎಂ ಡಿಕೆ ಶಿವಕುಮಾರ್ರನ್ನು ಭೇಟಿಯಾಗಿದ್ದು, ಕುತೂಹಲ ಮೂಡಿಸಿದೆ.
ಸಪ್ತಪದಿ ತುಳಿದು, ತಾಳಿ ಕಟ್ಟಿದ ಪತಿ ಒಳ್ಳೆಯದನ್ನೇ ಮಾಡಲಿ ಕೆಟ್ಟದನ್ನೇ ಮಾಡಲಿ, ಪತ್ನಿಗೆ ಪತಿಯೇ ಪರದೈವ. ಆತ ಏನೇ ತಪ್ಪು ಮಾಡಿರಲಿ. ಕಷ್ಟದಲ್ಲಿ ಸಿಲುಕಿದ್ರೆ ಪತ್ನಿಯ ಮನಸ್ಸು ವಿಲವಿಲ ಒದ್ದಾಡುತ್ತೆ. ನಟ ದರ್ಶನ್ ಅವರ ಧರ್ಮ ಪತ್ನಿ ವಿಜಯಲಕ್ಷ್ಮಿ ಪರಸ್ಥಿತಿಯೂ ಹಾಗೇ ಇದೆ. ಕೊಲೆ ಕೇಸ್ನಲ್ಲಿ ಜೈಲು ಸೇರಿರುವ ಪತಿಯನ್ನು ಜೈಲಿನಿಂದ ಬಿಡಿಸಿಕೊಂಡು ಬರಬೇಕೆಂದು ವಿಜಯಲಕ್ಷ್ಮಿ ಪ್ರತಿನಿತ್ಯ ಒದ್ದಾಡುತ್ತಿದ್ದಾರೆ.
ಇತ್ತ ದರ್ಶನ್ ಅಭಿಮಾನಿಗಳು ವಿಜಯಲಕ್ಷ್ಮಿ ಭೇಟಿಗೆ ಸಮಯಾವಕಾಶ ಕೊಡ್ತಿಲ್ಲ ಎಂದು ರಾಮನಗರದಲ್ಲಿ ಡಿಸಿಎಂ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಇವತ್ತು ದರ್ಶನ್ ಪತ್ನಿ ವಿಜಯಲಕ್ಷ್ಮಿ ಡಿಕೆಶಿಯನ್ನು ಭೇಟಿಯಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಕಳೆದ ಒಂದೂವರೆ ತಿಂಗಳಿಂದ ಜೈಲಿನಲ್ಲಿದ್ದಾರೆ. ಆದ್ರೆ ಜೈಲೂಟಕ್ಕೆ ಒಗ್ಗಿಕೊಳ್ಳಲಾಗದೇ ಮನೆಯೂಟಕ್ಕೆ ಅವಕಾಶ ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ. ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ಕೋರ್ಟ್ ನಾಳೆಗೆ ತೀರ್ಪು ಕಾಯ್ದಿರಿಸಿದೆ.
ಕೋರ್ಟ್ನಲ್ಲಿ ಆಗಿದ್ದೇನು?
ದರ್ಶನ್ ಪರ ವಕೀಲ
ಡಯೇರಿಯಾದಿಂದ ಜೈಲು ಆಹಾರ ಜೀರ್ಣಿಸಿಕೊಳ್ಳಲು ಆಗ್ತಿಲ್ಲ
ಜೈಲ್ ನಿಯಮ ಸೆಕ್ಷನ್ 30ರಡಿ ಹೊರಗಿನ ಊಟ ಪಡೆಯಬಹುದು
ವಿಚಾರಣಾಧೀನ ಕೈದಿಯ ಮೂಲಭೂತ ಹಕ್ಕು ಕಸಿಯುವಂತಿಲ್ಲ
ಮಾನವೀಯತೆಯ ಪ್ರಕಾರ ಆಹಾರ ನೀಡಲು ನಿರಾಕರಣೆ ಸರಿಯಲ್ಲ
ಎಸ್ಪಿಪಿ ಪ್ರಸನ್ನಕುಮಾರ್
ನಾನು ಊಟ ಕೊಡಬೇಡಿ ಅಂದಿಲ್ಲ. ನಿಯಮ ಏನಿದೆ ಹೇಳಿದ್ದೀನಿ
ಕೈದಿಗಳಿಗೆ ಕೆಲವು ಷರತ್ತುಗಳಿವೆ. ಅವರು ಸ್ಟಾರು ಗೀರು ಅಂತಾರೆ
ಕಾನೂನಿನ ಮುಂದೆ ಶ್ರೀಮಂತ, ಸ್ಟಾರ್ & ದೊಡ್ಡವರು ಅಂತಾ ಏನಿಲ್ಲ
ನೀವು ಸಿನಿಮಾ ಆ್ಯಕ್ಟರ್ ಆಗಿದ್ದು ತಪ್ಪಲ್ಲ, ಮರ್ಡರ್ ಮಾಡಿದ್ದು ತಪ್ಪು
ವಾದ-ಪ್ರತಿವಾದ ಆಲಿಸಿ ನಾಳೆಗೆ ತೀರ್ಪು ಕಾಯ್ದಿರಿಸಿರುವ ಕೋರ್ಟ್
ಇದನ್ನೂ ಓದಿ: ‘ಆ ಸ್ಟಾರ್ ನಟ ಬೇರೆ ಮಹಿಳೆ ಜೊತೆ ಬೆತ್ತಲೆಯಾಗಿ ಸಿಕ್ಕಿಬಿದ್ದಿದ್ದ’- ವೆಡ್ಡಿಂಗ್ ಫೋಟೋಗ್ರಾಫರ್ ಬಿಚ್ಚಿಟ್ಟ ಸತ್ಯ!
ದರ್ಶನ್ ಮಗನ ಸ್ಕೂಲ್ ವಿಷ್ಯವಾಗಿ ಡಿಕೆಶಿ ಭೇಟಿ:ನಿರ್ದೇಶಕ ಪ್ರೇಮ್
ಆದ್ರೆ ಇವತ್ತು ನಟ ದರ್ಶನ್ ಪತ್ನಿ ಡಿಸಿಎಂ ಡಿಕೆ ಶಿವಕುಮಾರ್ರನ್ನು ಭೇಟಿಯಾಗಿದ್ದಾರೆ. ದರ್ಶನ್ ಸಹೋದರ ದಿನಕರ್ ತೂಗುದೀಪ್ ಮತ್ತು ನಿರ್ದೇಶಕ ಪ್ರೇಮ್ ಜೊತೆ ಸದಾಶಿವನಗರದ ಡಿಕೆಶಿ ನಿವಾಸಕ್ಕೆ ವಿಜಯಲಕ್ಷ್ಮಿ ಆಗಮಿಸಿದ್ದರು. ಬಳಿಕ ಡಿಸಿಎಂ ಅವರನ್ನು ಭೇಟಿಯಾಗಿ ಪತಿಯ ಪ್ರಕರಣದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗ್ತಿದೆ. ಇನ್ನು ಡಿಸಿಎಂ ಡಿಕೆಶಿ ಭೇಟಿ ಬಳಿಕ ನಟ ಕಮ್ ನಿರ್ದೇಶಕ ಜೋಗಿ ಪ್ರೇಮ್ ಮಾಧ್ಯಮಗಳ ಜೊತೆ ಮಾತನಾಡಿದ್ರು. ದರ್ಶನ್ ನನ್ನ ಸ್ನೇಹಿತ, ನನ್ನ ಫ್ಯಾಮಿಲಿ, ಕಷ್ಟ-ಸುಖ ಮಾತಾಡ್ತೀವಿ. ಇವತ್ತು ಡಿಸಿಎಂ ಜೊತೆ ದರ್ಶನ್ ಮಗ ವಿನಿಶ್ ಸ್ಕೂಲ್ ವಿಚಾರ ಮಾತಾಡಿದ್ವಿ. ನಮ್ಮ ಭೇಟಿಯಲ್ಲಿ ದರ್ಶನ್ ಕೇಸ್ ಬಗ್ಗೆ ಚರ್ಚೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಕೊನೆಗೂ ವಿಕ್ಕಿ ಕೌಶಲ್ ಮನಗೆದ್ದ ಸೀರೆ ನಾರಿ.. ಲೇಡಿ ‘ತೌಬಾ ತೌಬಾ’ ಡ್ಯಾನ್ಸ್ಗೆ ಫಿದಾ; ಏನಂದ್ರು ಗೊತ್ತಾ?
‘ಯಾವ ಬಾಸ್ ನಂಗೆ ಗೊತ್ತಿಲ್ಲ.. ಇಂಟರ್ ಪಿಯರ್ ಆಗಲ್ಲ’:ಡಿಸಿಎಂ
ಕಳೆದ ರಾತ್ರಿ ಡಿಸಿಎಂ ಡಿಕೆಶಿ ರಾಮನಗರದ ಕರಗೋತ್ಸವದಲ್ಲಿ ಪಾಲ್ಗೊಂಡಿದ್ರು. ಈ ವೇಳೆ ದರ್ಶನ್ ಅಭಿಮಾನಿಗಳು ಫೋಟೋ ಹಿಡಿದು ಡಿಕೆಶಿ ಮುಂದೆ ಘೋಷಣೆ ಕೂಗಿದ್ರು. ಇನ್ನು ಇವತ್ತು ನಟ ದರ್ಶನ್ ಪತ್ನಿ ಭೇಟಿಯಾಗಿ ಎಲ್ಲ ಗೊಂದಲಗಳಿಗೂ ಡಿಸಿಎಂ ತೆರೆ ಎಳೆದಿದ್ದಾರೆ. ನನಗೆ ಯಾವ ಬಾಸ್ ಗೊತ್ತಿಲ್ಲ. ಇದರಲ್ಲಿ ನಾನು ಇಂಟರ್ ಪಿಯರ್ ಕೂಡ ಆಗಲ್ಲ. ದರ್ಶನ್ ಪತ್ನಿ ಮಗನನ್ನು ಮತ್ತೆ ನಿಮ್ಮ ಸ್ಕೂಲ್ಗೆ ಸೇರಿಸಿಕೊಳ್ಳಿ ಎಂದು ಕೇಳಲು ಬಂದಿದ್ವು ಅಷ್ಟೆ. ಮಗುಗೆ ಸಹಾಯ ಮಾಡ್ತೀನಿ ಎಂದಿದ್ದಾರೆ.
ಅದೇನೆ ಇರಲಿ. ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ನನಗೆ ಜೈಲೂಟ ತಿನ್ನೋಕೆ ಆಗಲ್ಲ. ಮನೆಯೂಟ ಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸಂಬಂಧ ನಾಳೆ ಕೋರ್ಟ್ ತೀರ್ಪು ಬರಲಿದ್ದು, ಇಂಥ ಸಂದರ್ಭದಲ್ಲೇ ದರ್ಶನ್ ಪತ್ನಿ ಡಿಸಿಎಂರನ್ನು ಭೇಟಿಯಾಗಿ ಸಹಜವಾಗಿ ಹಲವು ಪ್ರಶ್ನೆಗಳಿಗೆ ದಾರಿ ಆಗುತ್ತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಾಳೆ ಮಹತ್ವದ ತೀರ್ಪು.. ಇವತ್ತು ಡಿಸಿಎಂ ಭೇಟಿಯಾದ ನಟ ದರ್ಶನ್ ಪತ್ನಿ
ಮನೆಯೂಟಕ್ಕೆ ಮನವಿ ಮಾಡಿರುವ ದರ್ಶನ್ ಭವಿಷ್ಯ ನಾಳೆ ನಿರ್ಧಾರ
‘ಯಾವ ಬಾಸ್ ನಂಗೆ ಗೊತ್ತಿಲ್ಲ.. ದರ್ಶನ್ ಕೇಸ್ಗೆ ಡಿಸಿಎಂ ಖಡಕ್ ಮಾತು
ಮನೆಯೂಟಕ್ಕಾಗಿ ಕೋರ್ಟ್ ಮೊರೆ ಹೋಗಿರುವ ನಟ ದರ್ಶನ್ಗೆ ನಾಳೆ ಡಿ-ಡೇ. ಕೊಲೆ ಕೇಸ್ನಲ್ಲಿ ಜೈಲು ಸೇರಿರುವ ದರ್ಶನ್ಗೆ ಮನೆ ಊಟ ಕೊಡ್ಬೇಕಾ.. ಬೇಡ್ವಾ ಅನ್ನೋದು ನಾಳೆ ಮ್ಯಾಜಿಸ್ಟ್ರೇಟ್ ಕೋರ್ಟ್ನಲ್ಲಿ ನಿರ್ಧಾರವಾಗಲಿದೆ. ಇಂತಹ ಸಮಯದಲ್ಲೇ ದರ್ಶನ್ ಪತ್ನಿ ವಿಜಯಲಕ್ಷ್ಮಿ ಡಿಸಿಎಂ ಡಿಕೆ ಶಿವಕುಮಾರ್ರನ್ನು ಭೇಟಿಯಾಗಿದ್ದು, ಕುತೂಹಲ ಮೂಡಿಸಿದೆ.
ಸಪ್ತಪದಿ ತುಳಿದು, ತಾಳಿ ಕಟ್ಟಿದ ಪತಿ ಒಳ್ಳೆಯದನ್ನೇ ಮಾಡಲಿ ಕೆಟ್ಟದನ್ನೇ ಮಾಡಲಿ, ಪತ್ನಿಗೆ ಪತಿಯೇ ಪರದೈವ. ಆತ ಏನೇ ತಪ್ಪು ಮಾಡಿರಲಿ. ಕಷ್ಟದಲ್ಲಿ ಸಿಲುಕಿದ್ರೆ ಪತ್ನಿಯ ಮನಸ್ಸು ವಿಲವಿಲ ಒದ್ದಾಡುತ್ತೆ. ನಟ ದರ್ಶನ್ ಅವರ ಧರ್ಮ ಪತ್ನಿ ವಿಜಯಲಕ್ಷ್ಮಿ ಪರಸ್ಥಿತಿಯೂ ಹಾಗೇ ಇದೆ. ಕೊಲೆ ಕೇಸ್ನಲ್ಲಿ ಜೈಲು ಸೇರಿರುವ ಪತಿಯನ್ನು ಜೈಲಿನಿಂದ ಬಿಡಿಸಿಕೊಂಡು ಬರಬೇಕೆಂದು ವಿಜಯಲಕ್ಷ್ಮಿ ಪ್ರತಿನಿತ್ಯ ಒದ್ದಾಡುತ್ತಿದ್ದಾರೆ.
ಇತ್ತ ದರ್ಶನ್ ಅಭಿಮಾನಿಗಳು ವಿಜಯಲಕ್ಷ್ಮಿ ಭೇಟಿಗೆ ಸಮಯಾವಕಾಶ ಕೊಡ್ತಿಲ್ಲ ಎಂದು ರಾಮನಗರದಲ್ಲಿ ಡಿಸಿಎಂ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಇದರ ಬೆನ್ನಲ್ಲೇ ಇವತ್ತು ದರ್ಶನ್ ಪತ್ನಿ ವಿಜಯಲಕ್ಷ್ಮಿ ಡಿಕೆಶಿಯನ್ನು ಭೇಟಿಯಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಕಳೆದ ಒಂದೂವರೆ ತಿಂಗಳಿಂದ ಜೈಲಿನಲ್ಲಿದ್ದಾರೆ. ಆದ್ರೆ ಜೈಲೂಟಕ್ಕೆ ಒಗ್ಗಿಕೊಳ್ಳಲಾಗದೇ ಮನೆಯೂಟಕ್ಕೆ ಅವಕಾಶ ಕೋರಿ ಕೋರ್ಟ್ ಮೊರೆ ಹೋಗಿದ್ದಾರೆ. ನಟ ದರ್ಶನ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮ್ಯಾಜಿಸ್ಟ್ರೇಟ್ ಕೋರ್ಟ್ ನಾಳೆಗೆ ತೀರ್ಪು ಕಾಯ್ದಿರಿಸಿದೆ.
ಕೋರ್ಟ್ನಲ್ಲಿ ಆಗಿದ್ದೇನು?
ದರ್ಶನ್ ಪರ ವಕೀಲ
ಡಯೇರಿಯಾದಿಂದ ಜೈಲು ಆಹಾರ ಜೀರ್ಣಿಸಿಕೊಳ್ಳಲು ಆಗ್ತಿಲ್ಲ
ಜೈಲ್ ನಿಯಮ ಸೆಕ್ಷನ್ 30ರಡಿ ಹೊರಗಿನ ಊಟ ಪಡೆಯಬಹುದು
ವಿಚಾರಣಾಧೀನ ಕೈದಿಯ ಮೂಲಭೂತ ಹಕ್ಕು ಕಸಿಯುವಂತಿಲ್ಲ
ಮಾನವೀಯತೆಯ ಪ್ರಕಾರ ಆಹಾರ ನೀಡಲು ನಿರಾಕರಣೆ ಸರಿಯಲ್ಲ
ಎಸ್ಪಿಪಿ ಪ್ರಸನ್ನಕುಮಾರ್
ನಾನು ಊಟ ಕೊಡಬೇಡಿ ಅಂದಿಲ್ಲ. ನಿಯಮ ಏನಿದೆ ಹೇಳಿದ್ದೀನಿ
ಕೈದಿಗಳಿಗೆ ಕೆಲವು ಷರತ್ತುಗಳಿವೆ. ಅವರು ಸ್ಟಾರು ಗೀರು ಅಂತಾರೆ
ಕಾನೂನಿನ ಮುಂದೆ ಶ್ರೀಮಂತ, ಸ್ಟಾರ್ & ದೊಡ್ಡವರು ಅಂತಾ ಏನಿಲ್ಲ
ನೀವು ಸಿನಿಮಾ ಆ್ಯಕ್ಟರ್ ಆಗಿದ್ದು ತಪ್ಪಲ್ಲ, ಮರ್ಡರ್ ಮಾಡಿದ್ದು ತಪ್ಪು
ವಾದ-ಪ್ರತಿವಾದ ಆಲಿಸಿ ನಾಳೆಗೆ ತೀರ್ಪು ಕಾಯ್ದಿರಿಸಿರುವ ಕೋರ್ಟ್
ಇದನ್ನೂ ಓದಿ: ‘ಆ ಸ್ಟಾರ್ ನಟ ಬೇರೆ ಮಹಿಳೆ ಜೊತೆ ಬೆತ್ತಲೆಯಾಗಿ ಸಿಕ್ಕಿಬಿದ್ದಿದ್ದ’- ವೆಡ್ಡಿಂಗ್ ಫೋಟೋಗ್ರಾಫರ್ ಬಿಚ್ಚಿಟ್ಟ ಸತ್ಯ!
ದರ್ಶನ್ ಮಗನ ಸ್ಕೂಲ್ ವಿಷ್ಯವಾಗಿ ಡಿಕೆಶಿ ಭೇಟಿ:ನಿರ್ದೇಶಕ ಪ್ರೇಮ್
ಆದ್ರೆ ಇವತ್ತು ನಟ ದರ್ಶನ್ ಪತ್ನಿ ಡಿಸಿಎಂ ಡಿಕೆ ಶಿವಕುಮಾರ್ರನ್ನು ಭೇಟಿಯಾಗಿದ್ದಾರೆ. ದರ್ಶನ್ ಸಹೋದರ ದಿನಕರ್ ತೂಗುದೀಪ್ ಮತ್ತು ನಿರ್ದೇಶಕ ಪ್ರೇಮ್ ಜೊತೆ ಸದಾಶಿವನಗರದ ಡಿಕೆಶಿ ನಿವಾಸಕ್ಕೆ ವಿಜಯಲಕ್ಷ್ಮಿ ಆಗಮಿಸಿದ್ದರು. ಬಳಿಕ ಡಿಸಿಎಂ ಅವರನ್ನು ಭೇಟಿಯಾಗಿ ಪತಿಯ ಪ್ರಕರಣದ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗ್ತಿದೆ. ಇನ್ನು ಡಿಸಿಎಂ ಡಿಕೆಶಿ ಭೇಟಿ ಬಳಿಕ ನಟ ಕಮ್ ನಿರ್ದೇಶಕ ಜೋಗಿ ಪ್ರೇಮ್ ಮಾಧ್ಯಮಗಳ ಜೊತೆ ಮಾತನಾಡಿದ್ರು. ದರ್ಶನ್ ನನ್ನ ಸ್ನೇಹಿತ, ನನ್ನ ಫ್ಯಾಮಿಲಿ, ಕಷ್ಟ-ಸುಖ ಮಾತಾಡ್ತೀವಿ. ಇವತ್ತು ಡಿಸಿಎಂ ಜೊತೆ ದರ್ಶನ್ ಮಗ ವಿನಿಶ್ ಸ್ಕೂಲ್ ವಿಚಾರ ಮಾತಾಡಿದ್ವಿ. ನಮ್ಮ ಭೇಟಿಯಲ್ಲಿ ದರ್ಶನ್ ಕೇಸ್ ಬಗ್ಗೆ ಚರ್ಚೆಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಕೊನೆಗೂ ವಿಕ್ಕಿ ಕೌಶಲ್ ಮನಗೆದ್ದ ಸೀರೆ ನಾರಿ.. ಲೇಡಿ ‘ತೌಬಾ ತೌಬಾ’ ಡ್ಯಾನ್ಸ್ಗೆ ಫಿದಾ; ಏನಂದ್ರು ಗೊತ್ತಾ?
‘ಯಾವ ಬಾಸ್ ನಂಗೆ ಗೊತ್ತಿಲ್ಲ.. ಇಂಟರ್ ಪಿಯರ್ ಆಗಲ್ಲ’:ಡಿಸಿಎಂ
ಕಳೆದ ರಾತ್ರಿ ಡಿಸಿಎಂ ಡಿಕೆಶಿ ರಾಮನಗರದ ಕರಗೋತ್ಸವದಲ್ಲಿ ಪಾಲ್ಗೊಂಡಿದ್ರು. ಈ ವೇಳೆ ದರ್ಶನ್ ಅಭಿಮಾನಿಗಳು ಫೋಟೋ ಹಿಡಿದು ಡಿಕೆಶಿ ಮುಂದೆ ಘೋಷಣೆ ಕೂಗಿದ್ರು. ಇನ್ನು ಇವತ್ತು ನಟ ದರ್ಶನ್ ಪತ್ನಿ ಭೇಟಿಯಾಗಿ ಎಲ್ಲ ಗೊಂದಲಗಳಿಗೂ ಡಿಸಿಎಂ ತೆರೆ ಎಳೆದಿದ್ದಾರೆ. ನನಗೆ ಯಾವ ಬಾಸ್ ಗೊತ್ತಿಲ್ಲ. ಇದರಲ್ಲಿ ನಾನು ಇಂಟರ್ ಪಿಯರ್ ಕೂಡ ಆಗಲ್ಲ. ದರ್ಶನ್ ಪತ್ನಿ ಮಗನನ್ನು ಮತ್ತೆ ನಿಮ್ಮ ಸ್ಕೂಲ್ಗೆ ಸೇರಿಸಿಕೊಳ್ಳಿ ಎಂದು ಕೇಳಲು ಬಂದಿದ್ವು ಅಷ್ಟೆ. ಮಗುಗೆ ಸಹಾಯ ಮಾಡ್ತೀನಿ ಎಂದಿದ್ದಾರೆ.
ಅದೇನೆ ಇರಲಿ. ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ನನಗೆ ಜೈಲೂಟ ತಿನ್ನೋಕೆ ಆಗಲ್ಲ. ಮನೆಯೂಟ ಬೇಕೆಂದು ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಸಂಬಂಧ ನಾಳೆ ಕೋರ್ಟ್ ತೀರ್ಪು ಬರಲಿದ್ದು, ಇಂಥ ಸಂದರ್ಭದಲ್ಲೇ ದರ್ಶನ್ ಪತ್ನಿ ಡಿಸಿಎಂರನ್ನು ಭೇಟಿಯಾಗಿ ಸಹಜವಾಗಿ ಹಲವು ಪ್ರಶ್ನೆಗಳಿಗೆ ದಾರಿ ಆಗುತ್ತೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ